ಮೊನ್ನೆ ಸಂಜೆಯ ಸಮಯ ಫೇಸ್ ಬುಕ್ ಇಣುಕಿದೆ, ಮೊದಲಿಗೆ ಸಿಕ್ಕಿದ್ದು ಲಕ್ಷಣ ಹೂಗಾರವರ ಸ್ಟೇಟಸ್ ಇಂದು ಅವರು ಕೇಂದ್ರದ ಮಾಜಿ ರೈಲ್ವೆ ಮಂತ್ರಿಯಾದ ಶ್ರೀ ಮಲ್ಲಿಕಾರ್ಜುನ ಖರ್ಗೆಜಿಯವರನ್ನು ಸಂದರ್ಶಿಸಲಿದ್ದಾರೆ ಎಂಬುವುದು ತಿಳಿಯಿತು. ಅದನ್ನು ಓದಿ ಖುಷಿಯು ಆಯಿತು. ಇವರು ಸಂದರ್ಶನ ಕೊಡುವುದೇ ಅಪರೂಪ, ಅಲ್ಲದೆ ಸುವರ್ಣನ್ಯೂಸ್ ಪ್ರಕಟ ಮಾಡುತ್ತಿದೆಯೆಂದರೆ ನೋಡಲೇಬೇಕು ಎನ್ನುವ ವಿಚಾರ ತಲೆಯಲ್ಲಿ ಹೊಳೆಯಿತು. ಹಾಗೆ ಸಂಜೆ 7 ಗಂಟೆಗೆ ಟಿವಿ ಆನ್ ಮಾಡಿದೆ ಸತತ ಒಂದು ಗಂಟೆ ನಡೆದ ಸಂದರ್ಶನ ಆ ಮೇರು ವ್ಯಕ್ತಿತ್ವದ ಮನುಷ್ಯನ ಮಾತುಗಳು ನಿಜಕ್ಕೂ ಮನಸ್ಸಿನೊಳಗೆ ನಾಟಿದವು. ಅವರ ಜಾಣತನದ ಮಾತುಗಳು ರಾಜಕೀಯಕ್ಕೆ ಹೇಳಿ ಮಾಡಿಸಿದ ವ್ಯಕ್ತಿಯೆನ್ನುವ ಭಾವನೆ ಮೂಡಿಸಿದವು. ರಾಜಕಾರಣ ಮಾಡಿದರೆ ಖರ್ಗೆಜಿಯಂತೆ ಮಾಡಬೇಕು ಎನಿಸಿತು. ಆ ಭಾವನೆಯ ಅಕ್ಷರ ರೂಪ ಇಲ್ಲಿದೆ.
0 Comments
“ಜೈ ಭಾರತ ಜನನೀಯ ತನುಜಾತೆ ಜಯ ಹೇ ಕರ್ನಾಟಕ ಮಾತೆ” “ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುವುದು” ಹೀಗೆ ಹಲವು ಮಾತುಗಳು ಅಂದಿನ ಹಿರಿಯ ಸಾಹಿತಿಗಳು ನಮಗೆ ನೀಡಿದರು. ಅವರ ಆ ಮಾತುಗಳು ನಮಗೆ ಎಂದೆಂದಿಗೂ ಪ್ರೇರಕ ಶಕ್ತಿ ನಮ್ಮ ನಾಡಿನ ಬಗ್ಗೆ ನಮಗಿರುವ ಕಾಳಜಿ ನಮ್ಮ ಮಾತಿನಲ್ಲಿದೆ ಎಂದರೆ ತಪ್ಪಾಗದು.
ಆಕಾಶದ ನಕ್ಷತ್ರಗಳಂತೆ, ಹೊಳೆಯುವ ಕಂಗಳಲ್ಲಿ ಹೊಸ ಹೊಸ ಹೊಂಬೆಳಕ ಹೊತ್ತು ನಡೆಯುವ ಚೇತನಗಳಂತೆ, ಈ ಚೇತನಗಳು ಇಂದು ಸಮುದಾಯದ ಕೆಂಗಣ್ಣಿಗೆ ಗುರಿಯಾಗಿ ಅತ್ಯಂತ ಚಿಕ್ಕ ವಯಸ್ಸಿನಲ್ಲೆ ಬಾಲ್ಯವಿವಾಹವೆಂಬ ಭೂತಕ್ಕೆ ಸಿಲುಕಿ ತಮ್ಮ ಅಮೂಲ್ಯ ಬದುಕಿಗೆ ಕೊಳ್ಳಿ ಕೊಡುವ ಕೆಲಸ ನಡೆದಿದೆ. ಬಾಲ್ಯವಿವಾಹವೆಂಬ ಪೆಡಂಭೂತ ಇಂದು ಹಳ್ಳಿ ಹಳ್ಳಿಗಳಲ್ಲಿ ಸದ್ದಿಲ್ಲದೆ ಒಡಮೂಡಿ ಸಾವಿರ ಸಾವಿರ ಮಕ್ಕಳ ಬದುಕು ನಾಶ ಮಾಡುತ್ತಿದೆ. ಮಕ್ಕಳ ಈ ವೇದನೆಗೆ ಬಿಡುಗಡೆಯಿಲ್ಲವೆ? ಎಂಬ ಪ್ರಶ್ನೆ ಮಕ್ಕಳ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತಿದೆ. ಬಿಚ್ಚಿ ಹೇಳಲಾಗದ ಸಂಕಷ್ಟವೊಂದು ಮಕ್ಕಳ ಮನಸ್ಸಿನಲ್ಲಿದೆ. ಈ ಬಾಲ್ಯವಿವಾಹ ಎಂದರೇನು ಅದರಿಂದಾಗುವ ಒಂದಿಷ್ಟು ದುಷ್ಪರಿಣಾಮದ ಬಗ್ಗೆ ತಿಳಿದರೆ ಅದರ ಘೋರ ಅನುಭವ ಎದೆ ಝೆಲ್ ಎನಿಸುತ್ತದೆ.
|
ಇಲ್ಲಿಯವರೆಗೆ...
October 2023
"
|