ನಿಮ್ಮ ಕಾರ್ಯಕ್ಷೇತ್ರದ ಸಂಪೂರ್ಣ ಜ್ಞಾನ ಪಡೆಯಿರಿ. ಮೊದಲಿಗೆ ನಮ್ಮ ಕಾರ್ಯಕ್ಷೇತ್ರ ಯಾವುದು ಎಂಬುವುದನ್ನು ಅರೆತುಕೊಳ್ಳಬೇಕು. ಅದೇ ಕಾರ್ಯಕ್ಷೇತ್ರದಲ್ಲಿ ನಿಮಗೆ ಎಷ್ಟು ಆಸಕ್ತಿಯಿದೆ ಎಂಬುವುದು ಪರಿಗಣಿಸಿರಿ. ನೀವು ಓದಿದ್ದು ಏನು, ನೀವು ಮಾಡುತ್ತಿರುವ ಕೆಲಸವೇನು ಎಂಬ ಗಮನವಿರಲಿ. ಯಾವುದನ್ನು ಓದಿರುವಿರಿ, ಅದರಿಂದ ಯಾವ ಕೆಲಸ ಮಾಡಿದರೆ ನಮ್ಮ ವ್ಯಕ್ತಿತ್ವ ಹೇಗೆ ರೂಪುಗೊಳ್ಳುತ್ತದೆ ಎಂಬುವುದು ಅರ್ಥಮಾಡಿಕೊಳ್ಳಬೇಕು. ನಿಮ್ಮ ಸುತ್ತಮುತ್ತಲಿನ ಉತ್ತಮ ವ್ಯಕ್ತಿತ್ವವುಳ್ಳ ಜನರನ್ನು ಗಮನಿಸಿ. ಅವರು ಯಾವುದರ ಮೇಲೆ ತಮ್ಮ ಸಮಯ ವಿನಿಯೋಗ ಮಾಡುತ್ತಿದ್ದಾರೆ, ಯಾವ ಕ್ಷೇತ್ರದಲ್ಲಿ ತಮ್ಮ ವ್ಯಕ್ತಿತ್ವ ರೂಪಿಸಿಕೊಂಡಿದ್ದಾರೆ ಯಾವ ಮಾರ್ಗವನ್ನು ಅನುಸರಿಸಿದ್ದಾರೆ ಎಂಬುವುದನ್ನು ಗಮನಿಸಿ. ನೀವು ಓದಿರುವ ವಿದ್ಯೆ ನಿಮ್ಮ ಕೆಲಸ ಕಾರ್ಯದಲ್ಲಿ ಹಾಗೂ ನಿತ್ಯ ಬದುಕಿನಲ್ಲಿ ಎಷ್ಟು ಫಲಕೊಡುತ್ತಿದೆ ಎಂಬ ಗಮನಕೊಡಿ. ನೀವು ಈಗಿರುವ ಕೆಲಸದಲ್ಲಿ ನಿಮಗೆಷ್ಟು ಸಂತೋಷವಿದೆ ಎಂಬ ವಿಚಾರದತ್ತ ನಿಮ್ಮ ದೃಷ್ಠಿ ಹಾಯಿಸಿ. ನಿಮ್ಮ ವಿಶಾಲ ದೃಷ್ಠಿಕೋನದಿಂದ ನಿಮ್ಮ ವ್ಯಕ್ತಿತ್ವವು ಕೂಡ ವಿಶಾಲವಾಗಲು ಸಾಧ್ಯವಾಗುತ್ತದೆ. ನೀವು ಈಗಿರುವ ಕೆಲಸದಲ್ಲಿ ಪ್ರಮಾಣಿಕತೆ ಹಾಗೂ ದಕ್ಷತೆಯೆನ್ನು ತೋರಿಸಿ, ಅದಕ್ಕಿಂತ ಮೇಲಿನ ಹುದ್ದೆ ಪಡೆಯಲು ಬೇಕಾಗುವ ವಿದ್ಯಾರ್ಹತೆಯನ್ನು ಪಡೆಯಲು ಯಾವ ರೀತಿಯ ಕೋರ್ಸ್ ಅವಶ್ಯಕವಾಗಿದೆಯೋ ಅದನ್ನು ಪೂರ್ಣಗೊಳಿಸುವತ್ತ ಕೂಡ ಗಮನಹರೆಸಿರಿ.
