ಕರ್ನಾಟಕದ ಇತಿಹಾಸದುದ್ದಕ್ಕೂ ಜಾತಿಧರ್ಮದ ಆಧಾರದ ಮೇಲೆಯೇ ಜನರನ್ನು ಅವರ ಪ್ರತಿಭೆಯನ್ನು ಅಳೆಯುವ ನಾವು, ಇದೀಗ ಮತ್ತೊಮ್ಮೆ ಜಾತಿ ಆಧಾರದಲ್ಲಿ ಸಮ್ಮೇಳನಾಧ್ಯಕ್ಷರನ್ನು ಗುರುತಿಸಿ, ಮತ್ತೊಮ್ಮೆ ದಲಿತರ ಮಧ್ಯದೊಳಗೆ ಹೊಸದೊಂದು ದಲಿತ ವಿಚಾರಕ್ಕೆ ಹರವು ನೀಡಿದ್ದಾರೆ. ಮೊದಲಿಗೆ ದೇವನೂರ ಎಂಬ ದಲಿತ ಕವಿಗೆ ಸಮ್ಮೇಳಾಧ್ಯಕ್ಷ ಪಟ್ಟಕಟ್ಟಿ ಅವರು ಭಾಷಾಮಾಧ್ಯಮದ ಕುರಿತು ಹೋರಾಟಕ್ಕೆ ಪರಿಷತ್ತು ಸಾತ್ ನೀಡಲಿ ಎಂದು ಕೇಳಿ ತಮಗೆ ಒಲಿದುಬಂದ ಅಧ್ಯಕ್ಷ ಸ್ಥಾನವನ್ನು ತ್ಯೇಜಿಸಿ, ಸಮ್ಮೇಳನವೇ ಬೇಡ ಅದರ ಮೂಲಕ ಹೋರಾಟ ಮಾಡಿ ಕನ್ನಡ ಭಾಷೆಗೊಂದು ಜಯ ತರೋಣವೆಂದರು. ಪರಿಷತ್ತು ನೈಸ್ ಆಗಿಯೇ ಒಪ್ಪಿಗೆ ನೀಡಿ, ಇದೀಗ ಮೌನ ಹೋರಾಟದಲ್ಲಿ ನಿರತರಾಗಿರುವ ಕವಿ ಸಿದ್ಧಲಿಂಗಯ್ಯನವರ ಆಯ್ಕೆ ಮಾಡಿ ದಲಿತ ಕುಲದೊಳಗೆ ಕಾವು ಹೆಚ್ಚಿಸಿ ಮತ್ತೆ ಅನುಮಾನಕ್ಕೆ ಒಳಗಾಗುವ ಹಾಗೆ ಮಾಡಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತು ಇದೀಗ ತನ್ನ ದಶಮಾನೋತ್ಸವ ಆಚರಿಸುವ ಕಾಲಘಟ್ಟವನ್ನು ತಲುಪಿದೆ. ಇಲ್ಲಿಯವರೆಗೂ ಹಲವು ಗೊಂದಲಗಳ ಮಧ್ಯೆಯೂ ಸಾಹಿತ್ಯದ ತೇರು ಎಳೆದಿರುವ ಪರಿಷತ್ತು ಇದೀಗ ತಾರತಮ್ಯದ ಹೊನಲಲ್ಲಿ ಜಾತಿಯೊಳಗೆ ಜಗಳವ ಹಚ್ಚಿ ತನ್ನ ಸಾಹಿತ್ಯ ಸಮ್ಮೇಳನ ಮಾಡಲು ಮುಂದಾಗಿದೆ.
ಕರ್ನಾಟಕದ ಇತಿಹಾಸದುದ್ದಕ್ಕೂ ಜಾತಿಧರ್ಮದ ಆಧಾರದ ಮೇಲೆಯೇ ಜನರನ್ನು ಅವರ ಪ್ರತಿಭೆಯನ್ನು ಅಳೆಯುವ ನಾವು, ಇದೀಗ ಮತ್ತೊಮ್ಮೆ ಜಾತಿ ಆಧಾರದಲ್ಲಿ ಸಮ್ಮೇಳನಾಧ್ಯಕ್ಷರನ್ನು ಗುರುತಿಸಿ, ಮತ್ತೊಮ್ಮೆ ದಲಿತರ ಮಧ್ಯದೊಳಗೆ ಹೊಸದೊಂದು ದಲಿತ ವಿಚಾರಕ್ಕೆ ಹರವು ನೀಡಿದ್ದಾರೆ. ಮೊದಲಿಗೆ ದೇವನೂರ ಎಂಬ ದಲಿತ ಕವಿಗೆ ಸಮ್ಮೇಳಾಧ್ಯಕ್ಷ ಪಟ್ಟಕಟ್ಟಿ ಅವರು ಭಾಷಾಮಾಧ್ಯಮದ ಕುರಿತು ಹೋರಾಟಕ್ಕೆ ಪರಿಷತ್ತು ಸಾತ್ ನೀಡಲಿ ಎಂದು ಕೇಳಿ ತಮಗೆ ಒಲಿದುಬಂದ ಅಧ್ಯಕ್ಷ ಸ್ಥಾನವನ್ನು ತ್ಯೇಜಿಸಿ, ಸಮ್ಮೇಳನವೇ ಬೇಡ ಅದರ ಮೂಲಕ ಹೋರಾಟ ಮಾಡಿ ಕನ್ನಡ ಭಾಷೆಗೊಂದು ಜಯ ತರೋಣವೆಂದರು. ಪರಿಷತ್ತು ನೈಸ್ ಆಗಿಯೇ ಒಪ್ಪಿಗೆ ನೀಡಿ, ಇದೀಗ ಮೌನ ಹೋರಾಟದಲ್ಲಿ ನಿರತರಾಗಿರುವ ಕವಿ ಸಿದ್ಧಲಿಂಗಯ್ಯನವರ ಆಯ್ಕೆ ಮಾಡಿ ದಲಿತ ಕುಲದೊಳಗೆ ಕಾವು ಹೆಚ್ಚಿಸಿ ಮತ್ತೆ ಅನುಮಾನಕ್ಕೆ ಒಳಗಾಗುವ ಹಾಗೆ ಮಾಡಿದ್ದಾರೆ.
0 Comments
|
ಇಲ್ಲಿಯವರೆಗೆ...
October 2023
"
|