ಇದೀಗ ಇಡಿ ವಿಶ್ವವೆ ಭಯದ ವಾತಾವರಣದಲ್ಲಿದೆ. ಪ್ರತಿ ವರ್ಷವೂ ಒಂದೊAದು ಹೊಸ ವೈರಸ್ ಹೊಸ ರೋಗಗಳಿಂದ ತತ್ತರಿಸಿ ಹೋಗುತ್ತಿದೆ. ಇದನ್ನು ಮಾಧ್ಯಮಗಳಂತು ತೋರಿಸಿ ಭಯ ಹುಟ್ಟಿಸುತ್ತಿವೆ. ಇದೀಗ ರಾಜ್ಯ ಸಂಪೂರ್ಣ ಬಂದ್ ಆಚರಿಸಿಕೊಳ್ಳುತ್ತಿವೆ. ನಗರಗಳಲ್ಲಿ ಕುಡಿಯಲು ನೀರು ಸಿಗುತ್ತಿಲ್ಲ, ಉಪಹಾರಕ್ಕೆ ಹೋಟೆಲ್ ಗಳಿಲ್ಲ, ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಶಾಲಾ ಕಾಲೇಜುಗಳನ್ನು ರಜೆ ಘೋಷಣೆ ಮಾಡಿಯಾಗಿದೆ. ಈ ಮಾರಕ ವೈರಸ್ ಜನಜೀವನ ಅಸ್ತವ್ಯಸ್ತಗೊಳಿಸಿದ್ದು ಎಲ್ಲಿಯೂ ನಿಲ್ಲಲೂ ಕುಳಿತುಕೊಳ್ಳಲು ಬಿಡುತ್ತಿಲ್ಲ ಸಣ್ಣದಾಗಿ ಕೆಮ್ಮಿದರು ಮನಸ್ಸೊಳಗೆ ಕಸಿವಿಸಿ ಪ್ರಾರಂಭವಾಗಿದೆ. ಯಾರೆ ಕರೆ ಮಾಡಿದರು ಕಾಲರ್ ಟ್ಯೂನ್ ಕೆಮ್ಮುವ ಧ್ವನಿ ಕೇಳಿದಾಗಲೆಲ್ಲ ಮೈ ಜುಮ್ಮೆನ್ನುತ್ತದೆ. ಅದೆಂತಹ ವೈರಸ್ ಇಡಿ ಜನಜೀವನವನ್ನೆ ನಡುಗುವಂತೆ ಮಾಡಿದೆ.
ರಸ್ತೆಗಳಲ್ಲಿ ವಾಹನಗಳಿಲ್ಲ, ಶಾಲೆಗಳಲ್ಲಿ ಮಕ್ಕಳಿಲ್ಲ, ಶಾಪಿಂಗ ಮಾಲ್ ಗಳು, ದೊಡ್ಡ ಚಿಕ್ಕ ಹೋಟೆಲ್ ಅಂಗಡಿ ಎಲ್ಲವೂ ಬಂದ ಆಗಿದ್ದು ಕಾಣಸಿಗುತ್ತದೆ. ಇನ್ನು ಖಾಸಗಿ ಕ್ಷೇತ್ರದಲ್ಲಿ ಮನೆಯಿಂದಲೇ ಕೆಲಸ ಮಾಡಿ ಎನ್ನುವ ಯೋಜನೆಯಂತೆ ಖಾಸಗಿ ಕಂಪನಿಗಳು ಆದೇಶ ಹೊರಡಿಸಿವೆ. ಹೊರಗಡೆ ಓಡಾಡಬಾರದು ಎಂಬ ಕಟ್ಟಪ್ಪಣೆ ಕಾನೂನಿನ ಪ್ರಕಾರ ಆದೇಶಿಸಲಾಗಿದೆ. ಪ್ರತಿ ಜಿಲ್ಲೆಯಲ್ಲಿಯೂ ಅಘೋಷಿತ ಬಂದ್ ಆಚರಿಸಲಾಗುತ್ತಿದೆ.
