ಅವರು ಹೇಳಿದ ಆ ಘಟನೆ ಹೀಗಿದೆ, “ಪಿಯುಸಿ ಓದುತ್ತಿರುವ ಒಟ್ಟು ೨೦೦ ಮಕ್ಕಳಿರುವ ದೊಡ್ಡ ಹಾಲ್ನಲ್ಲಿ ಪಾಠ ಮಾಡುತ್ತಿದ್ದೆ, ಆಕಸ್ಮಿಕವಾಗಿ ಒಬ್ಬ ವಿದ್ಯಾರ್ಥಿ ಎದ್ದು ನಿಂತು, ಸರ್ ಒಂದು ಪ್ರಶ್ನೆಯಿದೆ ಎಂದ, ಆಗ ನಾನು ಸರಿ ಕೇಳಪ್ಪ ಎಂದೆ, ಆಗ ಆ ವಿದ್ಯಾರ್ಥಿ ಕೇಳಿದ ಪ್ರಶ್ನೆ “ಸರ್ ನಿಮ್ಮಲ್ಲಿ ಎಷ್ಟು ಹಣವಿದೆ? ನೀವೆಷ್ಟು ಶ್ರೀಮಂತರು? ಎಂದು ಕೇಳಿದ. ಈ ಪ್ರಶ್ನೆ ಕೇಳಿದ ತಕ್ಷಣ, ಇಡಿ ತರಗತಿ ಸೈಲೆಂಟ್ ಆಯಿತು. ನಾನು ಕೂಡಾ ಸ್ವಲ್ಪ ಚಿಂತಿತನಾಗಿ ಸರಿ, ಕುಳಿತುಕೊಳ್ಳಿ ಉತ್ತರ ಹೇಳುವೆ ಎಂದು ಸ್ವಲ್ಪ ಯೋಚನೆ ಮಾಡಿ ಈ ಕೆಳಗಿನಂತೆ ಉತ್ತರ ಕೊಟ್ಟೆ.
ಮೊನ್ನೆ ನನ್ನ ಪಿಯುಸಿ ಗುರುಗಳಾದ ಶ್ರೀ ಶಿವಾನಂದ ಖಜೂರಿ ಸರ್ ಅವರೊಂದಿಗೆ ಚರ್ಚಿಸುತ್ತಿರುವಾಗ, ಅವರು ಅಂದು ತರಗತಿಯಲ್ಲಿ ನಡೆದ ಘಟನೆಯನ್ನು ಹಂಚಿಕೊಂಡರು. ಆ ಘಟನೆ ನನಗೆ ಅವರ ವಿದ್ಯಾರ್ಥಿಯಾಗಿ ಸ್ಪೂರ್ತಿ ನೀಡಿತು. ಆ ಘಟನೆ ಅದಷ್ಟೋ ಆಳವಾದ ಆಲೋಚನೆಗಳಿಗೆ ಹಚ್ಚಿತು.
ಅವರು ಹೇಳಿದ ಆ ಘಟನೆ ಹೀಗಿದೆ, “ಪಿಯುಸಿ ಓದುತ್ತಿರುವ ಒಟ್ಟು ೨೦೦ ಮಕ್ಕಳಿರುವ ದೊಡ್ಡ ಹಾಲ್ನಲ್ಲಿ ಪಾಠ ಮಾಡುತ್ತಿದ್ದೆ, ಆಕಸ್ಮಿಕವಾಗಿ ಒಬ್ಬ ವಿದ್ಯಾರ್ಥಿ ಎದ್ದು ನಿಂತು, ಸರ್ ಒಂದು ಪ್ರಶ್ನೆಯಿದೆ ಎಂದ, ಆಗ ನಾನು ಸರಿ ಕೇಳಪ್ಪ ಎಂದೆ, ಆಗ ಆ ವಿದ್ಯಾರ್ಥಿ ಕೇಳಿದ ಪ್ರಶ್ನೆ “ಸರ್ ನಿಮ್ಮಲ್ಲಿ ಎಷ್ಟು ಹಣವಿದೆ? ನೀವೆಷ್ಟು ಶ್ರೀಮಂತರು? ಎಂದು ಕೇಳಿದ. ಈ ಪ್ರಶ್ನೆ ಕೇಳಿದ ತಕ್ಷಣ, ಇಡಿ ತರಗತಿ ಸೈಲೆಂಟ್ ಆಯಿತು. ನಾನು ಕೂಡಾ ಸ್ವಲ್ಪ ಚಿಂತಿತನಾಗಿ ಸರಿ, ಕುಳಿತುಕೊಳ್ಳಿ ಉತ್ತರ ಹೇಳುವೆ ಎಂದು ಸ್ವಲ್ಪ ಯೋಚನೆ ಮಾಡಿ ಈ ಕೆಳಗಿನಂತೆ ಉತ್ತರ ಕೊಟ್ಟೆ.
