ಭೂಮಿಯ ಮೇಲೆ ಅನಾದಿಕಾಲದಿಂದಲು ಅನ್ಯಾಯ ಅಟ್ಟಹಾಸದಿಂದ ಮೆರೆಯುತ್ತಿದೆ. ಅನ್ಯಾಯದ ವಿರುದ್ಧ ಹೋರಾಡಿದ ಪ್ರಮಾಣಿಕರಿಗೆ, ಸತ್ವ ಪರೀಕ್ಷೆಗಳು ಎದುರಾಗುತ್ತಲೇ ಬಂದಿವೆ. ದಕ್ಷ ಹಾಗೂ ನಿಷ್ಠಾವಂತರನ್ನು ಈ ಸಮಾಜ ಸಹಿಸುವುದಿಲ್ಲ. ಸತ್ಯ ಸತ್ತು ಗೋರಿ ಸೇರಿದೆ. ಅನ್ಯಾಯವೆಂಬ ಪೆಡಂಭೂತವು ತಾಂಡವ ಆಡುತ್ತಿದೆ. ಸುಳ್ಳಿನ ಸಂತೆಯೊಳಗ ಸತ್ಯ ಮತ್ತು ಪ್ರಮಾಣಿಕತೆಗಳೆರಡು ಮೂಲೆ ಸೇರಿವೆ ಎಂಬುವುದು ಮತ್ತೆ ಹೇಳಬೇಕಾದ ಅಗತ್ಯವಿಲ್ಲ. ಇದೀಗ ಕಲಿಯುಗದಲ್ಲಿ ಲ್ಯಾಂಡ್ ಮಾಫಿಯಾಗಳೆಂಬ ರಾಜಕೀಯ ಪ್ರೇರಿತ ಕುತಂತ್ರಗಳು, ದೇಶದೊಳಗಿನ ಪ್ರಮಾಣಿಕ, ನಾಡ ಸೇವೆಯ ನಾಡ ದೇವತೆಯ ಮಕ್ಕಳನ್ನು ಬಲಿತೆಗೆದುಕೊಳ್ಳತೊಡಗಿದ್ದಾರೆ. ಪ್ರಮಾಣಿಕತೆ ಸತ್ತು ಹೋಗಿದೆ ಎಂಬ ಸಂದೇಶವನ್ನು ಸದ್ದಿಲ್ಲದೆ ರವಾನಿಸುತ್ತಿದ್ದಾರೆ.
0 Comments
|
ಇಲ್ಲಿಯವರೆಗೆ...
October 2023
"
|