ಇದು ತಾವು ಇತ್ತೀಚೆಗೆ ಮುಖ್ಯಮಂತ್ರಿಯವರಿಗೆ ಮಾಡಿರುವ ಆಕ್ರೋಶದ ನಮಸ್ಕಾರಕ್ಕೆ ಪ್ರತಿಯಾಗಿ. ಹೌದು ನಿಮ್ಮ ಆಕ್ರೋಶದ ನಮಸ್ಕಾರ ನನಗೆ ಬಹಳ ಇಷ್ಟವಾಯಿತು. ಸಾಮಾಜಿಕ ಜಾಲಾತಾಣದಲ್ಲಿ ಹರೆದಾಡಿದ ನಿಮ್ಮ ನಮಸ್ಕಾರಗಳು ಅದರಲ್ಲಿನ ನಿಮ್ಮ ಸಾಮಾಜಿಕ ಕಳಕಳಿ ಕೇಳಿ ಬಹಳ ಸಂತೋಷವಾಯಿತು. ನೀವು ಉಲ್ಲೇಖ ಮಾಡಿರುವ ಎಲ್ಲರೂ ನಮ್ಮ ಬಂಧುಗಳೆ. ಅವರೆಲ್ಲರೂ ಮನುಷ್ಯ ಜಾತಿಗೆ ಸೇರಿದವರೆ ಎಂದು ಬಲವಾಗಿ ನಂಬಿದ್ದೇನೆ. ಅವರ ಸಾವು ನಾಡಿಗೆ ತುಂಬಲಾಗದ ನಷ್ಟ ಎನ್ನುವುದು ಸತ್ಯವಾಗಿದೆ.