ಒಬ್ಬ ನಿಷ್ಠಾವಂತ ತನ್ನ ಸೈದ್ಧಾಂತಿಕ ನೆಲೆಗಟ್ಟಿನ ಮೇಲೆ ಅಭಿವ್ಯಕ್ತಿ ಸ್ವಾತಂತ್ರದ ಮೂಲಕ ಸಂಶೋಧನೆಯ ಮಾತನ್ನು ಪುರಾವೆಗಳ ಸಮೇತ ಮಂಡಿಸುವುದೇ ತಪ್ಪೇ? ಅಭಿವ್ಯಕ್ತಿ ಸ್ವಾತಂತ್ರವನ್ನು ಅಪಹರಣ ಮಾಡುವಷ್ಟು ಕೆಟ್ಟು ಕುಲಗೆಟ್ಟಿದೆಯಾ ನಮ್ಮ ಸಮಾಜ, ಸೈದ್ಧಾಂತಿಕ ವಿಚಾರಗಳತ್ತ ಅವರ ಗಮನವಿದ್ದರೆ ವ್ಯಕ್ತಿಯ ಶಕ್ತಿಗಾದರು ಬೆಲೆ ಕೊಡಬಾರದೆ? ಸಮಾಜದಲ್ಲಿಯ ಗೌರವಯುತ ವ್ಯಕ್ತಿಯನ್ನು ಹೀಗೆ ಹತ್ಯೆ ಮಾಡುವುದು ಅಥವಾ ಮಾಡಿಸುವುದು ತರವೆ? ಎಂಬ ಪ್ರಶ್ನೆ ಇದೀಗ ಭಾರತದ ಸಾಹಿತ್ಯ ವಲಯದಲ್ಲಿ ಕೇಳಿಬರುತ್ತಿದೆ.
ಇನ್ನು ಸಾವಿನ ಮೆನೆಯಲ್ಲಿಯೂ ಸೋಗಲಾಡಿತನ ಮೆರೆಯುವ ಜನರನ್ನು ನಮ್ಮ ಭಾರತ ಹೊತ್ತಿದೆಯೆಂಬ ವಿಚಾರ ಮಾಡಿದಾಗ ಬಹುದು:ಖವಾಗುತ್ತದೆ. ನಮ್ಮ ಪಕ್ಕದ ಮನೆಯಲ್ಲಿ ಸತ್ತರೆ ನಮಗೇನು ಎಂಬ ನಿಲುವಿನವರು ಮಾತ್ರ ಈ ರೀತಿಯಾಗಿ ಮಾತನಾಡಲು ಸಾಧ್ಯವಾಗುತ್ತದೆ. ನಿಜವಾದ ಮಾನವೀಯ ಮೌಲ್ಯವುಳ್ಳರಾರು ಸಾವಿನ ಮೆನೆಯಲ್ಲಿ ಸುಲಿದ ಬಾಳೆಹಣ್ಣು ತಿನ್ನಲಾರರು ಹಾಗೆ ತಿಂದವರು ನಿಜವಾದ ಮಾನರೇ ಅಲ್ಲ.
