ಎತ್ತ ಸಾಗಿದೆ ನಮ್ಮ ಯುವಪೀಳಿಗೆ. ನಾವೆಲ್ಲ ಮುಂದುವರೆದಿದ್ದೇವೆ ಎಂಬ ವೇಗದಲ್ಲಿ, ನಮ್ಮ ಹಲವು ಹವ್ಯಾಸಗಳನ್ನು ಮರೆಯುತ್ತಿದ್ದೇವೆ. ಈ ಕಂಪ್ಯೂಟರ್ ತಂತ್ರಜ್ಞಾನ ಬಂದ ಬಳಿಕ ನಮ್ಮ ಜೀವನ ಶೈಲಿಯೇ ಬದಲಾಗಿದ್ದು ಅಕ್ಷರಸಹ ಸತ್ಯವಾಗಿದೆ. ನಮ್ಮ ಪೂರ್ವಜರು ನೀಡುತ್ತಿದ್ದ ಅನೇಕ ವಿಷಯಗಳು ಮಾಯವಾಗಿ ಮೂಲೆ ಸೇರುತ್ತಿವೆ. ಸಂಬಂಧಗಳಂತು ಹಳಸಿ ಕಳೆದುಹೋಗುತ್ತಿವೆ. ಮರೆಯಾದ ಹಲವು ನೆನಪುಗಳನ್ನು ಮೆಲುಕುಹಾಕುತ್ತ ಕುಳಿತಿರುವ ಕಾಲ ಇದೀಗ ಸನ್ನಿಹಿತವಾಗಿದೆ. ಸಂಪ್ರದಾಯ ಕಾಲದ ಜಾನಪದವಾಗಲಿ ಸಾಹಿತ್ಯವಾಗಲಿ ಉಳಿದಿಲ್ಲ ಯಾರಲ್ಲಿಯೂ ಅಷ್ಟೊಂದು ಕೇಳಿಸಿಕೊಳ್ಳಲು ಸಮಯವಿಲ್ಲವಾಗಿದೆ. ಈ ಫಾಸ್ಟ್ ಜೀವನದಲ್ಲಿ ಎಲ್ಲವು ಫಾಸ್ಟ್ ಆಗಿಯೇ ಮುಗಿದು ಹೋಗುತ್ತಿದೆ. ನಮ್ಮ ಜೀವನ ಚೆಕ್ರವು ಕೂಡ ಅಷ್ಟೆ ವೇಗವಾಗಿ ಮುಗಿದು ಮನುಷ್ಯನ ಆಯಸ್ಸು ಇದೀಗ ಅರವತ್ತಕ್ಕೆ ಬಂದು ನಿಂತಿದೆ.
0 Comments
ಅನ್ನ ದೇವರ ಮುಂದೆ! ಇನ್ನು ದೇವರುಂಟೆ! ಅನ್ನವೇ ದೈವ ಸರ್ವಜ್ಞಾ !! ಹಸಿವಿನ ಬಗ್ಗೆ ಹನ್ನರಡನೇಯ ಶತಮಾನದಲ್ಲಿ ಸರ್ವಜ್ಞಾ ಹೇಳಿದ್ದು. `ಓ ಅಯ್ಯ, ಅಮ್ಮಯ್ಯ ಹಸಿವೆಯನ್ನು ತಾಳಲಾರೆ, ಕಾಸೊಂದು ನೀಡುವೆಯಾ’ ಈ ಹಾಡು ಕೇಳಿದಾಗಲೆಲ್ಲ ಹಸಿವಿನ ಮಹತ್ವ ಅರಿವಾಗುತ್ತದೆ. ಒಬ್ಬ ಮನುಷ್ಯನಿಗೆ ಹಸಿವು ದೇಹದ ಪ್ರಾಕೃತಿಕ ಲಕ್ಷಣ. ಮನುಷ್ಯರಾದ ನಾವು ಎಲ್ಲವೂ ಸಹಿಸುವಂತೆ, ಹಸಿವು ಕೂಡ ತಕ್ಕಮಟ್ಟಿಗೆ ಸಹಿಸುವ ಶಕ್ತಿಯಿದೆ. ಭಾರತವೆಂಬ ಭವ್ಯ ದೇಶದಲ್ಲಿ ಇದೀಗ ಹಸಿವು ತಾಂಡವವಾಡುತ್ತಿದೆ. ಈ ದೇಶದಲ್ಲಿ ಆಡಳಿತ ಮಾಡಿರುವ ಪಕ್ಷಗಳು, ನಮ್ಮ ದೇಶವನ್ನು ದಶಕಗಳೇ ಆಳಿದರೂ ನಾವಿನ್ನು ಹಸಿವಿನಲ್ಲಿ ಮೊದಲ ಸ್ಥಾನ ಕಾಯ್ದುಕೊಂಡು ಅದನ್ನು ಮುಂದುವರೆಸಿಕೊಂಡಿರುವುದು ದುರಂತವೆ ಸರಿ. ಮನುಷ್ಯ ಜೀವನದಲ್ಲಿ ಸರಳತೆ ಮತ್ತು ಸಜ್ಜನತೆಯನ್ನು ಮೆರೆಯಲು ವಚನಸಾಹಿತ್ಯ ಅತ್ಯಂತ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಭಾವ ಜೀವಿಯಾಗುವುದುರ ಜೊತೆಗೆ ಬದುಕಿನಲ್ಲಿ ಹೇಗೆ ಇರಬೇಕು ಎಂಬ ಸತ್ಯವನ್ನು ವಚನಸಾಹಿತ್ಯ ಕಲಿಸಲಿದೆ. ಪ್ರಮುಖ ವಚನಕಾರರು ವಚನ ಸಾಹಿತ್ಯದ ಶ್ರೀಮಂತಿಕೆಗೆ ಪಣತೊಟ್ಟಿದ್ದರು. ನೂರಾರು ಜನ ಶರಣರು ಶ್ರಮಿಸಿದ್ದಾರೆ. ಅಲ್ಲಮ ಪ್ರಭು, ಅಂಬಿಗರ ಚೌಡಯ್ಯ, ಮಾದಾರ ಚೆನ್ನಯ್ಯ, ಸೂಳೆ ಸಂಕವ್ವೆ, ಏಕಾಂತ ರಾಮಯ್ಯ, ಹಡಪದ ಅಪ್ಪಣ್ಣ, ಒಕ್ಕಲು ಮಾದಯ್ಯ, ಮಡಿವಾಳ ಮಾಚಯ್ಯ,ಆಯ್ದಕ್ಕಿ ಲಕ್ಕಮ, ಹೆಂಡದ ಮಾರಯ್ಯ, ಅಂಗಸೋಂಕಿನ ಲಿಂಗತಂದೆ, ಅಂಬಿಗರ ಚೌಡಯ್ಯ, ಅಕ್ಕಮಹಾದೇವಿ, ಅಕ್ಕಮ್ಮ, ಅಖಂಡ ಮಂಡಲೇಶ್ವರ, ಅಗ್ಘವಣಿ ಹಂಪಯ್ಯ, ಅಗ್ಘವಣಿ ಹೊನ್ನಯ್ಯ, ಅಜಗಣ್ಣ ತಂದೆ, ಅರಿವಿನ ಮಾರಿತಂದೆ, ಅನುಗಲೇಶ್ವರ ಇನ್ನು ಅನೇಕರು ಇದ್ದಾರ ಸೂಳೆ ಸಂಕವ್ವ:-ವಚನಾಂಕಿತ ಸಮಾಜದ ಬಹಿಷ್ಕೃತ ಸಮೂಹದ ಶ್ರೇಷ್ಠ ಶರಣೆ. |
ಇಲ್ಲಿಯವರೆಗೆ...
October 2023
"
|