ಈ ಸಮಯದಲ್ಲಿ ಒಂದು ಹುದ್ದೆಯವರು ಮಾತ್ರ ಪ್ರತಿದಿನ ಶಾಲೆಗಳಿಗೆ ತೆರಳಿ ಕೆಲಸ ಮಾಡುತ್ತಿದ್ದಾರೆ. ಅವರೇ ನೋಬೆಲ್ ವೃತ್ತಿ ಮಾಡುತ್ತಿರುವ ಶಿಕ್ಷಕರು. ಹೌದು ನಮ್ಮ ಭವಿಷ್ಯ ರೂಪಿಸುತ್ತಿರುವ ಶಿಕ್ಷಕರಿಗೆ ರಜೆ ಕೊಟ್ಟಿಲ್ಲ, ಮಕ್ಕಳಿಲ್ಲದ ಶಾಲೆಯಲ್ಲಿ ದಾಖಲೆಗಳನ್ನು ಬರೆಯುವಲ್ಲಿ ನಿರತರಾಗಿದ್ದಾರೆ ಇವರಿಗೆ ಅದ್ಯಾವ ವೈರಸ್ ಇಲ್ಲವೆಂಬAತೆ ಮುಂದಿನ ಆದೇಶವನ್ನು ಅಥವಾ ಶಾಲೆಗಳ ವಾರ್ಷಿಕ ಕೊನೆಯ ದಿನಗಳನ್ನು ಎಣಿಸಿಕೊಳ್ಳುತ್ತಾ ಎಲ್ಲರೂ ಕೊರೋನ ಹರಡುವಿಕೆಯ ಮಾತುಗಳನ್ನಾಡುತ್ತಾ ಸುಡು ಬಿಸಿಲಿನ ತಾಪವನ್ನು ಸಹಿಸಿಕೊಳ್ಳುತ್ತಾ ಕೆಲಸ ಮಾಡುತ್ತಿದ್ದಾರೆ.
ಈ ಮೂಲಕ ನಾನು ನಮ್ಮೆಲ್ಲರ ಶಿಕ್ಷಕರ ಪರವಾಗಿ ಇಲಾಖೆಯ ಮಾನ್ಯ ಸಚಿವರಿಗೆ ವಿನಂತಿ ಮಾಡುವುದೆನೆಂದರೆ ಇದೀಗ ಶಾಲೆಗಳಿಗೆ ತೆರಳುತ್ತಿರುವ ಶಿಕ್ಷಕರಿಗೂ ರಜೆಯನ್ನು ಘೋಷಣೆ ಮಾಡಿ. ಅವರೂ ಕೂಡಾ ಈ ವೈರಸ್ ನಿಂದಾ ಬಚಾವ್ ಮಾಡಿ. ಅವರು ಕೂಡ ನಮ್ಮೊಳಗಿನ ಜೀವಗಳು ಅವರಿಂದ ಎಷ್ಟೆಲ್ಲ ಕೆಲಸಗಳನ್ನು ಮಾಡಿಸುವ ನಾವುಗಳು ಅವರನ್ನು ಕಾಯ್ದುಕೊಳ್ಳಬೇಕಾದ ಅನಿವಾರ್ಯ ಅನಿಸುವುದಿಲ್ಲವೆ. ದೇಶದ ದೊಡ್ಡ ಕೆಲಸಗಳಲ್ಲಿ ಬೇಸ ಮಾಡಿಕೊಳ್ಳದೇ ಕೆಲಸ ಮಾಡುವ ಶಿಕ್ಷಕರು ನಮ್ಮ ಅಗತ್ಯ ಅನಿಸುವುದಿಲ್ಲವೆ. ಸಣ್ಣ ರೋಗಗಳ ಸರ್ವೆಯಿಂದ ಹಿಡಿದು ದೊಡ್ಡ ಜನಗಣತಿ ಚುನಾವಣೆಯಂತಹ ಮಹತ್ವದ ಜವಾಬ್ದಾರಿಗಳನ್ನು ಹೊತ್ತು ಅಚ್ಚುಕಟ್ಟಾಗಿ ಕೆಲಸ ಮಾಡುವ ನಮ್ಮ ಶಿಕ್ಷಕರಿಗೆ ಈ ರೋಗ ತಗುಲಿದರೆ ನಮ್ಮನ್ನು ನಾವು ಕ್ಷಮಿಸಿಕೊಳ್ಳಲಾರೆವು. ನಮ್ಮೆಲ್ಲರ ಬದುಕು ಹಸನು ಮಾಡುವ ಈ ಶಿಕ್ಷಕರಿಗೆ ನಾವೆಲ್ಲರೂ ಒಮ್ಮತದಿಂದ ಕಾಯಬೇಕಾದ ಅನಿವಾರ್ಯ ಈ ಸಂದರ್ಭದಲ್ಲಿದೆ.
