ನಮ್ಮ ದೇಶ ಸುಮಾರು ವರ್ಷಗಳಿಂದ ರಾಜಕೀಯ ಲಾಭಕ್ಕಾಗಿ ದೇಶದ ಸಂಪತ್ತನ್ನು ಲೂಟಿ ಮಾಡಿ ಬಡ ರಾಷ್ಟ್ರವಾಗಿಸಿದ್ದಾರೆ. ಇದೀಗ ನಾನು ಈ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದೇನೆ. ದೇಶದ ಜನರೆಲ್ಲರೂ ನನ್ನ ಮೇಲೆ ಅಪಾರವಾದ ನಂಬಿಕೆಯಿಟ್ಟು ಪ್ರಧಾನಿ ಮಾಡಿದ್ದಾರೆ. ನಾನು ನನ್ನ ಶ್ರಮವೆಲ್ಲ ವ್ಯಯಮಾಡಿ ಇವತ್ತಿಗೆ ನಾನು ನನ್ನ ಆಡಳಿತ ನೀಡಿ ಮೂರು ವರ್ಷ ಮುಗಿಸಿದ ಸಂದರ್ಭದಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದೇನೆ. ಆ ಸಂಧರ್ಭದಲ್ಲಿ ಪತ್ರಕರ್ತರ ಎದುರು ನಾನು ದೇಶಕ್ಕಾಗಿ ಮಾಡಿರುವ ಸಾಧನೆಗಳನ್ನು ಮತ್ತು ದೇಶದ ಅಭಿವೃದ್ಧಿಯನ್ನು ಹೇಳುತ್ತಿದ್ದೇನೆ.
ನಮ್ಮ ದೇಶ ಸುಮಾರು ವರ್ಷಗಳಿಂದ ರಾಜಕೀಯ ಲಾಭಕ್ಕಾಗಿ ದೇಶದ ಸಂಪತ್ತನ್ನು ಲೂಟಿ ಮಾಡಿ ಬಡ ರಾಷ್ಟ್ರವಾಗಿಸಿದ್ದಾರೆ. ಇದೀಗ ನಾನು ಈ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದೇನೆ. ದೇಶದ ಜನರೆಲ್ಲರೂ ನನ್ನ ಮೇಲೆ ಅಪಾರವಾದ ನಂಬಿಕೆಯಿಟ್ಟು ಪ್ರಧಾನಿ ಮಾಡಿದ್ದಾರೆ. ನಾನು ನನ್ನ ಶ್ರಮವೆಲ್ಲ ವ್ಯಯಮಾಡಿ ಇವತ್ತಿಗೆ ನಾನು ನನ್ನ ಆಡಳಿತ ನೀಡಿ ಮೂರು ವರ್ಷ ಮುಗಿಸಿದ ಸಂದರ್ಭದಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದೇನೆ. ಆ ಸಂಧರ್ಭದಲ್ಲಿ ಪತ್ರಕರ್ತರ ಎದುರು ನಾನು ದೇಶಕ್ಕಾಗಿ ಮಾಡಿರುವ ಸಾಧನೆಗಳನ್ನು ಮತ್ತು ದೇಶದ ಅಭಿವೃದ್ಧಿಯನ್ನು ಹೇಳುತ್ತಿದ್ದೇನೆ.
0 Comments
ನನ್ನ ಕನಸಿನ ಭಾರತ ಹೇಗಿರಬೇಕು? ಎಂಬ ಪ್ರಶ್ನೆ ಒಬ್ಬ ಭಾರತೀಯನಾಗಿ ಯೋಚಿಸಿದಾಗ ಹೊಳೆದ ನನ್ನೊಳಗಿನ ಅನಿಸಿಕೆಗಳಿವು. ಈ ದೇಶದ ನಿರುದ್ಯೋಗ ಅತೀದೊಡ್ಡ ಸಮಸ್ಯೆ ಇದು ಹೋಗಲಾಡಿಸಬೇಕು. ಕಲಿತ ವಿದ್ಯೆಗೆ ಅರ್ಹತೆಗೆ ತಕ್ಕಂತೆ ಉದ್ಯೋಗ ದೊರೆತು, ದೇಶದ ಸೇವೆಯಲ್ಲಿ ಎಲ್ಲರೂ ಪಾಲ್ಗೊಳ್ಳುವಂತಾಗಲಿ. ಸರಕಾರದ ಯೋಜನೆಗಳು ರಚನೆ ಮಾಡುವಾಗ ಹಳ್ಳಿಮಟ್ಟದಲ್ಲಿ ನೈಜ ಜನತೆಯ ಜೊತೆಗೂಡಿ ಅವರಿಗೆ ಬೇಕಾಗುವ ರೀತಿಯಲ್ಲಿ ಯೋಜನೆಗಳು ರೂಪಿಸಬೇಕು. ಸರಕಾರ ರಚಿಸಿದ ಪ್ರತಿಯೊಂದು ಯೋಜನೆಗಳು ಸೂಕ್ತ ಫಲಾನುಭವಿಗಳಿಗೆ ದೊರಕಬೇಕು. ಹಳ್ಳಿ ಉದ್ಧಾರದ ಕನಸು ನೆನಸಾಗಬೇಕು. ನಮ್ಮ ದೇಶದಲ್ಲಿರುವ ಹಲವು ಕಾನುನೂಗಳು ಕೆಲಸ ಮಾಡುವಂತಾಗಬೇಕು.
