“ಜೈ ಭಾರತ ಜನನಿಯ ತನುಜಾತೆ” ಎಂದು ಕವಿ ಕುವೆಂಪು ನಮ್ಮ ರಾಜ್ಯವನ್ನು ಹೊಗಳಿದ್ದಾರೆ. ಇಲ್ಲಿ ಹಲವು ಕ್ಷೇತ್ರಗಳಲ್ಲಿ ಹಲವು ರೀತಿಯ ವಿಶಿಷ್ಠ ಇತಿಹಾಸವಿದೆ. ರಾಜಕೀಯ ಕ್ಷೇತ್ರದಲ್ಲಿಯೂ ತನ್ನದೆ ಆದ ವಿಶಿಷ್ಠತೆಯಿಂದ ಕೂಡಿದೆ. ಇತ್ತೀಚಿನ ರಾಜಕೀಯ ಅಧಿವೇಶನಗಳು ಆ ಇತಿಹಾಸವನ್ನು ಬುಡಮೇಲು ಮಾಡುತ್ತಿವೆಯೆ? ಎಂಬ ಪ್ರಶ್ನೆ ಇದೀಗ ಜನಸಾಮಾನ್ಯರ ವಲಯದಲ್ಲಿ ಒಡಮೂಡುತ್ತಿದೆ. ರಾಜಕೀಯ ಜನಸೇವೆಗೆ ಅಲ್ಲಾ ಬದಲಾಗಿ ಸ್ವಾರ್ಥ ಸೇವೆಗಾಗಿ, ಹುಡುಗಾಟದ ಜಗಳಕ್ಕಾಗಿಯೆ ಎನ್ನುವ ಮಾತು ತುಂಬಾ ಸ್ಪಷ್ಠವಾಗಿ ಅಧಿವೇಶನದಿಂದ ಕೇಳಿ ಬರುತ್ತಿದೆ.
0 Comments
ಕೇಂದ್ರದ ಕಾಂಗ್ರೆಸ್ ಸರಕಾರ, ಐತಿಹಾಸಿಕ ಹಿನ್ನಲೆ ಹೊಂದಿರುವ ರಾಷ್ಟ್ರೀಯ ರಾಜಕೀಯ ಪಕ್ಷ. ಸತತ ಎರಡನೆಯ ಬಾರಿಗೆ ಅಧಿಕಾರದ ಗದ್ದುಗೆ ಹಿಡಿದು, ಭಾರತವನ್ನು ಕೊಳ್ಳೆ ಹೊಡೆದು ಇದೀಗ ಮತ್ತೊಮ್ಮೆ ಅಧಿಕಾರದ ಗದ್ದುಗೆ ಹಿಡಿಯಬೇಕು ಎಂಬ ಪ್ರಯತ್ನ ಮಾಡುತ್ತಿದೆ. ಈ ಸಂದರ್ಭದಲ್ಲಿ ಕೇಂದ್ರದ ಕಾಂಗ್ರೆಸ್ ಸರಕಾರ ತನ್ನ ಹತ್ತು ವರ್ಷದ ಅಧಿಕಾರ ಅವಧಿಯಲ್ಲಿ, ಸ್ವಲ್ಪ ಸಿಹಿ ಸ್ವಲ್ಪ ಕಹಿ ಅನುಭವ ನೀಡಿದೆ. ತನ್ನ ಹಲವಾರು ಜನಪ್ರೀಯ ಯೋಜನೆಗಳನ್ನು, ಕಾಯ್ದೆಗಳನ್ನು ಮಾಡಿದರು ಹಲವು ಹಗರಣಗಳ ಹರಿಕಾರನಾಗಿ ಹೊರಹೊಮ್ಮಿದೆ.
|
ಇಲ್ಲಿಯವರೆಗೆ...
October 2023
"
|