ನಮ್ಮ ಮನೆಯ ಬಡತನ ನನ್ನ ಶಿಕ್ಷಣ ಕಿತ್ತಿ ತಿನ್ನುತ್ತದೆಯೊ ಎಂಬ ವಿಚಾರ ಕಾಡುತ್ತಲೆಯಿತ್ತು. ಅಲ್ಲದೆ ನಮ್ಮ ತಾಯಿ ನಮ್ಮ ಮನೆಯ ಯಜಮಾನಿಯಾಗಿದ್ದಳು ಅಪ್ಪ ಏನಿದ್ದರು ದುಡಿಯಬೇಕು ಮನೆಗೆ ತಂದು ಕೊಡಬೇಕು ಅಮ್ಮ ಜಾಣೆಯಾಗಿದ್ದಳು. ಅದಕ್ಕಾಗಿ ಅವಳೆ ಎಲ್ಲವು ನೋಡಿಕೊಂಡು ಹೋಗುತ್ತಿದ್ದಳು. ನನ್ನ ತಾಯಿ ನನಗೆ ಅತೀಯಾಗಿ ಪ್ರೀತಿಸುತ್ತಿದ್ದಳು. ಅವಳ ಸ್ಪೂರ್ತಿಯೇ ಇಂದು ನನಗೆ ಶ್ರೀರಕ್ಷೆಯಾಗಿದೆ. ಅಮ್ಮ ಶಾಲೆ ಕಲಿಯದಿದ್ದರು ಸಾಮಾನ್ಯ ಜ್ಞಾನದಲ್ಲಿ ಅವಳು ಎತ್ತಿದ ಕೈ.
ರೀ.. ನನ್ನ ಮೂರನೆ ಮಗ ಬಹಳ ಹುಶಾರ ಅದಾನರಿ.. ಅವನು ತಹಶೀಲ್ದಾರ ಆಗತಾನ ಅಂತಾ ನನಗೆ ಅನಿಸುತ್ತದೆ. ಅವನಿಗೆ ಶಾಲೆಗೆ ತಪ್ಪದೆ ಕಳಿಸಬೇಕುರಿ. ನಮಗೆಷ್ಟೆ ಕಷ್ಟ ಬಂದರು ಪರವಾಗಿಲ್ಲರಿ ನಮ್ಮ ಮಕ್ಕಳಿಗೆ ಶಾಲೆ ಬಿಡಸಬಾರದು ಏನರಿ.. ಐತು ನಿನ್ನಷ್ಟಕ್ಕೆ ನಾನು ಬೇಡ ಅನ್ನಲ್ಲ, ನಮ್ಮ ಅಪ್ಪ ಅಮ್ಮ ಅಂತು ನಾನು ಒಬ್ಬನೆ ಮಗ ಇದ್ದರು ಶಾಲೆಗೆ ಕಳಿಸಲಿಲ್ಲ ನಮ್ಮ ಮಕ್ಕಳಾದರು ಸರಿಯಾಗಿ ಶಾಲೆ ಕಲಿತು ದೊಡ್ಡ ಸಾಹೇಬರಾದರೆ ನಮಗೆ ಮುಂದ ಆಸೆರೆಯಾಗುತ್ತಾರೆ. ನಮ್ಮ ಬಡತನ ಅದು ಹಣೆಬರಹ ನಮ್ಮ ಎಲ್ಲ ಮಕ್ಕಳು ಸರಿಯಾಗಿ ಶಾಲೆ ಕಲಿತು ಈ ಬಡತನ ನೀಗಿಸಿದರೆ ಅಷ್ಟೆ ಸಾಕು.
