ನಾನು ಕಂಡಂತೆ ಕರ್ನಾಟಕದಲ್ಲಿ ಶಾಂತಿ ಪ್ರಕಾಶನದ ಹಲವು ಪುಸ್ತಕಗಳು ದೇವರ ನೈಜವಾದ ಕಲ್ಪನೆಯನ್ನು ಕುರಾನ್ ಆಧಾರಿತವಾಗಿ, ಕನ್ನಡದಲ್ಲಿ ತಿಳಿಸುವ ಪ್ರಯತ್ನ ಮಾಡುತ್ತವೆ. ನಾನು ಕುರಾನ್ ಕನ್ನಡ ಅನುವಾದ ಓದಿರುವ ಅನುಭವದ ಪ್ರಕಾರ ಅಲ್ಲಿರುವ ಅದೆಷ್ಟೊ ಸತ್ಯಗಳನ್ನು ಅರೆತುಕೊಳ್ಳಲು ಸಾಧ್ಯವಾಯಿತು. ಈ ಭೂಮಿಯ ಮೇಲೆ ಜೀವಿಗಳು ಕಾಣಿಸಿಕೊಂಡಾಗಿನಿಂದ ಇಲ್ಲಿಯವರೆಗೆ, ಅನೇಕ ರೀತಿಯ ಧರ್ಮಗಳು ಹುಟ್ಟಿಕೊಂಡು ಎಲ್ಲವು ಒಂದೊಂದೊ ಗುಂಪಾಗಿ ಅನುಸರಿಸುತ್ತಾ ಬಂದಿವೆ. ನೈಜವಾಗಿ ಮಾನವರಿಗೆ ಸಕಲ ಸೌಲಭ್ಯ ಒದಗಿಸಿಕೊಡಬಲ್ಲ ಮತ್ತು ಅವನ ಹಕ್ಕುಗಳಿಗೆ ಚ್ಯುತಿ ಬರದಂತೆ ಪ್ರೀತಿಯ ಬದುಕು ಕೊಟ್ಟು ಕಾಪಾಡುವ ಒಂದು ಧರ್ಮ ಯಾವುದು ಎಂದು ಹುಡುಕುವ ಪ್ರಯತ್ನ ನನ್ನದು. ಯಾವುದು ಮಾನವನ ಜೀವನ ಸಾಗಿಸಲು ಪೂರಕವಾಗಿದೆಯೊ, ಅದೇ ನಿಜವಾದ ಮಾನವ ಧರ್ಮ ಎನಿಸುತ್ತದೆ. ಎಲ್ಲಿ ಧರ್ಮದ ಕಟ್ಟಳೆಗಳಿಂದ ಮಾನವನನ್ನು ಬಂಧಿಸುತ್ತೇವೆಯೊ, ಅವು ನೈಜವಾದ ಧರ್ಮ ಅಲ್ಲಾ ಎನಿಸುತ್ತದೆ. ಮಾನವರನ್ನು ಗೌರವದಿಂದ ಬದುಕಲು ಪೂರಕವಾದ ವಾತಾವರಣ ಕಲ್ಪಸಿಕೊಡುವ ಯಾವುದೇ ಧರ್ಮ ಸದ್ಧರ್ಮ ಎನಿಸಿಕೊಳ್ಳುತ್ತದೆ.
