ಇತ್ತೀಚಗೆ ಹತ್ತನೆಯ ತರಗತಿಯ ಮಕ್ಕಳೊಂದಿಗೆ ಹೆಚ್ಚು ಒಡನಾಟವಾಗಿದ್ದು, ಅವರ ಪರೀಕ್ಷಾ ತಯಾರಿ ಕುರಿತು ಮಾತನಾಡುತ್ತಿದ್ದೇನೆ. ಪರೀಕ್ಷೆ ಮತ್ತು ಫಲಿತಾಂಶ ಅದರ ಪೂರ್ವ ತಯಾರಿ ಕುರಿತು ಮಾತನಾಡುತ್ತಿದ್ದೇನೆ. ಈ ಹತ್ತನೆಯ ತರಗತಿ ಎಷ್ಟು ಮಹತ್ವ ಎನ್ನುವುದನ್ನು ಕಲಿಯುತ್ತಾ ಮಕ್ಕಳಿಗೆ ಕಲಿಸುತ್ತಾ ಮುಂದೆ ಸಾಗುತ್ತಿರುವೆ. ಹೀಗೆ ಕುಳಿತು ಯೋಚಿಸುವಾಗ ಈ ಹತ್ತರ ಹೊತ್ತು ಎಷ್ಟು ಮಹತ್ವದ್ದು ಎಂಬುವುದು ಮನನವಾಗಲು ಸಾಧ್ಯವಾಯಿತು.
“ನಮಗೆ ನಮ್ಮ ತಾಯಿ ಊಟ ಮಾಡಿಸಿದ ರೀತಿಯೇ ಅನನ್ಯವಾಗಿತ್ತು. ರೊಟ್ಟಿಯನ್ನು ಒಮ್ಮೆ ಗೋಲಾಕಾರ ಮಾಡಿ ಉಣಿಸಿದಳು, ಇನ್ನೊಮ್ಮೆ ರೋಲ್ ತರಹ ಮಾಡಿ ಉಣಿಸಿದಳು, ಮೊಗದೊಮ್ಮೆ ರೊಟ್ಟಿ ಮುಟ್ಟಗಿ ಮಾಡಿ ಉಣಿಸಿದಳು ಆಗಾಗ ಚಂದ್ರನ ತೋರಿಸಿ ಉಣಿಸಿದಳು, ಕೆಲವೊಮ್ಮೆ ಪ್ರೀತಿಯಿಂದ ಬೆದರಿಸಿ ಉಣಿಸಿದಳು. ನಾವು ಊಟ ಮಾಡುವ ತನಕ ಬಿಡದೇ ಬೇರೆ ಬೇರೆ ರೀತಿಯ ದಾರಿಗಳನ್ನು ಬಳಸಿ ಊಟ ಮಾಡಿಸಿಯೇ ಬಟ್ಟಳು ಅವಳೇನಾದರು ಯಾವುದಾದರೂ ಕೋಚಿಂಗ್ ಪಡೆದಿದ್ದಳೆ, ಯಾವ ಬಿ.ಎಡ್. ಮುಗಿಸಿದ್ದಳೆ ಅವಳಿಗೆ ನನ್ನ ಮಗು ಹೇಗೆ ಮಾಡಿದರೆ ಉಣುತ್ತಾನೆ ಎಂಬ ಕಲ್ಪನೆಯಿತ್ತು ಮಗನ ಮನಸ್ಸನ್ನು ಅರ್ಥಮಾಡಿಕೊಂಡಿದ್ದಳು ಹೆಚ್ಚಾಗಿ ಪ್ರೀತಿಸುತ್ತಿದ್ದಳು.
