ಇನ್ನು ನಮ್ಮ ಕರ್ನಾಟಕದ ಮುಖ್ಯಮಂತ್ರಿಗಳು ವಿರೋಧ ಪಕ್ಷದಲ್ಲಿದ್ದಾಗ ತೊಡೆತಟ್ಟಿದವರು. ಭ್ರಷ್ಠಾಚಾರ ನಿಗ್ರಹ ಮಾಡುತ್ತೇವೆ ಎಂದವರು. ಸುರಕ್ಷಿತ ರೈತಪರ ಸರಕಾರ ಎಂದು ಪಾದಯಾತ್ರೆ ಕೈಗೊಂಡವರು. ರೈತ ಚಳುವಳಿಯ ಮೂಲಕ ರಾಜಕೀಯಕ್ಕೆ ಧುಮುಕಿದ ಧೂರಿಣರು. ಹೊಲದಲ್ಲಿ ಉಳುವ ರೈತನ ಅನೇಕ ಸಂಕಷ್ಟಗಳಿಗೆ ಪರಿಹಾರ ಕೊಡುವ ಕಲ್ಪನೆ ನೀಡಿದವರು ಮಾನ್ಯ ಮುಖ್ಯಮಂತ್ರಿಗಳು. ಹೋರಾಟ ಎಂದು ಕಾರ್ನಾಟಕದಲ್ಲಿ ನಡೆದಾಗ ಮುಂಚುಣಿಯಲ್ಲಿದ್ದವರು. ವಿಧಾನ ಸೌಧವೇ ನಡುಗುವ ಹಾಗೆ ಭಾಷಣ ಮಾಡಿದವರು. ಸುಮಾರು ಬಾರಿ ಬಜೆಟ್ ಮಂಡನೆ ಮಾಡಿ ಖ್ಯಾತಿ ಗಳಿಸಿದವರು.
ಆದರೆ ಇವರಿಬ್ಬರು ನೆಗಿಲ ಹಿಡಿದು ಉಳುವ ಯೋಗಿಯ ಹಾಗೂ ಈ ನೆಲದ ಮೂಲದವರಿಗೆ ಮೂಲಭೂತ ಸೌಕರ್ಯ ನೀಡದೇ ಹಿಂದುಳಿದವರು ಎಂಬ ಸತ್ಯ ಜನರಿಗೆ ಅರಿವಿಲ್ಲದೇ ಮರೆಯಾಗುತ್ತಿದೆ. ಅದೆಷ್ಟು ಯೋಜನೆಗಳು ಬಂದರು ಈ ನೆಲದ ಮೂಲದವರು ಮಾತ್ರ ತಮ್ಮ ಮೂಲ ಸ್ಥಿತಿಯಲ್ಲಿಯೇ ಇದ್ದಾರೆಯೆಂಬ ವಿಷಯ ಮಾತ್ರ ಗಂಭೀರ. ನಮ್ಮ ದೇಶದ ಹಸಿವು ಮುಕ್ತ ಮಾಡುತ್ತೇನೆ. ಸ್ವಿಸ್ ಬ್ಯಾಂಕ್ ನಿಂದ ಹಣ ವಾಪಸ್ಸು ತಂದು ನಿಮಗೆಲ್ಲ ಬಂಗಾರದ ರೋಡ ಮಾಡುತ್ತೇನೆ ಎಂದ ನರೇಂದ್ರ ಮೋದಿಯವರು ಇಂದು ದೇಶ ಸುತ್ತುವುದರಲ್ಲಿ ಬಿಜಿಯಾಗಿದ್ದರೆ. ಕರ್ನಾಕಟದ ಮುಖ್ಯಮಂತ್ರಿಗಳು ಬಡವರ ಹಾಗೂ ರೈತರ ಹೆಸರಿನಲ್ಲಿ ರಾಜಕೀಯ ಮಾಡುವತ್ತ ಗಮನಕೊಡುತ್ತಿರುವುದು ಶೋಚನೀಯ ಸಂಗತಿಯಾಗಿದೆ.
ನಮ್ಮ ದೇಶದಲ್ಲಿಂದು ಬಡತನ ತಾಂಡವ ಆಡುತ್ತಿದೆ. ಗುಡಿಸಲು ಮರೆಯಾಗಿ ಪಕ್ಕಾ ಮನೆ ಮಾಡಬೇಕಾದ ಕರ್ತವ್ಯ ಇವರಿಬ್ಬರ ಮೇಲಿದೆ. ಇಲ್ಲಿನ ಜನರಿಗೆ ಮೂಲಭೂತ ಸೌಕರ್ಯಗಳಾದ ನೀರು, ಶೌಚಾಲಯ ಮತ್ತು ಚರಂಡಿಗಳ ದೊರೆಯುವಿಕೆಯನ್ನು ಖಾತ್ರಿಪಡಿಸಬೇಕಾಗಿದೆ. ಆದರೆ ಇವರಿಬ್ಬರೂ ಮಾತ್ರ ಇದ್ಯಾವುದು ತೆಲೆಕೆಡಿಸಿಕೊಳ್ಳದೇ ತಮ್ಮ ಪಾಡಿನ ಅಧಿಕಾರದ ಅವಧಿ ಮುಗಿಸುವ ಕುಂಟ ನೆಪ ಹೇಳುವ ಮೂಲಕ ದಿನಗಳನ್ನು ತಳ್ಳುತ್ತಿದ್ದಾರೆ.