ಸರಿಯಾಗಿ ಉಳಿತಾಯ ಮಾಡಿರಿ. ನೀವು ಗಳಿಸುವ ಈಗಿನ ಹಣ ಇಂದಿನ ಉಳಿತಾಯವು ಇರಬೇಕು, ನಿಮಗೆ ಈಗಿರುವ ಸಂಬಳದಲ್ಲಿ ನಿಮ್ಮ ಎಲ್ಲಾ ಖರ್ಚನ್ನು ತೆಗೆದು ಎಷ್ಟು ಉಳಿಸಲು ಸಾಧ್ಯವು ಅಷ್ಟನ್ನು ಉಳಿಸಲು ಅಥವಾ ಎಲ್ಲಿಯಾದರು ಇನವೆಸ್ಟ್ ಮಾಡಲು ಪ್ರಯತ್ನಿಸಿ. ಇದು ನಿಮ್ಮ ಆಪತ್ ಕಾಲದಲ್ಲಿ ಸಾಹಾಯಕ್ಕೆ ಬರಲಿದೆ. ಅರ್ಥಶಾಸ್ತ್ರಜ್ಞರ ಪ್ರಕಾರ ನೀವು ಗಳಿಸಿದ್ದನ್ನು ಉಳಿಸಿ ಉಳಿಸಿದ್ದನ್ನು ತೊಡಗಿಸಿ ಎಂದು ಸಲಹೆ ನೀಡುತ್ತಾರೆ. ನಾವು ಬರಿ ಉಳಿತಾಯ ಮಾಡುವುದರ ಜೊತೆಗೆ ತಪ್ಪದೇ ಒಂದಿಷ್ಟು ಸಮಯಕ್ಕೆ ತಕ್ಕಂತೆ ಖರ್ಚುಕೂಡ ಮಾಡಬೇಕಾಗುತ್ತದೆ. ನೀವು ನಿಯಮಿತವಾಗಿ ಹೂಡಿಕೆ ಮಾಡುತ್ತಾಯಿದ್ದರೆ ಅದು ನಿಮ್ಮ ಮುಂದಿನ ಜೀವನಕ್ಕೆ ದಾರಿಯಾಗಲಿದೆ.
ನಿಮ್ಮ ಒಟ್ಟಾರೆ ಕುಟುಂಬವನ್ನು ಗಮನದಲ್ಲಿಟ್ಟುಕೊಂಡು, ನೀವು ಮಾಡಬೇಕಾಗಿರುವ ಮುಂದಿನ ಜೀವನದ ಹಲವು ಕೆಲಸ ಕಾರ್ಯಗಳನ್ನು ನೆನಪಿನಲ್ಲಿಟ್ಟುಕೊಂಡು ನಿಮ್ಮ ಹಣವನ್ನು ಹೂಡಿಕೆ ಮಾಡಿ. ಹೂಡಿಕೆ ಎಲ್ಲಿ ಮಾಡಬೇಕು, ಹೇಗೆ ಮಾಡಬೇಕು ಎಂಬ ಕಲ್ಪನೆ ಕೂಡ ಅರ್ಥ ಮಾಡಿಕೊಳ್ಳಿರಿ. ನಿಮ್ಮ ಸಹುದ್ಯೋಗಿಗಳ ಜೊತೆಗೂ ಸರಿಯಾದ ವರ್ತನೆಯಿರಲಿ, ನಿಮ್ಮ ಮೇಲಿನ ಅಧಿಕಾರಿಗಳೊಂದಿಗೆ ಸಭ್ಯತೆಯಿಂದ ವರ್ತಿಸಿರಿ. ನಿಮಗೆ ತಿಳಿದಿಲ್ಲದ ವಿಷಯವನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡಿರಿ. ಸೋಲಿನಾಚೆಗೆ ಬದುಕು ಸುಂದರವಾಗಿದೆ ಎಂಬ ಕಲ್ಪನೆಯಿರಲಿ. ನಿಮ್ಮ ಸುತ್ತಮುತ್ತಲಿನ ಜನರ ಜೊತೆಗೆ ಅತ್ಯಂತ ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳಿರಿ. ಎಲ್ಲರ ಪ್ರೀತಿಗೆ ಪಾತ್ರರಾಗಿರಿ.
ನಿಮ್ಮ ಉಡುಪು ಸರಳವಾಗಿರಲಿ. ವ್ಯಕ್ತಿಯ ವ್ಯಕ್ತಿತ್ವ ಆಂತರಿಕದ ಜೊತೆಗೆ ಬಾಹ್ಯಾವಾಗಿಯೂ ಪರಿಣಾಮ ಬೀರುತ್ತದೆ. ಮಾನಸಿಕತೆಯ ಜೊತೆಗೆ ನಾವು ಕೆಲವು ವಿಷಯಗಳಲ್ಲಿ ಬಾಹ್ಯಾವಾಗಿಯೂ ಸುಧಾರಿಸಿಕೊಳ್ಳಬೇಕಾಗುತ್ತದೆ. ಅನೇಕಬಾರಿ ಎಷ್ಟು ಸುಂದರವಾಗಿ ನಿಮ್ಮ ಉಡುಪು ಧರಿಸುತ್ತಿರೋ ಅಷ್ಟು ಮರಿಯ್ಯಾದೆ ಸಿಗುವ ಸಾಧ್ಯತೆಗಳಿವೆ. ನಿಮ್ಮ ದಿನನಿತ್ಯದ ಉಡುಪು ಆಡಂಬರವಾಗಿರದೇ ಸರಳವಾಗಿದ್ದರೆ ನೋಡುಗರ ಕಣ್ಣಿಗೆ ತಾಕಿ ಮನಸ್ಸಿನೊಳಗೆ ಇಳಿಯಬೇಕಾಗುತ್ತದೆ ಅದಕ್ಕಾಗಿ ನೀವು ಉಡುಪು ಧರಿಸುವ ಮುನ್ನ ನಿಮ್ಮ ಸುತ್ತಮುತ್ತಲಿನ ವಾತವರಣವನ್ನು ಗಮನಿಸಿ ಧರಿಸಿದರೆ ಉತ್ತಮವಾಗುತ್ತದೆ. ನೀವು ದೊಡ್ಡ ವ್ಯಕ್ತಿಗಳನ್ನು ಗಮನಿಸಿ ಅವರ ಮೈಮೇಲೆ ಹಾಕಿರುವ ಬಟ್ಟೆ ಯಾರಿಗೂ ಕಿರಿ ಕಿರಿ ಉಂಟು ಮಾಡುವುದಿಲ್ಲ ಬದಲಿಗೆ ಪ್ರೀತಿ ಗೌರವ ಹೆಚ್ಚಿಸುತ್ತವೆ. ಇನ್ನು ಕೆಲವರ ಬಟ್ಟೆ ನೋಡಿದಾಕ್ಷಣ ಇವರು ಅಂತಹ ವ್ಯಕ್ತಿನಾ ಎಂಬ ಮಾತು ಕೇಳಿರಬಹುದು. ನಿಮ್ಮ ಉಡುಪು ಸರಳ ಸಜ್ಜನರ ಹಾಗೆ ಇರಲಿ ಎಂಬುವುದಷ್ಟೆ ನನ್ನ ಸಲಹೆ.