ಈ ಭಾರತದಲ್ಲಿ ಹಲವು ದಿನಗಳಿಂದ ನನಗೆ ಒಂದು ಕಾಡುವಂತಹ ಪ್ರಶ್ನೆಯೆಂದರೆ ಪ್ರತಿಬಾರಿಯೂ ಯಾಕೆ ಶಿಕ್ಷಕರನ್ನು ಕಡೆಗಣಿಸಲಾಗುತ್ತದೆ ಎಂದು. ಈಗ ಕೊರೋನಾ ವೈರಸ್ ಏನಾದರು ಇಲ್ಲಾ ನಾನು ಶಿಕ್ಷಕರಿಗೆ ತಗುಲುವುದಿಲ್ಲವೆಂದು ಹೇಳಿದೆಯಾ ಎಲ್ಲರಿಗೂ ರಜೆ ಹಾಗೂ ವರ್ಕ ಫ್ರಾಮ್ ಹೋಂ ಘೋಷಣೆ ಮಾಡಿ ಶಿಕ್ಷಕರು ಮಾತ್ರ ಶಾಲೆಗಳಲ್ಲಿ ಕೆಲಸ ಮಾಡಿ ಎಂದು ಹೇಳುವ ಹಿಂದಿನ ಉದ್ದೇಶ ಅರ್ಥವಾಗುತ್ತಿಲ್ಲ. ಎಲ್ಲರಿಗೂ ತಗುಲುವ ವೈರಸ್ ನಮ್ಮ ಶಿಕ್ಷಕರಿಗೆ ತಗುಲುವುದಿಲ್ಲವೆಂದು ಹೇಗೆ ಹೇಳಲು ಸಾಧ್ಯವಾಗುತ್ತದೆ.
ಈಗಾಗಲೇ ನನಗೆ ತಿಳಿದಿರುವ ಪ್ರಕಾರ ಅನೇಕ ಶಾಲೆಗಳಲ್ಲಿ ಮೂಲಭೂತ ಸೌಕರ್ಯದ ಕೊರತೆಯಿದೆ. ನೀರಿದ್ದಲ್ಲಿ ಶೌಚಾಲಯವಿಲ್ಲ, ಶೌಚಾಲಯವಿದ್ದಲ್ಲಿ ನೀರಿಲ್ಲ ಎನ್ನುವ ವಾಸ್ತವದೊಳಗೆ ನಮ್ಮ ಶಿಕ್ಷಕರು ಯಾವುದೇ ಧ್ವನಿಯೆತ್ತದೆ ತಮ್ಮ ಪಾಡಿಗೆ ಕೆಲಸ ಮಾಡುತ್ತಿದ್ದಾರೆ. ಇಂತಹ ಭಯದ ವಾತಾವರಣದಲ್ಲಿಯೂ ಯಾವುದೇ ಧ್ವನಿಯತ್ತದೆ ತಮ್ಮ ಪಾಡಿಗೆ ಕೆಲಸ ಮಾಡುತ್ತಿರುವುದು ಗಮನಿಸಲಾಗಿದೆ. ಕೆಲವು ಶಿಕ್ಷಕರು ಶಾಲೆಗೆ ಹೋಗಿ ಹಾಜರಿ ಹಾಕಿ ಮನೆಗೆ ಬರುತ್ತಿದ್ದಾರೆ ಎನ್ನುವುದನ್ನು ಒಪ್ಪಿಕೊಳ್ಳುತ್ತಾ ಸಾಮಾಜಿಕ ಜವಾಬ್ದಾರಿಯನ್ನು ಹೊತ್ತಿರುವ ಜೊತೆಗೆ ಕೌಟುಂಬಿಕ ಜವಾಬ್ದಾರಿಯಿರುವ ಶಿಕ್ಷಕರು ಕೂಡ ಅಷ್ಟೆ ಮುಖ್ಯರಾಗುತ್ತಾರೆ ಅದಕ್ಕಾಗಿ ನಮ್ಮ ಶಿಕ್ಷಕರಿಗೂ ಕೂಡ ಈ ಕೊರೋನಾ ವೈರಸ್ ನಿಂದಾ ಕಾಪಾಡುವ ಜವಾಬ್ದಾರಿ ಸರಕಾರದ ಮೇಲಿದೆ ಹೀಗಾಗಿ ಇದೀಗ ಕರ್ತವ್ಯದಲ್ಲಿ ಇರುವ ನಮ್ಮ ಬಾಳ ಪಯಣವನ್ನು ಶೈಕ್ಷಣಿಕವಾಗಿ ಸುಧಾರಿಸಿದ ಶಿಕ್ಷಕರಿಗೆ ರಜೆ ಘೋಷಿಸೋಣವೆ.
