ಯಾದಗಿರಿ ತಾಲೂಕಿನ ಚಿಕ್ಕ ಹಳ್ಳಿ ರಸ್ತೆಯ ಮೇಲೆ ಹೋಗುತ್ತಿದ್ದೆ. ದೂರದಿಂದ ಹೋಗುವ ಬೈಕ್ ತಡೆದು ಯಾರೋ ಕೂಗಿದಂತಾಯಿತು. ಬೈಕ್ ನಿಲ್ಲಿಸಿ ಹಿಂದೆ ನೋಡಿದಾಗ ಹೊಲದೊಳಗಿರುವ ನೇಗಿಲಯೋಗಿ ಕರೆಯುತ್ತಿದ್ದ. ಹಾಗೆ ಬೈಕ್ ಇಳಿದು ಹೊಲದಲ್ಲಿ ಹೋದೆ. “ಸರ್ ರೈತರ ಸಾಲಾ ಕೊಡೋರು ನೀವೆ ಏನರಿ? ನಮ್ಮೂರಿಗೆ ಹೋಗಲಕತ್ತೀರಿ ಅಂತ ಕಾಣ್ತಾದ್, ನಮ್ಮೂರಾಗ ಬೆಳೆಗ್ಗೆ ಸಾಲ ಕೊಡಾಕ್ ರೊಕ್ಕಾ ಕಟ್ಟಿಕೊಳ್ಳಾಕ್ ಬರತೀರಲ್ಲ ನೀವೆ ಅಲ್ಲರಿ?. ನೋಡ್ರಿ ನಾವು ಬೆಳಿಗಾಗಿ ಸಾಲಾ ಮಾಡಿವಿ, ಈಗ ಬೆಳಿನೇ ಹರಗತಿದ್ದೀವಿ, ಇನ್ನು ಸಾಲಾ ಹ್ಯಾಂಗ್ ತೀರಿಸಬೇಕು ಹೇಳ್ರೀ” ಆ ರೈತ ನನ್ನ ವೇಶ ಭೂಷಣ ಬಗಲಿಗೆ ಬ್ಯಾಗು ಬೈಕು ನೋಡಿ ಬ್ಯಾಂಕ್ ವ್ಯಕ್ತಿಯಂದು ತಿಳಿದಿದ್ದಾರೆ ಎಂಬುವುದು ಖಾತ್ರಿಯಾಯಿತು. ಇದೀಗ ಸಾಲಾ ಮಾಡಿದ ರೈತರ ಪಾಡು ಇಷ್ಟಾಗಿದೆ. ಎಂಬ ಖಚಿತ ಉತ್ತರ ಸಿಕ್ಕಿತು. ಪಾಪ ಆ ರೈತನಿಗೆ ಏನು ಹೇಳಲಿಯಂಬುವುದು ಅರ್ಥವಾಗಲಿಲ್ಲ. ಅವರ ದು:ಖ ಕಸಿವಿಸಿಯೆನಿಸಿ, “ಸರ್ ನಾನು ಸಾಲಿ ಕಲಿಸೋ ಮಾಸ್ತಾರ್ ಅದನಿರಿ ಎಂದು ಕಾಲಕಿತ್ತಿದೆ.
0 Comments
|
ಇಲ್ಲಿಯವರೆಗೆ...
October 2023
"
|