ಪೀಠಿಕೆ:
ನಾನು ಕಂಡಂತೆ ಕರ್ನಾಟಕದಲ್ಲಿ ಶಾಂತಿ ಪ್ರಕಾಶನದ ಹಲವು ಪುಸ್ತಕಗಳು ದೇವರ ನೈಜವಾದ ಕಲ್ಪನೆಯನ್ನು ಕುರಾನ್ ಆಧಾರಿತವಾಗಿ, ಕನ್ನಡದಲ್ಲಿ ತಿಳಿಸುವ ಪ್ರಯತ್ನ ಮಾಡುತ್ತವೆ. ನಾನು ಕುರಾನ್ ಕನ್ನಡ ಅನುವಾದ ಓದಿರುವ ಅನುಭವದ ಪ್ರಕಾರ ಅಲ್ಲಿರುವ ಅದೆಷ್ಟೊ ಸತ್ಯಗಳನ್ನು ಅರೆತುಕೊಳ್ಳಲು ಸಾಧ್ಯವಾಯಿತು. ಈ ಭೂಮಿಯ ಮೇಲೆ ಜೀವಿಗಳು ಕಾಣಿಸಿಕೊಂಡಾಗಿನಿಂದ ಇಲ್ಲಿಯವರೆಗೆ, ಅನೇಕ ರೀತಿಯ ಧರ್ಮಗಳು ಹುಟ್ಟಿಕೊಂಡು ಎಲ್ಲವು ಒಂದೊಂದೊ ಗುಂಪಾಗಿ ಅನುಸರಿಸುತ್ತಾ ಬಂದಿವೆ. ನೈಜವಾಗಿ ಮಾನವರಿಗೆ ಸಕಲ ಸೌಲಭ್ಯ ಒದಗಿಸಿಕೊಡಬಲ್ಲ ಮತ್ತು ಅವನ ಹಕ್ಕುಗಳಿಗೆ ಚ್ಯುತಿ ಬರದಂತೆ ಪ್ರೀತಿಯ ಬದುಕು ಕೊಟ್ಟು ಕಾಪಾಡುವ ಒಂದು ಧರ್ಮ ಯಾವುದು ಎಂದು ಹುಡುಕುವ ಪ್ರಯತ್ನ ನನ್ನದು. ಯಾವುದು ಮಾನವನ ಜೀವನ ಸಾಗಿಸಲು ಪೂರಕವಾಗಿದೆಯೊ, ಅದೇ ನಿಜವಾದ ಮಾನವ ಧರ್ಮ ಎನಿಸುತ್ತದೆ. ಎಲ್ಲಿ ಧರ್ಮದ ಕಟ್ಟಳೆಗಳಿಂದ ಮಾನವನನ್ನು ಬಂಧಿಸುತ್ತೇವೆಯೊ, ಅವು ನೈಜವಾದ ಧರ್ಮ ಅಲ್ಲಾ ಎನಿಸುತ್ತದೆ. ಮಾನವರನ್ನು ಗೌರವದಿಂದ ಬದುಕಲು ಪೂರಕವಾದ ವಾತಾವರಣ ಕಲ್ಪಸಿಕೊಡುವ ಯಾವುದೇ ಧರ್ಮ ಸದ್ಧರ್ಮ ಎನಿಸಿಕೊಳ್ಳುತ್ತದೆ.
0 Comments
ಕಳೆದ ಎಪ್ಪತ್ತು ವರ್ಷಗಳಿಂದ ಸಹಿಸುತ್ತಲೆ ಬಂದೆವು. ಕಷ್ಟ ನೋವಿನ ದಿನಗಳನ್ನು ಅನುಭವಿಸುತ್ತಲೆ ದಿನಗಳ ಕಳೆದೆವು. ಇನ್ನೆಷ್ಟು ದಿನಗಳು ಕಣ್ಣಮುಚ್ಚಾಲೆ ಆಟವನ್ನು ಕಣ್ಣಿಗೆ ಕಂಡರು ವಿಧಿಯಿಲ್ಲದೆ ಸಹಿಸಬೇಕು ತಿಳಿಯದಾಗಿದೆ. ಹೌದು ಇದು ಪ್ರಸ್ತುತ ಭಾರತದ ಅನ್ನದಾತನ ಅಂತರಂಗದ ಗೋಳು. ಮಳೆಯಿದ್ದಾಗ ಬೆಳೆಯಿಲ್ಲ, ಬೆಳೆಯಿದ್ದಾಗ ಮಳೆಯಿಲ್ಲ. ಬೆಳೆಯಿದ್ದಾಗ ಬೆಲೆ ಇಲ್ಲ, ಬೆಲೆಯಿದ್ದಾಗ ಬೆಳೆಯಿಲ್ಲ. ಅದೆಷ್ಟು ಶೂರರು ಬಂದರೂ, ನಮ್ಮ ನೋವಿನ ಅಳಲು ಮಾತ್ರ ತಪ್ಪಿದ್ದಲ್ಲ. ಹೊಟ್ಟೆಗೆ ಹಿಟ್ಟಿಲ್ಲದೆ, ಬೆವರ ಹನಿಯನ್ನೆ ರಕ್ತವಾಗಿಸಿಕೊಂಡು, ಈ ದೇಶಕ್ಕೆ ಅನ್ನ ಕೊಡುವ ನಮಗೆ ಈ ದೇಶದಲ್ಲಿ ಉಳಿಗಾಲವಿಲ್ಲ. ಹೆಸರು ಮಾತ್ರ ನಮ್ಮದು, ಹೊಟ್ಟೆ ಊದಿಕೊಳ್ಳುತ್ತಿರುವುದು ಪ್ರಜಾಪ್ರಭುಗಳದ್ದು.
|
ಇಲ್ಲಿಯವರೆಗೆ...
October 2023
"
|