ಸಧ್ಯ ಕರ್ನಾಟಕದ ನೂತನ ಶಿಕ್ಷಣ ಸಚಿವರು ಹೊಸ ಚಿಂತನೆಯೊಂದನ್ನು ಹೊರಹಾಕಿದ್ದಾರೆ. ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆ ತರಬಯಸಿದ್ದಾರೆ. ತೆರೆದ ಪುಸ್ತಕ ಪರೀಕ್ಷೆಗಳು ಎಂಬ ಮೌಲ್ಯಮಾಪನ ಪದ್ಧತಿಯ ಕುರಿತು ಒಂದು ಚಿಕ್ಕ ಅನುವಾದ ಮಾಡುವ ಪ್ರಯತ್ನ ಇಲ್ಲಿದೆ.
0 Comments
ಹೈದ್ರಾಬಾದ್ ಕರ್ನಾಟಕದ ಮಹಳೆಯರ ಬದುಕಿನ ಹೋರಾಟದ ಪುಟಗಳಲ್ಲಿ ಖ್ಯಾತ ಹೋರಾಟಗಾರತಿ ಮತ್ತು ಸಾಹಿತಿಯಾಗಿರುವ ಕೆ.ನೀಲಾ ಅವರ ಹೆಸರು ಇತಿಹಾಸದ ಪುಟಗಳಲ್ಲಿ ಉಳಿಯಲಿದೆ. ಸಾರ್ವಜನಿಕರ ಜೀವನದಲ್ಲಿಯೇ ತಮ್ಮ ಬದುಕನ್ನು ಹಾಸುಹೊಕ್ಕು ಮಾಡಿಕೊಂಡಿರುವ ಧೀಮಂತ ಮಹಿಳೆ ನೀಲಾ. ಪ್ರತಿದಿನವೂ ಬಡವರ ಬವಣೆಗಳನ್ನು ಆಲಿಸಿ ಅವುಗಳಿಗೆ ಕಾನೂನಾತ್ಮ ಸಂವಿಧಾತ್ಮಕವಾದ ಸ್ಪಂದನೆ ನೀಡುತ್ತಿರುವ ಏಕೈಕ ತಾಯಿಹೃದಯ ಕೆ.ನೀಲಾ. ದಲಿತ ಪರ ಮತ್ತು ಮಹಿಳಾಪರವಾದ ಧ್ವನಿಯನ್ನು ಕೇಂದ್ರ ಸರಕಾರದವರೆಗೂ ಮುಟ್ಟಿಸುವ ದಿಟ್ಟ ಹೆಣ್ಣುಮಗಳು. ಸಧ್ಯ ಸಾರ್ವಜನಿಕರ ದುಡಿಯುವ ಕೈಗಳಿಗೆ ಉದ್ಯೋಗ ಸೃಷ್ಠಿಯ ದಾರಿ ತೋರುತ್ತಾ ಸರಕಾರದ ಯೋಜನೆಗಳನ್ನು ಸಾಮಾನ್ಯ ಜನರ ಮನೆ ಬಾಗಿಲಿಗೆ ಕೊಂಡ್ಯೂವ ಕೆಲಸ ಮಾಡುತ್ತಿದ್ದಾರೆ. ಕಳೆದಬಾರಿ ಇಡಿ ರಾಜ್ಯದಲ್ಲಿಯೇ ಮಾದರಿ ಕೆಲಸಗಳನ್ನು ಮಾಡಿರುವ ಅವರು ಮಾಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ರಾಜ್ಯಕ್ಕೆ ನಂಬರ್ ಒನ್ ಸ್ಥಾನ ತಂದುಕೊಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ. |
ಇಲ್ಲಿಯವರೆಗೆ...
October 2023
"
|