ತಾಯಿ ಕೊಟ್ಟಿದ್ದು ರೊಟ್ಟಿನೆ ಆದರೆ ಕೊಟ್ಟಿರುವ ದಾರಿಗಳು ಬೇರೆಯಾಗಿದ್ದವು. ಇದರಂತೆ ನಾವೆಲ್ಲರೂ ಶಿಕ್ಷಕರಾದವರು ಅದೇ ಡಿ.ಎಸ್.ಇ.ಆರ್.ಟಿ.ಯ ಪುಸ್ತಕ ಪಠ್ಯವಸ್ತುವೇ ಓದಿಸುತ್ತೇವೆ ನಾವೆಲ್ಲರೂ ತಾಯಿಯಂತೆ ಮಗುವಿಗೆ ಕಲಿಸಿಕೊಡುವ ಪದ್ಧತಿಗಳನ್ನು ಅರೆತು ಕಲಿಸಬೇಕಾಗಿದೆ. ನಮ್ಮ ವಿಧ್ಯಾರ್ಥಿಗಳು ಹೇಗೆ ಮಾಡಿದರೆ ಆಸಕ್ತಿಯುತವಾಗಿ ಕಲಿಯುತ್ತಾರೆ ಎಂಬ ಅಂಶ ಅರೆತು ಪಾಠ ಮಾಡಿದರೆ ಖಂಡಿತಾ ಎಲ್ಲಾ ಮಕ್ಕಳು ಕಲಿಯುತ್ತಾರೆ ಎಂಬ ಸತ್ಯ ಶಿಕ್ಷಕರು ಅರಿತು ಪಾಠ ಕಲಿಸಿದರೆ ಫಲಿತಾಂಶ ಖಂಡಿತಾ ಹೆಚ್ಚಾಗಲು ಸಾಧ್ಯವಾಗುತ್ತದೆ.
ಈ ಮೇಲಿನ ಮಾತುಗಳು ಅತ್ಯಂತ ಕಠೋರ ಸತ್ಯವಾಗಿವೆ. ಪದ್ಧತಿಗಳು ಮಾತ್ರ ಬದಲಾಗಿವೆ, ವಿಷಯವಸ್ತು ಹೆಚ್ಚು ಕಡಿಮೆ ಅದೇ ಇರುತ್ತದೆ. ನಾವು ಶಿಕ್ಷಕರಾದವರು ನಮ್ಮ ಮಕ್ಕಳಿಗೆ ಸ್ಪೂರ್ತಿ ತುಂಬಬೇಕಾದ ಅತ್ಯಂತ ಅಗತ್ಯವಿದೆ. ಶಿಕ್ಷಕರು ಮತ್ತು ಪಾಲಕರು ಯಾವತ್ತಿಗೂ ಕೈಚಲ್ಲಿ ನಮ್ಮ ಹುಡುಗರು ಪಾಸಾಗುವುದಿಲ್ಲ ಎನ್ನುವ ಅಸಡ್ಡೆಯನ್ನು ಬಿಟ್ಟುಬಿಡಬೇಕು. ಅವರಿಗೆ ಓದಲು ಬೇಕಾದ ಅವಶ್ಯಕತೆಗಳನ್ನು ಈ ಸಮಯದಲ್ಲಿ ಹೆಚ್ಚು ಒದಗಿಸಬೇಕು. ಅವರನ್ನು ಹೆಚ್ಚು ಪ್ರೀತಿಯಿಂದ ಕಾಣಬೇಕು. ಈ ಸಮಯದಲ್ಲಿ ಅತ್ಯಂತ ಜಾಗೂರುಕತೆ ವಹಿಸಬೇಕು.
