ಶಿಕ್ಷಕರು ಜ್ಞಾನದ ಸಕ್ರಿಯ ಸೃಷ್ಟಿಕರ್ತರು. ವಿದ್ಯಾರ್ಥಿಗಳು ಜ್ಞಾನವನ್ನು ಗೃಹಿಸುವವರು. ಶಾಲೆಗಳು ಕೇವಲ ಇಟ್ಟಿಗೆ ಮತ್ತು ಗಾರೆಗಳಿಂದ ಕೂಡಿದ ಕಟ್ಟಡಗಳಲ್ಲ, ಅವು ಜೀವನಪರಿಯಂತ ನಿರಂತರ ಕಲಿಕೆಯ ಕೇಂದ್ರಗಳು. ಮುಖ್ಯವಾಗಿ, ಬೋಧನೆಯು ಅತ್ಯಂತ ಸವಾಲಿನ ಮತ್ತು ಗೌರವಾನ್ವಿತ ವೃತ್ತಿಗಳಲ್ಲಿ ಒಂದಾಗಿದೆ, ಇದು ನಮ್ಮ ರಾಷ್ಟ್ರದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಆರೋಗ್ಯಕ್ಕೆ ಅಡಿಪಾಯ. ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ನಾಟಕೀಯ ಪರಿವರ್ತನೆಯ ಬೀಜಗಳನ್ನು ಬಿತ್ತಲಾಗುತ್ತಿದೆ. ಇದು ಪ್ರಸ್ತುತ ಸಲ್ಲದು, ಇಲ್ಲಿ ಜ್ಞಾನ, ಮಾಹಿತಿ ತಂತ್ರಜ್ಞಾನ ಮತ್ತು ಉತ್ತಮ ಕಲಿಕೆಗಾಗಿ ಸಾರ್ವಜನಿಕ ಬೇಡಿಕೆಯಲ್ಲಿನ ಬೃಹತ್ ಕ್ರಾಂತಿಗಳಿಂದ ಮುನ್ನಡೆಸಬೇಕಿದೆ.
ಬೋಧನೆಯು ವಿದ್ಯಾರ್ಥಿಗಳು, ಸಹೋದ್ಯೋಗಿಗಳು ಮತ್ತು ಸಮುದಾಯದೊಂದಿಗೆ ಅವರ ಸಂಬಂಧ; ಗಟ್ಟಿಗೊಳಿಸುವ ಪ್ರಕ್ರಿಯೆಯಾಗಿದೆ. ಅವರು ಬಳಸುವ ಉಪಕರಣಗಳು ಮತ್ತು ತಂತ್ರಗಳು; ಅವರ ಹಕ್ಕುಗಳು ಮತ್ತು ಜವಾಬ್ದಾರಿಗಳು; ಪಠ್ಯಕ್ರಮದ ರೂಪ ಮತ್ತು ವಿಷಯ ಇವುಗಳನ್ನು ಸಜ್ಜುಗೊಳಿಸುತ್ತದೆ. ಶಿಕ್ಷಕರಾಗಿ ಪಾಠದ ಪೂರ್ವತಯಾರಿ, ವೃತ್ತಿಪರ ಅಭಿವೃದ್ಧಿ ಮತ್ತು ಶಾಲೆಗಳ ರಚನೆ ಮರುಜೀವ ಪಡೆಯಬೇಕಿದೆ. ಇನ್ನಷ್ಟು ಸಂಕ್ಷಿಪ್ತವಾಗಿ ಹೇಳುವುದಾದರೆ, ಶಾಲೆಗಳು ಮತ್ತು ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ಸೇವೆ ನೀಡಲು, ತಮ್ಮನ್ನು ಮರುಶೋಧಿಸಬೇಕಿದೆ, ಮನಸ್ಪೂರ್ವಕ ಅನುಷ್ಠಾನಗೊಳಿಸಬೇಕಿದೆ.
