ನನಗೆ ತುಂಬಾ ಚೆನ್ನಾಗಿ ನೆನಪಿದೆ ನಮ್ಮ ಮನೆಯಲ್ಲಿ ಅಣ್ಣ ಬಿ.ಎಡ್. ಸೀಟ್ಗೆ ಆಯ್ಕೆಯಾಗಿದ್ದ ಸಂದರ್ಭ. ಮನೆಯಲ್ಲಿ ಅವತ್ತು ಹಬ್ಬದ ವಾತಾವರಣವಿತ್ತು. ಅಪ್ಪನು ಮಗನಿಗೆ ಸಾಲಾ ಮಾಡಿಯ್ಯಾದರು ಬಿ.ಎಡ್. ಓದಿಸಲೇಬೇಕು ಎನ್ನುತ್ತಿದ್ದರು. ಅಣ್ಣನು ಕೂಡ ಏನೆ ಕಷ್ಟ ಬರಲಿ ರಜಾ ಅವಧಿಯಲ್ಲಿ ಕೂಲಿ ಕೆಲಸ ಮಾಡಿದರು ಸರಿ ಬಿ.ಎಡ್. ಓದಲೇಬೇಕು ಎನ್ನುತ್ತಿದ್ದರು. ಇಬ್ಬರೂ ಅದರಂತೆ ಮಾಡಿಯೇ ತೀರಿದರು. ಆಗ ಅಣ್ಣ ಬಿ.ಎಡ್. ಕೋರ್ಸನ್ನು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದರು. ಇತ್ತ ಮನೆಯಲ್ಲಿ ಅಪ್ಪ ಅಮ್ಮ ಅಣ್ಣನ ಓದಿನದ್ದೆ ಚಿಂತೆ ಮಾಡುತ್ತಿದ್ದರು. ಆ ಸಮಯದಲ್ಲಿ ಬಿ.ಎಡ್. ಕೋರ್ಸಿಗೆ ಇರುವ ಬೆಲೆ ಎಷ್ಟು ಎಂಬುವುದು ಆಗಲೇ ಅರ್ಥವಾಗಿದ್ದು.
ನಮ್ಮ ರಾಷ್ಟ್ರದಲ್ಲಿ ಶಿಕ್ಷಕರ ಶಿಕ್ಷಣಕ್ಕೆ ಅದರದ್ದೇ ಆದ ಮಹತ್ವವಿದೆ. ಆ ಶಿಕ್ಷಣ ಗೌರವಯುತವಾದ ಸ್ಥಾನ ಮೊದಲಿನಿಂದಲೂ ಪಡೆದಿದೆ. ಶಿಕ್ಷಕರನ್ನು ಸೃಷ್ಠಿಮಾಡುವ ಮೂಲಕ ಸಮಾಜ ನಿರ್ಮಾಣ ಕಾರ್ಯದಲ್ಲಿ ಶಿಕ್ಷಕರ ಶಿಕ್ಷಣ ಮಹತ್ವದ ಸ್ಥಾನ ಪಡೆದಿದೆ. ಇವತ್ತು ಈ ಕೋರ್ಸ್ ತನ್ನ ಅರ್ಥ ಕಳೆದುಕೊಳ್ಳುತ್ತಿದೆಯಾ ಎಂಬ ಅನುಮಾನ ಕಾಡತೊಡಗಿದೆ. ವಿದ್ಯಾವಂತರಾದವರನ್ನು ಯಾರಾನ್ನಾದು ಕೇಳಿ ನೋಡಿ ಅವರೆಲ್ಲರೂ ಬಿ.ಎಡ್. ಕೋರ್ಸ ಮುಗಿಸಿದ್ದಾರೆ.
