ಈ ಕನ್ನಡ ನಾಡು ಸಾಹಿತ್ಯ ಸಂಪ್ತಭರಿತವಾಗಿದೆ. ಇಲ್ಲಿ ರಸಋಷಿಯ ಜನನವಾಗಿದೆ. ಕಾವ್ಯದ ಹೊಳೆಯೆ ಹರಿಸಿದ ಶ್ರೇಯಸ್ಸು ಕನ್ನಡ ನಾಡಿನ ಸಾಹಿತ್ಯಕ್ಕೆ ಸಲ್ಲುತ್ತದೆ. ಸಾವಿನ ದವಡೆಯಲ್ಲಿರುವರರಿಗೆ ಬದುಕು ನೀಡಿದೆ. ಜೀವನದಲ್ಲಿ ಸೋತವರಿಗೆ ಗೆಲುವು ನೀಡಿದೆ. ಜೀವ ಭಾವ ತುಂಬಿರುವ ಕನ್ನಡ ನಾಡಿನ ಸಾಹಿತ್ಯ ಕನ್ನಡ ಸಾಹಿತ್ಯವಾಗಿದೆ. ಒಂದೊಂದು ಕಾವ್ಯವು ಮನಸ್ಸಾಳಕ್ಕೆ ಇಳಿಯುವ ಶಕ್ತಿ ಹೊಂದಿದೆ. ಇಲ್ಲಿನ ಪ್ರಾಕೃತಿಕ ಸೌಂದರ್ಯದಷ್ಟೆ ನವಿರಾದ ಸೊಗಸಾದ ಕನ್ನಡ ಸಾಹಿತ್ಯವು ಹಲವು ಭಾವಗೀತೆಗಳ ಮೂಲಕ ಕನ್ನಡಿಗನ ಮನ ಮಿಡಿದಿದೆ.
0 Comments
ಪೀಠಿಕೆ:
ಪ್ರಸ್ತುತ ಸನ್ನಿವೇಶದಲ್ಲಿ ಪ್ರಜಾಪ್ರಭುತ್ವದ ಎತ್ತಿನ ಕಾಲಿಗೆ ಊನಾಗಿದೆ. ನಾಡಿನ ಹೆಸರಾಂತ ವಿಚಾರವಾದಿಗಳನ್ನು ಕೊಲ್ಲಲಾಗುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರಕ್ಕೆ ಕೊಲೆ ಮಾಡಲಾಗುತ್ತಿದೆ. ಪ್ರಜಾಪ್ರಭುತ್ವದ ಕಲ್ಪನೆ ಇದೀಗ ಕಾಣೆಯಾಗಿದೆ. ಜನಪರವಾದ ವಿಚಾರಗಳು, ಸಾಮಾನ್ಯ ಜನರಿಗೆ ಬೇಕಾಗುವ ಹೋರಾಟಗಳ ಪರವಾಗಿ ಮಾತನಾಡುವರಿಗೆ ಉಳಿಗಾಲವಿಲ್ಲದಂತಹ ಸ್ಥಿತಿಗಳು ನಿರ್ಮಾಣವಾಗುತ್ತಿವೆ. ಸಧ್ಯ ಭಾರತದಲ್ಲಿ ಬಡವರ ಪರವಾದ ಧ್ವನಿಗಳನ್ನು ಅಡಗಿಸುವಲ್ಲಿ ವ್ಯವಸ್ಥಿತವಾದ ಹುನ್ನಾರಗಳನ್ನು ರೂಪಿಸಲಾಗುತ್ತಿದ್ದು ಇದೀಗ ಒಂದಷ್ಟು ವಿಚಾರವಾದಿಗಳ ಹತ್ಯೆಗಳು ನಡೆದು ಹೋಗಿವೆ. ಯಾವ ಹತ್ಯೆಗೂ ತಾರ್ಕಿಕ ಅಂತ್ಯ ಮಾತ್ರ ದೊರೆತಿಲ್ಲವೆಂಬುವುದು ದುರಂತದ ಸಂಗತಿಯಾಗಿದೆ. |
ಇಲ್ಲಿಯವರೆಗೆ...
October 2023
"
|