ನಾವು ಶಾಲೆ ಕಲಿಯುತ್ತಿದ್ದ ಸಂದರ್ಭದಲ್ಲಿ ಇಂತಹದ್ದೆ ಅನೇಕ ಕಥೆಗಳನ್ನು ಓದಿದ್ದೇವೆ. “ಕೈ ಕೆಸರಾದರೆ ಬಾಯಿ ಮೊಸರು” “ಒಗ್ಗಟ್ಟಿನಲ್ಲಿ ಬಲವಿದೆ” “ಜಾಣ ಕಾಗೆ” “ಜಾಣ ನರಿ” “ಉಪಾಯ ಬಲ್ಲವನಿಗೆ ಅಪಾಯವಿಲ್ಲ” ಹೀಗೆ ಅನೇಕ ಕಥೆಗಳು ನಮ್ಮೊಳಗಿನ ರಚನಾತ್ಮಕ ಕಲಿಕೆ ಮತ್ತು ಗುಣವನ್ನು ಹೊರಹಾಕುತ್ತಿದ್ದವು. ಬದುಕಿನಲ್ಲಿ ಯಾವ ರೀತಿಯದ್ದೆ ಕಷ್ಟಗಳು ಎದುರಾದರೂ ಅವುಗಳಿಂದ ಪಾರಾಗುವ ಜಾಣತನ ಕಲಿಸುತ್ತಿದ್ದವು. ಈ ಸಂದರ್ಭದಲ್ಲಿ ನಮ್ಮ ಕಲಿಕೆ ಸಮೃದ್ಧವಾಗಲು ಶಿಕ್ಷಕರು ಬಳಸುತ್ತಿದ್ದ ಈ ವಿಧಾನಗಳು ರಚನಾತ್ಮಕವಾಗಿದ್ದವು.
ನಿಮಗೆಲ್ಲರಿಗೂ ಈ ಕಥೆ ನೆನಪಿರಬಹುದು, “ಆರು ಜನ ಗೆಳೆಯರು ಊಟಕ್ಕೆ ಕುಳಿತುಕೊಳ್ಳುತ್ತಾರೆ. ಅವರಲ್ಲಿ ಹೊರಗಿನವರೊಬ್ಬರೂ ಇವರ ಗೆಳೆತನ ಮತ್ತು ಜಾಣತನವನ್ನು ಪರೀಕ್ಷಿಸಲು ಒಂದು ಕಂಡಿಷನ್ ಹಾಕುತ್ತಾರೆ. ನೀವು ಊಟ ಮಾಡುವಾಗ, ನಿಮ್ಮ ಕೈಯನ್ನು ಮಡಚದೆ ಊಟ ಮಾಡಬೇಕು ಎಂದು ಹೇಳುತ್ತಾರೆ. ಇದು ತಿಳಿದ ಆರು ಜನ ಗೆಳೆಯರು ಯೋಚಿಸುತ್ತಾರೆ, ಕೊನೆಯಲ್ಲಿ ಒಂದು ಯೋಜನೆ ಮಾಡುತ್ತಾರೆ. ಎಲ್ಲರೂ ಎದುರುಬದರು ಕುಳಿತುಕೊಂಡು, ಒಬ್ಬರೂ ಇನ್ನೊಬ್ಬರಿಗೆ ಉಣಿಸುತ್ತಾರೆ, ಯಾರೂ ತಮ್ಮ ತಮ್ಮ ಕೈಯನ್ನು ಮಡಿಚದೆ ಊಟ ಮಾಡಿ ಮುಗಿಸುತ್ತಾರೆ.” ಈ ಕಥೆ ನನಗೆ ಇವತ್ತಿಗೂ ಕಲಿಕೆಯ ವಿಶಿಷ್ಠ ಅನುಭವ ಕೊಡುತ್ತದೆ. ಇದರಿಂದ ಜೀವನದ ಅನುಭವಗಳ ಕಲಿಕೆಯಾಗುತ್ತವೆ.
ನಾವು ಶಾಲೆ ಕಲಿಯುತ್ತಿದ್ದ ಸಂದರ್ಭದಲ್ಲಿ ಇಂತಹದ್ದೆ ಅನೇಕ ಕಥೆಗಳನ್ನು ಓದಿದ್ದೇವೆ. “ಕೈ ಕೆಸರಾದರೆ ಬಾಯಿ ಮೊಸರು” “ಒಗ್ಗಟ್ಟಿನಲ್ಲಿ ಬಲವಿದೆ” “ಜಾಣ ಕಾಗೆ” “ಜಾಣ ನರಿ” “ಉಪಾಯ ಬಲ್ಲವನಿಗೆ ಅಪಾಯವಿಲ್ಲ” ಹೀಗೆ ಅನೇಕ ಕಥೆಗಳು ನಮ್ಮೊಳಗಿನ ರಚನಾತ್ಮಕ ಕಲಿಕೆ ಮತ್ತು ಗುಣವನ್ನು ಹೊರಹಾಕುತ್ತಿದ್ದವು. ಬದುಕಿನಲ್ಲಿ ಯಾವ ರೀತಿಯದ್ದೆ ಕಷ್ಟಗಳು ಎದುರಾದರೂ ಅವುಗಳಿಂದ ಪಾರಾಗುವ ಜಾಣತನ ಕಲಿಸುತ್ತಿದ್ದವು. ಈ ಸಂದರ್ಭದಲ್ಲಿ ನಮ್ಮ ಕಲಿಕೆ ಸಮೃದ್ಧವಾಗಲು ಶಿಕ್ಷಕರು ಬಳಸುತ್ತಿದ್ದ ಈ ವಿಧಾನಗಳು ರಚನಾತ್ಮಕವಾಗಿದ್ದವು.
0 Comments
|
ಇಲ್ಲಿಯವರೆಗೆ...
October 2023
"
|