ಇಷ್ಟು ದಿನ ಬಿಜೆಪಿಯವರಿಗೆ ಕತ್ತಿ ಹಿಡಿದು ಬತ್ತಿ ಇಡುತ್ತ ಅವರ ಅವಹೇಳನವನ್ನು ಮಾಡಿ ಯಡ್ಡಿ , ಸದಾ, ಶೆಟ್ಟರ ಹೀಗೆ ಈಡಿ ಬಿಜೆಪಿ ಜನರನ್ನೆ ಟಾರಗೆಟ್ ಮಾಡಿ ವಿಚಿತ್ರ ಪ್ರಶ್ನೆಗಳನ್ನು ಹಾಕುತ್ತ ಇದ್ದ್ದುದ್ದು ಹೇಳಿ, ಇಲ್ಲದ್ದು ಹೇಳಿ ಮಾಡುವ ಕೆಲವು ಒಳ್ಳೆಯ ಕೆಲಸಗಳಿಗೆ ಮಣ್ಣು ಹಾಕಿ ಕೊಳ್ಳೆ ಹೊಡಿಯಲಾಯಿತು . ಈಗ ಸದ್ಯ ಮಾನ್ಯ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ ಇನ್ನು ಮುಂದೆ ಇವರ ಪಾಡು ಅದೇ ಆಗುವುದೆ ಎನ್ನುವ ಲೆಕ್ಕಚಾರ ಪ್ರಾರಂಭವಾಗಿದೆ ಇವರಿಗೇನು ಮಾಡುವರೊ ತಿಳಿಯದು ಹೇಗೆ ಟಾರ್ ಗೇಟ್ ಮಾಡುವರು ತಿಳಿಯದು
ಈಗಾಗಲೇ ಈ ಮೊದಲು ಈ ಕತ್ತಿ ಹಿಡಿದು ಬತ್ತಿ ಇಡುವ ಕೆಲಸ ಪ್ರಾರಂಭಿಸಿದ್ದು ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ನಡೆದಾಗ ಮಾನ್ಯ ಖರ್ಗೆಯವರಿಗೆ ವರ್ಚೆಸಿಲ್ಲ ಅವರು ಬಹುತೇಕ ದಲಿತರ ಪ್ರತಿನಿಧಿ ಹಾಗಾಗಿ ಮುಖ್ಯಮಂತ್ರಿ ಸ್ಥಾನ ಸಿಗುವುದು ಖಚಿತವಿಲ್ಲ ಎಂದು ಒಂದು ಕಡೆ ಇವರು ಒಬ್ಬ ಹಿರಿಯ ರಾಜಕಾರಣಿ ಇವರಿಗೆ ಮುಖ್ಯಮಂತ್ರಿ ಸ್ಥಾನ ಸಿಕ್ಕೆ ಸಿಗುತ್ತೆ ಅವರ ಸಾಧನೆಯೆ ಅವರ ದಾರಯಾಗಲಿವೆ ಹೀಗೆ ಇನ್ನು ಆಗುವ ಮುನ್ನೆವೆ ವಿಚಿತ್ರ ಗಾಳಿ ಎಬ್ಬಿಸುವ ಕೆಲಸ ಈ ಮಾಧ್ಯಮದವರು ಮಾಡಿದರು
ಇನ್ನು ಸಿದ್ಧರಾಮಯ್ಯ ಮಾಸ್ ಲೀಡರ್ ಅವರು ಮುಖ್ಯಮಂತ್ರಿ ಆಗೇ ಆಗುತ್ತಾರೆ ಎನ್ನುವ ವಿಚಾರ ಜನರಿಗಿಂತ ಮೊದಲು ಎತ್ತಿದ್ದು ಮಾನ್ಯ ಮಾಧ್ಯಮದವರು ಅವರು ವಲಸಿಗರು ಎಲ್ಲಿ ಎಡುವುದು ಎನ್ನುವ ವಿಚಾರ ಅವರು ಕುರುಬ ಜನಾಂಗವನ್ನು ಮಾತ್ರ ಪ್ರತಿನಿಧಿಸುವರು ಎನ್ನುವ ವಿಚಾರ ಆವರ ಮಾತು ಹೈಕಮಾಂಡ ತಳ್ಳಿಹಾಕುವುದಿಲ್ಲ ಹೀಗೆ ಎಲ್ಲರಿಗೂ ಹಾದಿ ತಪ್ಪಿಸುವ ಕೆಲಸ ಈ ಮಾಧ್ಯಮದ ಮಂದಿ ಮಾಡಿದ್ದಾರೆ
