ಕನ್ನಡ ಸಾಹಿತ್ಯ ಲೋಕದಲ್ಲಿ ಸಂಶೋಧನೆಯ ಸ್ವರವೊಂದು ಮರೆಯಾಗಿ, ಇದೀಗ ನೂರು ದಿನಗಳು ಕಳೆದಿವೆ. ಕಲಬುರ್ಗಿಯೆಂಬ ಗಂಡೆದೆಯಾ ಗಂಡು ಸಾಹಿತಿಯೊಬ್ಬ ಕನ್ನಡ ಸಾಹಿತ್ಯ ಸಂಶೋಧನಾ ಲೋಕದಿಂದ ಮರೆಯಾಗಿ, ಕನ್ನಡಿಗರ ಸ್ವರವೊಂದು ದೂರವಾಗಿದೆಯೆಂಬ ಕೊರಗು ಎಲ್ಲರಲ್ಲಿಯೂ ಕಾಡುತ್ತಿದೆ. ಸಾಹಿತ್ಯ ಲೋಕದ ದಿಗ್ಗಜನೊಬ್ಬ ದಿವಂಗತನಾಗಿ, ಸುಮಾರು ದಿನಗಳೆ ಗತಿಸಿದರು, ಆಳುವ ಸರಕಾರ ಮಾತ್ರ ಮೌನ ಗೌರವ ಆಚರಿಸುತ್ತಿದೆ. ಸರಕಾರಗಳು ಸುಖ ನಿದ್ರೆಯಲ್ಲಿ ಮಲಗಿದೆ. ಹಲವಾರು ಜನರು ಇದೇ ಸಾವನ್ನು ಸಂಭ್ರಮಿಸಿದರು. ಆ ಸಂಭ್ರಮಪಟ್ಟ ಜೀವಿಗಳಿಗೆ ತಕ್ಕ ಉತ್ತರ ನೀಡಬೇಕಾದದ್ದು ಸರಕಾರಗಳ ಜವಾಬ್ದಾರಿಯಾಗಿದೆ. ಸಾಹಿತಿಗಳ ಸಾವನ್ನು ಸಮರ್ಥಿಸಿಕೊಳ್ಳುವ ಗುಂಪೊಂದಕ್ಕೆ, ಕುಮ್ಮಕ್ಕು ನೀಡುವ ಪ್ರಕರಣ ಇದಾಗಿತ್ತು ಇದೀಗ ಕಲಬುರ್ಗಿಯವರ ವಿರೋಧಿಗಳಿಗೆ ಆಡಿಕೊಳ್ಳುವ ಸ್ಥಿತಿಯನ್ನು ಸರಕಾರ ತಂದೊಡ್ಡಿದೆ.
0 Comments
ಲೋಕದ ಡೊಂಕ ನೀವೇಕೆ ತಿದ್ದುವಿರಿ.
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ. ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ. “ನಾವು ಬದಲಾದರೆ, ನಾಡು ತಾನಾಗಿಯೇ ಬದಲಾಗುತ್ತದೆ.” ಪ್ರಸ್ತುತ ಭಾರತದಲ್ಲಿ, ನಾವು ಎಂಬ ಪದ ಮರೆಯಾಗಿ ನೀವು ಎಂಬ ಪದ ಹೆಚ್ಚಾಗಿ ಬಳಕೆಯಾಗುತ್ತಿದೆ. ಭಾವನಾತ್ಮಕವಾಗಿ ನಾವೆಲ್ಲ ಬೇರೆಯೊಬ್ಬರ ಮೇಲೆ ಗೂಬೆಕೂರಿಸುವ ಕೆಲಸ ಮಾಡುತ್ತಿದ್ದೇವೆ. ಹನ್ನೆರಡನೇಯ ಶತಮಾನದಲ್ಲಿ ಶರಣರೆ ಈ ಮಾತನ್ನು