ಈ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ದಶಕಗಳೇ ಕಳೆದಿವೆ. ಭಾರತ ಬ್ರೀಟಿಷರಿಂದ ಮುಕ್ತವಾಗಿ, ಸಂವಿಧಾನಿಕ ಭಾರತ ನಿರ್ಮಾಣವಾಗಿದೆ. ಪ್ರಾಚೀನ ಭಾರತದಿಂದ ಪ್ರಸ್ತುತ ಭಾರತದವರೆಗೂ ಇಲ್ಲಿನ ಜನರಿಗೆ ಕಾಡುತ್ತಿರುವುದು ಈ ಜಾತಿಯೆಂಬ ಪಡೆಂಭೂತ. ಈ ಭೂತವನ್ನು ಹೊಡೆದೂಡಿಸಲು ಪ್ರತಿ ಜಾತಿಯಲ್ಲಿ ಅಷ್ಟೇ ಅಲ್ಲ ಪ್ರತಿ ದಶಕದಲ್ಲಿಯೂ ಒಬ್ಬೊಬ್ಬ ಮಾಹಾನ್ ವ್ಯಕ್ತಿಯ ಜನನವಾಯಿತು. ಅವರ ಬದುಕಿನ ಕೊನೆಯವರೆಗೂ ಹೋರಾಟ ಚೀರಾಟವೂ ಆಯಿತು ಆದರೆ ಜಾತಿಪದ್ಧತಿ ಹಾಗೂ ಜಾತಿ ನಿಂದನೆಗಳು ಮಾತ್ರ ಇನ್ನು ಜೀವಂತವಾಗಿ ಮನುಷ್ಯ ಜಾತಿಯನ್ನು ಮೂಲೆ ಹಾಕುತ್ತಿದೆ.
0 Comments
“ಗುರು ಬ್ರಹ್ಮ ಗುರು ವಿಷ್ಣು” ಎಂಬ ಮಾತೀಗ ಮರೆಯಾಗುತ್ತಿದೆ. ಶಿಕ್ಷಕರು ಹಲವು ಗೊಂದಲಗಳ ಚೆಕ್ರವ್ಯೂಹದೊಳಗೆ ಮುಳಗುವ ಸ್ಥಿತಿಯಲ್ಲಿದ್ದಾರೆ. ಅನಾದಿಕಾಲದಿಂದಲೂ ಮೇಲತ್ವದ ತತ್ವವನ್ನು ಬೋದಿಸುತ್ತ, ಸಮಾಜವನ್ನು ಉನ್ನತ ಮಟ್ಟಕ್ಕೆ ಕರೆದೊಯ್ಯೂವ ಇವರು ಇಂದು ಚಿಂತಾಜನಕರಾಗಿದ್ದಾರೆ. ಸಮಾಜ ತಿದ್ದುವ ಗುರುಗಳು ಇದೀಗ ಯಾರನ್ನು ತಿದ್ದಬೇಕು ಯಾರನ್ನು ಮೆದ್ದಬೇಕು ಎಂಬ ಗೊಂದಲದೊಳಗೆ ಮನೆ ಮಾಡಿಕೊಂಡು ಬದುಕುವಂತಾಗಿದೆ. ಮಕ್ಕಳಿಗೆ ಕಣ್ಣಂಜಿಕೆಯೂ ಹಾಕದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಾನುನೂಗಳ ಕಟ್ಟಳೆಯೊಳಗೆ ಮೆಟ್ಟಿ ನಿಲ್ಲುವ ಧೈರ್ಯಯಿಲ್ಲದಾಗಿ ಮಟ್ಟತನಕ್ಕೆ ಮಾರು ಹೋಗುತ್ತಿದ್ದಾರೆ. ಇನ್ನು ನಮ್ಮ ಶಿಕ್ಷಕಿಯರ ಬಗ್ಗೆ ಅಭಿವೃದ್ಧಿ ಕ್ಷೇತ್ರ ಮಾತನಾಡುವುದು ತುಂಬಾ ವಿರಳ. ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಶಿಕ್ಷಕಿಯರು ತಮಗಾಗುವ ನೋವು ನಲಿವುಗಳನ್ನು ಯಾರ ಮುಂದೆಯೂ ಹಂಚಿಕೊಳ್ಳದೇ ಒಳಗೆ ಕೊರಗುವಂತಹ ಸ್ಥಿತಿ ನಿರ್ಮಾಣವಾಗಿದೆ.
|
ಇಲ್ಲಿಯವರೆಗೆ...
October 2023
"
|