ಸಂತೋಷದ ವಿಷಯವೇನೆಂದರೆ ವಿಶ್ವದಲ್ಲೇ ಭಾರತ ಅತಿ ಹೆಚ್ಚು ಯುವಜನಾಂಗವನ್ನು ಹೊಂದಿದೆ. ಈ ರಾಷ್ಟ್ರ ಅತ್ಯಂತ ಯುವಕನಾಗಿದೆ. ಈ ದೇಶದಲ್ಲಿ 10ರಿಂದ 24 ವರ್ಷದೊಳಗಿನ ಬರೋಬ್ಬರಿ 35.6 ಕೋಟಿ ಯುವಕರು ವಾಸಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ವರದಿ ಮಾಡಿದೆ. ಈ ವರದಿಯಿಂದ ನಮ್ಮ ದೇಶವು ಎಷ್ಟು ಯಂಗ್ ಆಗಿದೆ ಎಂಬ ಮಾಹಿತಿ ಅರ್ಥವಾಗುತ್ತದೆ.
ಭಾರತದ ಜನಸಂಖ್ಯೆಯ ಪೈಕಿ ಶೇ. 28ರಷ್ಟು ಜನರು ಯುವಕರೇ ತುಂಬಿದ್ದಾರೆ. ದೇಶದ ಆರ್ಥಿಕ ಪ್ರಗತಿಯಲ್ಲಿ ಯುವಕರು ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಹೆಚ್ಚಿನ ಯುವಕರನ್ನು ಹೊಂದಿರುವ ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಅವರ ಶಿಕ್ಷಣ ಹಾಗೂ ಆರೋಗ್ಯಕ್ಕೆ ಹೆಚ್ಚಿನ ಹೂಡಿಕೆ ಮಾಡಿದರೆ, ಆರ್ಥಿಕ ಏಳಿಗೆಯನ್ನು ಕಾಣುತ್ತವೆ ಎಂದು ವರದಿ ತಿಳಿಸಿದೆ.
ಇಲ್ಲಿ ಹೆಣ್ಣು ಗಂಡೆಂಬ ಬೇಧ-ಬಾವ ಅರೆಯದೇ ಎಲ್ಲರೂ ಸಮಾನರು ಎಂಬ ಭಾವವಿದೆ. ಎಲ್ಲರ ಜೀವ ದೇಶದ ಅಭಿವೃದ್ದಿಯೆತ್ತಯಿದೆ. ಇಲ್ಲಿ 10-24 ವರ್ಷದ ವಯೋಮಾನದ 180 ಕೋಟಿ ಯುವಕರು ವಿಶ್ವದಲ್ಲಿದ್ದಾರೆ. ಆ ಪೈಕಿ 10ರಲ್ಲಿ 9 ಮಂದಿ ಯುವಕರು ಬಡ ದೇಶಗಳಲ್ಲಿ ಇದ್ದಾರೆ. ಯುವಕರ ದೇಶಗಳು ಭಾರತ 35.6 ಕೋಟಿ ಇದೆ ಎಂಬ ವರದಿ ನಿಜಕ್ಕೂ ಹೆಮ್ಮೆ ತರುತ್ತದೆ.
“ಏಳಿ ಎದ್ದೇಳಿ ಯುವಕರೆ ಗುರಿ ಮುಟ್ಟುವತನಕ ನಿಲ್ಲದಿರಿ” ಇದು ವಿವೇಕವಾಣಿಯಾಗಿದೆ. ಈ ಪವಿತ್ರ ಭೂಮಿಯಲ್ಲಿ ಹುಟ್ಟಿದ ಯುವಕರೆಲ್ಲ ಈ ನೆಲದ ಬಗ್ಗೆ ಅಭಿಮಾನವಿರಬೇಕು. ಈ ಮಣ್ಣಿಗೆ ನಾವೆಲ್ಲ ಋಣಿಯಾಗಿರಬೇಕು. “ದೇಶ ನನಗೇನು ಮಾಡಿದೆ ಎನ್ನುವುದಕ್ಕಿಂತ, ದೇಶಕ್ಕಾಗಿ ನಾನೇನು ಮಾಡಿದೆ” ಎಂದು ಎಲ್ಲರೂ ಯೋಚಿಸಬೇಕು. ಪ್ರಸ್ತುತ ಭಾರತದಲ್ಲಿ ತಲೆಯೆತ್ತಿರುವ ಯುವಕರ ಹಲವಾರು ಸಮಸ್ಯೆಗಳಿಗೆ ಯುವಕರಿಂದಲೇ ಪರಿಹಾರ ಹುಡುಕುವ ಪ್ರಯತ್ನಗಳು ಆಗಬೇಕಿದೆ.
ಜೈ ಭಾರತಾಂಬೆಯ ಮಕ್ಕಳೆಲ್ಲ ಅವಳ ಸೇವೆಯಲ್ಲಿ ದೇಹ ಸವೆಸಬೇಕಿದೆ. ಯುವಶಕ್ತಿಯ ಸಂಪನ್ಮೂಲವನ್ನು ಈ ದೇಶ ಸೇವೆಯಲ್ಲಿ ವ್ಯಯ ಮಾಡಬೇಕಿದೆ. ಭಾರತ ದೇಶವೆಂಬ ಸುಂದರ ಮನೆಯನ್ನು, ಯುವಶಕ್ತಿಯೆಂಬ ಆಲೋಚನೆಯಿಂದ ಕಟ್ಟಬೇಕಿದೆ. ಆತ್ಮವಿಶ್ವಾಸವೆಂಬ ನೀರುಣಿಸಿ, ಪ್ರೀತಿ ಬಾಂಧವ್ಯದ ಸಂಬಂಧಗಳೊಂದಿಗೆ ನಾವೆಲ್ಲರೂ ಒಂದೇ ಭಾರತ ಮಾತೆಯ ಮ್ಕಕಳೆಂದು ಸಮಬಾಳು ನಡೆಸಬೇಕಿದೆ. ಭಾರತದ ಯುವಶಕ್ತಿಯೇ ಒಂದಾಗಿ ಬನ್ನಿ ದೇಶ ಸೇವೆಗಾಗಿ.
-ಕೆ.ಎಂ.ವಿಶ್ವನಾಥ ಮರತೂರ.