0 Comments
ಮೊನ್ನೆ ಶಾಲೆಯೊಂದರಲ್ಲಿ ಇಬ್ಬರು ಶಿಕ್ಷಕರು ವಿರುದ್ಧವಾಗಿರುವ ಎರಡು ಸನ್ನಿವೇಶಗಳನ್ನು ನನ್ನೆದುರಿಗಿಟ್ಟರು.
ಒಂದು: “ಸರ್ ನಮ್ಮ ತರಗತಿಗೆ ಹೋದ್ರೆ ಸಾಕು, ಎಲ್ಲಾ ಮಕ್ಕಳು ಬರೀ ಮಾತುಗಳನ್ನೇ ಆಡುತ್ತಾರೆ. ಅದು ಎಲ್ಲಿಂದ ತರತಾರೋ ಅಷ್ಟು ಮಾತು, ಅಬ್ಬ ತಲೆ ಚಿಟ್ ಹಿಡಿಯುತ್ತದೆ, ಅವರನ್ನು ಸೈಲೆಂಟ್ ಮಾಡೋದರಲ್ಲೆ ಅವಧಿ ಮುಗಿದು ಬೆಲ್ ಹೊಡೆಯುತ್ತದೆ.” ಎರಡು: “ಸರ್ ನಮ್ಮ ತರಗತಿಯಲ್ಲಿ ವಿದ್ಯಾರ್ಥಿಗಳು ಬಾಯಿನೆ ಬಿಡಲ್ಲಾ ಸರ್, ಎಲ್ಲದ್ದಕ್ಕೂ ಕೋಲೆ ಬಸವನ ತರಹ ತಲೆ ಹಾಕುತ್ತಾರೆ. ಒಂದ್ ಪ್ರಶ್ನೆ ಕೇಳಲ್ಲಾ, ಜೋರಾಗಿ ಮಾತನಾಡಲ್ಲ, ಅಬ್ಬಾ ಈಗಿನ ವಿದ್ಯಾರ್ಥಿಗಳನ್ನು ಬಾಯಿಬಿಚ್ಚಿ ಮಾತನಡಿಸೋದೆ ಕಷ್ಟ” ಈ ಎರಡೂ ಸಂಭಾಷಣೆಗಳು ಪ್ರಸ್ತುತ ತರಗತಿಗಳಲ್ಲಿ ಸಾಮಾನ್ಯವಾಗಿ ನಡೆಯುತ್ತಿರುವುದು ಸತ್ಯ. ಒಂದೆಡೆ ತುಂಬಾ ಮಾತಾನಾಡುವ, ಇನ್ನೊಂದೆಡೆ ಬಾಯಿ ಬಿಚ್ಚಿ ಮನದೊಳಗಿನ ದುಗುಡವನ್ನು ಹೇಳದ ವಿದ್ಯಾರ್ಥಿಗಳು. ಈ ಸಂದರ್ಭಕ್ಕೆ ನನಗೆ ಹೊಳೆದಿದ್ದು ನಾವು ಶಿಕ್ಷಕರಾಗಿ ಮಕ್ಕಳೊಂದಿಗೆ ಮಾಡಬೇಕಾಗಿರುವ ಸಂವಹನ ಹೇಗಿರಬೇಕು ಎಂಬುವುದು. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಸಂವಹನ ಅದು ತಾಯಿ ಮತ್ತು ಮಕ್ಕಳ ನಡುವೆ ನಡೆಯುವ ನಂಬಿಕೆಯ ಸಂವಹನವಾಗಿರಬೇಕು. ಈ ಸಂವಹನದಲ್ಲಿ ಭರವಸೆ ಒಳಗೊಂಡಿರಬೇಕು. ಪ್ರೀತಿ, ಸ್ನೇಹ, ಜ್ಞಾನ, ಹಾಸ್ಯ, ಬದುಕು ಹೀಗೆ ಹಲವು ಬಗೆಯಲ್ಲಿ ಅತ್ಯುತ್ತವಾದ ಸಂವಹನ ನಡೆದರೆ, ವಿದ್ಯಾರ್ಥಿಗಳು ಮೇಲಿನ ಎರಡೂ ಸನ್ನಿವೇಶಗಳಿಂದ ಹೊರಬರಲು ಸಾಧ್ಯವಾಗುತ್ತದೆ ಜೊತೆಗೆ ಶಿಕ್ಷಕರಿಗೂ ತರಗತಿಯಲ್ಲಿ ತೊಡಗಿಸಿಕೊಳ್ಳಲು ಸಂತೋಷವಾಗುತ್ತದೆ. ಇವತ್ತಿನ ಈ ಲೇಖನದಲ್ಲಿ ಅಂತಹ ಸಂವಹನದ ಕುರಿತು ಚರ್ಚಿಸೋಣ. ನನ್ನ ಜೀವನದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು, ಅಲ್ಲಿನ ವಾತಾವರಣ, ಗೆಳೆಯರು ಮತ್ತು ಪ್ರಮುಖವಾಗಿ ಶಿಕ್ಷಕರು ಬೀರಿದ ಪರಿಣಾಮ ಅತ್ಯಂತ ಮಹತ್ವ ಪಡೆಯುತ್ತದೆ. ಅಲ್ಲಿ ಕಲಿತ ಸ್ಟೇಜ್ ಕರೆಜ್, ಬದುಕಿನ ಗಣಿತ, ಜನರೊಂದಿಗೆ ಮಾತನಾಡುವ ಶೈಲಿ, ಇನ್ನೊಬ್ಬರಿಗೆ ಕೊಡುವ ಗೌರವ, ಸತತ ಪ್ರಯತ್ನ ಮಾಡುವುದು, ಸಂವಹನ ನಿರೂಪಣಾ ಕೌಶಲ್ಯ, ಬರವಣಿಗೆ, ಓದು, ಆಟ, ಪಾಠ, ನೃತ್ಯ, ಹಾಡು, ವ್ಯಕ್ತಿತ್ವ ಹೀಗೆ ನಾನಾ ರೀತಿಯ ಕೌಶಲ್ಯಗಳ ಬೆಳವಣಿಗೆಗೆ ಕಾರಣವಾಗಿದೆ. ಪ್ರಸ್ತುತ ಸಂದರ್ಭದಲ್ಲಿ ಅದರ ಮಹತ್ವ ತಿಳಿದಿದ್ದರು, ವಿದ್ಯಾರ್ಥಿಗಳು, ಪಾಲಕರು ಅದನ್ನು ಕಡೆಗಣಿಸಲಾಗುತ್ತಿದ್ದಾರೇನೊ ಎನ್ನುವ ನೋವು ಕಾಡುತ್ತಲಿದೆ. ಎಲ್ಲವೂ ಬದುಕಿನ ಓಟದ ಭರಾಟೆಯಲ್ಲಿ ಕ್ಷೀಣವಾಗುತ್ತಿದೆ ಎನಿಸುತ್ತಿದೆ ಅದಕ್ಕಾಗಿ ಅದನ್ನು ಮತ್ತೊಮ್ಮೆ ನನ್ನೊಳಗೆ, ನಾನು ತಾಜಾ ಮಾಡಿಕೊಳ್ಳುವ ಸಣ್ಣ ಪ್ರಯತ್ನ ಈ ಪುಟ್ಟ ಲೇಖನ.