ಜೈ ಭಾರತದ ಜನನಿಯ ತನುಜಾತೆಯನ್ನು ಒಪ್ಪಿ ಅಪ್ಪಿ ತಮ್ಮ ಘನ ಸರಕಾರ ಆಡಳಿತ ನೀಡಿದ್ದು ಇದೀಗ ಕಾಂಗ್ರೆಸ್ ಸರಕಾರ ತನ್ನ ಎರಡು ವರ್ಷಗಳನ್ನು ಮುಗಿಸಿದ್ದು ಅದರಲ್ಲಿ ಒಂದಿಷ್ಟು ಕಷ್ಟ ಸುಖ ಕಂಡಿದ್ದಾರೆ ಮಾನ್ಯ ಸಿದ್ದರಾಮಯ್ಯ. ಮೂಲ ಕಾಂಗ್ರೆಸ್ ಅಲ್ಲದಿದ್ದರೂ ತಮ್ಮ ಪಾದಯಾತ್ರೆಯೆಂಬ ಮಾಹಾ ಅಸ್ತ್ರದ ಮೂಲಕ ಪಾದಾರ್ಪಣೆ ಮಾಡಿದ ಇವರು ಸಿಯಂ ಆಗಿದ್ದು ಹಿಂದುಳಿದ ಜಾತಿಗೆ ಸಿಕ್ಕ ಅವಕಾಶ ಎನ್ನುವುದರಲ್ಲಿ ಸಂಶಯವಿಲ್ಲ ಜೊತೆಗೆ ಅವರಿಗಿರುವ ಈ ರಾಜಕೀಯ ಆಸಕ್ತಿ ಜನಪರ ಕಾಳಜಿಯು ಇವತ್ತು ಎರಡು ವರ್ಷ ಯಶಸ್ವೀಯಾಗಿ ಮುಗಿಸಿದ್ದಾರೆ. ಇದರಲ್ಲಿಯೇ ಬೀಗುವಂತಿಲ್ಲ ಇದರೊಳಗೆ ಹಲವಾರು ಸವಾಲುಗಳನ್ನು ಎದುರಿಸಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದು ಇದೀಗ ಎರಡು ವರ್ಷ. ಹಲವು ಎಡರು-ತೊಡರುಗಳ ನಡುವೆಯೂ ಸಿದ್ದರಾಮಯ್ಯ ಮುಖ್ಯಮಂತ್ರಿ ಗಾದಿಯಲ್ಲಿ ಎರಡು ವರ್ಷ ಪೂರೈಸಿದ್ದು ಮುಳ್ಳಿನ ಮೇಲಿನ ಸೀರೆಯನ್ನು ನಿಧಾನಕ್ಕೆ ಹೊರತೆಗೆದ ಹಾಗೆ ಇದೆ ಎಂಬುವುದು ಅಷ್ಟೆ ಸತ್ಯವಾದದ್ದು .
