ಶಿಕ್ಷಣ ಹಾಗೂ ಗ್ರಂಥಾಲಯ ಪ್ರಮುಖ ಉದ್ದೇಶವೊಂದೆ ಆದರೆ ಹರಡುವ ಜ್ಞಾನ ಬೇರೆ ಶಿಕ್ಷಣವನ್ನು ಕ್ರೋಢಿಕರಿಸಿ ಗಮನಿಸಿದರೆ ಇದು ಬೇರೆ ಬೇರೆಯಾಗಿ ಹೊರಬರುತ್ತದೆ. ಅನಾದಿ ಕಾಲದಿಂದಲು ಚಾಲ್ತಿಯಲ್ಲಿರುವ ಶಿಕ್ಷಣ ಪದ್ಧತಿಯಲ್ಲಿ ಒಳನೋಟಗಳು ಬೇರೆ ಇರಬಹುದು ಆದರೆ ಅದರ ಉದ್ದೇಶ ಮಾತ್ರ ಯಾವತ್ತು ಒಂದೆಯಿದೆ. ಶಿಕ್ಷಣ ತಜ್ಞರ ಅಭಿಪ್ರಾಯ ಬೇರೆ ಬೇರೆಯಾಗಿವೆ ಆದರೆ ಅವುಗಳ ಒಟ್ಟಾರೆ ಅರ್ಥ ಒಂದೆ ಎಂಬುವುದು ಗಮನಿಸಬೇಕಾದ ವಿಷಯ. ಶಿಕ್ಷಣ ಹಾಗೂ ಗ್ರಂಥಾಲಯ ಉದ್ದೇಶವೊಂದೆ ಆದರೆ ಅದರ ಫಲಿತಾಂಶಗಳು ಆಯಾ ಶಿಕ್ಷಣ ವ್ಯವಸ್ಥೆಯ ಮೇಲೆ ನಿರ್ಧಾರಿತವಾಗಿದೆ.
ಶಿಕ್ಷಣ ಎಂಬ ಪದವು ಒಂದು ಸಂಕೀರ್ಣ ಪದವಾಗಿದೆ. ಈ ಪದಕ್ಕೆ ವಿಷಾಲವಾದ ಅರ್ಥ ಮತ್ತು ವ್ಯಾಪ್ತಿಗಳಿವೆ. ಶಿಕ್ಷಣವೆಂದರೆ ವೈಯಕ್ತಿಕ ಬೆಳವಣಿಗೆ ಮತ್ತು ಸಾಮಾಜಿಕ ವಿಕಾಸ ಎಂದು ಎಲ್ಲರಿಂದಲೂ ಸಮ್ಮತವಾಗಿದೆ. ಆ ಶಿಕ್ಷಣವು ಒಂದು ಅರ್ಥದಲ್ಲಿ ನೋಡಿದರೆ, ಮಾನವನ ಉಗಮದಷ್ಟೇ ಪುರಾತನವೆಂದು ತೋರಿಸಬಹುದು. ನಾಗರಿಕತೆಗಳ, ಏಳು ಬೀಳುಗಳ ಜೊತೆಯಲ್ಲಿ ಶಿಕ್ಷಣವೂ ಸಾಕಷ್ಟು ಬದಲಾವಣೆಗಳನ್ನು ಪಡೆದುಕೊಳುತ್ತಾ ವಿಕಾಸ ಹೊಂದುತ್ತಾ ಇಂದಿನ ಪ್ರಸ್ತುತ ಶಿಕ್ಷಣ ಪದ್ಧತಿಗೆ ಬಂದು ತಲುಪಿದೆ. ಹಲವಾರು ಬದಲಾವಣೆಯ ಮೂಲಕ ಶಿಕ್ಷಣ ಇಂದಿನ ಸ್ಥಿತಿ ತಲುಪಿದೆ ಇದೂ ಕೂಡ ಶಾಶ್ವತವಲ್ಲ ಎಂಬ ಸತ್ಯ ಮಾತ್ರ ಮರೆಯುವಂತಿಲ್ಲ ಆದರೆ ಅದರೊಳಗಿನ ಒಳಹರವು ಮಾತ್ರ ಯಾವಾಗಲೂ ಒಂದೆ ಎಂಬ ಅಂಶ ಮಾತ್ರ ಗಮನಿಸಬೇಕಾಗಿದೆ.