ಜ್ಞಾನವಂತರಾಗಲು ಸದಾ ಕಲಿಯುತ್ತಿರಿ. ಕಲಿಕೆ ಜೀವನ ಪರಿಯಂತ ನಡೆಯುವ ಪ್ರಕ್ರಿಯೆಯಾಗಿದೆ. ನಾನು ತುಂಬಾ ಓದಿಕೊಂಡಿರುವೆ, ನನಗೆ ಏಕೆ ಬೇಕು ಕಲಿಯುವುದು ಎಂಬ ಅಹಂಕಾರ ಬೇಡ, ನಾವು ಎಷ್ಟು ಓದಿಕೊಂಡರು ಕಡಿಮೆಯೇ, ದಿನ ಪತ್ರಿಕೆ, ರಾಷ್ಟ್ರೀಯ ಆಗುಹೋಗುಗಳ ಬಗ್ಗೆ ಜ್ಞಾನ, ದಿನನಿತ್ಯದ ವಿದ್ಯಮಾನಗಳ ಅವಲೋಕನ, ರಾಜ್ಯ ರಾಷ್ಟ್ರ ಹಂತದಲ್ಲಿ ನಡೆಯುವ ಚಟುವಟಿಕೆಗಳು ಹೀಗೆ ಎಲ್ಲವುದರ ಬಗ್ಗೆ ಜ್ಞಾನ ಪಡೆಯುವುದು ಅವಶ್ಯಕವಾಗಿದೆ. ಒಂದೇ ಕ್ಷೇತ್ರಕ್ಕೆ ಸೀಮಿತವಾದ ಜ್ಞಾನಕ್ಕೆ ಅಂಟಿಕೊಳ್ಳದೇ ಇನ್ನುಳಿದ ಎಲ್ಲಾ ಕ್ಷೇತ್ರಗಳನ್ನು ತಿಳಿದುಕೊಳ್ಳುವ ಕ್ಷಮತೆ ನಮ್ಮಲ್ಲಿರಬೇಕು. ಇದು ನನಗೆ ಸಂಬಂಧಿಸಿದಲ್ಲ ಎಂದು ಹೀಗಳಿಯಬೇಡಿ. ಕಲಿಯಲು ವಿಷಯ ಸಿಕ್ಕರೆ ಅದನ್ನು ಕಲಿಯುವ ಮುಕ್ತ ಮನಸ್ಸು ಮಾಡಬೇಕು. ಚಿಕ್ಕ ಮಕ್ಕಳಿಂದಲೂ ಎಷ್ಟು ಹೊಸ ವಿಷಯಗಳು ಹೊರಬರುತ್ತವೆ. ಅವರಿಂದಲೂ ಕೂಡ ನಾವು ಕಲಿಯುತ್ತೇವೆ ಎಂಬ ಪರಿಕಲ್ಪನೆಯಿದ್ದರೆ ನೀವು ಬೆಳೆಯುತ್ತೀರಿ. ನಿಮ್ಮ ಮನೆ, ನೆರೆಹೊರೆ, ಗೆಳೆಯರು, ನಿಮ್ಮ ಸಹುದ್ಯೋಗಿಗಳು, ಸಮುದಾಯ ಯಾರಿಂದಲೇ ಆಗಲಿ ನಿಮಗೆ ಜ್ಞಾನ ಸಿಕ್ಕರೆ ಅದನ್ನು ಬಿಡಬೇಡಿ ಅದನ್ನು ಮುಕ್ತ ವಾತಾವರಣದಿಂದ ಸ್ವಾಗತಿಸಿಕೊಳ್ಳಿರಿ.