ಸೈದ್ಧಾಂತಿಕ ಹಾಗೂ ಸಂಶೋಧನೆಯ ಬೆನ್ನು ಹತ್ತಿ ಸಾಮಾಜಿಕವಾಗಿ ಸಮಬಾಳು, ಬಸವತತ್ವದ ಹಾದಿಯಲ್ಲಿ ಡಾಂಬಿಕತೆ ಬೇಡಯೆಂಬ ವಾದ ಮಾಡಿರುವ ವ್ಯಕ್ತಿ ಇಂದು ಇನ್ನೊಂದು ಸಮಾಜದ ಕೆಂಗಣ್ಣಿಗೆ ಗುರಿಯಾಗಿರುವುದಂತು ಸತ್ಯ. ಸಾಹಿತ್ಯ ಹಾಗೂ ಸಂಶೋಧನಾ ವಲಯದಲ್ಲಿ ತುಂಬಲಾರದಂತಹ ನಷ್ಟವಾಗರುವುದಂತು ಅಷ್ಟೆ ಸತ್ಯ. ರಾಮ ಕೃಷ್ಣನ ಕ್ರಿಸ್ತನ ಹೆಸರು ಹೇಳುವ ಇವರು ಅವರ ದಾರಿಯನ್ನೇ ಮರೆತು ವರ್ತಿಸುತ್ತಿದ್ದಾರೆ. ಸಾಮಾಜಿಕ ಅಸಮಾನತೆಯ ವಿರುದ್ಧ ಹೋರಾಡುವ ಮನಸ್ಸುಗಳ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ. ಸಮಾಜದಲ್ಲಿ ಜನರ ದಾರಿ ತಪ್ಪಿಸುವ ಕೆಲಸದಲ್ಲಿ ಪಟ್ಟಬದ್ರರಾಗಿ ನಿಂತಿದ್ದಾರೆ. ವ್ಯಕ್ತಿಯ ವ್ಯಕ್ತಿತ್ವಕ್ಕೆ ಕಪ್ಪು ಚುಕ್ಕೆ ತರುವ ಕೆಲಸದಲ್ಲಿ ನಿರತರಾಗಿದ್ದಾರೆ.
ಈ ನಾಡಿನಲ್ಲಿ ಜಾತಿಯ ಬೀಜ ಅದೆಷ್ಟು ಬಿಗಿಯಾಗಿ ಊರಿದೆಯೆಂದರೆ ಅದು ತನ್ನ ಬೇರು ಪ್ರತಿ ಹಂತದಲ್ಲಿಯೂ ಬಲಗೊಳಿಸುತ್ತಿದೆ. ಬೆಳೆಯುತ್ತಿರುವ ಮಕ್ಕಳಿಂದ ಹಿಡಿದು ಯುವಕರ ತನಕ ತನ್ನ ಅಟ್ಟಹಾಸ ಮೆರೆಯುತ್ತಿದೆ. ಸಾಂಸ್ಕøತಿಕ ಹಾಗೂ ಸಾಹಿತ್ಯಕ ವಲಯದಲ್ಲಿ ಜಾತಿಯೊಂದು ಸಂಚಲನ ಮೂಡಿಸಿ ಬೆಳೆಯು ಜನಾಂಗದ ಮೇಲೆ ಘೋರ ಪರಿಣಾಮ ಬೀರುತ್ತಿದೆ. ಇತ್ತಿಚಿನ ಹಲವು ವಿದ್ಯಮಾನಗಳು ಬೆಳೆಯುತ್ತಿರುವ ಯುವಕರು ಹೇಗೆ ವರ್ತಿಸಬೇಕು ಎಂಬ ಸಮಸ್ಯೆ ಒಡ್ಡುತ್ತಿದೆ. ಸಮಾಜದಲ್ಲಿ ಬದುಕುವುದು ಒಂದು ಬಹುದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ. ಬೆಳೆಯುವ ಮಕ್ಕಳೆಲ್ಲ ಯಾವುದು ಸತ್ಯ ಯಾವುದು ಮಿಥ್ಯ ಎಂಬ ಗೊಂದಲದಲ್ಲಿ ಅಡ್ಡದಾರಿ ಕೆಟ್ಟದಾರಿ ಹಿಡಿಯುವ ಪರಿಸ್ಥಿತಿ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಎಳೆಯರೆಲ್ಲ ಬಹು ಜಾಗುರುಕತೆಯಿಂದ ಹೆಜ್ಜೆಯಿಡಬೇಕಾದ ಅಗತ್ಯವಿದೆ ಅಲ್ಲವೆ?
ಕೆ.ಎಂ.ವಿಶ್ವನಾಥ ಮರತೂರ.
ಯುವ ಬರಹಗಾರರು. 9686714046