ಸಾಂಪ್ರದಾಯಿಕವಾಗಿ, ಬೋಧನೆಯು ಕೇವಲ ಮಾಹಿತಿ-ವಿತರಣೆ ಮಾತ್ರವಲ್ಲ ಅದೊಂದು ಜ್ಞಾನದ ಪಾಲನೆ, ಆರೈಕೆ ಮತ್ತು ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಬಲಗೊಳಿಸುವ ಪ್ರಕ್ರಿಯೆಯಾಗಿದೆ. ಶಾಲೆಗಳು ಹೊಸ ಮಾದರಿಯ ಶಿಕ್ಷಣ ಕೊಡುವ ಜ್ಞಾನದ ಕಾರ್ಖಾನೆಗಳಾಗಿವೆ. ಇಲ್ಲಿ ಸಮಾಜದ ಪ್ರತಿಯೊಂದು ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸುವ, ಸಮಾನ ವಯಸ್ಸಿನ ಯುವಕರನ್ನು, ಪ್ರಮಾಣಿಕ ಬದುಕಿನ ಪರೀಕ್ಷೆ ಎದುರಿಸುವ ಕೌಶಲ್ಯಗಳನ್ನು ಕಲಿಯುವ ಕೇಂದ್ರಗಳಾಗಿವೆ.
ಏನು?, ಯಾವಾಗ?, ಹೇಗೆ?, ಎಲ್ಲಿ?, ಎಷ್ಟು?, ಏಕೆ? ಎಂಬಿತ್ಯಾದಿ ಪ್ರಶ್ನೆಗಳಿಗೆ, ಅನುಭವಿಕ ಮತ್ತು ಅನುಕರಣೆಯ ನೆಲೆಯಲ್ಲಿ ಬೋಧನೆಯು ಶಿಕ್ಷಕರ ಮೂಲಕ ವಿದ್ಯಾರ್ಥಿಗಳಿಗೆ ತಲುಪಬೇಕಿದೆ. ವಿದ್ಯಾರ್ಥಿಗಳು ಕಲಿಯಲು ವಿಫಲರಾದಾಗ ಅವರನ್ನು ಕಲಿಯುವಂತೆ ಪ್ರೋತ್ಸಾಹಿಸುವುದು ಬೋಧನೆ ಮತ್ತು ಶಿಕ್ಷಕರ ಜವಾಬ್ದಾರಿಯಾಗಿದೆ. ಅನೇಕ ಶಿಕ್ಷಕರು ತರಗತಿಯ ಮುಂದೆ ಸುಮ್ಮನೆ ನಿಂತು ವರ್ಷದಿಂದ ವರ್ಷಕ್ಕೆ ಅದೇ ಪಾಠಗಳನ್ನು ಹೇಳುವುದಲ್ಲ, ಪ್ರತೀ ಪಾಠವು ವೈಜ್ಞಾನಿಕ, ಧನಾತ್ಮಕ, ರಚನಾತ್ಮಕಗೊಳಿಸುವುದು ಶಿಕ್ಷಕ ಮತ್ತು ಬೋಧನೆಯ ಆದ್ಯ ಕರ್ತವ್ಯವಾಗಿದೆ.
ಇಂದು ಅನೇಕ ಶಿಕ್ಷಕರು ವಿದ್ಯಾರ್ಥಿಗಳಿಗೆ ಕಲಿಕೆಯ ಕಲೆ ಮತ್ತು ವಿಜ್ಞಾನ ಎರಡನ್ನೂ ಅಂಗೀಕರಿಸುವ ಹೊಸ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುತ್ತಿದ್ದಾರೆ. ಶಿಕ್ಷಣದ ಮೂಲತತ್ವವು ಜ್ಞಾನವುಳ್ಳ, ಕಾಳಜಿಯುಳ್ಳ ವಯಸ್ಕ ಮತ್ತು ಸುರಕ್ಷಿತ, ಪ್ರೇರಿತ ಮಗುವಿನ ನಡುವಿನ ನಿಕಟ ಸಂಬಂಧವಾಗಿದೆ ಎಂದು ಅವರು ಅರ್ಥಮಾಡಿಕೊಳ್ಳುತ್ತಾರೆ. ಪ್ರತಿಯೊಬ್ಬ ವಿದ್ಯಾರ್ಥಿಯ ವಿಶಿಷ್ಟ ಅಗತ್ಯತೆಗಳು, ಕಲಿಕೆಯ ಶೈಲಿ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆ, ಆಸಕ್ತಿಗಳು ಮತ್ತು ಸಾಮರ್ಥ್ಯಗಳನ್ನು ಅರ್ಥಮಾಡಿಕೊಂಡು ಬೋಧನೆಯ ಪ್ರಕ್ರಿಯೆ ಸಕ್ರೀಯಗೊಳಿಸುತ್ತಿದ್ದಾರೆ.
ವಿದ್ಯಾರ್ಥಿಗಳು ಬೆಳೆದಂತೆ ಮತ್ತು ಪ್ರಬುದ್ಧರಾದಾಗ ಸಲಹೆ ನೀಡುವುದು ಅವರ ಸಾಮಾಜಿಕ, ಭಾವನಾತ್ಮಕ ಮತ್ತು ಬೌದ್ಧಿಕ ಬೆಳವಣಿಗೆಯನ್ನು ಸಂಯೋಜಿಸಲು ಸಹಾಯ ಮಾಡುವುದು ಬೋಧನೆಯ ಕೆಲಸವಾಗಿದೆ. ಪ್ರತ್ಯೇಕ ಜ್ಞಾನವನ್ನು ಹುಡುಕುವ, ಅರ್ಥಮಾಡಿಕೊಳ್ಳುವ ಮತ್ತು ಬಳಸುವ ಸಾಮರ್ಥ್ಯಗಳನ್ನು ನೀಡುವುದಲ್ಲದೆ, ತಮ್ಮ ವೈಯಕ್ತಿಕ ಜೀವನದಲ್ಲಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು; ಮತ್ತು ಸಮಾಜಕ್ಕೆ ಕೊಡುಗೆಯನ್ನು ಮೌಲ್ಯೀಕರಿಸಲು ಬೋಧನೆ ಮತ್ತು ಶಿಕ್ಷಕ ಮಹತ್ವದ ಸ್ಥಾನ ಪಡೆಯುತ್ತಾನೆ.
ಪ್ರಾಯೋಗಿಕವಾಗಿ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧವು ಸೂಚನೆಯ ವಿಭಿನ್ನ ಪರಿಕಲ್ಪನೆಯ ರೂಪವನ್ನು ತೆಗೆದುಕೊಳ್ಳುತ್ತದೆ. ವಿದ್ಯಾರ್ಥಿಗಳು ನಿಜವಾಗಿಯೂ ಹೇಗೆ ಕಲಿಯುತ್ತಾರೆ ಎಂಬುದರ ಕುರಿತು ಅರಿತುಕೊಂಡು, ಪ್ರಾಥಮಿಕವಾಗಿ ಬೋಧನೆಯನ್ನು ರಚನಾತ್ಮಕಗೊಳಿಸಿದರೆ, ಬೋಧನೆಯು ವಿದ್ಯಾರ್ಥಿಗಳ ಮನದಾಳಕ್ಕಿಳಿದು ಚಿರಕಾಲ ಉಳಿಯಲು ಬದುಕಿನಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ.
ಶಿಕ್ಷಕರು ತಮ್ಮ ಶಾಲಾ ಶಿಕ್ಷಣದ ಸ್ವರೂಪ ಮತ್ತು ವಿಷಯವನ್ನು ನಿರ್ಧರಿಸುವಲ್ಲಿ ಒಂದು ಪಾತ್ರವನ್ನು ನೀಡಿದಾಗ ವಿದ್ಯಾರ್ಥಿಗಳು ಕಷ್ಟಪಟ್ಟು ಕಲಿಯುತ್ತಾರೆ. ತಮ್ಮದೇ ಆದ ಕಲಿಕೆಯ ಯೋಜನೆಗಳನ್ನು ರಚಿಸಲು ಪ್ರಯತ್ನಿಸುತ್ತಾರೆ. ಅವರು ಕಲಿಯಲು ಒಪ್ಪಿಕೊಂಡದ್ದನ್ನು ಕಲಿತಿದ್ದಾರೆ ಎಂದು ಅವರು ಪ್ರದರ್ಶಿಸುವ ವಿಧಾನಗಳನ್ನು ಕಂಡುಕೊಳ್ಳುತ್ತಾರೆ.
