ಭಾರತದಲ್ಲಿ ಒಂದು ಕ್ಷಣ ಸಿಡಿಲು ಮಿಂಡು ಬಂದು ತನ್ನ ಝಳಪನ್ನು ಪ್ರಜೆಗಳ ಕಣ್ಣಿಗೆ ಹಾಕಿ ಮರೆಯಾದಂತಹ ಅನುಭವ ಸಧ್ಯ ಮೋದಿ ಸರಕಾರ ಮಾಡುತ್ತಿದೆ. ಅಧಿಕಾರ ಹಿಡಿಯುವಾಗ ಇದ್ದ ಉತ್ಸಾಹ ಇದೀಗ ಬಹುತೇಕ ಕಡಿಮೆಯಾಗಿದೆ. ಅಧಿಕಾರ ಹಿಡಿಯುವಾಗ ಇದ್ದ ಸಿಟ್ಟು ಶಕ್ತಿ ಯಕ್ತಿ ಎಲ್ಲವು ಮೌನವಾಗಿಯೇ ಭಾರತೀಯರನ್ನ ಮನಸ್ಸಿನ ಮೇಲೆ ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎಂಬ ನಿಲುವನ್ನು ಮೂಡಿಸುತ್ತಿದೆ. ಮೇರೆ ಪ್ಯಾರೆ ದೇಸ ವಾಸಿಯೋ ಹಮ್ ಇಸ್ ದೇಶಕೊ ಐಸಾ ಬನಾಯೇಂಗೆ ಕಿ ದುನಿಯಾ ದೇಖತೆ ಹರೆಗಾ ಎಂದಿದ್ದ ಪ್ರಧಾನಿ ಇವತ್ತಿನ ಹಲವು ಮನ್ ಕಿ ಬಾತ್ ನಲ್ಲಿ ಜೋಶ್ ಕಳೆದುಕೊಂಡು ಮಾತನಾಡುತ್ತಿರುವುದು ಕಾಣಬರುತ್ತಿದೆ. ರಾಜಕೀಯವೆಂಬ ದಾಳದೊಳಗೆ ಸಿಕ್ಕ ಮೀನು ಯಾವುದನ್ನು ಆರಿಸಿಕೊಳ್ಳಲಿ ಯಾವುದನ್ನು ಬಿಡಲಿ, ಹೇಗೆ ಇರಲಿ ಎಂಬ ಮೋದಿಯೆಂಬ ಮೋಡಿಗಾರನಲ್ಲಿ ಮೂಡಿದ್ದು ಅಕ್ಷರಸಹ ಸತ್ಯವಾಗಿದೆ.
ಭಾರತದಲ್ಲಿ ಒಂದು ಕ್ಷಣ ಸಿಡಿಲು ಮಿಂಡು ಬಂದು ತನ್ನ ಝಳಪನ್ನು ಪ್ರಜೆಗಳ ಕಣ್ಣಿಗೆ ಹಾಕಿ ಮರೆಯಾದಂತಹ ಅನುಭವ ಸಧ್ಯ ಮೋದಿ ಸರಕಾರ ಮಾಡುತ್ತಿದೆ. ಅಧಿಕಾರ ಹಿಡಿಯುವಾಗ ಇದ್ದ ಉತ್ಸಾಹ ಇದೀಗ ಬಹುತೇಕ ಕಡಿಮೆಯಾಗಿದೆ. ಅಧಿಕಾರ ಹಿಡಿಯುವಾಗ ಇದ್ದ ಸಿಟ್ಟು ಶಕ್ತಿ ಯಕ್ತಿ ಎಲ್ಲವು ಮೌನವಾಗಿಯೇ ಭಾರತೀಯರನ್ನ ಮನಸ್ಸಿನ ಮೇಲೆ ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎಂಬ ನಿಲುವನ್ನು ಮೂಡಿಸುತ್ತಿದೆ. ಮೇರೆ ಪ್ಯಾರೆ ದೇಸ ವಾಸಿಯೋ ಹಮ್ ಇಸ್ ದೇಶಕೊ ಐಸಾ ಬನಾಯೇಂಗೆ ಕಿ ದುನಿಯಾ ದೇಖತೆ ಹರೆಗಾ ಎಂದಿದ್ದ ಪ್ರಧಾನಿ ಇವತ್ತಿನ ಹಲವು ಮನ್ ಕಿ ಬಾತ್ ನಲ್ಲಿ ಜೋಶ್ ಕಳೆದುಕೊಂಡು ಮಾತನಾಡುತ್ತಿರುವುದು ಕಾಣಬರುತ್ತಿದೆ. ರಾಜಕೀಯವೆಂಬ ದಾಳದೊಳಗೆ ಸಿಕ್ಕ ಮೀನು ಯಾವುದನ್ನು ಆರಿಸಿಕೊಳ್ಳಲಿ ಯಾವುದನ್ನು ಬಿಡಲಿ, ಹೇಗೆ ಇರಲಿ ಎಂಬ ಮೋದಿಯೆಂಬ ಮೋಡಿಗಾರನಲ್ಲಿ ಮೂಡಿದ್ದು ಅಕ್ಷರಸಹ ಸತ್ಯವಾಗಿದೆ.