ವಿದ್ಯಾರ್ಥಿಗಳ ವೈಶಿಷ್ಟತೆ ಮತ್ತು ಬೇಕು-ಬೇಡಿಕೆಗಳನ್ನು ಕಂದುಹಿಡಿದು ಅವುಗಳನ್ನು ವಿಶ್ಲೇಷÀಣೆ ಮಾಡುವುದು. ವರ್ಗಕೋಣೆಯ ವಿಶಿಷ್ಟ ಬೋಧನಾ ಉದ್ದೇಶಗಳನ್ನು ಅರಿತು ಅವುಗಳನ್ನು ವಿಶಿಷ್ಟ ವರ್ತನಾ ಬದಲಾವಣೆಯೊಂದಿಗೆ ಅರ್ಥೈಸಿಕೊಳ್ಳುವಂತೆ ಮಾಡುವುದು. ಬೋಧಿಸಲಿರುವ ವಿಷಯ ವಸ್ತುವನ್ನು ವ್ಯವಸ್ಥಿತವಾಗಿ ಸಂಘಟಿಸಿ ಅವುಗಳನ್ನು ವ್ಯವಸ್ಥಿತವಾಗಿ ಅನುಕ್ರಮಣಿಕಾ ಕ್ರಮದಲ್ಲಿ ಭೋಧಿಸುವಂತೆ ಮಾಡುವುದು ವರ್ಗ ಭೋದನೆ ಮತ್ತು ಕಲಿಕೆಗೆ ಅವಶ್ಯಕವಿರುವ ಸಾಧನ ಸಲಕರಣೆಗಳನ್ನು ರೂಪಿಸಿ ಅಭೀವೃದ್ಧಿಪಡಿಸುವುದು. ಶಿಕ್ಷಣದ ಪ್ರಮುಖ ಉದ್ದೇಶವಾಗಿದೆ.
ಶಿಕ್ಷಣದ ಮುಖ್ಯ ಧ್ಯೇಯಗಳನ್ನು ಸಮಾಜದ ಶೈಕ್ಷಣಿಕ ಅವಶ್ಯಕತೆಗಳನ್ನು ಬೇಕುಬೇಡಿಕೆಗಳನ್ನು ಸಮಂಜಸವಾಗಿ ಪೂರೈಸಿಕೊಳ್ಳುಲು ಪೂರಕವಾಗಿದೆ. ಪ್ರಸ್ತುತ ಸಮಯಕ್ಕೆ ತಕ್ಕಂತೆ ಪಠ್ಯಕ್ರಮ ರಚನೆ ಅದರಲ್ಲಿ ವೈಜ್ಞಾನಿಕ ವಿಷುಯಗಳ ಸಮಯೋಚಿತ ಜೋಡಣೆ, ಪ್ರಾಯೋಗಿಕ ಅನುಭವ ಇವುಗಳನ್ನು ಅತ್ಯಂತ ವಸ್ತುನಿಷ್ಠವಾಗಿ ಪೂರೈಸಿಕ್ಕೊಳ್ಳುವಂತೆ ಮಾಡುವುದು. ಮಾನವತಾ ಹಾಗೂ ಸ್ವಾಭಾವಿಕ ಸಂಪನ್ಮೂಲಗಳ ಸಮರ್ಪಕ ಬಳಕೆ ತನ್ಮೂಲಕ ಶೈಕ್ಷಣಿಕ ವಿಶಿಷ್ಟ್ ಧ್ಯೇಯಗಳ ಸಾಧಿಸುವಿಕೆಯ ಯುಕ್ತಿಯನ್ನು ಕಂಡುಕೊಳ್ಳುವಲ್ಲಿ ಸಹಾಯವಾಗಲಿದೆ. ಶಿಕ್ಷಣದ ಸಾರ್ವತ್ರೀಕರಣಕ್ಕೆ ಪೂರಕವಾದ ವಿಧಾನಗಳನ್ನು ರೂಪಿಸಿ ಸಮಾನತೆ, ಏಕತೆಗಳನ್ನು ಬಿಂಬಿಸುವಂತೆ ಮಾಡುವುದು. ಶಿಕ್ಷಣವನ್ನು ಜೀವನಾಧಾರವನ್ನಾಗಿ ಮಾಡಿ ಸಾಮಾಜಿಕ ರಂಗದಲ್ಲಿ ಬರಬಹುದಾದ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು.
