ಪ್ರಸ್ತತ ಭಾರತದಲ್ಲಿ ಪ್ರಶಸ್ತಿಯೊಂದು ಬಹುಚರ್ಚೆಯಾಗುವ ಸಾಧ್ಯತೆಗಳನ್ನು ಹುಟ್ಟು ಹಾಕುವಂತೆ ಭಾಸವಾಗುತ್ತಿದೆ. ಕನ್ನಡ ನಾಡು ನುಡಿಯ ಸಾಹಿತ್ಯದ ಒಟ್ಟಾರೆ ಸಾಧನೆಗಾಗಿ ಕೊಡಮಾಡುವ ಬಹುದೊಡ್ಡ ಜ್ಞಾನಪೀಠ ಪ್ರಶಸ್ತಿ ಇದೀಗ ಕನ್ನಡದ ಬಹುಚರ್ಚಿತ ಸಾಹಿತಿ, ಸಾಹಿತ್ಯ ವಲಯದಲ್ಲಿ ಹಲವು ವಾದ ವಿವಾದಗಳನ್ನು ಹುಟ್ಟಿಸಿರುವ, ಪ್ರಗತಿಪರರೆನಿಸಿಕೊಂಡವರ ಕಣ್ಣಲ್ಲಿ ಆಧುನಿಕ ಮನು ಎಂದೆ ಖ್ಯಾತಮಾನರಾದ ಎಸ್.ಎಲ್. ಬೈರಪ್ಪನವರ ಹೆಸರು ಕೇಳಿ ಬರುತ್ತಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಸಧ್ಯ ಚರ್ಚೆಗೊಳಪಡುತ್ತಿದೆ. ಇದಾಗಲೇ ಜ್ಞಾನಪೀಠವನ್ನು ನಾನ್ ಸೆನ್ಸ್ ಎಂದು ಕುಂವಿಯವರು ಚರ್ಚೆಗೊಳಪಟ್ಟಿದ್ದರಿಂದ, ಇದೀಗ ಬಿಜೆಪಿಯ ಬಲಗೈಬಂಟನೆಂದು ಕರೆಯುವಷ್ಟು ಶಕ್ತರಾಗಿರುವ ಬೈರಪ್ಪನವರಿಗೆ ಪ್ರಶಸ್ತಿ ದೊರೆತರೆ ಮತ್ತದೆ ರಾಜಕೀಯದಾಟ ಮೇಲಾಗಲಿದೆ. ಇಲ್ಲಿ ಬೈರಪ್ಪನವರು ವಯಕ್ತಿಕವಾಗಿ ಇಷ್ಟವಾಗುತ್ತಾರೆ ಆದರೆ ಅವರ ಸೈದ್ಧಾಂತಿಕ ನಿಲುವುಗಳಿಂದ ಹಲವಾರು ಜನರ ಹಲ್ಲಿನ ಮೇಲೆ ಬೈರಪ್ಪನವರು ನಿಲ್ಲುತ್ತಾರೆ. ಇನ್ನು ಆರ್ ಎಸ್ ಎಸ್ ಮತ್ತು ಬಿಜೆಪಿಯನ್ನು ಬೆಂಬಲಿಸುವ ವ್ಯಕ್ತಿಗಳು ಈ ಪ್ರಶಸ್ತಿಯನ್ನು ಬೆಂಬಲಿಸುತ್ತಾರೆ. ಈ ಹಿಂದೆ ಕಾಂಗ್ರೆಸ್ ಸರಕಾರ ಆಡಳಿತದಲ್ಲಿದ್ದಾಗ ನಡೆದ ರಾಜಕೀಯವೆ ಇದೀಗ ಬಿಜೆಪಿ ಮಾಡುವುದರಲ್ಲಿ ಯಾವ ಅನುಮಾನವು ಇಲ್ಲಾ.
0 Comments
|
ಇಲ್ಲಿಯವರೆಗೆ...
October 2023
"
|