ಮನೋವಿಜ್ಞಾನದಲ್ಲಿ ಹೇಳಲಾಗಿರುವಂತೆ ಒಬ್ಬ ಮನುಷ್ಯನಿಗೆ ತನ್ನದೇ ಆದ ಅಂತರಾಳದ ವ್ಯಕ್ತಿತ್ವವಿರುತ್ತದೆಯೆಂತೆ. ನಾವು ನಮ್ಮೊಳಗಿನ ವ್ಯಕ್ತಿತ್ವದ ಜೊತೆಗೆ ನಮ್ಮ ಕೈಯಲ್ಲಿರುವ ಮತ್ತೊಂದು ವ್ಯಕ್ತಿತ್ವ ಬೆಳೆಸಿಕೊಳ್ಳಬೇಕಂತೆ. ನಮ್ಮ ನಡುವೆ ಇರುವ ಅದೆಷ್ಟೊ ವ್ಯಕ್ತಿತ್ವಗಳನ್ನು ನಾವೆಲ್ಲ ಗಮನಿಸುತ್ತಿರುತ್ತೇವೆ. ಆ ವ್ಯಕ್ತಿ ಹಾಗೂ ವ್ಯಕ್ತಿತ್ವಗಳ ಜೊತೆಗೆ ನಮಗೆ ಆಹ್ಲಾದಕರವಾದ ಭಾವನೆಯಿರುತ್ತವೆ. ಜೀವ ಕಂಡ ಅವರನ್ನು ಆರಾಧಿಸುವ ಮನಸ್ಸಾಗುತ್ತದೆ. ಹಿರಿಯರ ವ್ಯಕ್ತಿತ್ವಗಳು ಸುಮ್ಮನೆ ಏಕಾಏಕಿ ಹುಟ್ಟಿಕೊಂಡವಲ್ಲಾ ಅದಕ್ಕಾಗಿ ಶ್ರಮಪಟ್ಟಿರುತ್ತಾರೆ. ಸುಂದರ ವ್ಯಕ್ತಿತ್ವ ರೂಪಿಸಿಕೊಳ್ಳಲು ಒಂದಷ್ಟು ಕಸರತ್ತಿನ ಜೊತೆಗೆ ಸತತ ಪ್ರಯತ್ನದ ಅವಶ್ಯಕತೆಯಿದೆ.
0 Comments
ಅಪಾರ ಸಂಸ್ಕøತಿ ಮತ್ತು ಮಾನವೀಯ ಸಂಬಂಧವುಳ್ಳದ್ದು ನಮ್ಮ ಭಾರತ. ಈ ನೆಲದಲ್ಲಿ ಹಾವು ತನ್ನ ವೈರಿಯಾದ ಕಪ್ಪೆಗೆ ನೆರಳು ನೀಡಿದ ಪ್ರತೀತವಿದೆ. ಹಲವು ವಿದೇಶಿ ವಲಸೆಗಾರರಿಗೆ ನೆಲೆಯ ಜೊತೆಗೆ ಬೆಲೆಯೂ ನೀಡಿದ ಉದಾಹರಣೆಗಳಿವೆ. ಈ ಭಾರತವೆಂಬ ಮಾಹಾ ಮನೆಯಲ್ಲಿ ದಲಿತರ ಸಾವಾಗಿದೆ. ಈ ಸಾವನ್ನು ನೆಪಮಾಡಿಕೊಂಡು, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅತ್ತೆ ಸೊಸೆ ಅಳುವ ರಾಜಕೀಯ ಆಟವನ್ನು ಆಡುತ್ತಿದ್ದಾರೆ. ಒಂದು ಸಾವಿನ ಸುತ್ತಮುತ್ತ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ರಾಜಕಾರಣಿಗಳಿಗೆ ಸಾಮಾನ್ಯ ಜನರ ಸಾವಾದರೇನು, ನೋವಾದರೇನು ಅದನ್ನೇ ರಾಜಕೀಯ ಬಂಡವಾಳ ಮಾಡಿಕೊಳ್ಳುವ ಈ ಸ್ಥಿತಿಯನ್ನು ಕಂಡು ಭಾರತೀಯ ಪ್ರಜೆ ಕಳವಳ ಪಡುವಂತಾಗಿದೆ. ಸಧ್ಯ ಭಾರತದಲ್ಲಿ ಹೈದ್ರಬಾದ್ ವಿಶ್ವವಿದ್ಯಾಲಯ ದಲಿತ ವಿಧ್ಯಾರ್ಥಿಯ ಆತ್ಮಹತ್ಯೆಯೆನ್ನೆ ರಾಜಕೀಯ ದಾಳ ಮಾಡಿಕೊಂಡಿರುವ ರಾಜಕಾರಣಿಗಳು, ಸಾಮಾನ್ಯ ಜನರ ಮನಸಿನೊಳಗೆ ಅದರಲ್ಲೂ ಜಾತಿ ರಾಜಕಾರಣ ಮಾಡಲು ವ್ಯವಸ್ಥಿತವಾದ ಹುನ್ನಾರ ಮಾಡಿದ್ದಾರೆ ಎನ್ನಬಹುದು.