ಹಲವು ವಿಷಯಗಳಲ್ಲಿ ನಮ್ಮ ಭಾರತ, ಇಡಿ ಪ್ರಪಂಚವೇ ನಿಬ್ಬೆರಗಾಗುವ ಜಗತ್ತೇ ಹುಬ್ಬೇರಿಸುವಂತಹ ಕೆಲಸಗಳನ್ನು ಮಾಡಿದೆ. ಪ್ರತಿಯೊಂದು ರಂಗದಲ್ಲಿಯೂ ಸಾಧನೆಯ ಗರಿ ಉತ್ತುಂಗಕ್ಕೇರಿಸಿದ ಶ್ರೇಯಸ್ಸು ನಮ್ಮ ಭಾರತಕ್ಕೆ ಸಲ್ಲುತ್ತದೆ. ದೇಶ ಸಬಲೀಕರಣ ಎನ್ನುವ ವಿಷಯದಲ್ಲಿ ಸುಮಾರು ಸಾಧನೇಯ ಹಾದಿ ಕ್ರಮಿಸಿ ಇಡಿ ಜಗತ್ತಿನ ಹಲವು ಸಂಪನ್ಮೂಲಗಳನ್ನು ತನ್ನಲ್ಲಿರಿಸಿಕೊಂಡಿದೆ.ಸುಮಾರು ನೂರು ದಶಕಗಳ ಇತಿಹಾಸ ಹೊಂದಿರುವ ಭಾರತ, ಹಲವು ಮಹತ್ವದ ಹೆಜ್ಜೆಗಳನ್ನು ಇಟ್ಟಿದೆ. ರಾಜಕೀಯ, ತಂತ್ರಜ್ಞಾನ, ಸಂಶೋಧನೆ, ಕೃಷಿ, ವಿಜ್ಞಾನ ಹೀಗೆ ಭಾರತೀಯರು ಪ್ರತಿಯೊಂದು ರಂಗದಲ್ಲಿ ಮುಂದುವರೆದಿದ್ದಾರೆ. ಭಾರತ ಅನೇಕ ದಶಕಗಳ ನಂತರ ಮುಂದುವರೆದ ರಾಷ್ಟ್ರಗಳಲ್ಲಿ ಗುರುತಿಸಿಕೊಂಡಿದ್ದು ಅತೀವೇಗದಲ್ಲಿ ಬೆಳವಣಿಗೆಯ ಶಿಖರ ಮುಟ್ಟಿದೆ.
ಕರ್ನಾಟಕದ ರಾಜಕೀಯದಲ್ಲಿ, ದಲಿತರನ್ನು ಮುಖ್ಯಮಂತ್ರಿ ಮಾಡಿ ಎಂಬ ಹೋರಾಟ, ಚೀರಾಟ ಪ್ರಾರಂಭವಾಗಿದೆ ಎಂಬ ಸುದ್ದಿ ಹರಡುತ್ತಲೇ ಅಷ್ಟೆ ವೇಗವಾಗಿ ತಣ್ಣಗಾಯಿತು. ಇದೇ ಹೋರಾಟ ರಾಜ್ಯದಲ್ಲಿ ಅನೇಕ ಸರಕಾರಗಳು ಅಸ್ತಿತ್ವಕ್ಕೆ ಬಂದಾಗ ಮಾಡಿದ್ದರು ಮಾಡಿ ಸೋತಿದ್ದರು ಎಂಬುವುದು ಮರೆಯುವಂತಿಲ್ಲ. ರಾಜ್ಯ ಸರಕಾರ ರಚನೆಯಾಗುವಾಗ ಮಾತ್ರ ದಲಿತರಪರ ಯಾವೊಬ್ಬ ಸದಸ್ಯರು ಸಂಸದ ಮಲ್ಲಿಕಾರ್ಜು ಖರ್ಗೆಪರ ನಿಲ್ಲಲಿಲ್ಲ ಜೊತೆಗಿದ್ದ ಅದೆಷ್ಟೊ ಎಂಎಲ್ಏಗಳೆ ಕೈ ಕೊಟ್ಟ ಉದಾಹರಣೆ ಇದೀಗ ಇತಿಹಾಸ. ಆಗ ಮಾಡದ ಚರ್ಚೆ ಇದೀಗ ಮಾಡಿದರೆ ಆ ಚರ್ಚೆ ತನ್ನ ಅರ್ಥ ಕಳೆದುಕೊಳ್ಳುತ್ತದೆ ಎಂಬ ಸಾಮಾನ್ಯ ಅರಿವು ಈ ಹೋರಾಟಗಾರರಿಗೆ ಅರ್ಥವಾಗುವುದಿಲ್ಲ. ಈ ಚರ್ಚೆಯು ಬಹಳ ಮುಖ್ಯವಾಗಿ ಎರಡರಿಂದ ಮೂರು ದೃಷ್ಠಿಕೋನಗಳಲ್ಲಿ ಅರ್ಥಮಾಡಿಕೊಳ್ಳಬಹುದು.
|
ಇಲ್ಲಿಯವರೆಗೆ...
October 2023
"
|