ಇತ್ತೀಚಗೆ ನಾನು ಗಮನಿಸಿದಂತೆ, ಕೆಲವು ಕಡೆಗೆ ಶಿಕ್ಷಕರ ಬಗೆಗಿನ ಹಗುರವಾದ ಮಾತುಗಳು ಕೇಳಿಬಂತು. ಯಾರು ಶಿಕ್ಷಕರು ಹಾಗೂ ಅವರ ವೃತ್ತಿಯ ಬಗ್ಗೆ ಹಗುರವಾಗಿ ಮಾತನಾಡುತ್ತಾರೊ, ತಮ್ಮ ಪ್ರಾಥಮಿಕ ಶಾಲೆಯ ಶಿಕ್ಷಕರಿಂದ ಕಲಿತ ಮೊದಲ ತೊದಲ ಬದುಕಿನ ಪಾಠ ಮರೆತಿರುತ್ತಾರೆ ಎಂದು ನಾನು ಬಲವಾಗಿ ನಂಬುತ್ತೇನೆ. ಒಟ್ಟು ಶಿಕ್ಷಕ ಸಮುದಾಯದಿಂದಲೇ, ಇವತ್ತು ಭಾರತದಂತಹ ಸಮೃದ್ಧ ದೇಶದಲ್ಲಿ, ಉತ್ತಮ ಮಾನವರ ನಿರ್ಮಾಣವಾಗುತ್ತಿರುವುದು ಎನ್ನುವುದು ಒಪ್ಪಿಕೊಳ್ಳುವ ಸತ್ಯ. ನಾವೆಲ್ಲರೂ ಶಿಕ್ಷಕರ ಬಗ್ಗೆ ಏನೆ ಮಾತನಾಡಿದರು, ಅವರ ಪಾತ್ರಕ್ಕೆ ಪರ್ಯಾಯ ಎಷ್ಟೇ ಬಂದರು, ಯಾವತ್ತೂ ನೈಜವಾದ ಶಿಕ್ಷಕನನ್ನು ಪಿಪ್ಲೇಸ್ ಮಾಡಲು ಸಾಧ್ಯವಿಲ್ಲ ಎಂಬುವುದು ಸತ್ಯ. ಈ ಲೇಖನದ ಮೂಲಕ ಪ್ರಸ್ತುತ ನಮ್ಮ ಶಿಕ್ಷಕರು ಹೇಗಿದ್ದಾರೆ ಗಮನಿಸೋಣ ಬನ್ನಿ.
ನನ್ನ ಅನುಭವದಲ್ಲಿ ಬೋಧನೆ ಎಂಬುವುದು, ವ್ಯಾಪಾರವಲ್ಲ ಅದೊಂದು ಮನಸ್ಸು ಹೃದಯಗಳನ್ನು ಸೆಳೆಯುವ ಹಾಗೂ ಜ್ಞಾನವೆಂಬ ಹೂವನ್ನು ಅರಳಿಸುವ ಮಹತ್ವದ ಪ್ರಕ್ರಿಯೆ. ಮಗುವಿನ ಶಿಕ್ಷಣದಲ್ಲಿ ಶಿಕ್ಷಕ ಮತ್ತು ಬೋಧನೆಯ ಪಾತ್ರ ಅತ್ಯಂತ ಮಹತ್ವ ಪಡೆಯುತ್ತದೆ. ಬೋಧನೆಯು ಪುಸ್ತಕದಲ್ಲಿ ಇರುವ ವಿಷಯವನ್ನು ಓದಿ ಹೇಳುವ, ಪಾಠಗಳನ್ನು ಮುಗಿಸುವ ಪ್ರಕ್ರಿಯೆಯಲ್ಲ, ಬದಲಿಗೆ ಮಕ್ಕಳನ್ನು ಈ ಆಧುನಿಕ ಜಗತ್ತಿಗೆ ತಯಾರಿಗೊಳಿಸುವ ಪ್ರಕ್ರಿಯೆ. ಮಗು ಭವಿಷ್ಯದ ಜೀವನವನ್ನು ಸಮುದಾಯದೊಂದಿಗೆ ಹೊಂದಾಣಿಕೆ ಕಲಿತು, ಒಬ್ಬ ಉತ್ತಮ ನಾಗರೀಕನಾಗಿ ಸಂವಹನಗೊಳಿಸಲು ಬೇಕಾಗುವ ಕಲೆಯನ್ನು ಕಲಿಸುವ ಮಹತ್ವದ ಕೆಲಸ. ಆಧುನಿಕ ತಂತ್ರಗಳು ಅನ್ವಯಿಸುವ ಮತ್ತು ರಕ್ತಪಾತದಂತಹ ಅಭ್ಯಾಸಗಳಿಂದ ದೂರಗೊಳಿಸುವ ಮಹತ್ವದ ಕೆಲಸ ಈ ಬೋಧನೆ ಮಾಡುತ್ತದೆ. ಪ್ರಸ್ತುತ ವಿದ್ಯಾರ್ಥಿಗಳನ್ನು ಸಮಾಜದೊಂದಿಗೆ ಹೊಂದಾಣಿಕೆ, ಸಹಬಾಳ್ವೆ, ಸಹಕಾರ ಹೀಗೆ ಹತ್ತಾರು ಕೌಶಲ್ಯಗಳನ್ನು ಕಲಿಸುವುದೆ ಈ ಬೋಧನೆಯ ಪರಮೋಚ್ಛ ಗುರಿ.
|
ಇಲ್ಲಿಯವರೆಗೆ...
October 2023
"
|