ಈ ಪರೀಕ್ಷಾ ಸಮಯದಲ್ಲಿ ಮನಸ್ಸು ವಿಚಲಿತವಾಗುವುದು ಸಹಜವಾಗಿದೆ. ಈ ಹತ್ತನೆಯ ತರಗತಿಯ ವಯಸ್ಸು ಕೂಡಾ ಚಂಚಲತೆಯನ್ನು ಉಂಟು ಮಾಡುತ್ತದೆ. ಓದಲು ಕುಳಿತಾಗ ಬೇರಾವುದೊ ತಟ್ಟನೆ ನೆನಪಿಗೆ ಬರುತ್ತದೆ ಹೀಗಾಗಿ ಮಕ್ಕಳೆ ಪ್ರತಿದಿನ ಸ್ವಲ್ಪ ಹೊತ್ತು ಧ್ಯಾನ ಮಾಡುವುದು ಒಳಿತು. ಧ್ಯಾನದಿಂದ ಮನಸ್ಸನ್ನು ಒಂದೇ ಕಡೆ ಕೇಂದ್ರೀಕರಿಸಲು ಸಾಧ್ಯವಾಗುತ್ತದೆ. ನಿಮ್ಮ ಮನಸ್ಸು ಹಿಡಿತಕ್ಕೆ ಬಂದರೆ ಓದಿರುವುದೆಲ್ಲವೂ ಅರ್ಥವಾಗುತ್ತಾ ಹೋಗುತ್ತದೆ. ನಿರ್ಮಲ ಮನಸ್ಸು ಇದೀಗ ಬಹಳ ಅವಶ್ಯಕೆತೆಯಿದೆ. ನಾವೆಲ್ಲರೂ ಸಣ್ಣಪುಟ್ಟ ವಿಚಾರಗಳಿಗೂ ಉದ್ವೇಗಕ್ಕೆ ಒಳಗಾಗುತ್ತೇವೆ. ಈ ಉದ್ವೇಗಗಳು ಸಾಮಾನ್ಯ ಅನಿಸಿದರು ಈ ಸಂಧರ್ಭದಲ್ಲಿ ಅತ್ಯಂತ ಕೆಟ್ಟದಾಗಿ ಕಾಣುತ್ತದೆ.
ಒಂದೆಡೆ ಎಲ್ಲ ಪಠ್ಯ ವಿಷಯಗಳನ್ನು ಓದಿ ಆಗಿಲ್ಲ ಎಂಬ ಭಯ ಇದ್ದರೆ ಮತ್ತೂಂದೆಡೆ ಯಾವ ಪ್ರಶ್ನೆಗಳು ಬರಬಹುದು ಎಂಬ ಆತಂಕ ಮನಸೊಳಗೆ ತೊಳಲಾಟ ಪ್ರಾರಂಭವಾಗುತ್ತದೆ. ಪರೀಕ್ಷೆ ಹೇಗಿರುತ್ತದೆಯೊ, ಪ್ರಶ್ನೆಗಳು ಯಾವು ಕೇಳುತ್ತಾರೊ ಎಂಬ ಗೊಂದಲ ಪ್ರಾರಂಭವಾಗುತ್ತದೆ. ಇದರಿಂದ ಮನಸ್ಸು ವಿಚಲಿತಗೊಂಡು ಓದಲಾಗುವುದಿಲ್ಲ. ಧ್ಯಾನದಿಂದ ಮನಸ್ಸು ಹಗುರವಾಗಿ ಓದಲು ಹುಮ್ಮಸ್ಸು ಮೂಡುತ್ತಿದೆ. ನಿಮ್ಮ ಮನಸ್ಸನ್ನು ಹಗುರ ಮಾಡಿಕೊಳ್ಳವುದು ಈ ಸಮಯದಲ್ಲಿ ಅಗತ್ಯವಿದೆ. ಪರೀಕ್ಷಾ ಸಮಯದಲ್ಲಿ ಧ್ಯಾನ ಮಾಡುವುದರಿಂದ ಮನುಷ್ಯನ ಮೆದುಳಿನ ಎಡಭಾಗ ಮತ್ತು ಬಲಭಾಗ ಚುರುಕುಗೊಳ್ಳುವುದು. ಮೆದುಳು ಚುರುಕುಗೊಂಡಾಗ ಮನಸ್ಸು ಅರಳುತ್ತದೆ. ಹೆಚ್ಚು ಓದುವುದಕ್ಕೆ ಪ್ರೋತ್ಸಾಹ ದೊರೆಯುತ್ತದೆ. ಶರೀರ, ಮನಸ್ಸು ಮತ್ತು ಬುದ್ಧಿಗಳ ಶುದ್ಧೀಕರಣ ಆಗುವುದರೊಂದಿಗೆ ಮೆದುಳಿನ ಎರಡು ಭಾಗಗಳು ಕ್ರಿಯಾಶೀಲ ಆಗುವುದರಿಂದ ಅಧಿಕ ಸ್ಮರಣಶಕ್ತಿ ಪಡೆದುಕೊಳ್ಳುವುದು. ಇದರಿಂದ ನಕಾರಾತ್ಮಕ ವಿಚಾರಗಳು ಕಡಿಮೆಯಾಗಿ ಮೆದುಳಿನ ಕಾರ್ಯಕ್ಷಮತೆ ಹೆಚ್ಚುವುದು. ಈಸಮಯದಲ್ಲಿ ನಕಾರಾತ್ಮಕ ವಿಚಾರಗಳಿಂದ ದೂರವಿರುವುದು ಅತ್ಯಂತ ಸೂಕ್ತವಾಗಿರುತ್ತದೆ. ಯಾವುದೇ ಕಾರಣಕ್ಕೂ ನಕಾರಾತ್ಮಕ ಅಂಶಗಳು ನಿಮ್ಮ ಸುತ್ತಮುತ್ತಲು ಸುಳಿಯದಂತೆ ನೋಡಿಕೊಳ್ಳಿರಿ. ಹೆಚ್ಚು ಸಕಾರಾತ್ಮಕವಾಗಿ ಯೋಚಿಸಿ, ಆಲೋಚಿಸಿ ಪ್ರಯತ್ನಿಸಿ.
