ತಾಯಿ ಹಾಗೂ ತಾಯಿನಾಡು ಸ್ವರ್ಗಕ್ಕಿಂತ ಮಿಗಿಲಾದವು. ತಾಯಿ ನಾಡಿನ ತಾಯಿ ನುಡಿಯನ್ನು ಕಲಿಯುವ ಮಕ್ಕಳಲ್ಲಿ ಅದರ ಸುಗಂಧ ತಿಳಿಸಬೇಕಾದ ಅಗತ್ಯವಿದೆ. ಪ್ರಸ್ತುತ ದಿನಗಳಲ್ಲಿ ಪ್ರಾಥಮಿಕ ಶಾಲೆಗಳಲ್ಲಿ ತಾಯಿ ನುಡಿಯಿಂದ ಕನ್ನಡ ಭಾಷೆಯನ್ನು ಕಲಿಸಬೇಕಾದರೆ ಬಹಳ ಬಿಕ್ಕಟ್ಟುಗಳು ಎದುರಾಗುತ್ತಿವೆ. ಮಕ್ಕಳು ಕನ್ನಡ ಕಲಿಯುವಲ್ಲಿ ತೊಂದರೆಗಳು ಎದುರಿಸಿದರೆ ಮುಂದಿನ ವಿಷಯಗಳನ್ನು ತಿಳಿಯುವಲ್ಲಿ ಅತ್ಯಂತ ಹೆಚ್ಚು ತೊಂದರೆಗಳನ್ನು ಎದುರಿಸುತ್ತಾರೆ. ಕನ್ನಡವನ್ನು ಸರಿಯಾಗಿ ಅರ್ಥಮಾಡಿಕೊಂಡರೆ ಉಳಿದ ವಿಷಯಗಳು ತಾನಾಗಿಯೇ ಅರ್ಥವಾಗುತ್ತವೆ ಎಂಬ ಅಂಶಗಳನ್ನು ಅದೆಷ್ಟೊ ಸಂಶೋಧನೆಗಳು ತೋರಿಸಿಕೊಟ್ಟಿವೆ. ಹಲವು ಸಂಶೋಧನೆಗಳು, ಹಲವು ತಜ್ಞರ ಅಭಿಪ್ರಾಯದಂತೆ ಕನ್ನಡ ಕಲಿಕೆ ಎಷ್ಟೆ ಸುಗಮಗೊಳಿಸಿದರೂ ಇನ್ನು ಅನೇಕ ರೀತಿಯ ಬಿಕ್ಕಟ್ಟುಗಳು ನಮ್ಮ ಮಕ್ಕಳು ಎದುರಿಸುತ್ತಿದ್ದಾರೆ.
ಪೀಠಿಕೆ:
ತಾಯಿ ಹಾಗೂ ತಾಯಿನಾಡು ಸ್ವರ್ಗಕ್ಕಿಂತ ಮಿಗಿಲಾದವು. ತಾಯಿ ನಾಡಿನ ತಾಯಿ ನುಡಿಯನ್ನು ಕಲಿಯುವ ಮಕ್ಕಳಲ್ಲಿ ಅದರ ಸುಗಂಧ ತಿಳಿಸಬೇಕಾದ ಅಗತ್ಯವಿದೆ. ಪ್ರಸ್ತುತ ದಿನಗಳಲ್ಲಿ ಪ್ರಾಥಮಿಕ ಶಾಲೆಗಳಲ್ಲಿ ತಾಯಿ ನುಡಿಯಿಂದ ಕನ್ನಡ ಭಾಷೆಯನ್ನು ಕಲಿಸಬೇಕಾದರೆ ಬಹಳ ಬಿಕ್ಕಟ್ಟುಗಳು ಎದುರಾಗುತ್ತಿವೆ. ಮಕ್ಕಳು ಕನ್ನಡ ಕಲಿಯುವಲ್ಲಿ ತೊಂದರೆಗಳು ಎದುರಿಸಿದರೆ ಮುಂದಿನ ವಿಷಯಗಳನ್ನು ತಿಳಿಯುವಲ್ಲಿ ಅತ್ಯಂತ ಹೆಚ್ಚು ತೊಂದರೆಗಳನ್ನು ಎದುರಿಸುತ್ತಾರೆ. ಕನ್ನಡವನ್ನು ಸರಿಯಾಗಿ ಅರ್ಥಮಾಡಿಕೊಂಡರೆ ಉಳಿದ ವಿಷಯಗಳು ತಾನಾಗಿಯೇ ಅರ್ಥವಾಗುತ್ತವೆ ಎಂಬ ಅಂಶಗಳನ್ನು ಅದೆಷ್ಟೊ ಸಂಶೋಧನೆಗಳು ತೋರಿಸಿಕೊಟ್ಟಿವೆ. ಹಲವು ಸಂಶೋಧನೆಗಳು, ಹಲವು ತಜ್ಞರ ಅಭಿಪ್ರಾಯದಂತೆ ಕನ್ನಡ ಕಲಿಕೆ ಎಷ್ಟೆ ಸುಗಮಗೊಳಿಸಿದರೂ ಇನ್ನು ಅನೇಕ ರೀತಿಯ ಬಿಕ್ಕಟ್ಟುಗಳು ನಮ್ಮ ಮಕ್ಕಳು ಎದುರಿಸುತ್ತಿದ್ದಾರೆ.