ಹೊಟ್ಟೆ ತುಂಬಿದವರಿಗೇನು ಗೊತ್ತು ಹಸಿದವರ ನೋವು ನಮ್ಮ ರಾಜ್ಯ ಹಾಗೂ ದೇಶದ ಸ್ಥಿತಿಗತಿ ಸಾಮಾನ್ಯವಾಗಿ ಇದೆ ಆಗಿದೆ. ಚುನಾವಣೆಗೂ ಮುನ್ನ ಹೇಳಬಾರದೆಲ್ಲ ಹೇಳಿ. ಬಡವರ ಬಾಳಿನಲ್ಲಿ ಆಶಕಿರಣ ಮೂಡಿಸಿದ ಮೋದಿ ಮೌನ ತಾಳಿದ್ದಾರೆ, ಸಿದ್ಧರಾಮಯ್ಯನವರು ನಿದ್ದೆರಾಮಯ್ಯನಾಗಿದ್ದಾರೆ. ಇಬ್ಬರೂ ನಾವೆಲ್ಲ ಒಂದೇ ನಾಣ್ಯದ ಎರಡು ಮುಖಗಳೆಂಬ ಸೂಚನೆ ಸದ್ದಿಲ್ಲದೇ ಬಡವರೆದೆಯೊಳಗೆ ರವಾನಿಸುತ್ತಿದ್ದಾರೆ. ರೈತರ ಸರಣಿ ಆತ್ಮಹತ್ಯೆಯಾಗುತ್ತಿದ್ದರು ಕಿವಿಗೊಡದೇ ಸಾಗುತ್ತಿದ್ದಾರೆ. ಸಾಂತ್ವನ ಹೇಳುವುದರಲ್ಲಿಯೇ ಕಾಲಹರಣ ಮಾಡುತ್ತಿದ್ದಾರೆ. ರೈತರ ಪಾಲಿಗೆ ಹೂವಾಗಬೇಕಿದ್ದ ಈ ಇಬ್ಬರೂ ನಾಯಕರು ಅವರೇ ಬೆಳೆಸಿದ ಬಳ್ಳಿಗೆ ಮುಳ್ಳಾಗುವ ಕೆಲಸ ಮಾಡುತ್ತಿದ್ದಾರೆ.
ಭಾತರದಲ್ಲಿ ನೆಲದ ಮೂಲದವರಾದ ಎಸ್.ಸಿ. ಎಸ್.ಟಿ. ಹಿಂದುಳಿದವರು ಯಾವ ಸ್ಥಿತಿಯಲ್ಲಿದ್ದಾರೆಯೆಂಬ ಯೋಚನೆ ಪ್ರಧಾನಿಯಾಗಲಿ, ಮುಖ್ಯಮಂತ್ರಿಯಾಗಲಿ ಮಾಡುತ್ತಿಲ್ಲ, ಅವರ ಮೂಲಭೂತ ಸೌಕರ್ಯಗಳೇ ಇಲ್ಲದ ಸ್ಥಿತಿಯಲ್ಲಿ ಅವರ ಕೈಗೆ ಸ್ಮಾರ್ಟಫೋನ್ ಕೊಡುವ ಕೆಲಸದಲ್ಲಿ ನಿರತರಾಗಿದ್ದಾರೆ. ಕಬ್ಬಿಗೆ ಬೆಂಬಲ ಬೆಲೆ ನೀಡದೆ ಸತಾಯಿಸುತ್ತಿರುವ ಮುಖ್ಯಮಂತ್ರಿ ಇದೀಗ ಅರ್ಧಚೆಂದ್ರನ ಹಾಗೆ ರೈತರ ಜೊತೆಗೆ ಕಣ್ಣಮುಚ್ಚಾಲೆ ಆಡುತ್ತಿದ್ದಾರೆ. ಹಿಂದುಳಿದವರ ಹೆಸರಿಲ್ಲಿ ಅಧಿಕಾರ ಹಿಡಿದಿರುವ ಇಬ್ಬರೂ ಅವರ ಏಳ್ಗೆಯನ್ನೇ ಮರೆತಿದ್ದಾರೆ ಎನಿಸುತ್ತಿದೆ.