ಇದರ ಜೊತೆಗೆ ಕೆಲವು ಶಿಕ್ಷಕರು ಹೇಳುತ್ತಿರುವ ಮಾತುಗಳು ಅಕ್ಷರಸ ಸತ್ಯವಾಗಿವೆ. “ಸರ್ ನಾವು ಶಿಕ್ಷಕರು ಹೌದು ಅದಕ್ಕಿಂತ ಮೊದಲು ನಾವು ಕೂಡ ನಿಮ್ಮೆಲ್ಲರಂತೆ ಮನುಷ್ಯರಲ್ಲವೆ, ನಮಗೂ ಕೌಟುಂಬಿಕ ಜವಾಬ್ದಾರಿಗಳಿಲ್ಲವೆ, ನಮಗೂ ಮಕ್ಕಳು ಹೆಂಡತಿ ಇದ್ದಾರಲ್ಲವೆ, ಇಷ್ಟಕ್ಕೂ ನಮಗೂ ಕೊರೋನಾ ಮಾರಕವಲ್ಲವೆ ಎಲ್ಲರೂ ರಜೆಯಲ್ಲಿರುವಾಗ ನಮಗೆ ರಜೆಯಿಲ್ಲವೇಕೆ”
“ಮಕ್ಕಳೇಯಿಲ್ಲದ ಶಾಲೆಯಲ್ಲಿ ಕೆಲಸವಂತು ಇದೆ ಎಂದು ಒಪ್ಪಿಕೊಳ್ಳುತ್ತೇವೆ ಹಾಗಾಂತ ಜೀವ ಕೈಯಲ್ಲಿ ಹಿಡಿದುಕೊಂಡು ನೌಕರಿ ಮಾಡಬೇಕಾದ ಅನಿವಾರ್ಯತೆ ಬಂದಿದೆ. ಎಲ್ಲರೂ ಭಯದಲ್ಲಿ ಮನೆಯಲ್ಲಿ ಕುಳಿತರೆ ನಾವೆಲ್ಲರೂ ಬೆಳೆಗ್ಗಿನ ಬಸ್ ಕಡೆಗೆ ಓಡಿ ಶಾಲೆಗಳತ್ತ ಮುಖಮಾಡಿದ್ದೇವೆ. ಆತಂಕದಲ್ಲಿಯೇ ಶಾಲೆಯ ಗೋಡೆಗಳ ಜೊತೆಗೆ ನಮ್ಮ ಸಂಭಾಷಣೆ ಮಾಡುತ್ತಾ ಕುಳಿತಿದ್ದೇವೆ.”
“ಕೆಲಸಕ್ಕೆ ಕರೆಯಬೇಡಿ, ಊಟಕ್ಕೆ ಮರೆಯಬೇಡಿ” ಎನ್ನುವಂತಹ ಸ್ಥಿತಿ ನಮ್ಮದಾಗಿದೆ. ಸಾಮಾಜಿಕ ಕೆಲಸಗಳು ಬಂದಾಗ ಶಿಕ್ಷಕರು ಹೊಣೆಗಾರರಾಗುತ್ತಾರೆ ಆದರೆ ರಕ್ಷಣೆಯ ವಿಷಯಕ್ಕೆ ಬಂದರೆ ನಮಗ್ಯಾರು ರಕ್ಷಣೆ ಕೊಡುತ್ತಾರೆ ಎನ್ನುವುದು ಯಕ್ಷಪ್ರಶ್ನೆ”
ಕೊನೆಯ ತುತ್ತು : ದೇಶದ ಎಲ್ಲಾ ಹುದ್ದೆಗಳಲ್ಲಿರುವಂತೆ ಶಿಕ್ಷಕ ಹುದ್ದೆಯಲ್ಲಿಯೂ ಮನುಷ್ಯರೆ ಅವರಿಗೂ ಕೊರೋನಾ ವೈರಸ್ನಂತಹ ಮಾರಕದಿಂದ ರಕ್ಷಣೆಯ ಅವಶ್ಯಕತೆಯಿದೆ. ಸಮಾಜದ ಅಭಿವೃದ್ಧಿಗಾಗಿ ಕೆಲಸ ಮಾಡುವ ಸಾಮಾಜಿಕ ವೈದ್ಯನ ರಕ್ಷಣೆ ನಮ್ಮೆಲ್ಲರ ಹೊಣೆಯಲ್ಲವೆ ಒಮ್ಮೆ ಯೋಚಿಸಿ. ದೇಶವನ್ನು ಯೋಧ ಕಾಯುತ್ತಾನೆ. ಶಾಲೆಯಲ್ಲಿರುವ ನಮ್ಮ ಮಕ್ಕಳ ಮತ್ತು ಅವರ ಭವಿಷ್ಯ ಶಿಕ್ಷಕರು ಕಾಯುತ್ತಾರೆ. ಶಿಕ್ಷಕರನ್ನು ಕಾಯುವುದು ನಮ್ಮ ಸಾಮಾಜಿಕ ಜವಾಬ್ದಾರಿಯಲ್ಲವೆ.