“ಪುರಾಣ ಕೇಳಲಾಕ್ಕಾಯಿತು, ಬದನೆಕಾಯಿ ತಿನ್ನೊದಕ್ಕಾಗಿಯಿತು” ಇದು ನಾನು ಅತೀ ಚಿಕ್ಕ ವಯಸ್ಸಿನಲ್ಲಿ ಕೇಳಿದ ಒಂದು ಜಾನಪದ ಮಾತು. ಈ ಮಾತು ಅದೆಷ್ಟು ಸರಿಯೆಂದು ತುಂಬಾ ಯೋಚಿಸುತ್ತಿದ್ದೆ ಸಧ್ಯ ರಾಜ್ಯದ ರಾಜಕೀಯ ಆಟವನ್ನು ಗಮನಿಸಿದರೆ ಈ ಮಾತಿಗೆ ಸರಿಹೊಂದುತ್ತದೆ ಎನಿಸುತ್ತಿದೆ. “ಆಡುವುದು ಒಂದು, ಮಾಡುತ್ತಿರುವುದು ಇನ್ನೊಂದು” ಈ ಹಾಡು ಕೂಡ ನಮ್ಮನ್ನು ಆಳುತ್ತಿರುವ ರಾಜ್ಯ ಸರಕಾರಕ್ಕೆ ಸರಿಯಾಗಿ ಒಪ್ಪುತ್ತಿದೆ. ಚುನಾವಣೆಗೂ ಮುನ್ನ ಹೋರಾಟವೇ ತಮ್ಮ ಪ್ರಮುಖ ಅಸ್ತ್ರ ಮಾಡಿಕೊಂಡ ಮಾನ್ಯ ಸಿದ್ಧರಾಮಯ್ಯನವರು, ಮುಖ್ಯಮಂತ್ರಿಯಾದ ನಂತರ ಹೋರಾಟ ಮಾಡುವವರ ಬೆಂಬಲಕ್ಕೂ ಕೂಡ ಸ್ಪಂದಿಸುತ್ತಿಲ್ಲ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ನಡೆದ, ಹಲವು ಹೋರಾಟಗಳೆ ಇದಕ್ಕೆ ಸಾಕ್ಷಿಯಾದವು. ಪಾದಯಾತ್ರೆಯ ಮೂಲಕ ಜನರ ಮನದೊಳಗೆ ಮನೆ ಮಾಡಿರುವ ಕಾಂಗ್ರೆಸ್ ಸರಕಾರ ಇದೀಗ ಪ್ರಜೆಗಳು ಸರಕಾರದ ಪಾದ ಹಿಡಿದು ಬೇಡಿಕೊಂಡರು ಕರುಣೆ ಬಾರದ ಮಟ್ಟಕ್ಕೆ ತಲುಪಿದೆ.
|
ಇಲ್ಲಿಯವರೆಗೆ...
October 2023
"
|