ಸ್.ಸಿ. ಎಸ್.ಟಿ. ಹಿಂದುಳಿದವರ ಮನೆಗಳಿರುವ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸೌಲಭ್ಯ ದೊರೆಯುವಿಕೆಯನ್ನು ಗಮನಿಸಿದರೆ, ಎಸ್ಸಿ ಬಡಾವಣೆಗೆ ಪ್ರತಿ ದಿನ ಕುಡಿಯುವ ನೀರಿನ ಪ್ರಮಾಣಕ್ಕೂ ಹಾಗೂ ದಲಿತೇತರ ಮನೆಗಳಿರುವ ಪ್ರದೇಶಕ್ಕೂ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಾಸವಿದೆ. ಇದೇ ರೀತಿ ಶೌಚಾಲಯಗಳ ದೊರೆಯುವಿಕೆಯನ್ನು ಗಮನಿಸಿದರೆ ಎಸ್ಸಿ ಮನೆಗಳಿಗೆ ಶೌಚಾಲಯಗಳ ಸೌಲಭ್ಯ ಮತ್ತು ದಲಿತೇತರ ಮನೆಗಳಲ್ಲಿ ಶೌಚಾಲಯಗಳಲ್ಲಿಯೂ ಭಾರಿ ವ್ಯತ್ಯಾಸವಿದೆ. ಸರಕಾರ ಒದಗಿಸುವ ಚರಂಡಿ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಹಿಂದುಳಿದವರಲ್ಲಿ ತುಂಬಾ ತಾರತಮ್ಯ ಕಾಣಬರುತ್ತದೆ. ಬಡವರಿಗಾಗಿ ಬರುವ ಅದೆಷ್ಟೋ ಯೋಜನೆಗಳು ಇಂದು ಅಲ್ಲಲ್ಲಿ ಸೋರಿಕೆಯಾಗುತ್ತಿವೆ ಎಂಬ ಸತ್ಯ ಇಬ್ಬರೂ ನಾಯಕರಿಗೆ ಗೊತ್ತಿದ್ದರು ಕಣ್ಣ ಉಚ್ಚಿ ಕಿವಿಯ ಮುಚ್ಚಿ ಕುಳಿತಿದ್ದಾರೆ. ಬಡವರ ಬದುಕಿನೊಂದಿಗೆ ಭಾರಿ ದೊಡ್ಡಾಟ ಆಡುತ್ತಿದ್ದಾರೆ.
ಹಮ್ ಇಸ್ ದೇಶಕೊ ಐಸಾ ಬನಾಯಿಂಗೆ ಎಂದ ಪ್ರಧಾನಿ ಮನ್ ಕಿ ಬಾತ್ ನಲ್ಲಿ ಮಾತ್ರ ಮಾತನಾಡುತ್ತಿದ್ದಾರೆ. ದೇಶದಲ್ಲಿ ಹಗರಣಗಳ ಸುರಿಮಳೆಯಾದರು ಮಾತು ಬಿಚ್ಚಲಿಲ್ಲ. ಭ್ರಷ್ಠಾಚಾರ ಅಡಳಿತ ಕಾರ್ನಟಕದಲ್ಲಿ ಬಿಜೆಪಿಯದ್ದು ಎಂದು ಸೆಡ್ಡು ಹೊಡೆದ ಸಿದ್ಧು ಇದೀಗ ಲೋಕಾಯುಕ್ತಯೆಂಬ ಭ್ರಷ್ಠತೆ ಕಂಡು ಕೂಡ ಕಾಣದ ಹಾಗೆ ಸುಮ್ಮಾಗಿದ್ದರೆ ಎಲ್ಲವೂ ಒಳಜೆಂಬ ಯಾರಿಗೂ ದೇಶದ ಉದ್ಧಾರ ಬೇಕಿಲ್ಲ ಎಂಬವುದು ಸ್ಪಷ್ಟವಾಗಿ ಅರ್ಥವಾಗುತ್ತದೆ. ಎಲ್ಲವು ವಯಕ್ತಿಕ ಪ್ರತಿಷ್ಠೆ ರಾಜಕೀಯ ಅಧಿಕಾರ ದಾಹ ಹಣಗಳಿಸಬೇಕೆಂಬ ಬಯಕೆ ಅವರನ್ನು ಈ ರೀತಿ ಆಡಿಸುತ್ತದೆ, ಮಾಡಿಸುತ್ತದೆ. ಈ ದೇಶದಲ್ಲಿ ನೆಲದ ಮೂಲದವರು ಮಾತ್ರ ಮಲ ಮೂತ್ರ ಮಾಡಲು ಸ್ಥಳ ಮಾತ್ರ ತಪ್ಪಿಲ್ಲ. ರೈತನ ಕಷ್ಟ ಪರಿಹಾರವಾಗಲ್ಲ. ಈ ದೇಶದಲ್ಲಿ ಶ್ರೀಮಂತ ಇನ್ನಷ್ಟು ಶ್ರೀಮಂತನಾಗುತ್ತಾನೆ, ಬಡವ ಇನ್ನಷ್ಟು ಬಡವನಾಗುತ್ತಾನೆ.
ಕೆ.ಎಂ.ವಿಶ್ವನಾಥ ಮರತೂರ.