ಇತ್ತೀಚಿಗೆ ಒಂದಷ್ಟು ಗೆಳೆಯರು ಕರೆ ಮಾಡಿ ಅಂಬೇಡ್ಕರ್ ಜಯಂತಿ ಆಚರಣೆಗಾಗಿ ಕಾರ್ಯಕ್ರಮದ ಆಹ್ವಾನವಿತ್ತರು. ಅವರೆಲ್ಲರ ಆಹ್ವಾನದಲ್ಲಿ ನನಗೆ ಸ್ಪಷ್ಟವಾಗಿ ಅಂಬೇಡ್ಕರರ ಅದಮ್ಯ ಚೇತನ ಕಾಣುತ್ತಿರಲಿಲ್ಲ, ಬರಿ ಆಡಂಬರ ಕಂಡು ಬರುತ್ತಿತ್ತು. ಏಕೆಂದರೆ ಅಂಬೇಡ್ಕರ್ ಎಲ್ಲಿಯೂ ನನ್ನ ಜಯಂತಿ ಹೀಗೆ ಮಾಡಿ, ಹಾಗೆ ಮಾಡಿ ಎಂಬ ವಿಷಯ ಹೇಳಿಲ್ಲ, ಕುಡಿದು ಕುಪ್ಪಳಿಸಿ ಎಂದು ಹೇಳಿಲ್ಲ ಬದಲಾಗಿ ನಮ್ಮ ಮಕ್ಕಳು ಶಿಕ್ಷಣ ಪಡೆಯಬೇಕು ಎಂದಿದ್ದರು. ಆದರೆ ಇತ್ತೀಚಿಗೆ ನಡೆಯುತ್ತಿರುವ ಎಲ್ಲ ಆಚರಣೆಗಳು ಅವರ ಆಶೋತ್ತರಗಳನ್ನು ಮಣ್ಣುಪಾಲು ಮಾಡುವ ವಿಷಯಗಳಾಗಿ ಹೊರಹೊಮ್ಮುತ್ತಿವೆ. ಅದಕ್ಕಾಗಿಯೇ ನನಗೆ ಈ ಜಯಂತಿಗಳು ಕಂಡರೆ ಬೇಜಾರಾಗುತ್ತದೆ. ಮಾನ್ಯ ಅಂಬೇಡ್ಕರ್ ಅವರನ್ನು ನಾವೆಲ್ಲಿ ಮೂಲೆ ಗುಂಪು ಮಾಡುತ್ತಿದ್ದೇವೆ ಅನಿಸುತ್ತದೆ. ಹಾಗಾದರೆ ಅಂಬೇಡ್ಕರ್ ಪ್ರಸ್ತುತವಾಗಿ ಯಾವ ರೂಪದಲ್ಲಿ ನಮ್ಮ ಜೊತೆಗಿದ್ದಾರೆ ಎಂಬ ವಿಷಯ ಅರ್ಥ ಮಾಡಿಕೊಳ್ಳಬೇಕಾದ ಅಗತ್ಯವಿದೆ.
0 Comments
|
ಇಲ್ಲಿಯವರೆಗೆ...
October 2023
"
|