ಈ ಕೋರ್ಸ್ಗೆ ಸೇರುತ್ತಿರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಇಳಿಯುತ್ತಿರುವುದು ಇಂತಹದೊಂದು ಗುಮಾನಿ ಹುಟ್ಟುಹಾಕಿದೆ. ಒಂದು ವರ್ಷದ ಅವಧಿಯಿದ್ದಾಗ ಹೆಚ್ಚು ಜನರು ಈ ಕೋರ್ಸ ಓದಲು ಬಯಸುತ್ತಿದ್ದರು. ಇದೀಗ ಈ ಕೋರ್ಸನ ಮಹತ್ವ ಕಡಿಮೆಯಾಗಿದೆ ಎಂಬುವುದು ಕಂಡುಬರುತ್ತಿದೆ. ಎರಡು ವರ್ಷಗಳ ಹಿಂದೆ 1,527 ಸೀಟು ಉಳಿದಿದ್ದರೆ, ಕಳೆದ ವರ್ಷ 2,848 ಸೀಟು ಉಳಿದಿತ್ತು. ಈ ವರ್ಷ ಮತ್ತೊಂದು ಸಾವಿರ ಸೀಟುಗಳು ಕುಸಿತ ಕಂಡಿದ್ದು, 3,862 ಸೀಟುಗಳು ಖಾಲಿ ಉಳಿದುಕೊಂಡಿವೆ. ಒಂದು ವರ್ಷದ ಕೋರ್ಸ್ ಇದ್ದಾಗ ಹೆಚ್ಚಿನ ವಿದ್ಯಾರ್ಥಿಗಳು ಈ ಕೋರ್ಸ್ ಪಡೆಯಲು ಆಸಕ್ತಿ ಹೊಂದಿದ್ದರು. ಆದರೆ, ಇತ್ತೀಚಿನ ವರ್ಷಗಳಲ್ಲಿ ನಿರಾಸಕ್ತಿ ಹೆಚ್ಚಾಗುತ್ತಿದೆ.
ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ಸೀಟುಗಳು ಖಾಲಿ ಉಳಿದುಕೊಂಡಿವೆ. ವರ್ಷದಿಂದ ವರ್ಷಕ್ಕೆ ಖಾಲಿ ಉಳಿಯುವ ಸೀಟುಗಳ ಸಂಖ್ಯೆ ಹೆಚ್ಚಳವಾಗುತ್ತಿದೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ಹೇಳುತ್ತವೆ. ರಾಜಧಾನಿಯಲ್ಲೇ ಹೆಚ್ಚು: ವಿಶ್ವದ ವಿವಿಧ ರಾಷ್ಟ್ರಗಳು ಹಾಗೂ ದೇಶದ ವಿವಿಧ ರಾಜ್ಯಗಳಿಂದ ವಿವಿಧ ಕೋರ್ಸುಗಳ ವ್ಯಾಸಂಗಕ್ಕಾಗಿ ರಾಜಧಾನಿ ಬೆಂಗಳೂರಿಗೆ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಆದರೆ, ಬಿ.ಇಡಿ ಕೋರ್ಸಿನ ವಿಚಾರದಲ್ಲಿ ಉಲ್ಟಾಪಲ್ಟಾವಾಗಿ ಪರಿಣಾಮ ಬೀರಿದೆ.
ಬೆಂಗಳೂರಿನ ಧನ್ವಂತರಿ ಕಾಲೇಜು, ಕೆಐಇಟಿ, ಎಂವಿಜೆ ಕಾಲೇಜು, ರಾಜೀವ್ಗಾಂಧಿ ಕಾಲೇಜ್ ಆಫ್ ಎಜುಕೇಷನ್, ಶ್ರೀ ರಾಘವೇಂದ್ರ ಕಾಲೇಜು ಸೇರಿದಂತೆ ಹಲವು ಕಾಲೇಜುಗಳಲ್ಲಿ ಶೇ.40ಕ್ಕೂ ಹೆಚ್ಚಿನ ಸೀಟುಗಳು ಖಾಲಿ ಉಳಿದಿವೆ. ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಕಡಿಮೆ: ರಾಜಧಾನಿ ಬೆಂಗಳೂರಿಗೆ ಹೋಲಿಸಿಕೊಂಡರೆ ಉತ್ತರ ಕರ್ನಾಟಕದ ರಾಜ್ಯದ ಗಡಿಭಾಗದ ಜಿಲ್ಲೆಗಳಾದ ಬಾಗಲಕೋಟೆ, ಹಾವೇರಿ, ಬಳ್ಳಾರಿ ಮತ್ತು ಕಲಬುರಗಿ ಜಿಲ್ಲೆಗಳಲ್ಲಿರುವ ಕಾಲೇಜು ಗಳಲ್ಲಿ ಶೇ.10 ಸೀಟುಗಳಿಂತ ಹೆಚ್ಚಿನ ಸೀಟುಗಳು ಖಾಲಿ ಉಳಿದಿಲ್ಲ.
