ಭಾರತದ ಇದೀಗ ಮತ್ತೊಂದು ಸ್ವಾತಂತ್ರ್ಯಾ ದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿದ್ದು, ಉತ್ಸಾಹದ ಚಿಲುಮೆಯಾಗಿದೆ. ಎಲ್ಲಿ ನೋಡಿದರು, ಭಾರತದ ತ್ರೀವರ್ಣ ಧ್ವಜಗಳು ರಾರಾಜಿಸುತ್ತಿವೆ. ಇತಿಹಾಸದ ನೆನಪುಗಳನ್ನು ಮಾಡಿಕೊಳ್ಳುವ ಕಾಲ ಕೂಡಿಬಂದಿದೆ. ಈ ಸ್ವಾತಂತ್ರ್ಯ ದೊರೆಯಬೇಕಾದರೆ ರಕ್ತದ ಕೋಡಿ ಹರೆಸಿದ, ಅದೆಷ್ಟು ಜೀವಗಳು ನೆನಪಿಗೆ ಬರುತ್ತವೆ. ತಮ್ಮ ಸ್ವಯಂ ಹಿತವನ್ನು ಮರೆತು, ದೇಶದ ಹಿತವನ್ನು ಕಾಯ್ದ ಆ ಮಾಹಾನ್ ವ್ಯಕ್ತಿಗಳಿಗೆ ಒಂದು ಸಲ್ಯೂಟ್ ಹೊಡೆಯಲೇಬೇಕು. ಪ್ರಸ್ತುತ ಭಾರತದಲ್ಲಿ ಜನ,ದನ ಮತ್ತು ಸ್ವಾತಂತ್ರ್ಯದ ಚರ್ಚೆ ಬಿಸಿಬಿಸಿಯಾಗಿ ನಡೆಯುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ದೊರೆತ ಎಪ್ಪತ್ತು ವರ್ಷ ಗತಿಸಿದವು. ಸ್ವಾತಂತ್ರ ಪೂರ್ವದಲ್ಲಿ ಹುಟ್ಟಿದ ತಾರತಮ್ಯ, ಮೇಲು ಕೀಳೆಂಬ ಅಸ್ಪ್ರಷ್ಯತೆಯ ಯುದ್ಧ ಮಾತ್ರ ಇನ್ನು ಹಸಿರಾಗಿಯೇ ಉಳಿದಿದೆ. ದನಗಳನ್ನು ರಕ್ಷಿಸುವ ಸಲುವಾಗಿ ಜನರನ್ನು ಬಲಿಕೊಡಲಾಗುತ್ತಿದೆ. ಪ್ರಾಣಿಗಳನ್ನು ರಕ್ಷಿಸಬೇಕೆಂಬ ಗೊಡ್ಡು ಸಂಪ್ರದಾಯದೊಳಗೆ, ಮನುಷ್ಯರನ್ನು ಬಲಿಕೊಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ದೇಶ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದೆ.
0 Comments
|
ಇಲ್ಲಿಯವರೆಗೆ...
October 2023
"
|