ಗೂಗಲ್ ಜೊತೆಗೆ ಸ್ವಲ್ಪ ಸಂಬಂಧ ಇಟ್ಟುಕೊಳ್ಳಿರಿ. ಹೌದು ಇದೀಗ ಪ್ರಪಂಚದ ಅತೀ ದೊಡ್ಡ ಜ್ಞಾನದ ಪುಸ್ತಕವೆಂದರೆ ಅದು ಗೂಗಲ್ ನಿಮಗೆ ಏನಾದರು ತಕ್ಷಣ ತಿಳಿಯಲಾಗುತ್ತಿಲ್ಲವೆಂದರೆ ಆದಷ್ಟು ಬೇಗ ಗೂಗಲ್ ಮಾಡಿ ತಿಳಿದುಕೊಳ್ಳಿರಿ. ಗೂಗಲ್ ನಲ್ಲಿ ದೊರೆಯುವ ಮಾಹಿತಿಯನ್ನು ಸಮುದಾಯದ ಹಾಗೂ ವಯಕ್ತಿಕ ಅಭಿವೃದ್ಧಿಗಾಗಿ ಉಪಯೋಗಿಸಿಕೊಳ್ಳಿರಿ. ನಿಮ್ಮ ಸ್ನೇಹಿತರೊಂದಿಗೆ ನಿಮಗೆ ತಿಳಿದಿರುವ ಜ್ಞಾನ ಮತ್ತು ಮಾಹಿತಿಯನ್ನು ಹಂಚಿಕೊಳ್ಳಿ, ಸಣ್ಣದು ಇರಲಿಬಿಡಿ ಎಂಬ ನೆಗಲೆಕ್ಟ್ ಭಾವನೆ ಬೇಡ ಚಿಕ್ಕದೇ ಆದರೂ ನಮಗೆ ತಿಳಿದಿಲ್ಲದ ವಿಷಯವನ್ನು ಗೂಗಲ್ ಸಚ್ ್ ಮಾಡಿ ತಿಳಿದುಕೊಳ್ಳರಿ.
ಸದಾ ಶಾಂತಿಯಿಂದಿರಲು ಪ್ರಯತ್ನಿಸಿ. ನಾವು ಉಪ್ಪು ಖಾರ ತಿನ್ನುವ ದೇಹದವರು ನಮಗೆ ಕೋಪ, ತಾಪಗಳು ಸಹಜವಾಗಿವೆ. ಮನೆಯೆಂಗಳದ ಅದೆಷ್ಟು ಕಷ್ಟಗಳು, ನಷ್ಟಗಳು ಬರುವುದು ಸಹಜ ಇವೆಲ್ಲ ಬಂದಾಗ ನಾವು ಕೋಪಗೊಳ್ಳುತ್ತೇವೆ. ಕೋಪ ನಮ್ಮ ಜೀವನ ತಿನ್ನುತ್ತದೆ. ನಾವು ಅಂದುಕೊಂಡ ಅದೆಷ್ಟು ಕೆಲಸಗಳು ನೆರವೇರದಿದ್ದಾಗ ನಮ್ಮ ಕೋಪ ನೆತ್ತಿಗೇರುತ್ತದೆ. ಜೀವನದ ಈ ಜಂಜಾಟದಲ್ಲಿ ನಾವು ಆದಷ್ಟು ಶಾಂತರಾಗಿರಲು ಪ್ರಯತ್ನ ಮಾಡಬೇಕು. ಈ ಶಾಂತಿ ಸ್ವಭಾವ ಒಂದೇ ದಿನಕ್ಕೆ ಬರಲಾರದು ಇದನ್ನು ಹಲವು ಪ್ರಯತ್ನಗಳ ನಂತರ ಪಡೆಯಬಹುದಾಗಿದೆ. ದಿನನಿತ್ಯದ ಹಲವು ಚಟುವಟಿಕೆಗಳಿಗೆ ಸ್ಪಂದಿಸುತ್ತ ನಾವು ಕಲಿಯಬಹುದಾಗಿದೆ. ಆಗಾಗ ತಣ್ಣನೇಯ ನೀರು ಕುಡಿಯಿರಿ ಮನುಷ್ಯ ದೇಹದಕ್ಕೆ ನೀರಿನ ಪ್ರಮಾಣ ಅತೀ ಅವಶ್ಯಕವಾಗಿದೆ. ತಣ್ಣನೇಯ ನೀರು ಜೀವಕ್ಕೆ ತಂಪೆರೆಯುತ್ತದೆ. ಸಾಧ್ಯವಾದಷ್ಟು ಮನಸ್ಸು ಹೃದಯ ಶಾಂತವಾಗಿರಲು ಏನು ಮಾಡಬೇಕು ಅದರ ಪ್ರಯತ್ನವನ್ನು ತಪ್ಪದೇ ದಿನಾಲು ಮಾಡಿ. ಇದು ಹೇಳಿದಷ್ಟು ಸುಲಭವಲ್ಲ ಆದರೆ ಪ್ರಯತ್ನಿಸಿದರೆ ಸಾಧ್ಯವಾಗುತ್ತದೆ.