ಈ ಎರಡು ಸಂಭಾಷಣೆ ನನ್ನ ಚಿಕ್ಕಂದಿನ ಅನುಭವದಲ್ಲಿ ಆಲಿಸಿದ ಅಪ್ರತಿಮ ಬರಿ ಮಾತಲ್ಲ ಮುತ್ತುಗಳು, ಅಮ್ಮ ನನ್ನ ಜೀವನದ ಅದಮ್ಯ ಬೆಳಕು ಅವಳಿಲ್ಲದೆ ನಾನಿಂದು ಇಂತಹ ಚಿಕ್ಕ ವಯಸ್ಸಿನಲ್ಲಿ ಇಷ್ಟು ಉನ್ನತ ಸ್ಥಾನದಲ್ಲಿ ಇರುತ್ತಿಲ್ಲಿಲ್ಲ, ಅವಳ ಬಯಕೆಯ ಜೊತೆಗೆ ಕಲಿಯದಿದ್ದರು ಮಕ್ಕಳಿಗೆ ಕಲಿಸುವ ರೀತಿ ಎಲ್ಲವು ಅವಿಸ್ಮರಣೀಯ.
ನಮ್ಮದು ತುಂಬಾ ಬಡತನ ಸಂಸಾರ, ಕೂಲಿ ಮಾಡಿ ಬದುಕುವ ಕುಟುಂಬ ಆದರೆ ನಮ್ಮ ಅಪ್ಪ ಮಕ್ಕಳ ಮಾಡುವುದರಲ್ಲಿ ಬಡತನ ಕಾಡಲಿಲ್ಲ ನಾವು ಆರು ಜನ ಮಕ್ಕಳು ಐದು ಜನ ಗಂಡು ಒಬ್ಬಳು ಹೆಣ್ಣು ಅತ್ಯಂತ ದೊಡ್ಡ ಕುಟುಂಬ ಅತೀ ಪ್ರೀತಿಯು ಇಲ್ಲಿ ನೆಲೆಯೂರಿತ್ತು. ಎಲ್ಲದ್ದಕ್ಕೂ ಅಮ್ಮನೆ ಬಾಸ್ ಉತ್ತಮ ನಾಯಕಿ ಅಪ್ಪ ಕೆಲಸ ಮಾಡಿ ತರುವುದು ಅಷ್ಟೆ ಅಮ್ಮ ಮನೆಯ ಆಗು ಹೋಗು ನೋಡಿಕೊಳ್ಳುವ ಯಜಮಾನತಿ ಅಪ್ಪ ಯಾಕೆ ಎಲ್ಲವು ಅಮ್ಮನ ಮೇಲೆಯೆ ಭಾರ ಹಾಕುವರು ಅಂದರೆ ಅಮ್ಮನಿಗೆ ಇರುವ ಸಂಸಾರದ ಜಾಣತನವೆ ಇದಕ್ಕೆ ಮೂಲಕಾರಣ.
ಚಿಕ್ಕ ವಯಸ್ಸಲ್ಲಿ ನನಗೆ ಸಾಮಾನ್ಯವಾಗಿ ಶಾಲೆ ಕಲಿತು ಏನು ಮಾಡಬೇಕು ಎನ್ನುವ ಅರಿವೆಯಿರಲಿಲ್ಲ ಆಗ ನಾನು ಇನ್ನು ಮೂರನೆ ತರಗತಿಯಲ್ಲಿ ಓದುತ್ತಿದ್ದೆ ಅಮ್ಮ ಲೆಕ್ಕದಲ್ಲಿ ತುಂಬಾ ಪಕ್ಕ ಅವಳು ನನಗೆ ಅಂಗಡಿಗೆ ಕಳಿಸಿ ಲೆಕ್ಕ ಬರೆಯಲು ಹೇಳುವುದು, ಹೆಚ್ಚಿಗೆ ಹಣ ನೀಡಿ ಅದರಲ್ಲಿ ಉಳಿದ ಹಣವೆಷ್ಟು ಎಷ್ಟು ಖರ್ಚಾಯಿತು ಇತ್ಯಾದಿಗಳಿಂದಲೇ ನನಗೆ ಗಣಿತದಲ್ಲಿ ಆಸಕ್ತಿ ಬರುವಂತೆ ಮಾಡಿದ್ದು ಅಮ್ಮನೆ, ಜೊತೆಗೆ ನಮ್ಮ ಶಾಲೆಯ ಯಾವುದೇ ಕಾರ್ಯಕ್ರಮದಲ್ಲಿ ಹೇಗೆ ಧೈರ್ಯವಾಗಿ ಮಾತನಾಡಬೇಕು, ಯಾವ ವಿಷಯ ಹೇಗೆ ಜನಕ್ಕೆ ತಿಳಿಸಬೇಕು, ವಿಷಯ ಪ್ರಬುದ್ಧತೆ ಹೇಗೆ ಸಾಧಿಸಬೇಕು, ಮಗ್ಗಿ ಹೇಳುವುದು, ಜಾನಪದ ಹಾಡು ಹೇಳುವುದು,ಕಥೆ ಕಟ್ಟುವುದು ಹೀಗೆ ಅಮ್ಮ ಶಾಲೆ ಕಲಿಯದಿದ್ದರು ಎಲ್ಲದರಲ್ಲಿಯೂ ನಿಸ್ಸೀಮಳಾಗಿದ್ದಳು ಅದನ್ನು ನನಗೆ ತಪ್ಪದೆ ಹೇಳಿ ಕೊಡುತ್ತಿದ್ದಳು.