0 Comments
ಇವನಾರವ, ಇವನಾರವ ಎಂದೆನಿಸದಿರಯ್ಯ ಇವ ನಮ್ಮ ಇವ ನಮ್ಮವ ಎಂದೆನಿಸಯ್ಯ ಕೂಡಲಸಂಗಮದೇವ ನಿಮ್ಮ ಮನೆಯ ಮಗನೆಂದೆನಿಸಯ್ಯ. ಹನ್ನೆರಡನೆ ಶತಮಾನದಲ್ಲಿ ಬಸವಣ್ಣ ಜಾತಿಯಿಲ್ಲ ಶರಣಂಗೆ ಎಂದರು. ಎಲ್ಲರನ್ನು ಮನೆಯ ಮಕ್ಕಳಂತೆ ಕಾಣಿರಿ ಎಂದರು. ಸರ್ವಜ್ಞ ಕೂಡ ಜಾತಿ ಬೇಧ ಮಾಡಬೇಡಿ ಎಂದರು. ಕುಲ ಕುಲವೆಂದು ಬಡೆದಾಡುವಿರಿ ನಿಮ್ಮ ಕುಲದ ನೆಲೆಯನ್ನು ಬಲ್ಲಿರಾ ಎಂದು ದಾಸರೊಬ್ಬರು ಕೇಳಿದರು. ಹೀಗೆ ಅನೇಕ ಮಾಹಾನ್ ವ್ಯಕ್ತಿಗಳು ಜಾತಿಯ ಬಗ್ಗೆ ಅದನ್ನು ಹೊಡೆದೂಡಿಸುವ ಬಗ್ಗೆ ಮನುಷ್ಯರಿಗೆ ಹೇಳಿದ್ದಾರೆ ಜೊತೆಗೆ ಅವರು ಅದನ್ನು ಅನುಸರಿಸಿ ತೋರಿಸಿದ್ದಾರೆ. ಅವರ ಬದುಕಿನುದ್ದಕ್ಕೂ ಈ ಸಮಾಜದ ಜಾತಿಪದ್ಧತಿಯನ್ನು ಹೋಗಲಾಡಿಸಲು ಪ್ರಯತ್ನಪಟ್ಟರು. ಆದಿಕವಿ ಪಂಪನು “ಮನುಷ್ಯ ಜಾತಿ ತಾನೊಂದೇ ವಲಂ” ಎಂದಿದ್ದಾರೆ. ಭಾರತ ಬೆಳೆಯುತ್ತಿದೆ. ಅಭಿವೃದ್ಧಿಯ ಪಥದತ್ತ ಧಾಪುಗಾಲಿಡುತ್ತದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪಟ್ಟಿಯಲ್ಲಿ ಗುರುತಿಸಿಕೊಳ್ಳುವಲ್ಲಿ ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಡುತ್ತಿದೆ. ತಂತ್ರಜ್ಞಾನ ಹಾಗೂ ಮಾನವ ಅಭಿವೃದ್ಧಿಯಲ್ಲಿಯೂ ಏರುಗತಿಯನ್ನು ಕಾಪಾಡಿಕೊಳ್ಳುತ್ತಿದೆ. ನಮ್ಮ ದೇಶದ ಶಿಕ್ಷಣ ಪದ್ಧತಿಯೂ ನಿರಂತರವಾಗಿ ಬದಲಾವಣೆಗೊಳ್ಳುತ್ತ ತನ್ನ ಗುಣಾತ್ಮಕತೆಯನ್ನು ಹೆಚ್ಚಿಸಿಕೊಳ್ಳುತ್ತ ಪರಿಣಾಮಕಾರಿಯಾಗಿ ಮುನ್ನುಗ್ಗುತ್ತಿದೆ. ಪ್ರಪಂಚವೇ ಕಣ್ಣರಳಿಸಿ ನೋಡುವ ಹಾಗೆ ಮಾಡುತ್ತಿದೆ. ಶಿಕ್ಷಣದಲ್ಲಿ ಗುಣಾತ್ಮಕತೆಯಾದರೆ ದೇಶವು ಅಭಿವೃದ್ಧಿಯಾಗುತ್ತದೆ. ಶೈಕ್ಷಣಿಕ ಕ್ಷೇತ್ರ ಬಹುದೊಡ್ಡ ವಿಸ್ತಾರತೆ ಹೊಂದಿರುವುದರಿಂದ ವೇಗವಾಗಿ ಬೆಳವಣಿಗೆ ಅಸಾಧ್ಯವಾಗುತ್ತಿದೆ. ಭಾರತದಲ್ಲಿ ಬಾಲ್ಯ ವಿವಾಹವೆಂಬ ಭೂತವು ಮನೆ ಮಾಡಿದೆ. ಎಳೆಯ ಕಂದಮ್ಮಗಳ ಬಾಳಿನಲ್ಲಿ ಬಿರುಗಾಳಿಯೆಬ್ಬಿಸಿದೆ. ಭಾರತದ ಹಲವು ರಾಜ್ಯಗಳಲ್ಲಿ ಈ ಬಾಲ್ಯವಿವಾಹ ತನ್ನ ಹೆಡೆಯೆತ್ತಿ ಚಿಕ್ಕ ಚಿಕ್ಕ ಮಕ್ಕಳ ಬಾಳನ್ನು ಬೂದಿ ಮಾಡುತ್ತಿದೆ. ಈ ಸಾಮಾಜಿಕ ಅನಿಷ್ಠ ಪದ್ಧತಿಗೆ ನಾವೆಲ್ಲರೂ ಕಾರಣರಾಗುತ್ತೇವೆ. ಈ ಸಮಾಜದ ಪ್ರತಿಯೊಬ್ಬ ವ್ಯಕ್ತಿಗಳು ಈ ಸಾಮಾಜಿಕ ಅನಿಷ್ಠ ಪದ್ಧತಿ ಹೋಗಲಾಡಿಸಲು ಶ್ರಮಿಸಬೇಕಿದೆ. ಭಾರತೀಯ ಸಮಾಜದಲ್ಲಿ ಬಾಲ್ಯವಿವಾಹ ಪದ್ಧತಿಯು ಒಂದು ಸಾಮಾಜಿಕ ಸಂಗತಿಯಾಗಿದೆ. ಈ ಪದ್ಧತಿಯಲ್ಲಿ ಚಿಕ್ಕವಯಸ್ಸಿನ ಹುಡುಗಿಯರಿಗೆ ಸಾಮಾನ್ಯವಾಗಿ 15 ವಯಸ್ಸಿಗಿಂತ ಕೆಳಗಿನ ಹೆಣ್ಣು ಮಕ್ಕಳಿಗೆ ವಯಸ್ಸಾದ ಪುರುಷರೊಂದಿಗೆ ಮದುವೆ ಮಾಡುತ್ತಾರೆ. ಎರಡನೇ ವಿಧದ ಪದ್ಧತಿಯೇನೆಂದರೆ; ತಂದೆತಾಯಿಗಳು ಬಾಲ್ಯದಲ್ಲಿಯೇ ಗಂಡು ಮತ್ತು ಹೆಣ್ಣು ಶಿಶುವನ್ನು ಭವಿಷ್ಯದಲ್ಲಿ ಬಾಲ್ಯವಿವಾಹ ಮಾಡಿಸುವಂತೆ ಆಣೆಮಾಡಿರುತ್ತಾರೆ. ಭಾರತದಂತಹ ಪುಣ್ಯಭೂಮಿಯಲ್ಲಿ, ಯುವಶಕ್ತಿಯೆಂದರೆ ನೆನಪಾಗುವುದು “ಸ್ವಾಮಿ ವಿವೇಕಾನಂದರು”. ಈ ಯುವಚೇತನ ಹುಟ್ಟಿದ್ದು ಭಾರತ ದೇಶದಲ್ಲಿಯೆಂಬ ಹೆಮ್ಮೆ ನಮ್ಮದು. ಅವರ ಭಾರತದಲ್ಲಿ ಹುಟ್ಟಿರುವ ಯುವಕರನ್ನು ಭಾರತದ ಪ್ರತಿ ಕ್ಷೇತ್ರದಲ್ಲಿ ತೊಡಗಿಸಬೇಕಿದೆ. ಯುವಕರಲ್ಲಿಯ ಬಿಸಿ ರಕ್ತವನ್ನು ಈ ದೇಶದ ರಕ್ಷಣೆ ಹಾಗೂ ಬೆಳವಣಿಗೆಯಲ್ಲಿ ಬಳಕೆಮಾಡಿಕೊಳ್ಳುವ ಅವಶ್ಯಕತೆಯಿದೆ. “ಬಿಸಿ ನೆತ್ತರು ಉಕ್ಕು ಹರೆಯುವ ಮುನ್ನ ಕಟ್ಟುವೇವು ನಾವು ಹೊಸ ನಾಡೊಂದನ್ನು” ಎನ್ನುವ ಹಾಡಿನಂತೆ ನಮ್ಮ ಯುವಕರ ಸೇವೆ ಈ ದೇಶಕ್ಕೆ ಅತ್ಯಂತ ಅವಶ್ಯಕತೆಯಿದೆ. |
ಇಲ್ಲಿಯವರೆಗೆ...
October 2023
"
|