ಡಿ ಕೆ ಶಿವುಕುಮಾರ ಯಾವುದೆ ಅಕ್ರಮ ಎಸಗಿಲ್ಲ ಅವರು ಮೂಲ ಕಾಂಗ್ರೇಸ್ ನವರು ಅವರಿಗೆ ಸಚಿವ ಸ್ಥಾನ ಕೊಡಿ ಎನ್ನುವ ವಿಶೇಷ ಬತ್ತಿ ಇಡುವ ಕೆಲಸ ಇತ್ತಿಚಿಗೆ ಈ ಮಾಧ್ಯಮಗಳು ಮಾಡಿವೆ . ಯಾರನ್ನು ಯಾವ ರೀತಿ ವರ್ಣಿಸಬೇಕು ಎನ್ನುವ ವಿಚಾರ ಹೇಗೆ ನಿರ್ಧರಿಸುತ್ತಿದ್ದರು ಎನ್ನುವ ವಿಚಾರ ಅಳೆಯಲು ಸಾದ್ಯವಿಲ್ಲ ಎನ್ನುವ ಪರಿ ತಿಳಿಯದು ಇನ್ನು ಶ್ಯಾಮನೂರುರವರು ಲಿಂಗಾಯತರ ಪ್ರತಿನಿಧಿ ಅವರು ಮುಖ್ಯಮಂತ್ರಿ ಆಕಾಂಕ್ಷಿ ಅವರನ್ನು ಆ ಸ್ಥಾನಕ್ಕೆ ಪೈಪೋಟಿ ಮಾಡುವವರು ಎನ್ನುವ ಕತ್ತಿ ಹಿಡಿದು ಬತ್ತಿ ಹಚ್ಚಿ ಲಿಂಗಾಯತರಲ್ಲಿ ವಿಚಿತ್ರವಾದ ಜಗಳ ಹಚ್ಚುವ ಲೆಕ್ಕಚಾರ ಮಾಡಿದ ಶ್ರೇಯಸ್ಸು ಈ ಮಾಧ್ಯಮ ಮಿತ್ರರಿಗೆ ಸಲ್ಲುತ್ತದೆ .
ಮಾನ್ಯ ಮಾಧ್ಯಮದವರೆ ನೀವು ಬರಿ ರಾಜಕೀಯ ವಿಚಾರಗಳನ್ನು ಮಾತ್ರ ಪ್ರತಿಬಿಂಬಿಸದೆ ಅನೇಕ ಸಾಮಾಜಿಕ ಸಮಸ್ಯೆಗಳನ್ನು ಈ ನಮ್ಮ ರಾಜಕಾರಣಿಗಳಿಗೆ ತೋರಿಸಬೇಕಾದ ಕೆಲಸ ಆಗಬೇಕು. ನಿಮ್ಮಿಂದ ಜನರ ಅಳಲು ನಮ್ಮ ಮುಖ್ಯಮಂತ್ರಿಗಳಿಗೆ ಮುಟ್ಟಬೇಕು ಇರುವ ಹತ್ತಾರು ಸಮಸ್ಯೆಗಳು ಬಗೆಹರಿಯಬೇಕು ಅವುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ನೀವು ಕೆಲಸ ಮಾಡಬೇಕು ಸಮಾಜದ ಪ್ರತಿಬಿಂಬವಾಗಿ ಕೆಲಸ ಮಾಡಬೇಕಾದ ಅಗತ್ಯ ಅನಿವಾರ್ಯವಿದೆ .
ಗುಲಬಗಾ೯, ರಾಯಚೂರು, ಯಾದಗಿರಿ , ಬಳ್ಳಾರಿಯ ಎಷ್ಟೊ ಊರಿನಲ್ಲಿ ಕುಡಿಯೋ ನೀರಿಲ್ಲ, ಬಳಸುವುದು ಅಂತು ದೂರಾ ಉಳಿತು ಬದುಕುವ ದಾರಿ ನೀರು ಅದೆ ಇಲ್ಲದೆ ಬದುಕಿರುವ ಜನರ ನೀರಿನ ಸಮಸ್ಯೆ ಪ್ರತಿಬಿಂಬಿಸಿ ನಮ್ಮ ಜನ ದೂರದಿಂದ ನೀರು ಹೊತ್ತು ತಂದು ತಂದು ಬೇಸತ್ತಿದ್ದಾರೆ. ನಮ್ಮ ಹೆಣ್ಣುಮಕ್ಕಳು ಸೊಂಟ ನೋವು ಮಾಡಿಕೊಂಡು ಸಾಗುತ್ತಿದ್ದಾರೆ. ತಮ್ಮ ಬದುಕಿನ ಸಂಭ್ರಮ ಮರೆತು ಈ ಸಮಸ್ಯೆಗಳ ಜಾಡಿನಲ್ಲಿ ಬಿದ್ದು ಒದ್ದಾಡುತ್ತಿದ್ದಾರೆ . ನೀರಿನ ಸಮಸ್ಯೆ ನಮ್ಮ ರಾಜ್ಯದ ಮೂಲ ಸಮಸ್ಯೆ ಕಾವೇರಿ ಕೊಡದೆ ಕ್ಯಾತೆ ತೆಗೆಯುತ್ತಿರುವ ತಮಿಳುನಾಡು ನಮ್ಮ ಜೊತೆಗೆ ನೀರಿನ ಆಟ ಆಡುತ್ತಿರುವ ವಿಷಯದ ಅರಿವು ಮೂಡಿಸಿ ನಮ್ಮ ಸಾಮಾನ್ಯ ಜನರಲ್ಲಿ ಆಗ ನಮ್ಮ ಜನಕ್ಕೆ ನಿಮ್ಮ ಮಾಧ್ಯಮದ ಮೇಲೆ ನಂಬಿಕೆ ಮೂಡುತ್ತದೆ.