0 Comments
ಮಾನವ ಸಮುದಾಯ ಮಂಗನಿಂದ ಹುಟ್ಟಿ ಹಲವು ವರ್ಷಗಳ ನಂತರ ಮಾನವ ರೂಪಕ್ಕೆ ಬಂದಿದ್ದು ಜನರು ಬೆಳೆದಂತೆ ಭೂಮಿಯ ಮೇಲಿನ ಎಲ್ಲಾ ರೀತಿಯ ಬೆಳವಣಿಗೆಗೆ ಸಹಕಾರಿಯಾಗಿದ್ದು ಈ ದೇಶದ ಅಥವಾ ಪ್ರಪಂಚದ ಜಾಗತೀಕರಣ. ನಾಡು ನುಡಿಯ ಹಿತಚಿಂತನೆ ಮಾಡುವ ಬುದ್ಧಿವಂತ ಪ್ರಾಣಿಯಾಗಿ ಮಾನವರು ಹೊರಹೊಮ್ಮಿದರು. ಸಾವಿರಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಹಲವು ಜಾಗತೀಕ ಸಮಸ್ಯೆಗಳಿಗೆ ಉತ್ತರ ಹುಡುಕುತ್ತ ಹೊರಟ ಸಮಾಜ ಪ್ರಪಂಚದ ದೃಷ್ಠಿಯಲ್ಲಿ ಸಾಮಾಜಿಕ ಸ್ಥಿತಿಗತಿಯಲ್ಲಿ ಹಿಂದುಳಿದ ಜನರ ಬಗ್ಗೆ ವಿಚಾರ ಮಾಡುತ್ತ ಅವರ ಏಳ್ಗೆಗಾಗಿ ಹಲವು ರೀತಿಯ ಪ್ರಯತ್ನಗಳು ಈ ಪ್ರಪಂಚದ ಮೇಲೆ ನಡೆದವು ಕೆಲವು ಸಾರ್ಥಕತೆ ಪಡೆದರೆ ಇನ್ನು ಕೆಲವು ಪಡೆಯುವ ಹಂತ ತಲುಪಿವೆ.
“ಎತ್ತಿಗೆ ಜ್ವರ, ಎಮ್ಮೆ ಬರೆ” ಇಟ್ಟರಂತೆ ಈ ಮಾತು ಇತ್ತಿಚೆಗೆ ನನಗೆ ಬಹಳ ನೆನಪಿಗೆ ಬಂದಿತು. ನಮ್ಮ ರಾಜ್ಯದಲ್ಲಿಯೇ ಅಲ್ಲಾ ಇಡಿ ದೇಶದಲ್ಲಿಯೇ ಜಲವಿವಾದಗಳು ಹೆಚ್ಚಾಗುತ್ತಿವೆ. ರಾಜ್ಯ ರಾಜ್ಯಗಳ ಮಧ್ಯೆ ಅಲ್ಲದೇ ಜಿಲ್ಲೆ ಜಿಲ್ಲೆಗಳ ಮಧ್ಯೆಯೂ ಹೋರಾಟ ಚೀರಾಟಗಳು ಭುಗಿಲೇಳುತ್ತಿವೆ. ನಮ್ಮ ರಾಜ್ಯದ ಬಹುಮುಖ್ಯ ಜಲವಿವಾದ ಎದ್ದಿರುವುದು ಸಧ್ಯಕ್ಕೆ ರಾಜ್ಯ ಸರಕಾರ ಕೈಗೆತ್ತುಕೊಂಡಿರುವ ಎತ್ತಿನ ಹೊಳೆಯೆಂಬ ಬೃದಾಕಾರದ ನೀರನ್ನು ಮೇಲೆತ್ತುವ ಯೋಜನೆ. ನಮ್ಮ ರಾಜ್ಯದ ಜಿಲ್ಲೆಗಳಾದ ಮೈಸೂರು, ಕೋಲಾರ, ತುಮುಕೂರು ಜಿಲ್ಲೆಗಳಿಗೆ ನೀರು ಕೊಡಬೇಕು ಎಂಬ ಮಾಹಾದಾಸೆ ಹೊಂದಿರುವ ಘನ ಸರಕಾರಗಳು ಮಲೆನಾಡಿನ ಮಕ್ಕಳ ಪಾಲಿಗೆ ಅವರ ಜೀವನಾಡಿಯಾಗಿರುವ ಪಶ್ಚಿಮ ಘಟ್ಟಗಳ ಮೇಲೆ ಬರೆ ಎಳೆಯುವ ಕೆಲಸ ಮಾಡುತ್ತಿದೆ. |
ಇಲ್ಲಿಯವರೆಗೆ...
October 2023
"
|