ಪ್ರತಿವರ್ಷವೂ ಶೈಕ್ಷಣಿಕ ವರ್ಷದ ಅಂತ್ಯದ ವೇಳೆಗೆ ಪರೀಕ್ಷೆಯಂಬ ಮಾಯಾಜಾಲದ ಮೂಲಕ ಮಕ್ಕಳ ಶಿಕ್ಷಣದ ಗುಣಮಟ್ಟ ಅಳೆದು, ದೇಶದ ಸಾರ್ವಜನಿಕರ ಮುಂದೆಯಿಡುತ್ತಾರೆ. ಪ್ರಾಥಮಿಕ ಶಿಕ್ಷಣದಲ್ಲಿ ಫೇಲ್ ಮಾಡಬಾರದು ಎಂಬ ಕಟ್ಟಪ್ಪಣೆ ಹೊರಡಿಸಿದ ಬಳಿಕ ಆದ ಬದಲಾವಣೆಯನ್ನು ಗಮನಿಸಿದರೆ ಶಿಕ್ಷಣ ಎತ್ತ ಸಾಗುತ್ತಿದೆ ಎಂಬ ಸತ್ಯ ಅರ್ಥವಾಗುತ್ತದೆ. ಇನ್ನು ಈ ಶಿಕ್ಷಣದಲ್ಲಿ ಅನ್ನ, ಹಾಲು ಸೇರ್ಪಡೆಯಾದ ಬಳಿಕ ಶೈಕ್ಷಣಿಕ ಗುಣಮಟ್ಟ ಹೇಳಿಕೊಳ್ಳುವಷ್ಟು ಮಟ್ಟಿಗೆ ಗುರಿ ಸಾಧಿಸುತ್ತಿಲ್ಲವೆನಿಸುತ್ತದೆ. ಸಾಧಿಸಿದರು ದಾಖಲೆಗಳಲ್ಲಿ ಮಾತ್ರವಾಗುತ್ತಿದೆ. ಪ್ರಾಥಮಿಕ ಹಂತದಲ್ಲಿ ಸತತ ಏಳು ವರ್ಷ ಉತ್ತೀರ್ಣವಾದ ಮಗು ಹತ್ತನೆಯ ತರಗತಿ & ಪಿ.ಯು.ಸಿ. ಮಟ್ಟದಲ್ಲಿ ವ್ಯಾಸಂಗ ಮಾಡುವಾಗ ಮಾತ್ರ ಅನುತ್ತೀರ್ಣವಾಗುವ ಸಂಗತಿ ಸಾಮಾನ್ಯವಾಗಿ ಗಮನಿಸಿದ್ದೀರಿ. ಪ್ರಾಥಮಿಕ ಶಿಕ್ಷಣದ ಬಳಿಕ ಶಾಲೆ ಬಿಡುವ ಮಕ್ಕಳ ಸಂಖ್ಯೆಯ ಪ್ರಮಾಣ ಏರಿಕೆಯಾಗುತ್ತದೆ.
0 Comments
ನನ್ನ ಜೀವನದಲ್ಲಿ ನಾನು ಮರೆಯಲಾರದ ಶಿಕ್ಷಕಿಯಂದರೆ ನನ್ನ ಅಂಗನವಾಡಿ ಶಿಕ್ಷಕಿ. ನಾನೇನು ಪೂರ್ವಪ್ರಾಥಮಿಕ ಶಿಕ್ಷಣ ಕಲಿಯುವ ವಯಸ್ಸಿಲ್ಲಿ ಅಂಗನವಾಡಿಗೆ ಹೋಗಿ ಕಲಿಯಲಿಲ್ಲ ಬದಲಿಗೆ ಒಂದನೆಯ ತರಗತಿಯಲ್ಲಿರುವಾಗ ಅಂಗನವಾಡಿ ಶಿಕ್ಷಣ ಕಲಿತಿರುವೆ. ಇದೇನು ವಿಚಿತ್ರ ಎಂದಿಕೊಂಡಿರಾ ಇದಕ್ಕೆ ಮೂಲಕಾರಣ, ನಮ್ಮ ಗ್ರಾಮಕ್ಕೆ ಆ ಸಮಯದಲ್ಲಿ ಹೊಸದಾಗಿ ಒಂದು ವರ್ಷದ ಸಲುವಾಗಿ, ಬಂದ ಅಂಗನವಾಡಿ ಶಿಕ್ಷಕಿ. ಅವರ ಹಾಡು, ಕಥೆ, ಅಭಿನಯ, ಮಕ್ಕಳನ್ನು ಸೆಳೆಯುವ ಶೈಲಿ, ಹಾಕುವ ಉಪ್ಪಿಟ್ಟಿನ ಊಟ, ನಮಗೆಲ್ಲ ಬಹಳ ಆಕರ್ಷಣೆಯಾಗುತಿತ್ತು. ನಮ್ಮ ಶಾಲೆಯನ್ನು ಬಿಟ್ಟು ಅಂಗನವಾಡಿಗೆ ನಾವೆಲ್ಲ ಗೆಳೆಯರು ಸೇರಿ ಪ್ರತಿದಿನ ತಪ್ಪದೇ ಹೋಗುತ್ತಿದ್ದೇವು. ಒಂದು ವಿಪರ್ಯಾಸವೆಂದರೆ, ನನಗೆ ಅವರ ಹೆಸರೆ ನೆನಪಿಲ್ಲ ಆದರೆ ಅವರು ಹೇಳಿಕೊಟ್ಟ ಪಾಠವೆಲ್ಲ ಅಚ್ಚಳಿಯದೆ ಇವತ್ತಿಗೂ ಉಳಿದಿದೆ ಜೊತೆಗೆ ನನಗೆ ವೃತ್ತಿ ಬದುಕಿನಲ್ಲಿ ಬಳಕೆಯಾಗುತ್ತಿದೆ. |
ಇಲ್ಲಿಯವರೆಗೆ...
October 2023
"
|