ಮೊನ್ನೆ ಸ್ವಾತಂತ್ರ ದಿನಾಚರಣೆ ಆಚರಿಸುವಾಗ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ ಎಲ್ಲಿದೆ ಸ್ವಾತಂತ್ರ ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತ ನಡೆದರೆ ಒಮ್ಮೆ ಬ್ರೀಟಿಷರ ಆಡಳಿತ ನೆನಪಾಗುತ್ತ ನಮ್ಮ ಈಗಿನ ರಾಜಕೀಯ ಮೇಲಾಟುವು ನೆನಪುಮಾಡಿಕೊಂಡಾಗ ಮುಜುಗರವಾಯಿತು. ದೇಶದಲ್ಲಿ ದುಡಿಯುವ ಅನೇಕರಿಗೆ ಅನ್ನವಿಲ್ಲ, ಇದೇ ದೇಶದಲ್ಲಿ ದುಡಿಯದೇ ತಿನ್ನುವ ಜನರಿರುವಾಗ ಎಲ್ಲಿದೆ ಸ್ವಾತಂತ್ರ ಎನಿಸಿತು. ತಾಯಿ ಹಾಗೂ ತಾಯಿನಾಡು ಎಂಬ ಕಲ್ಪನೆ ಎಲ್ಲಿಯೂ ಉಳಿದಿಲ್ಲವೆನಿಸುತ್ತದೆ. ಎಲ್ಲರೂ ಮಾಡುವುದು ಅವರವರ ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎಂಬ ಮಾತು ನೆನಪಿಸುತ್ತದೆ.
0 Comments
ಭಾರತದಲ್ಲಿ ಮಾನ್ಯ ಪ್ರಧಾನಿಯವರು ಸ್ವಚ್ಛ ಭಾರತ, ಮೇಕ್ ಇನ್ ಇಂಡಿಯಾ ಎಂಬಿತ್ಯಾದಿ ಯೋಜನೆಗಳನ್ನು ಘೋಷಣೆ ಮಾಡುತ್ತ, ದೇಶ ಸುತ್ತುವ ಪ್ರಪಂಚದಲ್ಲಿ ಅತೀ ಮುಖ್ಯ ವ್ಯಕ್ತಿಯೆನ್ನುವ ಪಟ್ಟಕ್ಕೇರಿದ್ದಾರೆ. ಒಂದೇ ವರ್ಷದಲ್ಲಿ ಅತಿ ಹೆಚ್ಚು ದೇಶ ಸುತ್ತಿದ ಪ್ರಥಮ ಪ್ರಧಾನಿಯೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಎಡಬಲ ದೇಶಗಳೊಡನೆ ಅನೇಕ ರೀತಿಯ ಸಹಿ ಸೂತ್ರಗಳಿಗೆ ಪಾತ್ರರೂ ಆಗಿದ್ದಾರೆ.
“ಒಲೆ ಹತ್ತಿ ಉರಿದೊಡೆ ನಿಲ್ಲಬಹುದಲ್ಲದೆ. ಧರೆ ಹತ್ತಿ ಉರಿದೊಡೆ ನಿಲ್ಲಬಹುದೇ?” ಈ ಸಾಲು ಇಂದು ತುಂಬ ನೆನಪಾಯಿತು. ಹನ್ನರಡನೇಯ ಶತಮಾನದ ಶರಣರು ಮುಂದಿನ ಭವಿಷ್ಯವನ್ನು ಅಂದೆ ನುಡಿದಿದ್ದರು ಎನಿಸುತ್ತದೆ. ಒಲೆ ಒಂದು ಚಿಕ್ಕ ಬೆಂಕಿಯನ್ನು ಒಳಗೊಂಡಿದೆ, ಅದನ್ನು ನಾವು ಆರಿಸಬಹುದಾಗಿದೆ. ಆ ಬೆಂಕಿ ಮನುಷ್ಯನ ಹತೋಟಿಯಲ್ಲಿರುವದಾಗಿದೆ. ಅದು ಮನೆಯೊಳಗೆ ನುಗ್ಗುವ ಮುನ್ನ ಆರಿಸಿ ಮನೆಯನ್ನು ಉಳಿಸಿಕೊಳ್ಳಬೇಕಾದ ಅಗತ್ಯ ನಮ್ಮದಾಗಿದೆ. |
ಇಲ್ಲಿಯವರೆಗೆ...
October 2023
"
|