ಮಾನವ ತುಂಬಾ ಬೆಳಿದು ನಿಂತಿದ್ದಾನೆ. ಅವನು ಇಂದು ಈಡಿ ಪ್ರಪಂಚ ಅಷ್ಟೆ ಅಲ್ಲಾ ಬೇರೆ ಗೃಹಗಳನ್ನು ಕೂಡಾ ಸುತ್ತಿ ಬಂದಿದ್ದಾನೆ. ಇಂದು ನಮ್ಮ ದೇಶವನ್ನು ಬೇರೆ ಜನರು ಕಣ್ಣರಳಿಸಿ ನೋಡುವ ಸ್ಥಿತಿ ನಿರ್ಮಾಣವಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲಿ ಇಂದು ಮಾನವ ಉತ್ತುಂಗದ ಸ್ಥಿತಿಯನ್ನು ತಲುಪಿದ್ದಾನೆ. ಆದರೆ ಕೆಲವು ಚಿಕ್ಕ ಮತ್ತು ಮುಖ್ಯವಾದ ಸಂಗತಿಗಳನ್ನು ಮರೆತು ಈ ಪರಿಸರವನ್ನು ಹಾಳು ಮಾಡುತ್ತಿದ್ದಾನೆ. ಅವನ ಅತಿಯಾದ ಆಸೆ , ಪ್ರಾಕೃತಿಕ ವಸ್ತುಗಳ ದುರ್ಬಳಕೆ ಹೀಗೆ ಅನೇಕ ರೀತಿಯಲ್ಲಿ ನಮ್ಮ ಪರಿಸರವನ್ನು ಹಾಳು ಮಾಡಿ ತನ್ನ ಮುಂದಿನ ಪೀಳಿಗೆಗೆ ತಾನೆ ಗೋರಿ ತೋಡುವ ಕೆಲಸಲದಲ್ಲಿ ನಿರತನಾಗಿದ್ದಾನೆ.
0 Comments
ಈ ನಮ್ಮ ಪ್ರಸ್ಥುತ ರಾಜಕೀಯ ವ್ಯವಸ್ಥೆ ಹದಗೆಟ್ಟು ನಿಂತಿದೆ . ಎಲ್ಲವು ಅವರವರ ಹೊಟ್ಟೆ ತುಂಬಿಸಿಕೊಳ್ಳಲು ನೋಡುವರೆ ಹೊರತು ಈ ದೇಶದ ಸೇವೆ ಮಾಡಬೇಕು ಎನ್ನುವ ಲೆಕ್ಕಾಚಾರ ಯಾರಲ್ಲಿಯೂ ಇಲ್ಲ. ನಾನು ಒಮ್ಮೆ ಆರಿಸಿ ಬಂದರೆ ಸಾಕು ಮುಂದಿನದ್ದು ನೋಡಿದರಾಯಿತು ಎನ್ನುವ ಲೆಕ್ಕಾಚಾರದಲ್ಲಿ ಇರುವರು ನಮ್ಮ ರಾಜಕಾರಣಿಗಳು. ಜನರು ಈ ರಾಜಕೀಯ ಗಿಮಿಕ್ ನಿಂದ ಸೋತು ಹೋಗಿದ್ದಾರೆ. ಇನ್ನು ಈ ರಾಜಕೀಯದಲ್ಲಿ ಅನುವಂಶಿಯತೆ ಮೂಲ ಕಾರಣವಾಗಿ ಪರಿಣಮಿಸಿದೆ. ಅಪ್ಪನ ಹೆಸರಲ್ಲಿ ಕೆಸರನ್ನು ತಂದು ಇದು ತುಂಬಾ ಹೆಸರುವಾಸಿಯಾದ ಬಂಗಾರವಿದೆ ಅಪ್ಪ ಹೇಳಿದ್ದಾನೆ ತೊಗೊಳ್ಳಿ ಎಂದು ಮಾರುವ ಎಷ್ಟೊ ಜನರು ಈ ರಾಜಕೀಯದಲ್ಲಿ ಮನೆ ಮಾತಾಗಿದ್ದಾರೆ. ಬರಿ ಎಲ್ಲಿ ನೋಡಿದರು ಸ್ವಾರ್ಥ ಮಾತ್ರ ಎದ್ದು ಕಾಣುತ್ತಿದೆ. ರಾಜಕೀಯ ರಂಗು ಕೆಟ್ಟು ಹೋಗುತ್ತಿದೆ. ಇಲ್ಲಿಯವರೆಗೆ ತಾವು ಮಾಡಿದ ಘನಕಾರ್ಯವಾದರು ಏನು? ಎನ್ನುವುದು ಮರೆತು ನಡೆದಿದ್ದಾರೆ. ಹಾಗಾದರೆ ಕೇಂದ್ರದಲ್ಲಿರುವ ತಾಯಿ ಮಗ ಮಾಡಿದ ಸಾಧನೆಯೇನು ಎಂದು ಕೆದುಕಿದರೆ ಈ ವಿಶೇಷ ಹಗರಣಗಳು ಎದ್ದು ಬರುತ್ತವೆ. ಈ ಕೇಂದ್ರದ ತಾಯಿ ಮಗನ ಸ್ವಾರ್ಥ,ಭಾರತಕ್ಕೆ ಅನರ್ಥ. ತಂದೊಡ್ಡಿದೆ. |
ಇಲ್ಲಿಯವರೆಗೆ...
October 2023
"
|