ಇದೇ ಸಮಯದಲ್ಲಿ ನಮಗೆ ಕಾಡುವ ಸಮಸ್ಯೆಯಂದರೆ ನಿದ್ರಾದೇವತೆ ಆವರಿಸಿಕೊಳ್ಳುವುದು. ಅದರಲ್ಲೂ ಪರೀಕ್ಷೆ ಸಮಯದಲ್ಲಿ ಸಾಮಾನ್ಯ ದಿನಗಳಿಗಿಂತ ಹೆಚ್ಚು ನಿದ್ರೆ ಬರುವುದು, ಓದಲು ಕೂತರೆ ಆಕಳಿಕೆ ಬರುವುದು, ಇಲ್ಲದ ವಸ್ತುಗಳ ಬಗ್ಗೆ ಯೋಚಿಸುವುದು, ಇಂತಹ ಸಮಯದಲ್ಲಿ ಅತೀ ಹೆಚ್ಚು ಜಾಗೂರಕತೆ ಮತ್ತು ಶುದ್ಧವಾದ ಮನಸ್ಸು ಅತ್ಯಂತ ಅವಶ್ಯಕವಾಗಿದೆ. ಇದ್ರಾ ದೇವತೆ ಬಂದಾಗ ತಟ್ಟನೆ ಬೇರೆಯಡೆಗೆ ಮನಸ್ಸು ಹಾಯಿಸಿ ಮತ್ತೆ ಓದಲು ಕುಳಿತುಕೊಳ್ಳುವುದು ಹೆಚ್ಚು ಸೂಕ್ತವಾಗುತ್ತದೆ. ಅದರ ಜೊತೆಗೆ ಈ ಸಮಯದಲ್ಲಿ ಸಾಕಷ್ಟು ನಿದ್ರೆಯ ಅವಶ್ಯಕತೆಯೂ ಇರುತ್ತದೆ ಎಂಬುವುದು ಮರೆಯಬೇಡಿ. ನಿಮ್ಮ ನಿದ್ರೆ ಬಂದರೆ ಓದುವುದು ನಿಲ್ಲಿಸಿ ವಿಷಯವನ್ನು ಬರೆಯಲು ಪ್ರಾರಂಭಿಸಿ. ಓದುವ ವಿಷಯವನ್ನು ಅರ್ಥೆÊಸಿಕೊಂಡು ನಿಮ್ಮದೇ ಆದ ಟಿಪ್ಪಣಿ ತಯಾರು ಮಾಡಿಕೊಳ್ಳಿ. ಪ್ರತಿನಿತ್ಯ ಓದೇಕಾದ ನಿಮಗೆ ಓದುವ ವಿಷಯಕ್ಕೊಂದು ಸೂಕ್ತ ವೆಳಾಪಟ್ಟಿ ಅವಶ್ಯಕತೆಯಿದೆ. ಎಷ್ಟೊಬಾರಿ ವೇಳಾಪಟ್ಟಿ ಮಾಡಿ ಅದನ್ನು ಮೂಲೆಗೆಸೆಯುತ್ತೇವೆ ಸಾಧ್ಯವಾದಷ್ಟು ಅದನ್ನ ಸರಿಯಾಗಿ ಪಾಲನೆ ಮಾಡಿ.