ನಿಮ್ಮ ಕೆಲಸವನ್ನು ಪ್ರೀತಿಸಿ. ನಾವು ಕೆಲವೊಮ್ಮೆ ನಮ್ಮ ಕೆಲಸಕ್ಕೆ ಅನ್ಯಾಯ ಮಾಡುವುದುಂಟು. ಎಲ್ಲರೊಳಗೆ ಒಬ್ಬರಾಗಿ ಸಾಗುತ್ತೇವೆ. ನಮ್ಮ ಆಸಕ್ತಿಯ ಆಧಾರದ ಮೇಲೆ ನಮ್ಮ ಕೆಲಸವು ತನ್ನದೇ ಆದ ಪ್ರೀತಿ ವಿಶ್ವಾಸ ಹಾಗೂ ಸಮಯವನ್ನು ಕೇಳುತ್ತದೆ. ಅದಕ್ಕಾಗಿ ನೀವು ಮಾಡುವ ಕೆಲಸದಲ್ಲಿ ನಂಬಿಕೆಯಿರಲಿ. ನಿಮ್ಮ ಕೆಲಸದ ಗೆಳೆಯರೊಂದಿಗೆ ಸರಿಯಾದ ಸಮಂಜಸವಾದ ವರ್ತನೆಯಿರಲಿ. ಆಯಾ ದಿನದ ಕೆಲಸ ಆಯಾ ದಿನವೇ ಮುಗಿಸಿಕೊಳ್ಳಿ ಅದು ಕಛೇರಿಯದ್ದಾಗಿರಲಿ ಅಥವಾ ವಯಕ್ತಿಕವಾಗಿರಲಿ. ನಿಮ್ಮ ಕೆಲಸದ ಮಹತ್ವ ಅರೆತುಕೊಳ್ಳಿ. ನಿಮ್ಮ ಕೆಲಸಕ್ಕೆ ನಿಯಮಿತವಾದ ಸಮಯ ನೀಡಿ. ಕೆಲಸದೊಳಗೆ ಒತ್ತಡ ಬರುವುದು ಸಹಜ ಅದನ್ನು ನಿವಾರಿಸಿಕೊಳ್ಳುವ ಮಾರ್ಗಗಳನ್ನು ಅರೆತುಕೊಳ್ಳಿ ಎಲ್ಲರೊಂದಿಗೆ ಪ್ರೀತಿಯೊಂದಿಗೆ ವರ್ತಿಸಿ ಕ್ರೀಯಾಶೀಲರಾಗುವ ಪ್ರಯತ್ನ ಮಾಡಿರಿ.
ಸಂಬಂಧಗಳೊಂದಿಗೆ ಬೆರೆಯಿರಿ. ಈ ಜೀವನ ನೂರು ಪುಟಗಳ ಒಂದು ಸುಂದರ ಪುಸ್ತಕ. ಬದುಕಿನ ದಾರಿಯಲ್ಲಿ, ಹಲವು ಪ್ರಯತ್ನಗಳಲ್ಲಿ ಒಂದರೆಡು ಪುಟಗಳು ಹರೆದುಬಿಡಬಹುದು ಹರೆದು ಹೋದ ಪುಟಗಳನ್ನು ನೆನಸಿಕೊಂಡು ಇನ್ನುಳಿದ ಪುಟಗಳನ್ನು ಕಳೆದುಕೊಳ್ಳುವುದು ಬೇಡ ಅವುಗಳಿಗಾಗಿ ಬದುಕಿರಿ. ಅವುಗಳನ್ನು ಚೆನ್ನಾಗಿ ಅನುಭವಿಸಿರಿ. ನಿಮ್ಮ ಸುತ್ತಮುತ್ತಲಿರುವ ಅದೆಷ್ಟೊ ಸಂಬಂಧಗಳನ್ನು ನಾವು ಗಮನಿಸಿಯೇ ಇಲ್ಲಾ ಎಲ್ಲಾ ಸಂಬಂಧಗಳೊಂದಿಗೆ ಬೆರೆಯಿರಿ ಅವುಗಳ ಅರ್ಥಮಾಡಿಕೊಳ್ಳಿರಿ. ನಿಮ್ಮ ಸುತ್ತಲಿರುವ ತಂದೆ, ತಾಯಿ, ಅಕ್ಕ, ತಂಗಿ, ತಮ್ಮ ಗೆಳೆಯರೊಂದಿಗೆ ಸಮಯವನ್ನು ಕಳೆಯಿರಿ ಅವರ ಕಷ್ಟ ಸುಖಗಳಲ್ಲಿ ಭಾಗವಹಿಸಿರಿ. ಸರಳ ಜೀವನದಲ್ಲಿ ಸಾಕಷ್ಟು ಜನರು ಇದ್ದಾರೆ ಎಂಬ ಗಮನವಿರಲಿ ನಿಮ್ಮ ಈ ಕೆಲಸದಿಂದ ಕ್ರೀಯಾಶೀಲತೆ ನಿಮ್ಮಲ್ಲಿರುತ್ತದೆ.
