ಅಂದು ರಾಜ್ಯದಲ್ಲಿ ಬಿಜೆಪಿಯ ಚಹರೆಯೆ ಮುಚ್ಚಿ ಹೋಗಿತ್ತು , ಮತ್ತೆ ಈ ಜನ್ಮದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ಬರಿ ಕನಸು ಎಂಬ ಮಾತು ಅಲೆದಾಡುತ್ತಿತ್ತು , ಯಾರಿಗೆ ಕೇಳಿದರು ಅವರಿಗೆ ಅಧಿಕಾರ ಸಿಗಲಾರದು ಎಂಬ ಕೂಗು ಕೇಳಿ ಬರುತ್ತಿತ್ತು , ಅದಕ್ಕೆ ಕಾರಣಗಳು ಹಲವಾರು ಇರಬಹುದು ಆದರೆ ಇಂತಹ ಕಠಿಣ ಸ್ಥಿತಿಯಲ್ಲು ಒಬ್ಬ ವ್ಯಕ್ತಿ ಪಣತೊಟ್ಟು ನಿಲ್ಲುವ, ಛಲತೊಟ್ಟು ಅಧಿಕಾರಕ್ಕೆ ತರುವ ಕೆಲಸ ಮಾಡಿದ , ಇನ್ನೆಂದು ಈ ಪಕ್ಷ ಮುಂದೆ ಬರಲು ಸಾದ್ಯವೆ ಇಲ್ಲ ಎನ್ನುವ ಸ್ಥಿತಿಯಲ್ಲಿ ಈ ವ್ಯಕ್ತಿ ತನ್ನ ಎಲ್ಲಾ ವಯಕ್ತಿಕ ಕೆಲಸಗಳಿಗೆ ಒಂದಿಷ್ಟು ದಿನ ಬ್ರೆಕ್ ಹಾಕಿ ಪಕ್ಷ ಅಧಿಕಾರಕ್ಕೆ ಬರಲೇಬೇಕು ಎನ್ನುವ ಹಠದಿಂದ ಕೆಳಮಟ್ಟದಿಂದ ಪಕ್ಷ ಕಟ್ಟುವ ಕೆಲಸ ಮಾಡಿದ್ದು ಆ ವ್ಯಕ್ತಿಯೆ.
0 Comments
ನಮ್ಮ ಭಾರತ ಬಹು ಭವ್ಯವನ್ನು ಮೆರೆಯುವ ದೇಶ, ಪ್ರಪಂಚದಲ್ಲೆ ಉತ್ತಮವಾದ ಇತಿಹಾಸ ಹೊಂದಿರುವ ದೇಶ ಅನೇಕ ಅದ್ಭುತಗಳಿಗೆ ಹೆಸರಾದ ದೇಶ , ರಾಜಕೀಯದಲ್ಲಿ ಈಡಿ ಪ್ರಪಂಚವೆ ಕಣ್ಣರಳಿಸಿ ನೋಡುವಂತೆ ಇರುವ ದೇಶ , ಇಂದಿನ ರಾಜಕೀಯ ಏಕೊ ಬೇಸರ ಮೂಡಿಸುತ್ತಿದೆ. ಏಕೆಂದರೆ ಎಲ್ಲವು ಗಿಮಿಕ್ ಬರಿ ಜಾಹಿರಾತು ಜೀವನ ಜಾಹಿರಾತಿನಲ್ಲಿ ರಾಜಕೀಯ ನೈಜವಾಗಿ ಜನರ ಮುಟ್ಟು ಕೆಲಸಗಳು ಆಗುತ್ತಿಲ್ಲ ಎಂಬುವುದು ಭಾರತೀಯರ ಪಾಲಿಗೆ ಕಹಿಸತ್ಯ. ಜೈ ಭಾರತ ಜನನೀಯ ತನುಜಾತೆ ಜಯ ಹೇ ಕರ್ನಾಟಕ ಮಾತೆ ಎಂದು ಕರ್ನಾಟಕವನ್ನು ಕವಿ ಕುವೆಂಪು ಮನಸಾರೆ ಹಾಡಿದ್ದಾರೆ ನಮ್ಮ ಕರ್ನಾಟಕ ಸದ್ಯ 30 ಜಿಲ್ಲೆಗಳ ರಾಜ್ಯ ಉತ್ತಮ ನಾಡು ನುಡಿ ಹೊಂದಿರುವ ರಾಜ್ಯ ಒಂದೊಂದು ಜಿಲ್ಲೆಯು ಒಂದೊಂದು ಇತಿಹಾಸ ತೋರಿಸಿಕೊಡುವ ತಾಣಗಳು ಒಂದೊಂದು ವಿಶೇಷ ಹೊಂದಿರುವ ಬೀಡುಗಳು. ಅವುಗಳಲ್ಲಿ ನಾನು ಜನಿಸಿದ ಸುಂದರ ಗೂಡಿನ ಬಗ್ಗೆ ಬರೆಯಲು ಅತ್ಯಂತ ಹರ್ಷವೆನಿಸುತ್ತದೆ. ಅದೇ ಶರಣರ ನಾಡು ಕಲ್ಯಾಣ ಚಾಲುಕ್ಯರು ಆಳಿದ ಬೀಡು ಅದುವೆ ಗುಲಾಬಿಯಂತಹ ಗುಲಬರ್ಗಾ ನಾಡು .