ನನ್ನ ಶ್ರದ್ಧೆಯನ್ನು ಮನೆಯ ಎಲ್ಲರ ಮುಂದೆ ಹೇಳುತ್ತಿದ್ದಳು. ಈಶ್ವರ ಬಹಳ ಚೆನ್ನಾಗಿ ಕಲಿತಾನೆ ಅವನು ತಹಶೀಲ್ದಾರ ಖಂಡಿತಾ ಆಗುತ್ತಾನೆ ಅಂತ ನಮ್ಮ ಪಕ್ಕದ ಮೆನಯವರಿಗೆ ನಮ್ಮ ಸಂಬAಧಿಕರಿಗೆ ಹೇಳುತ್ತಿದ್ದಳು. ನಾನು ಅವಳ ಮಡಿಲಲ್ಲಿ ಮಲಗಿದಾಲೆಲ್ಲ ಮಗ ನೀನು ತಶೀಲ್ದಾರನಾಗಿ ಈ ಊರಿಗೆ ಬರಬೇಕು ನಮ್ಮೂರಿನ ಮಾಳವ್ವನ ಮಗ ನೋಡು ಅಂತಾ ನಮ್ಮೂರಿನ ಜನ ಬಾಯಿ ಮೇಲೆ ಬೆರಳಿಟ್ಟುಕೊಳ್ಳುವಂತೆ ನೋಡಬೇಕು ಇದು ನನ್ನಾಸೆ ಅದಕ್ಕೆ ನೀನು ಚೆನ್ನಾಗಿ ಓದಬೇಕು ಏನಪ್ಪ ಎನ್ನುತ್ತಿದ್ದಳು. ತನ್ನ ನವಿರಾದ ಕೈ ನನ್ನ ಮುಖದಮೇಲೆ ಎರಯುತ್ತ. ಅದಕ್ಕೆ ನಾನು ಅಮ್ಮ ನಿನಗೇಕೆ ನಿಮ್ಮ ಅಪ್ಪ ಅಮ್ಮ ಶಾಲೆ ಕಲಿಸಲಿಲ್ಲ ಆದರೂ ನಿನಗೆ ಹೇಗೆ ಇದೆಲ್ಲ ಗೊತ್ತಿದೆ ಎನ್ನುವ ಪ್ರಶ್ನೆಗೆ ಅವಳು ಇಲ್ಲ ಮಗ ನಮ್ಮ ಕಾಲದಲ್ಲಿ ಹೆಣ್ಣು ಮಕ್ಕಳು ಶಾಲೆ ಕಲಿಯಂಗಿರಲಿಲ್ಲ ನಮ್ಮೂರಿನಲ್ಲಿ ಶಾಲೆ ಇದ್ದರು ಕಲಿಯಕ್ಕೆ ಆಗಲಿಲ್ಲ ಆದರೆ ಓದಿರುವರನ್ನು ನೋಡಿ ಕೇಳಿ ಕಲಿತಿರುವೆ ನಾನೇನಾದರು ಶಾಲೆ ಕಲಿತಿದ್ದರೆ ದೊಡ್ಡ ಸಾಹೇಬತಿಯಾಗಿರುತ್ತಿದ್ದಪ್ಪ ಎನ್ನುತ್ತಿದ್ದಳು. ಬಹು ನಿರಾಸೆಯಲ್ಲಿ.
