ಪ್ರಸ್ತುತ ಭಾರತದಲ್ಲಿ ಮಾನವೀಯ ನೆಲೆಗಳ ವಿರುದ್ಧ ವಿದ್ಯಮಾನಗಳು ಜರುಗುತ್ತಿವೆ. ದೇಶದಲ್ಲಿ ಅಸಹಿಷ್ಣುತೆಯು ಮನೆಮಾಡಿದ್ದು, ಮಾನವೀಯತೆಯನ್ನು ಕೊಲ್ಲುತ್ತಿವೆ. ಅಭಿವ್ಯಕ್ತಿ ಸ್ವಾತಂತ್ರದ ಹರಣವಾಗುತ್ತಿದೆ. ಬರೆಯುವ ಕೈಗಳಿಗೆ, ಮಾತನಾಡುವ ತುಟಿಗಳಿಗೆ ಹಾಗೂ ಸಾಮಾಜಿಕ ಚಿಂತನೆಗಳಿಗೆ ಇಲ್ಲಿ ಬೆಲೆಯಿಲ್ಲದಾಗಿದೆ. ದೇಶಕ್ಕೆ ಸ್ವಾತಂತ್ರ ಬಂದು ದಶಕಗಳೆ ಕಳೆದರು, ಸಂವಿಧಾನ 100% ಅನುಷ್ಠಾನ ಸಾಧ್ಯವಾಗಿಲ್ಲ. ಭಾರತದ ಸಂವಿಧಾನ ಮುಂದಿನ ಸಾವಿರ ವರ್ಷಗಳ ಭವಿಷ್ಯ ದೃಷ್ಠಿಯಲ್ಲಿಟ್ಟುಕೊಂಡು ರಚನೆ ಮಾಡಿದ್ದು, ಅದರ ವಿರುದ್ಧ ನಡೆಯುವ ಅನೇಕ ವಿದ್ಯಮಾನಗಳು ದೇಶದ ಜನರಲ್ಲಿ ಪ್ರಜಾಪ್ರಭುತ್ವವನ್ನು ಪ್ರಶ್ನೆ ಮಾಡುವ ವಿದ್ಯಮಾನಗಳು ಪ್ರಜೆಗಳಲ್ಲಿ ಆತಂಕ ಹುಟ್ಟಿಸಿವೆ.
ಭಾರತದ ಇತಿಹಾಸ ಅದೊಂದು ಸಮಾನತೆ, ಸಹಕಾರ ಪ್ರಜಾಪ್ರಭುತ್ವವನ್ನು ಬಿಂಬಿಸುವದ್ದಾಗಿತ್ತು. ಭಾರತದ ಸಂಸ್ಕøತಿಯನ್ನು ಕಾಯುವುದು ಸಂವಿಧಾನದ ಮುಖ್ಯ ಆಶೆಯವಾಗಿತ್ತು. ದೇಶದಲ್ಲಿ ಸರ್ವರೂ ಸಮಾನರು ಎಂಬ ಸ್ಪಷ್ಟವಾದ ಆಶೆಯವನ್ನು ಬಿತ್ತರಿಸಿದ್ದು ಇದೀಗ ಇತಿಹಾಸವಾಗಿದೆ. ಪ್ರಸ್ತುತ ಭಾರತದಲ್ಲಿ ಇತಿಹಾಸವನ್ನು ಹಲವು ಕಾರಣಗಳಿಂದ ತಿರುಚಲಾಗುತ್ತಿದೆ ಅದರ ಚಿಕ್ಕ ಸಾರಾಂಶ ಕೊಡುವ ಆಶೆಯ ನನ್ನದು.