ಹೇಳಿದ್ದಾರೆ. ನಾವೆಲ್ಲ ನೀವು ಸರಿಯಾಗಿ ಎಂದು ಹೇಳುವುದಕ್ಕಿಂತ ನಾವೆಲ್ಲ ಸರಿಯಾದರೆ ನಾಡು ಉಳಿಯುತ್ತದೆ ಎಂಬ ಮಾತನ್ನು ಮರೆಯುತ್ತಿದ್ದೇವೆ. ನಮ್ಮ ಸುತ್ತಮುತ್ತಲಿನ ಅನೇಕ ವಿದ್ಯಮಾನಗಳಿಗೆ ನಾವೆಲ್ಲ ಸ್ಪಂದಿಸುವ ಸಮಯದಲ್ಲಿ ಇದೆಲ್ಲ ಅವರ ಕೆಲಸ ನಮ್ಮದಲ್ಲಾ ಎಂಬ ವಿಷಯ ಮುಂದಿಡುತ್ತೇವೆ. ಇತ್ತಿಚೆಗೆ ದೇಶದಲ್ಲಿ ಎದ್ದಿರುವ ಅನೇಕ ವಿದ್ಯಾಮಾನಗಳನ್ನು ಪರಿಗಣನೆಗೆ ತೆಗೆದುಕೊಂಡು ಒಂದು ಚಿಕ್ಕ ಅವಲೋಕನ ಮಾಡಿದಾಗ ಈ ವಿಷಯ ಹೆಚ್ಚಾಗಿದೆ ಎಂಬ ಸ್ಪಷ್ಟತೆ ಸಿಗುತ್ತದೆ. ಅವಸರದವರ ಮನೆಯಲ್ಲಿ ಅಕ್ಕಿಯಲ್ಲಿ ಕಲ್ಲನ್ನು ಕಾಣದೇ ತಿಂದು ಹಲ್ಲು ಮುರಿದುಕೊಂಡರು ಎಂಬಂತಾಗಿದೆ. ನಾವು ಅನೇಕ ವಿಷಯಗಳಿಗೆ ಅವಸರಕ್ಕೆ ಮೊರೆಹೋಗುತ್ತಿದ್ದೇವೆ. ಪ್ರತಿಕ್ಷಣ ನಡೆಯುವ ವಿದ್ಯಮಾನಗಳಿಗೆ ಸ್ಪಂದಿಸುತ್ತ ನಮ್ಮೊಳಗಿನ ಅದ್ಯಾವುದೊ ಒಂಟಿತನವನ್ನು ಪ್ರದರ್ಶನ ಮಾಡುತ್ತಿದ್ದೇವೆ. ಐಕ್ಯತೆಯ ನಾಡಿನಲ್ಲಿ ಅನೇಕತೆಯ ಬೀಡಿನಲ್ಲಿ ಹಲವು ಕೆಲಸಕ್ಕೆ ಬಾರದ ಚರ್ಚೆಗಳಿಗೆ ಗ್ರಾಸವಾಗುತ್ತಿದ್ದೇವೆ. ಸಧ್ಯ ಭಾರತದಲ್ಲಿ ನಾವೆಲ್ಲ ಏನು ಮಾತನಾಡಿದರೆ, ಏನು ಕೆಲಸ ಮಾಡಿದರೆ ಧೀಡೀರ್ ಪ್ರಚಾರಕ್ಕೆ ಬರುತ್ತೇವೆ ಎಂಬ ನಿಲುವು ನಮ್ಮದಾಗಿದೆ. ವಿಚಿತ್ರವಾದ ಹೇಳಿಕೆ ನೀಡಿದರೆ, ಇನ್ನಾವುದೊ ಧಾರ್ಮಿಕತೆಗೆ ಸಂಬಂಧಪಟ್ಟ ಹೇಳಿಕೆ ನೀಡಿದರೆ ನಾವು ಮುಂಚುಣಿಗೆ ಬರುತ್ತೇವೆ ಎಂಬ ಹುಚ್ಚಾಟಕ್ಕೆ ಬಿದ್ದು ಈ ರೀತಿ ಗೂಬೆಕೂರಿಸುವ ಕೆಲಸದಲ್ಲಿ ನಿರತರಾಗಿದ್ದೇವೆ. |
ಇಲ್ಲಿಯವರೆಗೆ...
October 2023
"
|