ಮೊನ್ನೆ ಬಾಲ್ಯದ ಗೆಳತಿಯೊಬ್ಬಳು ಕರೆಮಾಡಿ ಮೀಟ್ ಆಗುವಂತೆ ರಿಕ್ವೆಸ್ಟ್ ಮಾಡುವ ರೀತಿ ನೋಡಿದರೆ ತುಂಬಾ ಸಿರಿಯೆಸ್ ವಿಷಯ ಇರಬೇಕು ಅನಿಸಿತು. ಮೊದಲು ಕೆಲಸಕ್ಕೊಂದು ವಿರಾಮ ಕೊಟ್ಟು ಬೇಟಿಯಾದೆ, ಅವಳನ್ನು ಕಂಡ ತಕ್ಷಣ ನನಗೆ ಒಂದುಕ್ಷಣ ಭಯ ಅನಿಸಿತು. ಎಂತಹ ಹುಡುಗಿ ಹೇಗೆ ಆಗಿದ್ದಳು ಅಂದ್ರೆ ನನಗೆ ಇಮ್ಯಾಜಿನ ಮಾಡಕ್ಕೆ ಆಗಲ್ಲಿಲ್ಲಾ, ನಮ್ಮ ಫ್ರೆಂಡ್ಸ್ ಸರ್ಕಲ್ ನಲ್ಲೆ ಅತ್ಯಂತ ಧೈರ್ಯ ಹಾಗೂ ಸುಂದರ ಹುಡುಗಿ ಆದರೆ ಸಧ್ಯ ಮಾನಸಿಕವಾಗಿ ಕುಂದಿ ಹೋಗಿದ್ದಳು. ಅವಳೀಗ ಇಬ್ಬರ ಮಧ್ಯೆ ಸಿಕ್ಕು ಒದ್ದಾಡುವ ಮನಸ್ಸು ಅವಳದ್ದಾಗಿದೆ ಎನ್ನುವುದು ಅವಳು ಹೇಳಿದ ನಂತರ ತಿಳಿದಿದ್ದು.
0 Comments
ನಮ್ಮ ಭೂಮಿ,ಭಾನು ಹಾಗೂ ಈ ಭವಿಷ್ಯ ನಮ್ಮ ಯುವಜನತೆಯ ಆಗುಹೋಗಿನ ಮೇಲೆಯೆ ನಿಂತಿದೆ. ಮಕ್ಕಳ ಹೆರುವುದಕ್ಕಿಂತ ಅವರನ್ನು ಬೆಳೆಸುವ ಕೆಲಸವಿದೆಯಲ್ಲಾ ಅದನ್ನು ತಂದೆ, ತಾಯಿ, ಸಂಬಂಧಿಕರು ತುಂಬಾ ಜಾಗೂರುಕತೆಯಿಂದ ನಡೆದುಕೊಳ್ಳಬೇಕಾಗುತ್ತದೆ. ಮಕ್ಕಳು ಹರೆಯಕ್ಕೆ ಕಾಲಿಡುತ್ತಿದ್ದಂತೆ ತಮ್ಮದೇ ಆದ ಲೋಕದಲ್ಲಿ ವಿಹರಿಸುತ್ತಾರೆ. ಸದಾ ತಮ್ಮ ಮಾತೆ ನೆರವೇರಬೇಕು, ನಾವು ನಡೆದಿದ್ದೆ ದಾರಿ ಎನ್ನುವಂತೆ ವರ್ತಿಸುತ್ತಾರೆ. ಹಿರಿಯರು ಎಷ್ಟೇ ಬುದ್ದಿ ಮಾತು ಹೇಳಿದರು ಕಿವಿಗೆ ಹಾಕಿಕೊಳ್ಳದೆ, ತಾವು ಯಾರಿಗೂ ಕೇಳುವುದಿಲ್ಲಾ ಬೇಕಾದರೆ ಎಲ್ಲರು ನಮ್ಮದೆ ಕೇಳಲಿ ಎನ್ನುವ ವಯಸ್ಸಿದು. ಇದು ಪ್ರಾಕೃತಿಕ ಲಕ್ಷಣವು ಹೌದು.
|
ಇಲ್ಲಿಯವರೆಗೆ...
October 2023
"
|