ಆಗ ನಾನು ಇರಲಿ ಬಿಡಮ್ಮ ನಾನು ಹೇಗೋ ತಹಶೀಲ್ದಾರ ಆಗತಿನಲ್ಲ ಆಗ ನಿನಗೆ ತಹಶೀಲ್ದಾರನ ತಾಯಿ ಅಂತರಲ್ಲ ಅವಾಗ ನನಗೆ ಖುಷಿಯಾಗುತ್ತದೆ ಎನ್ನುತ್ತಿದ್ದೆ. ಆಗ ತಾಯಿಯ ಮನಸ್ಸಿಗೆ ಆಗುವ ಸಂತೋಷ ಕಣ್ಣಿನ ಹನಿಗಳ ಮೂಲಕ ಕಾಣುತ್ತಿತ್ತು ಮನೆಯಲ್ಲಿ ಅಣ್ಣಂದಿರು ಇಬ್ಬರು ತಮ್ಮಂದಿರು ಇಬ್ಬರು ಇದ್ದರು ನನ್ನಮ್ಮ ಮಾತ್ರ ಹೆಚ್ಚಿನ ಪ್ರೀತಿ, ಕಾಳಜಿ, ನಿರೀಕ್ಷೆ ನನ್ನ ಮೇಲೆಯೆ ಇಟ್ಟಿದ್ದಳು ಕಾರಣ ನಾನು ಹೆಣ್ಣಾಗಿ ಹುಟ್ಟತೀನಿ ಅಂತಾ ತಿಳಿದ ಅಮ್ಮ ಕನಸು ನೆನಸಾಗಲಿಲ್ಲ ಅದಕ್ಕಾಗಿ ಇದು ನನಗೆ ಬೇಡ ಎಂದು ಮೊದಲು ವಿಚಾರಿಸಿದ ಅಮ್ಮ ನನ್ನ ಚಿಕ್ಕಂದಿನ ಜಾಣತನ ಅವಳಲ್ಲಿ ಆಸೆ ಮೂಡಿಸಿತು ಅದಕ್ಕಾಗಿ ಇಷ್ಟು ಪ್ರೀತಿ ಅವಳು ನನಗೆ ನೀಡುತ್ತಿದ್ದಳು.
ಜೀವನದಲ್ಲಿ ನಾವು ಅಂದುಕೊಳ್ಳೊದು ಒಂದು ಆಗುವುದು ಇನ್ನೊಂದು. ನಾನು ಏಳನೇಯ ತರಗತಿಯಲ್ಲಿ ಓದುತ್ತಿದ್ದೆ ಆಗ ನನ್ನ ಹಡೆದ ತಾಯಿಗೆ ತುಂಬಾ ಆರಾಮವೇ ಇರಲಿಲ್ಲ ವೈದ್ಯರ ಪ್ರಕಾರ ಇದು ಯಾವುದೊ ಅನುವಂಶೀಯ ಕಾಯಿಲೆ ನಿಮ್ಮ ಹಿರಿಯ ಪೂರ್ವಿಕರಲ್ಲಿ ಇತ್ತು ಈಗ ನಿಮ್ಮ ತಾಯಿಗೆ ಬಂದಿದೆ ನಿಮ್ಮ ತಾಯಿ ಉಳಿಯುವ ಅವಕಾಶ ಕಡಿಮೆಯೆಂದು ಹೇಳಿಯೆಬಿಟ್ಟರು. ಅಮ್ಮನಿಗೆ ಹೀಗಾಯಿತಲ್ಲ ಎನ್ನುವ ಸ್ಥಿತಿಯಲ್ಲಿ ಅಪ್ಪ ತುಂಬಾ ಚಿಂತಿತರಾದರು ದೊಡ್ಡ ನಗರಗಳಲ್ಲಿಯ ಎಲ್ಲ ಆಸ್ಪತ್ರೆಗಳಿಗೆ ತೋರಿಸ ತೊಡಗಿದರು ಇರುವ ಆಸ್ತಿಪಾಸ್ತಿ ಮಾರಿ ಅಮ್ಮನಿಗೆ ಆರೋಗ್ಯ ತಪಾಸಣೆ ಮಾಡಿಸಿದರು. ಇಂತಹ ಸಮಯದಲ್ಲಿ ನಾವು ಐದು ಜನ ಮಕ್ಕಳಲ್ಲಿ ಇಬ್ಬರು ಶಾಲೆ ಬಿಡಲೇಬೇಕಾಯಿತು. ಆಗ ಬಲಿಯಾದದ್ದು ನನ್ನ ನೆಚ್ಚಿನ ಅಣ್ಣ ಶಾಮರಾಯ. ತುಂಬಾ ಜಾಣ ಆದರೆ ವಿಧಿಯಾಟಕ್ಕೆ ಸಿಲುಕಿ ಶಾಲೆ ಬಿಡಲೇಬೇಕಾದ ಅನಿವಾರ್ಯ ಬಂತು. ಅಮ್ಮ ಇದರಿಂದಲೂ ಕುಂದಿ ಹೋದಳು.
ಅಣ್ಣನಿಗೆ ಹೋಟೇಲ್ವೊಂದರಲ್ಲಿ ಕೆಲಸಕ್ಕೆ ಹಚ್ಚಿದರು. ಅದರಿಂದ ಬರುವ ಹಣದಿಂದ ಸಂಸಾರದ ಬಂಡಿ ಸಾಗಿತು. ಈ ದಿನಗಳಲ್ಲಿ ನಾವು ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ ಆದರೆ ಅಮ್ಮ ಮಾತ್ರ ಎಲ್ಲರಿಗೂ ಧೈರ್ಯ ಹೇಳುತ್ತದ್ದಳು. ಇಂತಹ ಅನಾರೋಗ್ಯ ಸ್ಥಿತಿಯಲ್ಲೂ ಖೌದಿ ಹೊಲಿಯುವ ಕೆಲಸ ಮಾಡಿದ ಆ ಮಾತೆ ನಿಜಕ್ಕೂ ತುಂಬಾ ಧೈರ್ಯವಂತೆ. ಅವಳು ಮಾಡಿದ ಪುಣ್ಯಕ್ಕೆ ನಾವು ಐದು ಜನ ಮಕ್ಕಳು ಇಂದು ಎಲ್ಲರೂ ಒಂದೊAದು ಹುದ್ದೆಯಲ್ಲಿ ಅವಳ ಆಶಿರ್ವಾದದ ಹೊನಲಲ್ಲಿ ಸುಖ ಸಂತೋಷ ನೆಮ್ಮದಿಯಿಂದ ಇದ್ದೆವೆ.