ಮೊದಲಿನಿಂದಲೂ ಒಂದು ವರ್ಷ ಓದಿಕೊಂಡು ಬಂದವರು ಈಗಾಗಲೇ ತುಂಬಾ ವಿದ್ಯಾರ್ಥಿಗಳು ಇರುವುದರಿಂದ ಈ ಕೋರ್ಸಗೆ ಒಂದು ವರ್ಷಕ್ಕೆ ನಿರಾಕರಣೆ ವಿದ್ಯಾರ್ಥಿಗಳಿಂದ ಈ ಮೊದಲೆ ನಡೆದಿತ್ತು. ಪ್ರಾರಂಭಿಕ ವರ್ಷದಲ್ಲೇ ವಿದ್ಯಾರ್ಥಿಗಳು ಎರಡು ವರ್ಷದ ಕೋರ್ಸಿಗೆ ಆಸಕ್ತಿ ತೋರದ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ ವರ್ಷಾರಂಭದಲ್ಲಿಯೇ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಕೋರ್ಸುಗಳ ಅವಧಿಯನ್ನು ಎರಡು ವರ್ಷದಿಂದ ಒಂದು ವರ್ಷಕ್ಕೆ ಕಡಿತಗೊಳಿಸಲು ಶಿಕ್ಷಕರ ರಾಷ್ಟ್ರೀಯ ಶಿಕ್ಷಣ ಸಮಿತಿ ಮನವಿ ಸಲ್ಲಿಸಿದ್ದವು. ಈ ರಾಜ್ಯಗಳ ಮನವಿಯನ್ನು ಅವತ್ತೇ ಪುರಸ್ಕರಿಸಿದ್ದರೆ ಇವತ್ತು ಈ ಕೋರ್ಸಗೆ ಈ ಸ್ಥಿತಿ ಬರುತ್ತಿರಲಿಲ್ಲ ಬದಲಿಗೆ ತನ್ನ ಮಹತ್ವ ಕಾಯ್ದುಕೊಳ್ಳುತಿತ್ತು.
ಸರಕಾರಗಳು ಈ ಕೋರ್ಸನ ವಾಸ್ತವದಲ್ಲಿ ಕೆಲವು ತಪ್ಪುಗಳನ್ನು ಮಾಡಿದ್ದರು. ಖಾಸಗೀ ಶಾಲೆಗಳಿಗೆ ಅದರಲ್ಲೂ ಅತೀಹೆಚ್ಚು ಕಾಲೇಜುಗಳಿಗೆ ಈ ಕೋರ್ಸ ತೆಗೆಯಲು ಪರವಾನಿಗೆಯನ್ನು ನೀಡಿ ಅದರ ಮಹತ್ವ ಕಳೆಯುವಂತೆ ಮಾಡಿದರು. ಪ್ರೇರಕ ಶಕ್ತಿಯಾಗಿ ಶಿಕ್ಷಕರ ಶಿಕ್ಷಣ ಗಲ್ಲಿ ಗಲ್ಲಿಗಳಿಯೂ ಇರುವ ಹಲವಾರು ಜನರು ಈ ಕೋರ್ಸ ಓದುವಂತಾಯಿತು ಕೆಲವರು ಮನೆಯಲ್ಲಿಯೇ ಕುಳಿತು ಕೋರ್ಸ ಮುಗಿಸಿಯೇಬಿಟ್ಟರು. ಇನ್ನು ಕೆಲವರು ಕೊನೆಯಲ್ಲಿ ಸರ್ಟಿಫೀಕೇಟ್ ಪಡೆದುಕೊಂಡರು ಹೀಗೆ ದಾರಿ ತಪ್ಪಿದ ಬಿ.ಇಡಿ. ಶಿಕ್ಷಣ ಇದೀಗ ಯಾರು ಕೇಳದಂತಹ ವಾಸ್ತವಕ್ಕೆ ಬಂದು ತಲುಪಿದೆ.