ಪುಸ್ತಕ ಹಾಗೂ ವಾಚನಾಲಯದ ಅಭ್ಯಾಸವಿರಲಿ. ನಮಗೆ ಎಷ್ಟು ಒತ್ತಡವಿದ್ದರು ನಾವು ಪುಸ್ತಕಗಳನ್ನು ಓದುವುದರಿಂದ ನಮ್ಮ ಕ್ರೀಯಾಶೀಲತೆ ಹೆಚ್ಚುತ್ತದೆ. ನಿಮ್ಮ ಸಮೀಪದ ವಾಚನಾಯಕ್ಕೆ ಹೋಗುವ ಸಮಯ ಕಳೆಯುವ ದಿನಪತ್ರಿಕೆಗಳನ್ನು ಓದುವ ಹೊಸ ಹೊಸ ಪುಸ್ತಕಗಳನ್ನು ಓದುವ ಅಭ್ಯಾಸ ಇಟ್ಟುಕೊಳ್ಳಿ. ನಮ್ಮ ಜೊತೆಗಿರುವ ಪುಸ್ತಕಗಳು ನಮ್ಮ ಕ್ರೀಯಾಶೀಲತೆಯನ್ನು ಹೆಚ್ಚುಮಾಡುವಲ್ಲಿ ಕೆಲಸ ಮಾಡುತ್ತವೆ. ವ್ಯಕ್ತಿತ್ವ ಅಭಿವೃದ್ಧಿ, ಸಾಹಿತ್ಯ, ಕಥೆ, ಕವನ, ನಗೆಹನಿಗಳನ್ನು ಓದುವ ಆಸ್ವಾಧಿಸುವ ಗುಣ ಬೆಳೆಸಿಕೊಳ್ಳಿರಿ. ಸಣ್ಣ ಪುಟ್ಟ ವೈಚಾರಿಕೆ ಲೇಖನಗಳನ್ನು ಓದುವುದರಿಂದಲೂ ನಮ್ಮ ಕ್ರೀಯಾಶೀಲತೆಯನ್ನು ಹೆಚ್ಚಾಗುತ್ತದೆ ಪ್ರತಿಬಾರಿಯೂ ಓದಿದಾಗ ಹೊಸತನವನ್ನು ಪುಸ್ತಕಗಳು ಕೊಡುತ್ತವೆ.
ಸಮಯಪಾಲನೆ ಮಾಡಿರಿ. ಸಮಯ ನಮಗಾಗಿ ಯಾವತ್ತು ಕಾಯುವುದಿಲ್ಲ ನಾವು ಸಮಯಕ್ಕಾಗಿ ಕಾಯಬೇಕಾಗುತ್ತದೆ. ನಮ್ಮ ದಿನಚರಿಯನ್ನು ಸರಿಯಾಗಿ ಪಾಲನೆ ಮಾಡುವುದರಿಂದಲೂ ನಮ್ಮ ಕ್ರೀಯಾಶೀಲತೆಯನ್ನು ಹೆಚ್ಚಿಸಬಹುದಾಗಿದೆ. ದಿನಾಲು ಯಾವಾಗ ಏಳಬೇಕು ಯಾವಾಗ ಮಲಗಬೇಕು ಯಾವಾಗ ಓದಬೇಕು, ಯಾವಾಗ ಯಾವ ಕೆಲಸ ಮಾಡಬೇಕು ಎಂಬ ವಿಷಯ ಅರೆತಿರಬೇಕು. ಅದನ್ನು ದಿನಾಲು ತಪ್ಪದೇ ದಿನಾಲು ಪಾಲಿಸಬೇಕು. ನಮ್ಮ ದಿನಚರಿಯಿಂದಲೂ ಕೂಡ ನಮ್ಮ ಕ್ರೀಯಾಶೀಲತೆಯು ಹೇಗಿದೆ ಎಂಬುವುದು ತಿಳಿಸುತ್ತದೆ.
ಸದಾ ಹೊಸ ಯೋಚನೆ ಮಾಡಿರಿ. ಕ್ರೀಯಾಶೀಲತೆಯೆಂಬುವುದು ನಮ್ಮೊಳಗೆ ಹುದುಗಿ ಕುಳಿತಿರುವ ಒಂದು ಶಕ್ತಿ, ಅದು ಹಲವು ಬಾರಿ ಅದೆಷ್ಟೊ ಒಳ್ಳೆಯ ಕೆಲಸಗಳಿಗೆ ಪೂರಕವಾಗಿ ವರ್ತಿಸುತ್ತದೆ. ನಾವು ಮಾಡುವ ಯೋಚನೆಯ ಮೇಲೆ ನಮ್ಮ ಕ್ರೀಯಾಶೀಲತೆ ಅಡಗಿದೆ. ನಮ್ಮ ಒಳ್ಳೆಯ ಯೋಚನೆ ಹಾಗೂ ಹೊಸ ಯೋಚನೆಯಿಂದ ಕ್ರೀಯಾಶೀಲತೆ ಹುಟ್ಟುತ್ತದೆ. ಸದಾ ಹೊಸತನಕ್ಕೆ ಅವಕಾಶಮಾಡಿಕೊಡಿ. ಇರುವ ವಿಷಯವನ್ನು ಬೇರೆ ಬೇರೆ ದೃಷ್ಠಿಕೋನದಿಂದ ಹೊಸದಾಗಿ ಯೋಚಿಸಿ ನೋಡಿ ಒಂದೇಬಾರಿಗೆ ಹೊಳೆಯದಿದ್ದರು ಪ್ರತಿಬಾರಿಯೂ ಹೊಸ ದೃಷ್ಠಿಕೋನ ಹೊಂದಿರುವ ವ್ಯಕ್ತಿಗಳಿಗೆ ಕ್ರೀಯಾಶೀಲತೆ ಕೆಲಸ ಮಾಡುತ್ತದೆ. ನಮ್ಮ ಯೋಚನೆ ನಮ್ಮೊಳಗಿನ ಕ್ರೀಯಾಶೀಲತೆಗೆ ಹಿಡಿದ ಕೈಗನ್ನಡಿಯಾಗಿದೆ.