" ಶಿಕ್ಷಣವು ನಮ್ಮೆಲ್ಲ ಬಂದಗಳನ್ನು ಕಿತ್ತೊಗೆದು, ಪರಮ ಶಾಂತಿ, ಸುಖ, ಸೌರ್ಹಾದತೆಗಳನ್ನು ನೀಡುವ ಸಾಧನ.ಶಿಕ್ಷಣವು ನೀಡುವ ಸಂಪತ್ತೆಂದರೆ, ಆಂತರಿಕ ಬೆಳಕು, ಶಕ್ತಿಯೆಂದರೆ ಅದಮ್ಯ ಚೇತನ ತುಂಬಿದ ಶ್ರೇಷ್ಠತೆಯ ಪ್ರೀತಿ, ಸತ್ಯದ ಸರ್ವಾದಾ ಅಭಿವ್ಯಕ್ತಿ" ಎಂದು ರವೀಂದ್ರನಾಥ್ ಟಾಗೋರ್ ಹೇಳುತ್ತಾರೆ.
`` ಮಗುವು ಮಾನವನಾಗಿ, ನಾಗರಿಕನಾಗಿ ಎಲ್ಲರೊಡನೆ ಸ್ನೇಹ, ಘನತೆ ಮತ್ತು ಗೌರವದಿಂದ ವರ್ತಿಸುವಂತೆ ಮಾಡುವುದೇ ಶಿಕ್ಷಣ'' ಡಾ.ರಾಧಾಕೃಷ್ಣಾನ್ ಅಭಿಪ್ರಾಯ ಪಡುತ್ತಾರೆ.
ಗ್ರಂಥಾಲಯದ ಉದ್ದೇಶವು ಶಾಲೆಯ ಪಠ್ಯ ಮತ್ತು ಪ್ರಪಂಚ ಎರಡನ್ನು ಹೇಗೆ ಒಂದು ಕೋಣೆಯೊಳಗೆ ನಿರ್ದಿಷ್ಠ ವ್ಯಕ್ತಿಯೊಂದಿಗೆ ಕಲಿಸುತ್ತದೆಯೊ ಅದರಂತೆಯೆ ಗ್ರಂಥಾಲಯವು ಕೂಡ ಶಿಕ್ಷಣ ಉದ್ದೇಶವನ್ನು ಇಡೇರಿಸುವಲ್ಲಿ ಒಂದು ಚಿಕ್ಕ ಕೋಣೆಯಾಗಿ ಅಲ್ಲಿನ ಪುಸ್ತಕಗಳೆ ಒಬ್ಬ ವ್ಯಕ್ತಿಯಾಗಿ ಶಕ್ತಿಯಾಗಿ ಬೆಳೆಯಲು ಸಹಕರಿಸುತ್ತವೆ. ಜ್ಞಾನ ಕಟ್ಟಿಕೊಳ್ಳುವುದರ ಜೊತೆಗೆ ಬದುಕಿನ ದಾರಿಗಳನ್ನು ಹುಡುಕಾಡಲು ಅವಕಾಶ ಕೊಡುತ್ತದೆ. ಒಂದು ಸಮುದಾಯದೊಂದಿಗೆ ವ್ಯವಹರಿಸುವ ಜ್ಞಾನ ಪ್ರಾಥಮಿಕ ಹಂತದಲ್ಲಿಯೆ ನೀಡುವ ಶಕ್ತಿ ಗ್ರಂಥಾಲಯಕ್ಕಿದೆ. ಅಪಾರ ಜ್ಞಾನದ ಭಂಡಾರವೆ ಆಗಿರುವ ಗ್ರಂಥಾಲಯವು ಬದುಕಿನ ಶಾಂತಿ ನೆಮ್ಮದಿಯನ್ನು ಕಟ್ಟಿಕೊಡುವ ಕೆಲಸ ಮಾಡುತ್ತದೆ.