ಈ ಸಮಯದಲ್ಲಿ ನಿಮಗೆ ಪರೀಕ್ಷೆ ಬಗ್ಗೆ ಸದಾ ಕಾಲ ಧನಾತ್ಮಕ ಮತ್ತು ಆತ್ಮ ವಿಶ್ವಾಸ ತುಂಬಿದ ವಿಚಾರಗಳು ಇರಲಿ. ಅನೇಕ ಜನರು ತಪ್ಪು ದಾರಿಗಳನ್ನು ಹೇಳಿಕೊಡುವ ಅನೇಕ ಅವಕಾಶಗಳಿವೆ ಯಾವುದಕ್ಕೂ ಕಿವಿಗೊಡದೆ ಧನಾತ್ಮಕ ಹಾಗೂ ಓದಿಯೇ ಪಾಸಾಗುತ್ತೇನೆ ಎಂಬ ದೃಢ ನಿರ್ಧಾರ ಮಾಡಬೇಕಾಗಿರುವುದು ಇವತ್ತಿನ ಅವಶ್ಯಕತೆಯಿದೆ. ಓದುವಾಗ ಸಮಸ್ಯೆಗಳು ಎದುರಾದಲ್ಲಿ ತಕ್ಷಣ ವಿಷಯ ಶಿಕ್ಷಕರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು. ಕೆಲವೊಮ್ಮೆ ನಿಮಗೆ ಪ್ರಶ್ನೆಗಳಿರುತ್ತವೆ ನೀವು ಉತ್ತರ ಕಂಡುಕೊAಡಿರುವುದಿಲ್ಲ ಅದೇ ಪ್ರಶ್ನೆ ಪರೀಕ್ಷೆಯಲ್ಲಿ ಎದುರಾಗುವ ಅನೇಕ ಸಾಧ್ಯತೆಗಳಿವೆ ಹೀಗಾಗಿ ಯಾವುದೇ ಗೊಂದಲವಿಟ್ಟುಕೊAಡು ಪರೀಕ್ಷೆಗೆ ಹೋಗುವುದು ಬೇಡ ಬದಲಿಗೆ ಸ್ಪಷ್ಟತೆಯಿಂದ ಪರೀಕ್ಷೆಗೆ ಹೋಗುವುದು ಅವಶ್ಯಕವಾಗಿದೆ.
ಪರೀಕ್ಷಾ ಪಲಿತಾಂಶದ ವಿಷಯದಲ್ಲಿ ನಿವು ನಿಮ್ಮನ್ನು ಬೇರೊಬ್ಬ ಸಹಪಾಠಿಯೊಂದಿಗೆ ಹೋಲಿಕೆ ಮಾಡಬೇಡಿ, ಯಾಕೆಂದರೆ ಎಲ್ಲರಿಗೂ ಒಂದೆ ತರಹದ ಬೌದ್ಧಿಕ ಸಾಮರ್ಥ್ಯ ಇರುವುದಿಲ್ಲ. ನಾನು ಪರೀಕ್ಷೆಯಲ್ಲಿ ಇಷ್ಟೇ ಅಂಕ ಪಡೆಯಬೇಕೆಂದು ನಿರ್ಬಂಧಕ್ಕಿAತ ನಿರ್ಧಾರ ಮಾಡಿ ಅದರತ್ತ ಪ್ರಯತ್ನ ಮಾಡಿ. ನೀವು ನಿಮಗೆ ನಿರ್ಬಂಧ ಹೇರುವುದು ಬೇಡ ಬದಲಿಗೆ ಆತ್ಮವಿಶ್ವಾಸ ಬೆಳೆಸಿಕೊಳ್ಳಿರಿ. ನಿಮಗೆ ನೀವೆ ಹೆಚ್ಚು ಒತ್ತಡಕ್ಕೆ ಒಗ್ಗಿಕೊಳ್ಳಬೇಡಿ. ಒತ್ತಡ ಹೆಚ್ಚಾದರೆ ನೆನಪಿನ ಶಕ್ತಿ ಕುಗ್ಗುತ್ತದೆ.
