ಅಂದು ಬೆಳೆಗ್ಗೆಯ ಸಮಯ ಸೂರ್ಯ ತನ್ನ ಮುಖವನ್ನು ಮೋಡಗಳಿಂದ ತಪ್ಪಿಸಿಕೊಂಡು ಹೊರಬರುತ್ತಿದ್ದ ನಾನು ಬೆಳಗ್ಗಿನ ಛಳಿಯಲ್ಲಿಯೇ ಎದ್ದು ಅತ್ಯಂತ ವೇಗದಿಂದ ಕಲಬುರಗಿ ಕಡೆಗೆ ಪ್ರಯಾಣ ಮಾಡುತ್ತಿದ್ದೆ, ನಾನು ಕುಳಿತ ರೈಲಿನಲ್ಲಿ ನನ್ನ ಪಕ್ಕದಲ್ಲಿ ಒಬ್ಬ ವ್ಯಕ್ತಿ ಕುಳಿತಿದ್ದರು. ಅವರ ವಯಸ್ಸು ಸುಮಾರು ನಲವತ್ತು ದಾಟಿರಬಹುದು ಅನಿಸುತ್ತೆ ಪ್ರಯಾಣ ಸ್ವಲ್ಪ ಒಂದು ತಾಸು ಇರುವುದರಿಂದ ಅವರೊಂದಿಗೆ ಮಾತಿಗಿಳಿದೆ. ಆ ವ್ಯಕ್ತಿಯನ್ನು ಗಮನಿಸುತ್ತಾ ನನಗೆ ಹಲವು ಪ್ರಶ್ನೆಗಳು ಕಾಡ ತೊಡಗಿದವು. ಆತ ಮಾತನಾಡುವ ಶೈಲಿಯನ್ನು ಗಮನಿಸಿದರೆ ಒಮ್ಮೆ ಇವನು ಹುಚ್ಚನೆ ಅನಿಸಿದರೆ ಮತ್ತೊಮ್ಮೆ ಇವರು ಮೇದಾವಿಯೇ ಅನಿಸುತ್ತಿತ್ತು. ನನ್ನ ಜೊತೆಗೆ ತುಂಬಾ ನೀಟಾಗಿ ಮಾತನಾಡಿದ ಅವರು ಫೋನ್ ಬಂದರೆ ಸಾಕು ಜೋರಾಗಿ ಚೀರಾಡಿ ಯಾರಿಗೊ ಬೈಯುತ್ತಿದ್ದರು. ಆ ಕಡೆ ತಿರುಗಿ ಅಳುವಂತೆ ಮಾಡುತ್ತಿದ್ದರು ಮತ್ತೆ ಸುಧಾರಿಸಿಕೊಳ್ಳುವ ಹಾಗೆ ಮಾಡಿ ನನ್ನೊಂದಿಗೆ ಮಾತು ಮುಂದುವರೆಸುತ್ತಿದ್ದರು. ಅವರ ವ್ಯಕ್ತಿತ್ವವೇ ಅರ್ಥಮಾಡಿಕೊಳ್ಳಲಾಗಲಿಲ್ಲ. ಮುಂದಿನ ನಿಲ್ದಾಣ ಬಂದಾಗ ಅವರ ಸಹಾಯಕರೊಬ್ಬರು ನಮ್ಮ ರೈಲು ಏರಿದರು ಆಗ ತಿಳಿಯಿತು ಅವರು ಬಹುಹಂತದ ವ್ಯಕ್ತಿತ್ವ ರೋಗದಿಂದ ಬಳಲುತ್ತಿದ್ದಾರೆ ಎಂದು.
0 Comments
ಓ ಕನ್ನಡ ತಾಯಿ. ತೆರೆದು ನೋಡು ನಿನ್ನ ಪವಿತ್ರ ಒಳಗಣ್ಣನ್ನು ಅನ್ಯಾಯ ಅಟ್ಟಹಾಸ ಮಾಡುತ್ತಿದೆ. ಅಸಮಧಾನ ಹೊಗೆಯಾಡುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಕೊಲೆಯಾಗುತ್ತಿದೆ. ಕಣ್ಣೆದುರೆ ಸತ್ತ ಹೆಣ ಕಂಡರು, ಮೂಗು ಮುಚ್ಚಿಕೊಂಡು ಮುಂದೆ ಸಾಗುವ ಜನರಿದ್ದಾರೆ. ಪಕ್ಕದ ಮನೆಯಲ್ಲಿ ಅಕ್ಕ ಸತ್ತರೆ, ತಮ್ಮ ತಮ್ಮ ಮನೆಯಲ್ಲಿ ಸಕ್ಕರೆ ತುಪ್ಪ ಉಣ್ಣುವ ಪುಂಡ ಪೋಕರಿಗಳಿದ್ದಾರೆ. ನೆರೆಹೊರೆಯವರ ಕಷ್ಟ ನೂರಿದ್ದರು, ನಮ್ಮ ಮನೆಯಲ್ಲಿ ಹೋಳಿಗೆ ತುಪ್ಪವಿರಲಿಯೆಂಬ ಸ್ವಾರ್ಥದ ಜನರಿದ್ದಾರೆ. |
ಇಲ್ಲಿಯವರೆಗೆ...
October 2023
"
|