ಅಂದು “ಅವ್ವ”ನನ್ನು ಅಗೆದ ನೆಲದೊಳಗೆ ಹೂಳುತ್ತಿದ್ದರು. ನಾನು ಚೀರಾಡಿ ಅಳುತ್ತಿದ್ದೆ. ನಮ್ಮ ಸಂಬಂಧಿಕರೆಲ್ಲ ನನಗೆ ಸಂತೈಸುತ್ತಿದ್ದರು. ನನ್ನವ್ವನಿಗೆ ನೆಲದೊಳಗೆ ಹಾಕಬ್ಯಾಡರೊ ಎಂದು ಜೋರಾಗಿ ಚೀರಾಡುತ್ತಾ ಎಲ್ಲರಿಗೆ ಕಲ್ಲು ತೂರಾಡಿ ಹೊಡೆಯುತ್ತಿದ್ದೆ. ಇಷ್ಟೆಲ್ಲ ನಡೆಯುತ್ತಿದ್ದದ್ದು ನಾನು ಆಗ 5ನೇ ತರಗತಿಯಲ್ಲಿ ಓದುತ್ತಿದ್ದೆ. ನನ್ನ ಹೆತ್ತೊಡಲು ನನ್ನಿಂದ ದೂರವಾಗಿತ್ತು. ಅದೇ ರಾತ್ರಿ ಅವ್ವನಿಲ್ಲದ ಸಂಧರ್ಭದೊಳಗೆ ಮೂಡಿಬಂದ ದು:ಖ ದುಮ್ಮಾನದ ನೆನಪೆ ನಾ ಬರೆದ ಮೊದಲ ಅಕ್ಷರಗಳು ಅವು ಏನು ಎಂಬ ಅರಿವಿರಲಿಲ್ಲ, ಆದರೆ ಅಲ್ಲಿ ಅವ್ವನ ಅದಮ್ಯ ಪ್ರೀತಿಯಿತ್ತು, ದು:ಖವಿತ್ತು, ಅವಳು ನನ್ನ ಏಕೆ ತೊರೆದು ಹೋದಳು ಎಂಬ ಕೋಪವಿತ್ತು. ಒಡಲೊಳಗೆ ಅದ್ಯಾವುದೊ ಶಕ್ತಿ ನನ್ನ ದು:ಖಕ್ಕೆ ಅಕ್ಷರ ರೂಪ ಕೊಡುವಂತೆ ಮಾಡಿತು
ಅಂದು “ಅವ್ವ”ನನ್ನು ಅಗೆದ ನೆಲದೊಳಗೆ ಹೂಳುತ್ತಿದ್ದರು. ನಾನು ಚೀರಾಡಿ ಅಳುತ್ತಿದ್ದೆ. ನಮ್ಮ ಸಂಬಂಧಿಕರೆಲ್ಲ ನನಗೆ ಸಂತೈಸುತ್ತಿದ್ದರು. ನನ್ನವ್ವನಿಗೆ ನೆಲದೊಳಗೆ ಹಾಕಬ್ಯಾಡರೊ ಎಂದು ಜೋರಾಗಿ ಚೀರಾಡುತ್ತಾ ಎಲ್ಲರಿಗೆ ಕಲ್ಲು ತೂರಾಡಿ ಹೊಡೆಯುತ್ತಿದ್ದೆ. ಇಷ್ಟೆಲ್ಲ ನಡೆಯುತ್ತಿದ್ದದ್ದು ನಾನು ಆಗ 5ನೇ ತರಗತಿಯಲ್ಲಿ ಓದುತ್ತಿದ್ದೆ. ನನ್ನ ಹೆತ್ತೊಡಲು ನನ್ನಿಂದ ದೂರವಾಗಿತ್ತು. ಅದೇ ರಾತ್ರಿ ಅವ್ವನಿಲ್ಲದ ಸಂಧರ್ಭದೊಳಗೆ ಮೂಡಿಬಂದ ದು:ಖ ದುಮ್ಮಾನದ ನೆನಪೆ ನಾ ಬರೆದ ಮೊದಲ ಅಕ್ಷರಗಳು ಅವು ಏನು ಎಂಬ ಅರಿವಿರಲಿಲ್ಲ, ಆದರೆ ಅಲ್ಲಿ ಅವ್ವನ ಅದಮ್ಯ ಪ್ರೀತಿಯಿತ್ತು, ದು:ಖವಿತ್ತು, ಅವಳು ನನ್ನ ಏಕೆ ತೊರೆದು ಹೋದಳು ಎಂಬ ಕೋಪವಿತ್ತು. ಒಡಲೊಳಗೆ ಅದ್ಯಾವುದೊ ಶಕ್ತಿ ನನ್ನ ದು:ಖಕ್ಕೆ ಅಕ್ಷರ ರೂಪ ಕೊಡುವಂತೆ ಮಾಡಿತು
