ಇದೀಗ ನಿಮ್ಮ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಸಂಪೂರ್ಣವಾಗಿ ಅವಕಾಶ ಮಾಡಿಕೊಡಬೇಕು ಎನ್ನುವುದು ನನ್ನ ಕಲ್ಪನೆ. ನಿಮ್ಮ ಓದು ಹೇಗೆ ಸಂತೋಷವನ್ನು ತಂದುಕೊಡಬಲ್ಲದು ನಿಮ್ಮ ಶೈಕ್ಷಣಿಕ ಜೀವನದ ಪರೀಕ್ಷೆಯು ಸರಳ ಹಾಗೂ ಸುಗಮ ರೀತಿಯಲ್ಲಿ ಸಾಗಲು ಈ ಪುಸ್ತಕ ಸಹಕಾರಿಯಾಗುತ್ತದೆ. ಓದುವ ಮನಸ್ಥಿತಿ, ಓದುವ ವಾತಾವರಣ, ಸರಿಯಾದ ಸಮಯದ ನಿರ್ವಹಣೆ, ಆತ್ಮಧೈರ್ಯ ಬೆಳೆಯಲು ಈ ಹೊತ್ತಿಗೆ ನಿಮಗೆ ನೆರವಾಗುತ್ತದೆ. ನೀವು ಎದುರಿಸುವ ಪ್ರತಿ ಪರೀಕ್ಷೆಯಲ್ಲಿಯೂ ಯಶಸ್ಸು ಕಂಡು, ಉತ್ತಮ ಅಂಕಗಳನ್ನು ಪಡೆಯಲು ಸಹಕಾರಿಯಾಗುತ್ತದೆ. ಕಠಿಣ ಪರಿಶ್ರಮ, ಸತತ ಅಧ್ಯಯನ, ಸೂಕ್ತವಾದ ಪುಸ್ತಕಗಳ ಸಂಗ್ರಹ ಎಲ್ಲವು ಈ ಹೊತ್ತಿಗೆ ತಿಳಿಸಿಕೊಡಲಿದೆ.
0 Comments
ಕಾಲ ಕಳೆದಂತೆ ಭರತ ಭೂಮಿಯಲ್ಲಿ ಸಮಾಜದೊಳಗಿನ ಅನೇಕ ವಿಷಯಗಳು ಆವಿಯಾಗಿ ಇದೀಗ ಅನೇಕ ವಿವಾಧಗಳ ಸುರಿಮಳೆಯನ್ನು ಸುರಿಯುತ್ತಿವೆ. ಪ್ರತಿ ಹನಿಯಲ್ಲಿಯೂ ಜಾಗೃತಿಯ ಕುರುಹನ್ನು ಮೂಡಿಸುತ್ತಿವೆ. ಹನಿಯೊಳಗೆ ಅದೆಷ್ಟೊ ಯುವ ಮನಸ್ಸುಗಳ ಜೊತೆಗೆ ಚೆಲ್ಲಾಟವಾಡುತ್ತಿವೆ. ದೇಶದ ಮನುಷ್ಯರಲ್ಲಿ ಐಕ್ಯತೆಯಿಲ್ಲ ಎನ್ನುವ ಮಕರಂಧವನ್ನು ಹೊರ ಸೂಸುತ್ತಿವೆ. ವಿವಾಧಗಳನ್ನು ಎಬ್ಬಿಸಿರುವ ಅನೇಕ ದುಂಬಿಗಳನ್ನು ಸಮಾಜದ ಸ್ವಾತ್ಯ ಹಾಳು ಮಾಡುತ್ತಿವೆ.
ಅತಿಯಾದರೆ ಅಮೃತವು ವಿಷ ಅತಿಯಾಗಿ ಮಳೆಯಾದರು ಹಾಗೂ ಮಳೆಯಾಗದಿದ್ದರು ಅನಾರೋಗ್ಯವಾಗುವುದರಲ್ಲಿ ಸಂಶಯವಿಲ್ಲ. ಮಳೆಗಾಲ ಈಗಾಗಲೇ ತನ್ನ ಕಾರ್ಯಾರಂಭಿಸಿದೆ. ಅನೇಕ ಕಡೆ ಮಳೆ ಅತಿಯಾದರೆ ಮತ್ತೊಂದಡೆಗೆ ಮಳೆಯಿಲ್ಲದೆ ಬಿತ್ತನೆ ಕಾರ್ಯ ಸ್ಥಗಿತಗೊಂಡಿದೆ. ಇನ್ನೂ ಅತಿಯಾದ ಮಳೆ ಬಿದ್ದ ಪ್ರದೇಶದಲ್ಲಿ ಮಳೆಗಾಲ ಎಂದರೇನು? ಎನ್ನುವ ಪರಿಸ್ಥಿತಿ ಅಲ್ಲಿಯ ಜನರಿಗೆ ಸ್ಪಷ್ಟವಾಗಿ ಅರ್ಥವಾಗಿದೆ. ಹಾಗಾದರೆ ಈ ಮಳೆಗಾಲದಲ್ಲಿ ನಾವೆಲ್ಲ ಸ್ವಲ್ಪ ಎಚ್ಚೆತ್ತುಕೊಂಡು ಅದಕ್ಕೆ ತಕ್ಕಂತೆ ಆಹಾರ ಕ್ರಮ ಹಾಗೂ ಜೀವನ ಕ್ರಮ ರೂಢಿಸಿಕೊಳ್ಳಬೇಕಾದ ಅಗತ್ಯ ಹಾಗೂ ಅನಿವಾರ್ಯವಿದೆ. ನಮ್ಮ ಆರೋಗ್ಯ ನಮ್ಮ ಆಹಾರ ಕ್ರಮದ ಮೇಲೆ ತುಂಬಾ ಪರಿಣಾಮ ಬೀರುತ್ತದೆ . ಮಳೆಗಾಲದಲ್ಲಿ ನಾವು ಕೆಲವು ಆಹಾರ ಕ್ರಮಗಳನ್ನು ಅನುಸರಿಸಿದರೆ ನಮ್ಮ ಆರೋಗ್ಯ ಉತ್ತಮಗೊಂಡು ರೋಗದಿಂದ ದೂರವಿರಬಹುದು . ಜಾತಿಯಿಲ್ಲ ಶರಣಂಗೆ, ಭಕ್ತಯೊಂದೆ ಸಾಕು ದೇವರ ಶಕ್ತಿಗೆ. ಅನಾದಿಕಾಲದಿಂದಲೂ ಶರಣರ ಕಾಲವನ್ನು ಒಂದು ಐತಿಹಾಸಿಕ ಉನ್ನತ ಶರಣರ ಪಥ ಸಾರಿದ ಕಾಲವೆಂದು ಹೇಳಲಾಗಿದೆ. ಶರಣರ ಕಾಲದಿಂದಲೂ ಈ ಜಾತಿಬೇಧ ಕಿತ್ತೊಗಿಯಬೇಕು ಎಂಬ ಕೂಗು ಕೇಳಿ ಬರುತ್ತಲೇಯಿದೆ. ಸಮಾಜಿಕ ವಿಡಂಬನೆಯನ್ನು ಅನೇಕ ವಚನಗಳ ಮೂಲಕ ಬಿಚ್ಚಟ್ಟ ಮಾಹಾನ್ ಶರಣರು ಸಮಾಜದಲ್ಲಿಯ ಹಲವು ಪಿಡುಗುಗಳನ್ನು ಹೋಗಲಾಡಿಸಲು ಶ್ರಮಿಸಿದ್ದಾರೆ. ನನ್ನವಳ ವದನವು ಆ ದೀಪದ ಬೆಳಕಿನಂತೆ. ಅವಳ ಆ ನೋಟವು ಹರಡಿ ನಿಂತಿದೆ ದೀಪದ ಜ್ಯೋತಿಯಂತೆ. ಅಣತಿಯಂತೆ ಅವಿರತ ಅವಳ ಪ್ರೇಮವು. ಮರೆಮಾಚುವಂತಿಲ್ಲ ಮಮಕಾರ ತುಂಬಿದ ಅವಳ ಮಗುವಿನಂತಹ ಒಲವನ್ನು. ತಿಳಿ ಎಣ್ಣೆಯೆಂತಹ ಅವಳ ಹೃದಯ. ದೀಪದ ಪಣತಿಯೆಂತಹ ಕಣ್ಣುಗಳು. ಎದೆಯೆಂಬ ಬಾನಿನಲ್ಲಿ ಅವಳು ಗೀಚಿದ ಗೆರೆಗಳೆಷ್ಟೊ ನನ್ನ ಬದುಕನ್ನು ಸಮೃದ್ಧವಾಗಿಸಿವೆ. ಸುಕ್ಕುಗಟ್ಟಿದ್ದ ಬದುಕಿನ ಹಲವು ಮಜಲುಗಳನ್ನು ಒಂದೊಂದಾಗಿ ಬಿಡಿಸಿದ ದೇವತೆ ಅವಳು. ಮಸಣದೊಳಗೆ ಮುಳುಗುತ್ತಿದ್ದ ನನ್ನ ಬದುಕೆಂಬ ಪುಸ್ತಕ ಎತ್ತಿ ಹಿಡಿದಳು ಅವಳ ಅಕ್ಷರಗಳನ್ನ ನೀಡಿ. ಮರಳಿ ಬರೆದ ಅವಳ ಅಕ್ಷರಗಳು ನನ್ನ ಬದುಕನ್ನ ಎಚ್ಚರಗೊಳಿಸಿತು. ಬದುಕು ಹಕ್ಕಿಗಳಂತೆ ಸ್ವಚ್ಛಂದವಾಗಿ ಹಾರಾಡಿತು. ಅವಳ ಆಗಮನದಿಂದಲೇ ಬರುಡಾದ ನನ್ನ ಬದುಕು ಇಂದು ಹಚ್ಚ ಹಸಿರಾಗಿ ನನ್ನ ಉಸಿರುಳಿಸಿತು. ಕೆ.ಎಂ.ವಿಶ್ವನಾಥ ಮರತೂರ. |
ಇಲ್ಲಿಯವರೆಗೆ...
October 2023
"
|