ಆಟ,ಈಜು, ವ್ಯಾಯಾಮ ಮಾಡಿರಿ. ನಿರಂತರವಾಗಿ ಕೆಲಸ ಮಾಡುವ ಈ ದೇಹಕ್ಕೆ ಒಂದಿಷ್ಟು ದಿನನಿತ್ಯದ ರಿಲ್ಯಾಕ್ಸ್ ಕೂಡ ಬೇಕಾಗುತ್ತದೆ. ನಮ್ಮ ದಿನಿತ್ಯದ ಬದುಕಿನಲ್ಲಿ ಆಟ,ಈಜು, ವ್ಯಾಯಾಮ ಮಾಡಿರಿ. ಆಟಗಳಿಂದ ನಮ್ಮೊಳಗಿನ ರಕ್ತನಾಳಗಳು ಸರಿಯಾಗಿ ಕೆಲಸ ಮಾಡುತ್ತವೆ. ಕನಿಷ್ಠ ವಾರಕ್ಕೆ ಒಮ್ಮೆಯಾದರು ಈಜಾಡಬೇಕು ಇದರಿಂದ ನಮ್ಮ ದೇಹದ ಎಲ್ಲಾ ಭಾಗಗಳು ಕ್ರೀಯಾಶೀಲವಾಗುತ್ತವೆ. ದೈಹಿಕವಾಗಿ ದಣಿದಾಗ ಒಂದೊಳ್ಳೆಯ ಮನಸ್ಸು ಸೃಷ್ಠಿಯಾಗುತ್ತದೆ. ದಿನನಿತ್ಯದ ಹಲವು ಕೆಲಸಗಳ ತರಹ ಈ ಕೆಲಸಗಳಿಗೂ ಸಮಯವಕಾಶವನ್ನು ಮಾಡಿಕೊಡಿ ಇದರಿಂದ ನಮ್ಮಲ್ಲಿರುವ ಕ್ರೀಯಾಶೀಲತೆ ಹೆಚ್ಚುತ್ತದೆ.
ನಿಯಮಿತವಾದ ವಿಶ್ರಾಂತಿ ಹಾಗೂ ನಿದ್ರೆ ಅವಶ್ಯಕವಾಗಿದೆ. ನಾವು ಎಷ್ಟು ದುಡಿಯುತ್ತೇವೆಯೋ ಅಷ್ಟು ದಣಿಯುತ್ತೇವೆ. ದಣಿದ ಈ ಜೀವಕ್ಕೆ ವಿಶ್ರಾಂತಿಯ ಅತೀಯಾದ ಅವಶ್ಯಕತೆಯಿದೆ. ಎಲ್ಲಾ ಕೆಲಸಗಳ ಮಧ್ಯದೊಳಗೆ ನಿದ್ರೆ ಅವಶ್ಯಕವಾಗಿದೆ. ದಿನದಲ್ಲಿ ವೈಜ್ಞಾನಕವಾಗಿ ಆರು ಗಂಟೆ ನಿದ್ರೆ ಮಾಡಬೇಕು ಅದಕ್ಕಿಂತ ಕಡಿಮೆಯಾದರೂ ಹೆಚ್ಚಾದರೂ ತೊಂದರೆ ತಪ್ಪಿದ್ದಲ್ಲ ನೆನಪಿರಲಿ. ಕೆಲಸದ ಮಧ್ಯದೊಳಗೆ ಆಗಾಗ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಿರಿ. ದಿನನಿತ್ಯ ಮಾಡುವ ಕೆಲಸದಿಂದ ವಿಶ್ರಾಂತಿ ಹಾಗೂ ನಿದ್ರೆ ಇಲ್ಲದಾಗ ನಮ್ಮ ಕ್ರೀಯಾಶೀಲತೆ ಹೊರಬರದೇಯಿರಬಹುದು ನಿಯಮಿತವಾದ ವಿಶ್ರಾಂತಿ ಹಾಗೂ ನಿಯಮಿತವಾದ ನಿದ್ರೆಯಿಂದ ಕ್ರೀಯಾಶೀಲತೆಗೆ ಪೂರಕವಾದ ವಾತಾವರಣ ಉಂಟಾಗುತ್ತದೆ ಮತ್ತು ಉತ್ಸಾಹ ಮೂಡುತ್ತದೆ.