ನಾನು ನನ್ನ ತಾಯಿಯ ಜೊತೆ ಇರುವ ವಿಚಾರ ಆ ದೇವರಿಗೆ ಇಷ್ಟವಿರಲಿಲ್ಲ ಅಂತಾ ಕಾಣುತ್ತದೆ. ಅಮ್ಮ ತನ್ನ ರೋಗದಿಂದ ತುಂಬ ನೊಂದುಕೊAಡಳು, ದಿನ ಕಳೆದಂತೆ ತನ್ನ ದೈಹಿಕ ಶಕ್ತಿ ಕಳೆದುಕೊಂಡಳು. ಕೆಲವು ದಿನಗಳಲ್ಲಿ ಅಮ್ಮ ನಮ್ಮೆಲ್ಲರನ್ನು ಅಗಲಿ ಇಹ ಲೋಕ ತ್ಯೆಜಿಸಿದಳು ಅಂದು ನಾವು ಐದು ಜನ ಮಕ್ಕಳಿಗೆ ಲೋಕವೆ ಮುಳಗಿ ಹೋದ ಅನುಭವವಾಯಿತು. ನನಗಂತು ಬದುಕಿನ ದಿನಗಳು ಮುಗಿವಷ್ಟು ದು:ಖವು ತಾಳದಾಯಿತು. ನನ್ನ ಆಕ್ರಂಧನಕ್ಕೆ ಆಕಾಶ ಮುಗಿಲುಗಳೆರಡು ಒಂದಾದ ಅನುಭವವಾಯಿತು. ನನ್ನ ಇಬ್ಬರು ತಮ್ಮಂದಿರಿಗೆ ಅಮ್ಮ ಇಲ್ಲ ಎನ್ನುವ ಕಲ್ಪನೆಯೂ ಇರಲಿಲ್ಲ ಅಂತಹ ಸಮಯದಲ್ಲಿ ನಮ್ಮ ಮನೆಯ ಹೆಣ್ಣು ದೇವತೆ ಜೀವನ ಜ್ಯೋತಿ ಆರಿ ಹೋಯಿತು. ಇಡಿ ಕುಟುಂಬವೆ ಅಪಾರ ದು:ಖದಲ್ಲಿ ಮುಳಗಿತು.
ಇನ್ನೇನು ನಾವು ಮತ್ತೆ ಜೀವನದಲ್ಲಿ ಉದ್ಧಾರ ಆಗಲಾರೇವು ಎನ್ನುವಾಗ ಅಪ್ಪ ಮಾಡಿರುವ ಒಂದು ಒಳ್ಳೆಯ ಕೆಲಸವೆಂದರೆ ಹೊಸ ಅಮ್ಮನ ಎಂಟ್ರಿ ಇಬ್ಬರು ಮಕ್ಕಳು ಇನ್ನು ಹಾಲು ಕುಡಿಯುವ ಹಸುಗೂಸು ಅವರಿಗಾಗಿಯೇ ಆದರೂ ಅಮ್ಮ ಬೇಕು ಎನ್ನುವ ನಿಟ್ಟಿನಲ್ಲಿ ಅಪ್ಪ ಈ ಕೆಲಸ ಮಾಡಿದರು. ಹೊಸ ಅಮ್ಮ ಕೂಡ ನಮ್ಮೆಲ್ಲರಿಗೆ ಬೆಳೆಸಿರುವ ರೀತಿ ನಿಜಕ್ಕೂ ಶ್ಲಾಘನೀಯ ನಮಗೆ ತಾಯಿ ಇಲ್ಲ ಎನ್ನುವ ಕೊರಗು ನೀಗಿಸಿದ ಶ್ರೇಯಸ್ಸು ನನ್ನ ಎರಡನೇಯ ತಾಯಿಗೆ ಸೇರುತ್ತದೆ. ಅಮ್ಮ ಕೂಡ ನನ್ನ ಶಿಕ್ಷಣಕ್ಕೆ ಅಷ್ಟೆ ಒಲವು ತೋರಿದಳು. ಈಗ ಇರುವ ಗಂಡು ಮಕ್ಕಳೆ ನನಗೆ ಮಕ್ಕಳು ನನಗೆ ಗಂಡು ಮಕ್ಕಳೆ ಬೇಡ ಎಂದು ಒಬ್ಬ ಹೆಣ್ಣು ಮಗಳಿಗೆ ಜನ್ಮ ನೀಡಿ ಮುಂದೆ ಮಕ್ಕಳು ಬೇಡ ಎಂದ ಅದಮ್ಯ ಹೆಣ್ಣು ನನ್ನ ಪಡೆದ ತಾಯಿ. ಅವಳ ಈ ತ್ಯಾಗ ನಮ್ಮ ಜನ್ಮಕ್ಕೆ ಆಗುವಷ್ಟು ಪ್ರೀತಿ ನೀಡಿದೆ. ಹೀಗೆ ನನ್ನ ಜೀವನದಲ್ಲಿ ತಾಯಿಯ ಪಾತ್ರ ತುಂಬ ಅವಕಾಶ ನೀಡಿದೆ ಅದಕ್ಕಾಗಿ ನಾನು ಅವಳಿಂದಲೇ ಇಂದು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ಇದ್ದೇನೆ ಎಂದು ಹೆಮ್ಮೆಯಿಂದ ಹೇಳುತ್ತೇನೆ.