ಶಿಕ್ಷಕರ ದಿನನಿತ್ಯ ವಿಷಯವನ್ನು ಪ್ರಸಾರ ಮಾಡುವುದಕ್ಕಿಂತ ಹೆಚ್ಚಾಗಿ ತೊಡಗಿಸಿಕೊಳ್ಳುವ ಕಲಿಕೆಯ ಅವಕಾಶಗಳ ಮೂಲಕ ವಿದ್ಯಾರ್ಥಿಗಳನ್ನು ವಿನ್ಯಾಸಗೊಳಿಸುವುದು ಮತ್ತು ಮಾರ್ಗದರ್ಶನ ಮಾಡುವುದು ಅವಶ್ಯಕ. ವಿದ್ಯಾರ್ಥಿಗಳಿಗೆ ನೈಜ ಪ್ರಪಂಚದ ಸಮಸ್ಯೆಗಳನ್ನು ಪರಿಹರಿಸಲು ಅನುವು ಮಾಡಿಕೊಡುವ ಅರ್ಥಪೂರ್ಣ ಶೈಕ್ಷಣಿಕ ಅನುಭವಗಳನ್ನು ಹುಡುಕುವುದು ಮತ್ತು ನಿರ್ಮಿಸುವುದು ಶಿಕ್ಷಕರ ಪ್ರಮುಖ ಜವಾಬ್ದಾರಿಯಾಗಿದೆ. ವಿದ್ಯಾರ್ಥಿಗಳು ಒಪ್ಪಿದ ಶೈಕ್ಷಣಿಕ ಮಾನದಂಡಗಳನ್ನು ಪೂರೈಸುವ ದೊಡ್ಡ ಆಲೋಚನೆಗಳು, ಶಕ್ತಿಯುತ ಕೌಶಲ್ಯಗಳು ಮತ್ತು ಮನಸ್ಸು ಹೃದಯದ ಅಭ್ಯಾಸಗಳನ್ನು ಕಲಿಯುವಂತೆ ಪ್ರೋತ್ಸಾಹಿಸಬೇಕಿದೆ. ಇದರ ಫಲಿತಾಂಶವೆಂದರೆ ವಿದ್ಯಾರ್ಥಿಗಳು ಪಠ್ಯಪುಸ್ತಕಗಳಿಂದ ಕಂಠಪಾಠ ಮಾಡುತ್ತಿದ್ದ ಅಮೂರ್ತ, ಜಡ ಜ್ಞಾನವು ಹೊಸ ಜ್ಞಾನದ ಸೃಷ್ಟಿ ಮತ್ತು ವಿಸ್ತರಣೆಯಲ್ಲಿ ಜೀವಂತವಾಗುವ ಮಹತ್ವದ ಪ್ರಕ್ರಿಯೆ ಜರಗುತ್ತದೆ.
ಇಂದಿನ ಪ್ರಪಂಚವು ಬಹುಸಂಖ್ಯೆಯ, ಬಹು ಆಯಾಮದ ಮುದ್ರಣ ಮತ್ತು ಎಲೆಕ್ಟ್ರಾನಿಕ್, ಏಐ ಮೂಲಗಳಿಂದ ಮಾಹಿತಿಯಲ್ಲಿ ಮುಳುಗಿದೆ. ಬೋಧನೆಯ ಮೂಲಭೂತ ಕೆಲಸವು ಇನ್ನು ಮುಂದೆ ಸತ್ಯಗಳನ್ನು ವಿತರಿಸುವುದಲ್ಲ, ಅದನ್ನು ವಿಮರ್ಶಾತ್ಮಕವಾಗಿ ಯೋಚಿಸಲು, ಸಮಸ್ಯೆಗಳನ್ನು ಪರಿಹರಿಸಲು, ತಿಳುವಳಿಕೆಯುಳ್ಳ ತೀರ್ಪುಗಳನ್ನು ಮಾಡಲು ಮತ್ತು ವಿದ್ಯಾರ್ಥಿಗಳು ಸಮಾಜಕ್ಕೆ ಪ್ರಯೋಜನಕಾರಿಯಾದ ಜ್ಞಾನವನ್ನು ರಚಿಸುವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವುದಾಗಿದೆ. ಶಿಕ್ಷಕರು ಬರೀ ಪ್ರಾಥಮಿಕ ಮಾಹಿತಿ ಒದಗಿಸುವವರ ಜವಾಬ್ದಾರಿಯಿಂದ ಮುಕ್ತರಾಗಿ, ಶಿಕ್ಷಕರು ಒಬ್ಬರಿಗೊಬ್ಬರು ಅಥವಾ ವಿದ್ಯಾರ್ಥಿಗಳ ಸಣ್ಣ ಗುಂಪುಗಳೊಂದಿಗೆ ಹೆಚ್ಚು ಸಮಯವನ್ನು ಕಳೆಯುವ ಮೂಲಕ ತರಗತಿ ಪ್ರಕ್ರಿಯೆಯ ಬೋಧನೆ ಸಕ್ರೀಯವಾಗಿಡಬೇಕಿದೆ.
