ನಮ್ಮ ಅಪ್ಪ ಯಾವಾಗಲೂ ಒಂದು ಮಾತು ಹೇಳುವರು “ನೋಡ್ರೋ, ನನಗಂತು ಓದು ತಲೆಗೆ ಹೋಗಲಿಲ್ಲ, ಊರಿನ ಗೌಡರ ಮನ್ಯಾಗ್ ದುಡಿಯುವಹಂಗ ಆಯಿತು, ನೀವಾದ್ರೂ ಚಂದ ಓದಿಕೊಳ್ಳರಿ ಸಾಹೇಬ್ ಆಗಿರಿ” ಈ ಮಾತು ಹೇಳುವಾಗ ಅಪ್ಪನ ಕಣ್ಣಿನ ಮತ್ತು ಮನಸ್ಸಿನ ಭಾವನೆ ಇವತ್ತಿಗೂ ಕಾಡುತ್ತದೆ. ನಮ್ಮಪ್ಪ ಏನು ಓದದೆಯಿದ್ದರು, ಓದಿದವರಿಗಿಂತ ಜಾಣನಿದ್ದ ಕಾರಣ ಅವರಿಗಿರುವ ಜೀವನ ಅನುಭವ. ಪ್ರತಿದಿನ ಸಂಜೆಯಾದರೆ ಅಪ್ಪ ಮತ್ತು ಅಣ್ಣನ ಬೆತ್ತದೇಟಿಗೆ ಓದಲು ನಾವೆಲ್ಲ ಅಣ್ಣ ತಮ್ಮಂದಿರು ಸರಿಯಾಗಿ ಕುಳಿತು ಓದುತ್ತಿದ್ದೇವು. ನಮ್ಮ ಮನೆ ಬಡತನದಿಂದ ಕೂಡಿತ್ತು ಆದರೆ ಓದು ಬರವಣಿಗೆಯ ವಾತಾವರಣಕ್ಕೆ ಏನು ಕಡಿಮೆಯಿರಲಿಲ್ಲ. ನಮ್ಮ ಮನೆಯೇ ಮೊದಲ ಪಾಠಶಾಲೆಯಾಗಿತ್ತು. ಅವ್ವ ನನ್ನ ಮೊದಲ ಲೆಕ್ಕದ ಮಾಸ್ತಾರ್ ಆಗಿದ್ದಳು. ಅಪ್ಪ ಹೆಡ್ ಮಾಸ್ತಾರ್ ಆಗಿದ್ದ. ಇವತ್ತಿನ ಶಿಕ್ಷಣ ವ್ಯವಸ್ಥೆಯ ಫಲಿತಾಂಶದಲ್ಲಿ ಹೆಚ್ಚಳವಾಗಲು ನಮ್ಮ ನಿಮ್ಮ ಮನೆಗಳೆಲ್ಲವು ಪಾಠಶಾಲೆಯಾಗಿ ಬದಲಾಗಬೇಕು. ಅದಕ್ಕಾಗಿ ನನ್ನ ಅನುಭವಿಕ ನೆಲೆಯಲ್ಲಿ ಪಾಲಕರೆ ಶಿಕ್ಷಕರಾಗಬೇಕಾದ ಅಗತ್ಯ ಈ ಲೇಖನದಲ್ಲಿದೆ.
0 Comments
|
ಇಲ್ಲಿಯವರೆಗೆ...
October 2023
"
|