0 Comments
ಪ್ರಪಂಚದ ಜ್ಞಾನದ ಕಣಜವೆಂದೆ ಖ್ಯಾತಿಯಾಗಿರುವ ಡಾ.ಬಿ.ಆರ್.ಅಂಬೇಡ್ಕರ್. ಪ್ರಪಂಚದಲ್ಲೆ ಬೃಹತ್ ಸಂವಿಧಾನ ಎಂದು ಹೆಸರು ಪಡೆದ ಭಾರತದ ಸಂವಿಧಾನ. ಈ ಬಗ್ಗೆ ತಮ್ಮ ವಿಕೃತ ಮನಸ್ಸಿನಿಂದ ನೋಡುವ ವ್ಯಕ್ತಿಗಳು ಇತಿಹಾಸ ಕಾಲದಿಂದಲೂ ಇದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ಇಂತಹ ವಿಕೃತ ಮನಸ್ಸುಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಸಣ್ಣ ಮನಸ್ಸಿನ ಪ್ರಜೆಗಳ ಸಂಖ್ಯೆ ಇಡಿ ಭಾರತದ ಮಾನ ಹರಾಜ ಹಾಕುವಲ್ಲಿ ಯಶಸ್ವಿಯಾಗುತ್ತಿದೆ. ಯಾರು ಸಂವಿಧಾನವನ್ನು ವಿರೋಧಿಸುತ್ತಾರೆಯಂದರೆ ಅವರೆಲ್ಲ ಬಡವರ ಹೊಟ್ಟೆ ಮೇಲೆ ಕಾಲಿಡುವ ಮನಸ್ಸಿನವರು. ಬಡವರ ಪಾಲಿನ ಬದುಕನ್ನು ಕಸಿದುಕೊಳ್ಳುವ ಹುನ್ನಾರದ ವ್ಯಕ್ತಿಗಳು. ಇದೀಗ ಮನೆಯ ಮಕ್ಕಳೆಲ್ಲ ಶಾಲೆಯ ಕಡೆಗೆ ಮುಖ ಮಾಡಿದ್ದಾರೆ. ಹೊಸ ಬಟ್ಟೆಗಳನ್ನುಟ್ಟು, ಹೊಸ ಹುರುಪಿನಲ್ಲಿ ಓಡುತ್ತಿದ್ದಾರೆ. ಅವರ ಕಣ್ಣುಗಳಲ್ಲಿ ಚೇತನ ಮೂಡಿದೆ. ಶೈಕ್ಷಣಿಕವಾಗಿ ಯಾವುದನ್ನೊ ಸಾಧಿಸಬೇಕು ಎಂಬ ಹಂಬಲನ್ನು ಹೊಂದಿದ್ದಾರೆ. ಶಿಕ್ಷಕರು ಕಲಿಸುವ ವಿಷಯ ತಲೆಯೊಳಗೆ ಇಟ್ಟುಕೊಂಡು ಜಾಣನಾಗಬೇಕು ಎಂಬ ಬಯಕೆಯಿಂದ ಸಾಗಿದ್ದಾರೆ. ಪ್ರಸ್ತುತ ಓಟದ ಬದುಕಿನಲ್ಲಿ ಅತ್ಯಂತ ವೇಗದಲ್ಲಿ ಏನನ್ನೊ ಸಾಧಿಸುವ ಛಲತೊಟ್ಟು ಹೊರಟಿದ್ದಾರೆ. ಹೆಗಲ ಮೇಲೆ ಹೊತ್ತ ಪುಸ್ತಕ ಚೀಲದ ಭಾರದ ಪರಿಗಣಿಸದೆ ಶಾಲೆಯೆಂಬ ದೇವಾಲಯದ ಕಡೆಗೆ ಮುಖ ಮಾಡಿ ಕೈಮುಗಿದು ದಣಿವರಿಯದ ರೈತನ ಹಾಗೆ ಬೆವರ ಸುರಿಸಿ ಓದಿ ದೊಡ್ಡ ವ್ಯಕ್ತಿಯಾಗುವ ದಾರಿಯಲ್ಲಿ ಸಾಗಿದ್ದಾರೆ. ಮನುಷ್ಯನ ಬದುಕನ್ನು ಉಜ್ವಲಗೊಳಿಸುವುವ ಶಕ್ತಿ ಶಿಕ್ಷಣಕ್ಕಿದೆ. ಶಿಕ್ಷಣದಲ್ಲಿ ಗ್ರಂಥಾಲಯವು ತನ್ನದೆ ಆದ ಮಹತ್ವ ಹೊಂದಿದೆ. ಪುಸ್ತಕಗಳು ಹಾಗೂ ಗ್ರಂಥಾಲಯ ಜೀವಂತ ದೇವಾಲಯಗಳು. ಗ್ರಂಥಾಲಯ ಒಂದು ಅಮರಕೋಶವೆಂತಲೂ ಕರೆಯುತ್ತಾರೆ. ಶಿಕ್ಷಣದ ಉದ್ದೇಶ ಇಡೇರುವಲ್ಲಿ ಗ್ರಂಥಾಲಯ ಅವಶ್ಯಕತೆಯಿದೆ. ಪ್ರಾಚೀನ ಕಾಲದಿಂದ ಹಲವರ ಬಾಳಿನಲ್ಲಿ ಶಿಕ್ಷಣ ಮಹತ್ವ ಪಡೆದಿದೆ. ಮನುಷ್ಯ ಜೀವನ ಶಿಕ್ಷಣದಿಂದಲೆ ಹಳಿಮೇಲಿನ ರೈಲಿನಂತೆ ಸುಗಮವಾಗಿ ಸಾಗುವುದು. ಶಿಕ್ಷಣ ಹಾಗೂ ಗ್ರಂಥಾಲಯ ಪ್ರಮುಖ ಉದ್ದೇಶವೊಂದೆ ಆದರೆ ಹರಡುವ ಜ್ಞಾನ ಬೇರೆ ಶಿಕ್ಷಣವನ್ನು ಕ್ರೋಢಿಕರಿಸಿ ಗಮನಿಸಿದರೆ ಇದು ಬೇರೆ ಬೇರೆಯಾಗಿ ಹೊರಬರುತ್ತದೆ. ಅನಾದಿ ಕಾಲದಿಂದಲು ಚಾಲ್ತಿಯಲ್ಲಿರುವ ಶಿಕ್ಷಣ ಪದ್ಧತಿಯಲ್ಲಿ ಒಳನೋಟಗಳು ಬೇರೆ ಇರಬಹುದು ಆದರೆ ಅದರ ಉದ್ದೇಶ ಮಾತ್ರ ಯಾವತ್ತು ಒಂದೆಯಿದೆ. ಶಿಕ್ಷಣ ತಜ್ಞರ ಅಭಿಪ್ರಾಯ ಬೇರೆ ಬೇರೆಯಾಗಿವೆ ಆದರೆ ಅವುಗಳ ಒಟ್ಟಾರೆ ಅರ್ಥ ಒಂದೆ ಎಂಬುವುದು ಗಮನಿಸಬೇಕಾದ ವಿಷಯ. ಶಿಕ್ಷಣ ಹಾಗೂ ಗ್ರಂಥಾಲಯ ಉದ್ದೇಶವೊಂದೆ ಆದರೆ ಅದರ ಫಲಿತಾಂಶಗಳು ಆಯಾ ಶಿಕ್ಷಣ ವ್ಯವಸ್ಥೆಯ ಮೇಲೆ ನಿರ್ಧಾರಿತವಾಗಿದೆ. |
ಇಲ್ಲಿಯವರೆಗೆ...
October 2023
"
|