ಬೋಧನೆಯನ್ನು ನಿಜವಾಗಿಯೂ ವೃತ್ತಿಪರಗೊಳಿಸಲು, ವಾಸ್ತವವಾಗಿ, ಶಿಕ್ಷಕನು ತುಂಬಬಹುದಾದ ಪಾತ್ರಗಳನ್ನು ನಾವು ಮತ್ತಷ್ಟು ವಿಭಿನ್ನಗೊಳಿಸಬೇಕಾಗಿದೆ. ಶಾಲೆಗಳು ತಮ್ಮ ಸಾಮರ್ಥ್ಯಗಳು ಮತ್ತು ಅನುಭವದ ಮಟ್ಟಗಳ ಆಧಾರದ ಮೇಲೆ ಸೂಕ್ತವಾದ ಜವಾಬ್ದಾರಿಯನ್ನು ಹೊಂದಿರುವ ಶಿಕ್ಷಕರ ಹೆಚ್ಚಿನ ಮಿಶ್ರಣವನ್ನು ಹೊಂದಿರಬೇಕು. ಅಲ್ಲದೆ, ವಕೀಲರ ಕೆಲಸವು ನ್ಯಾಯಾಲಯದ ಹೊರಗೆ ಸಂಭವಿಸುವಂತೆಯೇ, ಶಿಕ್ಷಕನ ಹೆಚ್ಚಿನ ಕೆಲಸವನ್ನು ತರಗತಿಯ ಹೊರಗೆ ಮಾಡಲಾಗುತ್ತದೆ ಎಂದು ನಾವು ಗುರುತಿಸಿ ಅನುಷ್ಠಾನಗೊಳಿಸಬೇಕಿದೆ.
ಶಿಕ್ಷಕರು ವಿದ್ಯಾರ್ಥಿಗಳ ಕಲಿಕೆಯ ನಿರ್ದೇಶಕರಾಗಿ ತಮ್ಮ ಪ್ರಾಥಮಿಕ ಜವಾಬ್ದಾರಿಯನ್ನು ಪುನರ್ವಿಮರ್ಶಿಸಬೇಕಿದೆ. ಶಿಕ್ಷಕರ ಸಹೋದ್ಯೋಗಿಗಳು, ಮಕ್ಕಳ ಕುಟುಂಬದ ಸದಸ್ಯರು, ರಾಜಕಾರಣಿಗಳು, ಶಿಕ್ಷಣ ತಜ್ಞರು, ಇತರರೆಲ್ಲರೂ ಜ್ಞಾನ, ಕೌಶಲ್ಯ ಮತ್ತು ಮೌಲ್ಯಗಳಿಗೆ ಸ್ಪಷ್ಟ ಮಾನದಂಡಗಳನ್ನು ಹೊಂದಿಸಿ, ಶಾಲೆಗಳಲ್ಲಿ ದಿನನಿತ್ಯದ ನಿರ್ಧಾರ ತೆಗೆದುಕೊಳ್ಳುವಲ್ಲಿ ಭಾಗವಹಿಸಿ ಪ್ರೋತ್ಸಾಹಿಸಬೇಕಿದೆ. ವಿದ್ಯಾರ್ಥಿಗಳ ಕಲಿಕೆಯ ಮೇಲೆ ಪರಿಣಾಮ ಬೀರುವ ಸಾಂಸ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ಶಿಕ್ಷಕರಿಗೆ, ಸ್ಥಳೀಯ ಸಂಸ್ಥೆಗಳು ಪ್ರೋತ್ಸಾಹಕವಾಗಿ ನಿಲ್ಲಬೇಕಿದೆ.