ನಮ್ಮ ಆತಂಕದ ಜೀವನದೊಳಗೆ ನಮ್ಮ ಒಳಗಿರುವ ಅದೆಷ್ಟು ಚೈತನ್ಯ ಶಕ್ತಿ ಕೆಲವೊಮ್ಮೆ ಹೊರಗೆ ಬರುವುದೇಯಿಲ್ಲ. ನಾವು ಎಲ್ಲಿಯೇ ವಾಸಿಸಿದರು, ಆ ಸ್ಥಳದೊಂದಿಗೆ ಹೊಂದಿಕೊಳ್ಳುವ ಹಾಗೆ ಈ ಮೇಲಿನ ಹಲವು ವಿಷಯಗಳೊಂದಿಗೆ ನಿಮ್ಮ ನಿಮ್ಮ ಸಹಜ ಬದುಕಿನಲ್ಲಿ ಅನುಸರಿಸಬೇಕಾದ ಕೆಲವು ಸೂಕ್ಷ್ಮಿ ವಿಚಾರಗಳನ್ನು ಅಳವಡಿಸಿಕೊಂಡು ಅವುಗಳ ಮಧ್ಯದೊಳಗೆ ಎದ್ದು ಬಂದು ನಮ್ಮೊಳಗಿನ ಕ್ರೀಯಾಶೀಲತೆಗೆ ಒರೆಗಚ್ಚಬೇಕು. ನೊರೆ ಹಾಲಿನಂತಹ ಜೀವನವನ್ನು ರೂಪಿಸಿಕೊಳ್ಳಬೇಕು. ಇರುವ ಜೀವನದಲ್ಲಿ ಆಗದೇಯಿರುವ ಅದೆಷ್ಟು ವಿಷಯಗಳನ್ನು ನೆನದು ಪ್ರತಿಕ್ಷಣವನ್ನು ಹಾಳು ಮಾಡಿಕೊಂಡ ಉದಾಹರಣೆಗಳಿವೆ ಹೀಗೊಮ್ಮೆ ನಿಮ್ಮ ಬದುಕಿನೊಂದಿಗೆ ಯೋಚಿಸಿ ನೋಡಿ, ನಿಮ್ಮ ಯೋಚನೆಯನ್ನು ಒಮ್ಮೆ ಮೇಲಿನ ಎಲ್ಲಾ ವಿಷಯಗಳೊಂದಿಗೆ ವೈಚಾರಿಕೆತೆಯಿಂದ ವಿಮರ್ಶೆಗೊಳಪಡಿಸಿರಿ ಆಗ ನಿಮ್ಮ ಕ್ರೀಯಾಶೀಲತೆ ಹೊರಹೊಮ್ಮುತ್ತದೆ. ನಾನು ಇಲ್ಲಿ ಎಲ್ಲವನ್ನು ಹೇಳಲು ಸಾಧ್ಯವಾಗಿಲ್ಲ ಇದಕ್ಕಿಂತ ಹೆಚ್ಚು ನಿಮಗೆ ತಿಳಿದಿರುತ್ತದೆ ಹಾಗೆ ನಿಮ್ಮ ಕ್ರೀಯಾಶೀಲ ಮೆಧುಳಿಗೊಮ್ಮೆ ಕೆಲಸಕೊಡಿ ಎಲ್ಲವು ನಿಮಗೆ ಅರ್ಥವಾಗುತ್ತದೆ ಅಲ್ಲವಾ?
ಇದೀಗ ನಾವೆಲ್ಲರೂ ಇಪ್ಪತ್ತನೇಯ ಶತಮಾನದ ಅಂತ್ಯದಲ್ಲಿದ್ದೇವೆ. ಕಂಪ್ಯೂಟರ್ ವೈಫೈ, ರಾಕೇಟ್ ನಂತಹ ಕಾಲದಲ್ಲಿ ಜೀವನ ಮಾಡುತ್ತಿದ್ದೇವೆ. ಮನೆಯಲ್ಲಿ ಗಂಡ, ಹೆಂಡತಿ ಮಕ್ಕಳೆಲ್ಲರೂ ದಿನವಿಡಿ ದುಡಿಯುವ ಕಾಲವಿದು. ಯಾರ ಹತ್ತಿರವು ಸಮಯವಿಲ್ಲದಾಗಿದೆ. ಹಡೆದ ಮಕ್ಕಳಿಗಾಗಲಿ, ಹೆತ್ತ ತಂದೆ ತಾಯಿಗಾಗಲಿ ನೋಡಿಕೊಳ್ಳಲು ಸಮಯವಿಲ್ಲ ಅಷ್ಟೆ ಯಾಕೆ ನಮ್ಮನ್ನು ನಾವು ನೋಡಿಕೊಳ್ಳಲು ಸಮಯವಿಲ್ಲದಾಗಿದೆ. ಇಂತಹ ಸಂದರ್ಭದಲ್ಲಿ ನಾವು ಯುವಕರಾಗಲಿ ಮುದುಕರಾಗಲಿ ಕ್ರೀಯಾಶೀಲತೆಯಿಂದರಲು ಜೊತೆಗೆ ಸರಳವಾದ ವ್ಯಕ್ತಿತ್ವ ರೂಪಿಸಿಕೊಳ್ಳಲು ಈ ಮೇಲಿನ ಕೆಲವು ಸೂಕ್ಷ್ಮಿ ಮಾರ್ಗಗಳು ಅನುಸರಿಸಿದರೆ ಬದುಕು ಬಂಗಾರವಾಗಿ ನಾವು ಕೂಡ ಇರುವ ಕೆಲಸವಾಗಲಿ ಕ್ರೀಯಾಶೀಲವಾಗುವುದರ ಜೊತೆಗೆ ಉತ್ತಮವಾದ ವ್ಯಕ್ತಿತ್ವ ಹೊಂದುತ್ತೇವೆ.
ಕೆ.ಎಂ.ವಿಶ್ವನಾಥ ಮರತೂರ.
ಲೇಖಕರು
ಮು: ಪೋ: ಮರತೂರ
ತಾ: ಚಿತ್ತಾಪೂರ ಜಿ: ಕಲಬುರಗಿ 585229
ಮೂ: 9686714046