ಇನ್ನೊಂದು ಮುಖ್ಯವಾದ ವಿಚಾರವೆಂದರೆ ಈ ಕೋರ್ಸಗೆ ಸೇರಿಕೊಂಡವರಿಗಾಗಲಿ ಕಾಲೇಜು ನಡೆಸುವ ಖಾಸಗಿ ಮತ್ತು ಸರಕಾರಿ ಕಾಲೇಜುಗಳಿಗಾಗಲಿ ಸರಕಾರದಿಂದ ಮೇಲ್ವಿಚಾರಣೆಗಳು ಸರಿಯಾಗಿ ಆಗಲೇಯಿಲ್ಲ. ಸ್ಥಳೀಯಮಟ್ಟದ ರಾಜಕಾರಣ ಇಲ್ಲಿ ಅತಿಹೆಚ್ಚು ಕೆಲಸ ಮಾಡಿತು. ದೊಡ್ಡ ದೊಡ್ಡ ನಗರಗಳಲ್ಲಿ ಈ ಕಾಲೇಜುಗಳ ಸಂಖ್ಯೆ ದಿನದಿಂದ ದಿನಕ್ಕೆ ಏರತೊಡಗಿತು. ಅದು ಯಾರ ಹಂಗಿಲ್ಲದೆ ಡೊನೆಷನಂತಹ ಹಾವಳಿಯಲ್ಲಿ ವಿದ್ಯಾರ್ಥಿಗಳ ಬಾಳು ಧೂಳಿಪಟವಾಗಿಸಿತು. ಮನೆಗೊಂದು ಬಿ.ಎಡ್. ಕಾಲೇಜು ಮನೆಯಲ್ಲಿರುವವರೆಲ್ಲರೂ ಬಿ.ಎಡ್. ಕೋರ್ಸ ಮುಗಿಸಿರುವವರು ಎನ್ನುವಷ್ಟರಮಟ್ಟಿಗೆ ಈ ಕೋರ್ಸ ಬೆಳೆಯುತ್ತಾ ತನ್ನ ಮಹತ್ವ ಕಳೆದುಕೊಳ್ಳುತ್ತಾ ಹೋಯಿತು. ಇವತ್ತು ಎಲ್ಲಿಯಾದರು ನಿಂತುಕೊಂಡು ಕಲ್ಲೆಸೆದರೆ ಅದೂ ಬಿ.ಎಡ್. ಮಾಡಿರುವ ವ್ಯಕ್ತಿಯ ಮನೆಯ ಮೇಲೆ ಬೀಳುತ್ತದೆ ಎಂಬುವುದು ಇವತ್ತಿನ ಸತ್ಯವಾಗಿದೆ.
ಶಿಕ್ಷಕರ ಶಿಕ್ಷಣವು ತನ್ನ ಮಹತ್ವ ಕಳೆದುಕಳ್ಳಲು ನೇರವಾಗಿ ಸರಕಾರವೆ ಹೊಣೆಯಾಗುತ್ತದೆ. ವರ್ಷಗಳು ಕಳೆದಂತೆ ಶಿಕ್ಷಕರ ಮೇಲಿನ ಗೌರವ ಕಡಿಮೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕಲಿಯುವ ಕೋರ್ಸಿಗೂ ಕಾಸಿನ ಕಿಮ್ಮತ್ತಿಲ್ಲವೆಂದಾದರೆ ನಾವೆಲ್ಲರೂ ನಮ್ಮ ಮುಂದಿನ ಪೀಳಿಗೆಗೆ ಬಿಟ್ಟು ಕೊಡುತ್ತಿರುವ ತತ್ವ ಸಿದ್ಧಾಂತ ಯಾವುದು ಎಂಬ ಚಿಂತನೆ ಮಾಡಬೇಕಿದೆ. ಇದೀಗ ಸರಕಾರಿ ಶಾಲೆಗಳಲ್ಲಿ ಓದವುದೇ ಕಡಿಮೆಯಾಗುತ್ತಿದೆ. ಎಲ್ಲರೂ ಖಾಸಗೀ ಶಾಲೆಗಳ ಕಡೆಗೆ ಮುಖಮಾಡಿದ್ದು ಶಿಕ್ಷಕರ ಶಿಕ್ಷಣ ಕಲಿತು ಖಾಸಗೀ ಶಾಲೆಗಳಲ್ಲಿ ಕೆಲಸ ಮಾಡಿದರೆ ಸಿಗುವ ಸಂಬಳದ ಬಗ್ಗೆ ಮಾತನಾಡುವಂತಹ ವಾಸ್ತವದಲಿಲ್ಲ. ಹೀಗಾಗಿ ಇನ್ನಾದರು ಸರಕಾರ ಈ ಶಿಕ್ಷಕರ ಶಿಕ್ಷಣದ ಕುರಿತು ಯೋಚಿಸಲು ಶಿಕ್ಷಕರ ಶಿಕ್ಷಣ ವ್ಯವಸ್ಥೆಗೆ ಹೆಚ್ಚು ಮಹತ್ವ ಕೊಡುವಂತಾಗಲಿ ಈ ಕೋರ್ಸ ಕಲಿಯುವವರಲ್ಲಿ ಹುಮ್ಮಸ್ಸು ಮೂಡುವಂತಹ ನಿಯಮಗಳನ್ನು ಜಾರಿ ಮಾಡಲಿ ಶಿಕ್ಷಕರ ಶಿಕ್ಷಣದ ಮಹತ್ವ ಹೆಚ್ಚಾಗಲಿ ಶಿಕ್ಷಕರ ಗೌರವ ಉಳಿಯಲಿ ಎಂಬುವುದು ನನ್ನ ಆಶೆಯ.