ಅನೇಕ ಶಿಕ್ಷಕರು ಕಲಿಕೆಯ ಚಲನಶಾಸ್ತ್ರದ ತಿಳುವಳಿಕೆಯನ್ನು ವಿಸ್ತರಿಸುವ ಶೈಕ್ಷಣಿಕ ಪರಿಣಾಮಕಾರಿತ್ವದ ವಿವಿಧ ಪ್ರಶ್ನೆಗಳನ್ನು ಸಂಶೋಧಿಸಲು ಸಮಯವನ್ನು ಕಳೆಯುತ್ತಾರೆ. ತರಗತಿಯ ಒಳಗೆ ಮತ್ತು ಹೊರಗೆ ಶಿಕ್ಷಕರ ಪಾತ್ರವನ್ನು ಮರುಶೋಧಿಸುತ್ತಾ ಗಮನಾರ್ಹವಾಗಿ ಉತ್ತಮ ಶಾಲೆಗಳು ಮತ್ತು ಉತ್ತಮ ಶಿಕ್ಷಿತ ವಿದ್ಯಾರ್ಥಿಗಳನ್ನು ಸೃಷ್ಟಿಸುವಲ್ಲಿ ನಿರತರಾಗಿದ್ದರೆ. ಶಿಕ್ಷಕರು ಸುಧಾರಣೆಯ ಬೇರುಗಳು ಇಂದಿನ ಶಾಲೆಗಳಲ್ಲಿ ಹಿಡಿದಿಟ್ಟುಕೊಂಡಿದ್ದಾರೆ ಎಂಬುವುದು ಸತ್ಯ.
ಪ್ರಸ್ತುತ ರಾಜಕಾರಣಿಗಳು, ಪೋಷಕರು ಮತ್ತು ಶಾಲಾ ಮಂಡಳಿಯ ಸದಸ್ಯರು, ಇಲಾಖೆಯ ಅಧಿಕಾರಿಗಳು ಶಿಕ್ಷಕರಿಗೆ ಅಗತ್ಯವಾದ ಕೆಲಸವನ್ನು ಮಾಡಲು ಬೆಂಬಲ, ಸ್ವಾತಂತ್ರ್ಯ ಮತ್ತು ನಂಬಿಕೆಯನ್ನು ನೀಡಬೇಕಿದೆ. ಶಿಕ್ಷಣದಲ್ಲಿ ನಮ್ಮ ಪಾತ್ರಗಳನ್ನು ಪುನರ್ವಿಮರ್ಶಿಸಲು ನಾವೆಲ್ಲರೂ ಸಿದ್ಧರಾಗಬೇಕಿದೆ. ಇದರಿಂದ ನಮ್ಮ ಸಮುದಾಯದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತದೆ.
ಕೊನೆಯ ಸಾಲು: “ಬೋಧನೆ ಎಂಬುವುದು ಅರಿವಿನ ಅನಾವರಣ ಮಾಡುವ ಪ್ರಕ್ರಿಯೆ. ಶಿಕ್ಷಕ ಈ ಅನಾವರಣದ ರುವಾರಿ. ವಿದ್ಯಾರ್ಥಿ ಮತ್ತು ಶಿಕ್ಷಕರ ಮದ್ಯೆ ಈ ಅರಿವಿನ ಅನಾವರಣವು ವೈವಿಧ್ಯತೆಯಿಂದ ಕೂಡಿರಬೇಕು. ಜ್ಞಾನದ ಸಾಗರ ದಾಟಿ, ಬದುಕಿನ ತೀರವ ಯಶಸ್ವಿಯಾಗಿ ಸೇರಲು ರಚನಾತ್ಮಕ ಬೋಧನೆ, ಕ್ರಿಯಾಶೀಲ ಶಿಕ್ಷಕ ಇಂದಿನ ಅಗತ್ಯ.”