ಪಠ್ಯ ಹಾಗೂ ಪಠ್ಯೇತರ ವಿಷಯಗಳನ್ನು ಏಕಕಾಲಕ್ಕೆ ಬೋದನೆ ಮಾಡುವ ಸ್ಥಳ ಗ್ರಂಥಾಲಯ. ಸಹಪಠ್ಯವು ಒಳಗೊಳ್ಳುವ ಏಕೈಕ ಸಾಧನೆ ಈ ಗ್ರಂಥಾಲಯ ಶಿಕ್ಷಣ ಎರಡು ಪ್ರಮುಖ ಕಣ್ಣುಗಳಲ್ಲಿ ಗ್ರಂಥಾಲಯ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಶಿಕ್ಷಣದ ಉದ್ದೇಶ ಮತ್ತು ಗ್ರಂಥಾಲಯದ ಉದ್ದೇಶ ಬಹುತೇಕ ಒಂದೆಯಾಗಿವೆ. ಯಾವುದಾದರೂ ಒಂದರಲ್ಲಿ ಎಲ್ಲವನ್ನು ಪಡೆಯಲು ಹೆಣಗಾಡುವುದಕ್ಕಿಂತ ಎರಡರಲ್ಲಿಯೂ ಒಳ್ಳೆಯ ಅಂಶಗಳನ್ನು ಅಳವಡಿಸಿಕೊಂಡು ಅರ್ಥೈಸಿಕೊಳ್ಳುವ ಕ್ರಮ ಜಾರಿಗೊಳಿಸಿಕೊಂಡು ಜ್ಞಾನ ಪಡೆಯಬೇಕಾಗುತ್ತದೆ.
ಶಾಲಾ ಪಠ್ಯದಲ್ಲಿ ಇಲ್ಲದ ಅನೇಕ ವಿಷಯಗಳು ಗ್ರಂಥಾಲಯ ಕೊಡುತ್ತವೆ. ನೇರವಾಗಿ ಪಠ್ಯ ಕೊಡದ ಅನೇಕ ಸವಲತ್ತುಗಳನ್ನು ಜೀವಾನುಭವಗಳನ್ನು ಗ್ರಂಥಾಲಯ ಕೊಡಬಲ್ಲದು. ಪಠ್ಯ ತನ್ನ ಇತಿಮಿತಿಯೊಳಗೆ ಜ್ಞಾನ ಪಸರಿಸಿದರೆ ಗ್ರಂಥಾಲಯ ಎಲ್ಲೆಗಳನ್ನು ಮೀರಿ ತನ್ನ ಜ್ಞಾನ ವಿಸ್ತರಿಸಲು ಅವಕಾಶಗಳನ್ನು ಒದಗಿಸಿಕೊಡುತ್ತದೆ. ಈ ಶಿಕ್ಷಣ ಮತ್ತು ಗ್ರಂಥಾಲಯದ ಉದ್ದೇಶಗಳು ಒಂದೆ ಆಗಿದ್ದು ಜ್ಞಾನ ಕೊಡುವ ದಾರಿಗಳು ಬೇರೆ ಬೇರೆಯಾಗಿವೆ ಅಷ್ಟೆ. ಜ್ಞಾನ ಯಾವ ಮೂಲದಿಂದ ಬಂದರೇನು ಅದರ ಲಾಭ ಅಥವಾ ಫಲಿತಾಂಶ ಬದುಕಿಗೆ ಹತ್ತಿರವಿದ್ದರೆ ಸ್ವೀಕರಿಸಬೇಕು ಎಂಬ ಜಾಣರ ವಾಣಿಯಂತೆ ನಾವು ಗ್ರಂಥಾಲಯ ಮತ್ತು ಶಿಕ್ಷಣವನ್ನು ಅವುಗಳ ಉದ್ದೇಶವನ್ನು ತುಲನಾತ್ಮಕವಾಗಿ ಪರಿಗಣಿಸಿ ಅದನ್ನು ಅನುಸರಿಸುವ ಪ್ರಯತ್ನ ಮಾಡಬೇಕು ಎಂಬುವುದಷ್ಟೆ ನನ್ನ ಆಶೆಯ.
