ನಾನು ಇಂದು ನಮ್ಮ ಬರಹಗಾರರು ಎಂಬ ಫೇಸ್ ಬುಕ್ ಗುಂಪಿನಲ್ಲಿ ನಡೆದ ಕವಿಗೋಷ್ಠಿಯ ಕವಿತೆಗಳನ್ನು ಅತ್ಯಂತ ನಮೃತೆಯಿಂದ ಕೇಳಿಸಿಕೊಂಡೆ. ಈ ಗುಂಪಿನಲ್ಲಿ ನಾನು ಕೂಡ ಸಕ್ರಿಯ ಸದಸ್ಯನಾಗಿದ್ದು ಕವಿತೆ ವಾಚನ ಮಾಡಬೇಕೆಂದು ಹಂಬಲಿಸಿದೆ ಆದರೆ ನನ್ನ ವಯಕ್ತಿಕ ಕೆಲಸದ ನಿಮಿತ್ಯ ಆಗಲಿಲ್ಲ ಆದರೆ ಎಲ್ಲರ ಕವಿತೆಗಳನ್ನು ಅತ್ಯಂತ ತಾಳ್ಮೆಯಿಂದ ಆಲಿಸಿ ಆಸ್ವಾದಿಸಿದ್ದೇನೆ. ಆ ಕಾವ್ಯಗಳ ಕುರಿತು ಬರೆಯದೇ ಮನಸ್ಸು ನಿಲ್ಲಲಿಲ್ಲ.
ಆತ್ಮೀಯರೆ,
ನಾನು ಇಂದು ನಮ್ಮ ಬರಹಗಾರರು ಎಂಬ ಫೇಸ್ ಬುಕ್ ಗುಂಪಿನಲ್ಲಿ ನಡೆದ ಕವಿಗೋಷ್ಠಿಯ ಕವಿತೆಗಳನ್ನು ಅತ್ಯಂತ ನಮೃತೆಯಿಂದ ಕೇಳಿಸಿಕೊಂಡೆ. ಈ ಗುಂಪಿನಲ್ಲಿ ನಾನು ಕೂಡ ಸಕ್ರಿಯ ಸದಸ್ಯನಾಗಿದ್ದು ಕವಿತೆ ವಾಚನ ಮಾಡಬೇಕೆಂದು ಹಂಬಲಿಸಿದೆ ಆದರೆ ನನ್ನ ವಯಕ್ತಿಕ ಕೆಲಸದ ನಿಮಿತ್ಯ ಆಗಲಿಲ್ಲ ಆದರೆ ಎಲ್ಲರ ಕವಿತೆಗಳನ್ನು ಅತ್ಯಂತ ತಾಳ್ಮೆಯಿಂದ ಆಲಿಸಿ ಆಸ್ವಾದಿಸಿದ್ದೇನೆ. ಆ ಕಾವ್ಯಗಳ ಕುರಿತು ಬರೆಯದೇ ಮನಸ್ಸು ನಿಲ್ಲಲಿಲ್ಲ.
0 Comments
ಇತ್ತೀಚಗೆ ನಾಡಿನ ಅನೇಕ ಹಿರಿಯ ಕಿರಿಯರು ಶಿಕ್ಷಣದ ಕುರಿತು ಕೇಳುತ್ತಿರುತ್ತಾರೆ. ಬಹಳ ಮುಖ್ಯವಾಗಿ ಮಕ್ಕಳ ಭಾಷಾ ಮಾಧ್ಯಮ ಆಯ್ಕೆ, ಅಂಕಗಳು, ಮಕ್ಕಳು ಓದುತ್ತಿಲ್ಲ, ಮಕ್ಕಳಿಗೆ ಒತ್ತಡ ಹಾಕಬೇಕೊ ಬೇಡವೊ, ಮಕ್ಕಳ ಜೀವನದಲ್ಲಿ ಏನಾಗುತ್ತಾರೊ ಹೀಗೆ ಈ ಪ್ರಶ್ನೆಗಳ ಸಂಖ್ಯೆ ಬೆಳೆಯುತ್ತಲೆಯಿರುತ್ತದೆ. ನಾನು ಕೆಲವು ಅನುಭವಗಳ ಆಧಾರದ ಮೇಲೆ ಉತ್ತರಿಸುತ್ತೇನೆ. ಕೆಲವು ಸಮಾಧಾನದ ಸಂಗತಿಗಳು ಕೂಡಾ ದೊರೆತಿವೆ. ಈ ಕ್ಷೇತ್ರ ತಿಳಿದುಕೊಂಡಷ್ಟು ಆಳವಾಗುತ್ತಾ ಹೋಗುತ್ತಿದೆ. ಇದೀಗ ನಮ್ಮ ಮಕ್ಕಳಿಗಿಂತ ಪಾಲಕರಿಗೆ ಪರೀಕ್ಷೆ ಮತ್ತು ಅಂಕಗಳ ಬಗ್ಗೆ ಚಿಂತೆ ಪ್ರಾರಂಭವಾಗಿದೆ. ಮಕ್ಕಳ ಫಲಿತಾಂಶ ಏನಾಗುತ್ತದೆ ಎನ್ನುವ ಆತಂಕವಿದೆ. ನಮಗೆಲ್ಲ ನಮ್ಮ ಮಕ್ಕಳಿಗಾಗಿ ಯಾವುದು ಮಹತ್ವ ಎನ್ನುವುದನ್ನು ಅರೆತುಕೊಳ್ಳಬೇಕಾದ ಅಗತ್ಯವಿದೆ. ನಡೆಯುವಾಗ ಎಡುವುವುದು ಸಹಜ ಆದರೆ ಎಡವಿದ ಕಲ್ಲಿಗೆ ಮತ್ತೆ ಮತ್ತೆ ಎಡುವುದು ದಡ್ಡತನ. ಸೋಲದೆ ಗೆಲ್ಲುವುದು ಸಾಧ್ಯವಿಲ್ಲ ಸೋತು ಗೆದ್ದವನಿಗೆ ನೂರು ಸೋಲು ಎದುರಾದರೂ ಹೆದರುವುದಿಲ್ಲ. ಎನ್ನುವ ಧೈರ್ಯ ನಮ್ಮ ಮಕ್ಕಳಿಗೆ ತುಂಬಬೇಕಾಗಿದೆ. ಇತ್ತೀಚಗೆ ಹತ್ತನೆಯ ತರಗತಿಯ ಮಕ್ಕಳೊಂದಿಗೆ ಹೆಚ್ಚು ಒಡನಾಟವಾಗಿದ್ದು, ಅವರ ಪರೀಕ್ಷಾ ತಯಾರಿ ಕುರಿತು ಮಾತನಾಡುತ್ತಿದ್ದೇನೆ. ಪರೀಕ್ಷೆ ಮತ್ತು ಫಲಿತಾಂಶ ಅದರ ಪೂರ್ವ ತಯಾರಿ ಕುರಿತು ಮಾತನಾಡುತ್ತಿದ್ದೇನೆ. ಈ ಹತ್ತನೆಯ ತರಗತಿ ಎಷ್ಟು ಮಹತ್ವ ಎನ್ನುವುದನ್ನು ಕಲಿಯುತ್ತಾ ಮಕ್ಕಳಿಗೆ ಕಲಿಸುತ್ತಾ ಮುಂದೆ ಸಾಗುತ್ತಿರುವೆ. ಹೀಗೆ ಕುಳಿತು ಯೋಚಿಸುವಾಗ ಈ ಹತ್ತರ ಹೊತ್ತು ಎಷ್ಟು ಮಹತ್ವದ್ದು ಎಂಬುವುದು ಮನನವಾಗಲು ಸಾಧ್ಯವಾಯಿತು. ಶಿಕ್ಷಕ ರಾಷ್ಟ್ರ ರಕ್ಷಕ ಎನ್ನುವ ಮಾತಿದೆ. ಸಮಾಜವನ್ನು ಸಮೃದ್ಧಗೊಳಿಸುವಲ್ಲಿ ಅತ್ಯಂತ ಮಹತ್ವದ ಪಾತ್ರ ಶಿಕ್ಷಕನದ್ದು. ಶಿಕ್ಷಕ ತನ್ನ ಒಳ್ಳೆಯ ಮನಸ್ಸಿನಿಂದ ಶಾಲೆಯ ತರಗತಿ ಪ್ರವೇಶ ಮಾಡಿದರೆ ಅಂದಿನ ಪಾಠ ಪ್ರವಚನ ಸರಿಯಾಗುತ್ತದೆ. ಶಿಕ್ಷಕನ ಮನಸ್ಥಿತಿಯ ಮೇಲೆ ಮಕ್ಕಳ ಭವಿಷ್ಯ ನೆಲೆಯೂರಿದೆ. ತನ್ನ ಮನಸ್ಸು ಸರಿಯಿಲ್ಲದೇ ಶಿಕ್ಷಕ ಪಾಠ ಮಾಡಿದರೆ ತರಗತಿಯ ಯಾವುದೇ ಮಗುವಿಗೆ ಕಲಿಯಲು ಸಾಧ್ಯವಿಲ್ಲ. ಅದೇ ಒಬ್ಬ ಶಿಕ್ಷಕ ನಿರ್ಮಲ ಮನಸ್ಸಿನ ಮೂಲಕ ಅತ್ಯಂತ ಸಂತೋಷದಾಯಕವಾಗಿ ತರಗತಿ ಪ್ರವೇಶ ಮಾಡಿದರೆ ನಿಜಕ್ಕೂ ಪಾಠ ಪ್ರಯೋಜನವಾಗುತ್ತದೆ. ಮಕ್ಕಳ ಬಾಳಿನಲ್ಲಿ ದಾರಿದೀಪವಾಗುತ್ತದೆ. ಶಿಸ್ತು ಕಲಿಸುವುದೇ ಶಿಕ್ಷಣ, ಶಿಸ್ತು ಶಿಕ್ಷಣ ಹಾದಿ ಇವು ನಾನು ಶಿಕ್ಷಣ ಕಲಿಯುವಾಗ ತಿಳಿದುಕೊಂಡ ವಿಷಯಗಳು. ನಿಜಕ್ಕೂ ಶಿಕ್ಷಣ ನಮಗೆ ಇವೆಲ್ಲ ಕೊಡುತ್ತದೆಯೆ ಎಂಬ ಪ್ರಶ್ನೆ ಆಗಾಗ ಕಾಡಿದ್ದು ಉಂಟು, ನೈಜವಾಗಿ ಕಂಡಿದ್ದು ಉಂಟು ಇದೀಗ ಅನುಭವಕ್ಕೆ ಬಂದಿದ್ದು ಉಂಟು. ನನ್ನ ಬದುಕಿನ ಶಿಕ್ಷಣ ನನಗೆ ಕಲಿಸಿರುವುದಾದರೇನು ಎಂಬುವುದು ನಿಮಗೆ ಹೇಳಬೇಕಿದೆ. ನನ್ನ ಬಾಲ್ಯದಲ್ಲಿ ದೊರೆತ ಶಿಕ್ಷಣದ ಅನುಭವದಿಂದ ನನ್ನ ಜೀವನದಲ್ಲಿ ಆದ ಬದಲಾವಣೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಅತೀವ ಸಂತಸವಾಗುತ್ತದೆ
|
ಇಲ್ಲಿಯವರೆಗೆ...
October 2023
"
|