ನನಗೆ ತುಂಬಾ ಚೆನ್ನಾಗಿ ನೆನಪಿದೆ ನಮ್ಮ ಮನೆಯಲ್ಲಿ ಅಣ್ಣ ಬಿ.ಎಡ್. ಸೀಟ್ಗೆ ಆಯ್ಕೆಯಾಗಿದ್ದ ಸಂದರ್ಭ. ಮನೆಯಲ್ಲಿ ಅವತ್ತು ಹಬ್ಬದ ವಾತಾವರಣವಿತ್ತು. ಅಪ್ಪನು ಮಗನಿಗೆ ಸಾಲಾ ಮಾಡಿಯ್ಯಾದರು ಬಿ.ಎಡ್. ಓದಿಸಲೇಬೇಕು ಎನ್ನುತ್ತಿದ್ದರು. ಅಣ್ಣನು ಕೂಡ ಏನೆ ಕಷ್ಟ ಬರಲಿ ರಜಾ ಅವಧಿಯಲ್ಲಿ ಕೂಲಿ ಕೆಲಸ ಮಾಡಿದರು ಸರಿ ಬಿ.ಎಡ್. ಓದಲೇಬೇಕು ಎನ್ನುತ್ತಿದ್ದರು. ಇಬ್ಬರೂ ಅದರಂತೆ ಮಾಡಿಯೇ ತೀರಿದರು. ಆಗ ಅಣ್ಣ ಬಿ.ಎಡ್. ಕೋರ್ಸನ್ನು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದರು. ಇತ್ತ ಮನೆಯಲ್ಲಿ ಅಪ್ಪ ಅಮ್ಮ ಅಣ್ಣನ ಓದಿನದ್ದೆ ಚಿಂತೆ ಮಾಡುತ್ತಿದ್ದರು. ಆ ಸಮಯದಲ್ಲಿ ಬಿ.ಎಡ್. ಕೋರ್ಸಿಗೆ ಇರುವ ಬೆಲೆ ಎಷ್ಟು ಎಂಬುವುದು ಆಗಲೇ ಅರ್ಥವಾಗಿದ್ದು.
ನಮ್ಮ ರಾಷ್ಟ್ರದಲ್ಲಿ ಶಿಕ್ಷಕರ ಶಿಕ್ಷಣಕ್ಕೆ ಅದರದ್ದೇ ಆದ ಮಹತ್ವವಿದೆ. ಆ ಶಿಕ್ಷಣ ಗೌರವಯುತವಾದ ಸ್ಥಾನ ಮೊದಲಿನಿಂದಲೂ ಪಡೆದಿದೆ. ಶಿಕ್ಷಕರನ್ನು ಸೃಷ್ಠಿಮಾಡುವ ಮೂಲಕ ಸಮಾಜ ನಿರ್ಮಾಣ ಕಾರ್ಯದಲ್ಲಿ ಶಿಕ್ಷಕರ ಶಿಕ್ಷಣ ಮಹತ್ವದ ಸ್ಥಾನ ಪಡೆದಿದೆ. ಇವತ್ತು ಈ ಕೋರ್ಸ್ ತನ್ನ ಅರ್ಥ ಕಳೆದುಕೊಳ್ಳುತ್ತಿದೆಯಾ ಎಂಬ ಅನುಮಾನ ಕಾಡತೊಡಗಿದೆ. ವಿದ್ಯಾವಂತರಾದವರನ್ನು ಯಾರಾನ್ನಾದು ಕೇಳಿ ನೋಡಿ ಅವರೆಲ್ಲರೂ ಬಿ.ಎಡ್. ಕೋರ್ಸ ಮುಗಿಸಿದ್ದಾರೆ.