ಶಿಕ್ಷಣದಲ್ಲಿ ಗ್ರಂಥಾಲಯವು ಹಾಳಿನೊಳಗೆ ಹೂತು ಕೂತಿರುವ ತುಪ್ಪದಂತೆ ಅದನ್ನು ಘಹನವಾಗಿ ತಿಳಿದುಕೊಂಡಾಗ ಮಾತ್ರ ಅದರ ಮಹತ್ವ ತಿಳಿಯುತ್ತದೆ. ಕೆಲವೊಮ್ಮೆ ನಾವೆಲ್ಲ ಗ್ರಂಥಾಲಯ ಮತ್ತು ಶಿಕ್ಷಣ ಬೇರೆ ಬೇರೆ ಎಂಬ ವಿಶ್ಲೇಷಣೆಯೊಳಗೆ ಮುಳಗಿ ಸಮಯ ಹಾಳು ಮಾಡುತ್ತೇವೆ. ವಾಸ್ತವದಲ್ಲಿ ಇವರೆಡು ಮನುಷ್ಯನ ಜೀವನವನ್ನು ಸರಳಿಕರಣ ಮಾಡುವ ಕೆಲಸ ಮಾಡುತ್ತವೆ. ಸುಮ್ಮನಿರಬೇಕಾದ ಹೃದಯ ಇಲ್ಲಿ ಬಡೆದುಕೊಳ್ಳುವ ಹಾಗೆ ಗ್ರಂಥಾಲಯ ಮಾಡುತ್ತದೆ. ವೈಭವಿಕರಣದ ಬದುಕನ್ನು ಒರೆಗಚ್ಚಿ ನೋಡುವ ಶಕ್ತಿ ಗ್ರಂಥಾಲಯ ತಿಳಿಸಿಕೊಡುತ್ತದೆ. ಶಿಕ್ಷಣವು ನಮ್ಮೊಳಗಿನ ಹುದುಗಿರುವ ಶಕ್ತಿಯ ಪರಿಚಯ ಮಾಡಿಕೊಡುತ್ತದೆ. ಪ್ರಾಪಂಚಿಕ ಜ್ಞಾನದೊಂದಿಗೆ ನಮ್ಮನ್ನು ಹೊಂದಾಣಿಕೆ ಮಾಡುವ ಕೆಲಸ ಶಿಕ್ಷಣ ಮಾಡುತ್ತದೆ. ಅದಕ್ಕೆ ಪೂರಕವಾಗಿದ್ದು ಶಿಕ್ಷಣದ ಗುರಿ ಉದ್ದೇಶ ಇಡೇರಿಸುವ ಕೆಲಸ ಗ್ರಂಥಾಲಯ ಮಾಡುತ್ತದೆ.
ಕೊನೆಯ ತುತ್ತು: ಶಿಕ್ಷಣ ಹಾಗೂ ಗ್ರಂಥಾಲಯ ಉದ್ದೇಶ ಒಂದೆಯಾಗಿದ್ದು ಅದನ್ನು ಅನುಷ್ಠಾನಕ್ಕೆ ತರುವ ಪ್ರಸ್ತುತ ಶಿಕ್ಷಣ ವ್ಯವಸ್ಥೆಯ ಮೇಲೆ ನಿರ್ಧಾರವಾಗಿದೆ. ನಮ್ಮ ಶಾಲೆಗಳಲ್ಲಿ ಕಿಜೋರಿ ಒಳಗೆ ಹೂತು ಕುಳಿತಿರುವ ಗ್ರಂಥಾಲಯವನ್ನು ಹೊರತೆಗೆದು ನಮ್ಮ ಶಾಲೆಯ ಮಕ್ಕಳಿಗೆ ನೀಡಿ ಬೇಕಾದದ್ದು ಇಂದಿನ ಅಗತ್ಯವಾಗಿದೆ.