ನಾನು ಇಂದು ಸಮಾಜದಲ್ಲಿ ಒಂದಿಷ್ಟು ಹೊಟ್ಟೆ ತುಂಬಿಸಿಕೊಳ್ಳಲು ಶಿಕ್ಷಕನಾಗಿ, ಸಂಯೋಜಕನಾಗಿ, ಸಂಪನ್ಮೂಲ ವ್ಯಕ್ತಿಯಾಗಿ, ಯುವ ಬರಹಗಾರನಾಗಿ, ಅಂಕಣಕಾರನಾಗಿ, ಕವಿಯಾಗಿ, ಸಾಹಿತಿಯಾಗಿ ಹೊರಹೊಮ್ಮಿದ್ದು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ನಡೆಸಿದ್ದು ಅಮ್ಮನ ಆಸೆ ಈಡೇರಿಸಲು ಶ್ರಮಿಸುತ್ತಿದ್ದೇನೆ. ಸದ್ಯ ಯಾವುದೇ ಕಾರ್ಯಕ್ರಮದಲ್ಲಿ ನಿರ್ಭಯವಾಗಿ ವಿಷಯಕ್ಕೆ ತಕ್ಕಂತೆ ಮಾತನಾಡುವ ಕೌಶಲ್ಯವಿದ್ದು ಸರಕಾರೇತರ ಸಂಸ್ಥೆಯೊAದರಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ ಅಮ್ಮ ಹೇಳಿದಂತೆ ತಶೀಲ್ದಾರ ಆಗುವ ಪ್ರಯತ್ನವಂತು ನಡದೆಯಿದೆ ಸದ್ಯ ಶಿಕ್ಷಣ ಮುಗಿಸಿಕೊಂಡು ಹುದ್ದೆಯಲ್ಲಿ ಅಮ್ಮನ ಆಶಿರ್ವಾದದಲ್ಲಿ ನೆಮ್ಮದಿಯ ನಿಟ್ಟುಸಿರಿನ ಜೀವನ ಮಾಡುತ್ತಿರುವುದಕ್ಕೆ ಅವಳೆ ಕಾರಣ. ಅವಳು ನೀಡಿದ ಈ ಜೀವನ ಭೀಕ್ಷೆ ನನ್ನ ಜೀವಮಾನದವರೆಗೂ ನೆನಪಿನಲ್ಲಿರುತ್ತದೆ. ಅದಕ್ಕಾಗಿ ನಾನು ಅವಳ ಜೊತೆಗಿನ ಬದುಕು ಕುರಿತು “ಅವಳಿಲ್ಲದ ಬದುಕು” ಎನ್ನುವ ಪುಸ್ತಕ ಬರೆಯುವ ಕೆಲಸಲದಲ್ಲಿ ನಿರತನಾಗಿರುವೆ ಅಮ್ಮನ ಬಗ್ಗೆ ಎಷ್ಟು ಹೇಳಿದರು ಸಾಲದು ಅಮ್ಮನೆ ನನ್ನ ಎಲ್ಲಾ ಕೆಲಸಗಳಿಗೆ ಸ್ಪೂರ್ತಿ ಆ ಶ್ರೇಯಸ್ಸು ಅಮ್ಮನಿಗೆ ಸಲ್ಲುತ್ತದೆ. “ಅಮ್ಮನ ಪ್ರೀತಿ, ಅಮೃತಧಾರೆಯ ರೀತಿ” ಅಲ್ಲವಾ?.