ಪರೀಕ್ಷಾ ಸಮಯದಲ್ಲಿ ಸಮಯಕ್ಕೆ ಸರಿಯಾಗಿ ಊಟ ಉಪಚಾರದ ಬಗ್ಗೆ ಕಾಳಜಿವಹಿಸಿ. ರಾತ್ರಿ ಹೆಚ್ಚು ಸಮಯ ಕುಳಿತು ಓದಿಕೊಳ್ಳುವುದು ಬೇಡ, ಇದರ ಬದಲು ಬೆಳಗಿನ ಸಮಯದಲ್ಲಿ ಓದಲು ದೃಢ ಸಂಕಲ್ಪ ಮಾಡಿ. ಇನ್ನು ವಿಧ್ಯಾರ್ಥಿಗಳೆಲ್ಲರೂ ಪರೀಕ್ಷಾ ಸಮಯದಲ್ಲಿ ದೂರದರ್ಶನ, ಮೊಬೈಲ್, ಗಣಕಯಂತ್ರಗಳತ್ತ ಚಿತ್ತ ಹರೆಸದಂತೆ ನಿಗಾವಹಿಸಿಕೊಳ್ಳಿರಿ. ಸ್ನೇಹಿತ ಬಳಗ, ಸಂಬAಧಿಕರ ಜೊತೆ ಯಾವದೇ ತಂಟೆ-ತಕರಾರು ಮಾಡಿಕೊಳ್ಳದೆ ಅನ್ಯೋನ್ಯವಾಗಿ ವರ್ತಿಸುವಂತೆ ಸೂಚಿಸಿ. ತಂಟೆ-ತಕಾರಾರುಗಳು ಮನಸ್ಸಿನ ನೆಮ್ಮದಿ ಹಾಳು ಮಾಡುತ್ತದೆ. ನಿಮ್ಮ ಗೆಳೆಯರೊಂದಿಗೆ ಓದು ಬರಹದ ಪೈಪೋಟಿ ಮಾಡಿಕೊಳ್ಳಿರಿ. ಧನಾತ್ಮಕವಾಗಿ ಸ್ಪರ್ಧೆ ಮಾಡಿರಿ. ಬೇಗ ಮಲಗಿ, ಬೇಗ ಏಳುವ ರೂಡಿ ಮಾಡಿಕೊಳ್ಳಿರಿ ಜೊತೆಗೆ ವ್ಯಾಯಾಮ,ಯೋಗಾಸನ ,ಧ್ಯಾನ ಮಾಡುವ ಮೂಲಕ ಮನಸ್ಸಿನ ಏಕಾಗ್ರತೆ ಕಾಪಾಡಿಕೊಳ್ಳಿರಿ. ಈ ಸಂದರ್ಭದಲ್ಲಿ ಮದುವೆ, ಮುಂಜಿ, ಹಬ್ಬ ಬರುವುದು ಸಹಜ ಅವುಗಳನ್ನು ಕೂಡಾ ಆಚರಿಸಿ ಆದರೆ ಇಡಿ ವಾರ ಬರಿ ಹಬ್ಬವೆ ಆಚರಿಸುವುದು ಬೇಡ.
ಆತ್ಮೀಯ ಪಾಲಕರೆ ಮತ್ತು ಶಿಕ್ಷಕರೆ ಈ ಮೇಲಿ ಎಲ್ಲಾ ವಿಷಯಗಳನ್ನು ಪ್ರಸ್ತುತ ಹತ್ತನೆಯ ತರಗತಿಯನ್ನು ಓದುತ್ತಿರುವ ಅಥವಾ ಯಾವುದೇ ಪರೀಕ್ಷೆಯನ್ನು ಎದುರಿಸುವ ಮಕ್ಕಳಿಗೆ ಹೇಳಿಕೊಡಿ ಏಕೆಂದರೆ “ಹತ್ತರ ಹೊತ್ತು ಮಹತ್ವದ ತುತ್ತು” ಅಲ್ಲವೆ.