ಈ ಭೂಮಿಯಲ್ಲಿ ಯಾವುದು ಶಾಶ್ವತವಲ್ಲ, ಎಲ್ಲವು ಒಂದು ದಿನ ನಶಿಸಿ ಹೋಗುತ್ತದೆ. ಅದರಲ್ಲಿ ಉಳಿವುದೊಂದೆ ಜೀವಾತ್ಮ ಅದನ್ನು ಸದಾ ಸಂತೋಷವಾಗಿಡುವ ಏಕೈಕ ಅಸ್ತ್ರವೆಂದರೆ ಅದೇ ಆಧ್ಯಾತ್ಮ ಸಂಸಾರದ ಈ ಸಾಗರದಲ್ಲಿ ತಾಪತ್ರೆಯಗಳು ವೇದನೆ ನೋವು,ಜಿಗುಪ್ಸೆ, ಹತಾಷೆ, ಸಂತೋಷ,ಇವೆಲ್ಲ ತಪ್ಪಿದಲ್ಲಾ, ಎಲ್ಲವು ನಮ್ಮನ್ನು ತಿಂದು ಹಾಕುವುದು ಸದಾ ನಮ್ಮ ಮನಸ್ಸು ಮತ್ತು ಆತ್ಮಗಳಿಗೆ ಚಿಂತನೆಗೆ ಹಚ್ಚುವುದು ನಿಂತಲ್ಲಿ ನಿಲ್ಲದೆ. ಕೂತಲ್ಲಿ ಕೂಡದೆ ಹೋಗುವುದು ಅತ್ತಿಂದ ಈತ್ತ ಮಂಗದಂತೆ ಜಿಗಿದಾಡುವದು ನಾವು ವಿನಾಕಾರಣ ಕೋಪಗೊಳ್ಳುವುದು ಮತ್ತೊಬ್ಬರ ಮೇಲೆ ಹಾಯಿಹರಿಯುವದು ಸುಮ್ಮನೆ ಜಗಳ ಮಾಡುವದು ಹೀಗೆ ಅನೇಕ ರೀತಿಯ ವಿಚಿತ್ರ ರೋಗಗಳಿಗೆ ತುತ್ತಾಗುತ್ತೇವೆ
ಸುಖದ ಜೀವನ ಈ ದೈವಕ್ಕೆ ಸಿಗಬೇಕಾದರೆ , ನಮ್ಮ ವಿಚಾರಗಳು ಸರಿಯಾಗಿ ಸೂಕ್ತವಾಗಿ ಹೊರಹೊಮ್ಮಬೇಕಾದರೆ ಈ ಆಧ್ಯಾತ್ಮದಲ್ಲಿ ಕೆಲವು ವಿಚಾರಗಳು ನಮ್ಮ ಮುಂದೆ ಇವೆ ಅವುಗಳನ್ನು ಸರಿಯಾಗಿ ಸಂದರ್ಭಕ್ಕೆ ತಕ್ಕಂತೆ ಅನುಸರಿಸಿದರೆ ಅವುಗಳ ಪಾಲನೆ ಉತ್ತಮ ರೀತಿಯಲ್ಲಿ ಮಾಡಿದರೆ ನಮ್ಮ ಮನಸ್ಸು ಜೀವನ ಎಲ್ಲವು ಸಂತೋಷ ನೆಮ್ಮದಿಯಿಂದ ಹೊರಹೊಮ್ಮುವುದರಲ್ಲಿ ಸಂದೇಹವೆ ಇಲ್ಲ, ಈ ಆಧ್ಯಾತ್ಮಿಕ ಚಿಂತನೆಯಲ್ಲಿ ಕೆಲವು ವಿಷಯಗಳು ಉತ್ತಮವಾಗಿದ್ದು ಅವುಗಳನ್ನು ಚಾಚು ತಪ್ಪದೆ ಪಾಲಿಸಿದರೆ ಉತ್ತಮ ಬದುಕಿನ ಕ್ಷಣಗಳು ನಮ್ಮದಾಗುತ್ತವೆ .
|
ಇಲ್ಲಿಯವರೆಗೆ...
October 2023
"
|