ಮಾಧ್ಯಮ ರಂಗಕ್ಕೀಗ ಮೀಸಲಾತಿ ಬೇಕೆ? ಎಂಬ ರಂಗೇರಿದೆ. ಮೀಸಲಾತಿಯೆಂಬ ಮಹೊನ್ನತವಾದ ಮನಸ್ಸುಗಳು ತಮ್ಮ ರೂಪದೊಳಗೆ ಹೊರಬೀಳುತ್ತಿವೆ. ಮಾಧ್ಯಮವೆಂಬ ಮಾಯಾರಂಗ ಇದೀಗ ಮೊದಲಿನಂತೆ ಸತ್ಯ,ನಿಷ್ಠೆ,ಕಾಯಕ ಪ್ರಜ್ಞೆ ಉಳಿದಿಲ್ಲ ಎಂಬ ಕಟುಸತ್ಯ ನಾವು ಮರೆಯಬಾರದು. ಇತಿಹಾಸದ ಕಾಲದಲ್ಲಿ ಪತ್ರಿಕೆ, ಪತ್ರಕರ್ತರೂ ಎಂದರೆ ಅದಕ್ಕೆ ಅವರದೇ ಆದ ಗೌರವವಿತ್ತು. ಅವರನ್ನು ಕಂಡಕೂಡಲೇ ಅದೇನೊ ರೋಮಾಂಚನವಾಗುತಿತ್ತು ನೀವು ಈಗಲೂ ನಿವೃತ್ತಿ ಹೊಂದಿರಿರುವ ಅತ್ಯಂತ ಹಿರಿಯ ಖ್ಯಾತ ಪತ್ರಕರ್ತರನ್ನೋ ಸಂಪಾದಕರನ್ನೊ ಸಂಪರ್ಕ ಮಾಡಿನೋಡಿ ಆ ಅನುಭವ ತಾನಾಗಿಯೇ ಆಗುತ್ತದೆ ಆದರೆ ಇದೀಗ ಯಾವುದೇ ಒಬ್ಬ ವ್ಯಕ್ತಿ ನೀವು ಭೇಟಿ ಮಾಡಿ ಅವರು ಸ್ವಯಂ ಒಂದು ಪತ್ರಿಕೆಯ ಸಂಪಾದಕರೆ ಆಗಿರುತ್ತಾರೆ. “ಹೌದು ಸರ್ ನಾನು ಸಂಪಾದಕ ನನ್ನದೇ ಒಂದು ಪತ್ರಿಕೆಯಿದೆ ಎನ್ನುತ್ತಾರೆ” ಅವರು ಹೇಳಿದ ನಂತರವೇ ಆ ಪತ್ರಿಕೆಯ ಪರಿಚಯ ನಮಗಾಗುತ್ತದೆ.
0 Comments
|
ಇಲ್ಲಿಯವರೆಗೆ...
October 2023
"
|