ಉತ್ತಮ ರಸ್ತೆಯ ಸಂಚಾರ ವ್ಯವಸ್ಥೆಯಿಲ್ಲದೇ ಕಾಲುದಾರಿಯಲ್ಲೇ ಓಡಾಡ್ತಿದ್ದಾರೆ ಅದೆಷ್ಟು ಗ್ರಾಮಗಳು ಇನ್ನು ಒದ್ದಾಡುತ್ತಿವೆ ಹೋರಾಟ ಚೀರಾಟ ನಡೆಯುತ್ತಿದೆ. ಆದರೆ ಅಂತಹ ಚೀರಾಟಗಳು ಈ ಮಾಧ್ಯಮದವರ ಕಣ್ಣಿಗೆ ಯಾಕೆ ಬೀಳುವುದಿಲ್ಲ ಎನ್ನುವುದು ಗಂಭೀರವಾದ ಪ್ರಶ್ನೆ ಕರೆಂಟ್ ಕೈ ಕೊಟ್ಟು ಅನೇಕ ಹಳ್ಳಿಯ ಮಕ್ಕಳು ಓದುವ ಸಮಯ ಹಾಳು ಮಾಡುತ್ತಿದೆ. ಅವರ ಈ ಗೋಳು ಕೇಳುವವರು ಯಾರು ಅದನ್ನು ಎಷ್ಟು ಬಿಂಬಿಸಿದ್ದೀರಿ ಮಾಧ್ಯಮದವರು ತಿಳಿಸಿ ,ಇನ್ನು ಕೆಲವು ಹಳ್ಳಿಗಳಲ್ಲಿ ಈ ಕರೆಂಟ್ ಸ್ಥಿತಿ ತುಂಬಾ ಶೋಚನೀಯವಾಗಿದೆ ಕೆಲ ಹಳ್ಳಿಗಳು ಆ ಕರೆಂಟ್ ಕಂಬಗಳು ಕಾಣದೆ ಬಿಕೊ ಎನ್ನುತ್ತಿವೆ .
ಇಂತಹ ಅನೇಕ ವಿಷಯಗಳ ಕುರಿತು ಚರ್ಚೆ ನಡೆಯಲಿ ಇವು ನಮ್ಮ ರಾಜ್ಯದ ಅತ್ಯಂತ ಗಂಭೀರ ಪರಿಸ್ಥಿತಿ ಇವುಗಳ ಬಗ್ಗೆ ಗಂಭೀರವಾದ ಗಹನವಾದ ಚಚೆ೯ ಮಾಡಿ ಆಯಾ ಪ್ರತಿನಿಧಿಗಳ ಮುಂದೆ ಕ್ಯಾಮರಾ ಹಿಡಿದು ಅವುಗಳ ಸಮಸ್ಯೆಗಳ ಮೇಲೆ ನಿಮ್ಮ ಮಾಧ್ಯಮದ ಬೆಳಕು ಚೆಲ್ಲಿ ಅವರ ಸ್ಥಾನದ ನೈಜ ಕರ್ತವ್ಯದ ವಿಷಯ ತಿಳಿಸಿ ಎಲ್ಲರಲ್ಲಿಯು ಕೆಲಸ ಮಾಡಬೇಕು ನೈಜ ಸಮಸ್ಯೆ ಇದೆ ಎನ್ನುವ ಲೆಕ್ಕಚಾರ ಹಾಕುವಂತಹ ಕಾರ್ಯಕ್ರಮ ಹಾಕಿಕೊಳ್ಳಿ
ಮಾಧ್ಯಮ ಈ ಸಮಾಜದ ಕಣ್ಣು ಎನ್ನುವ ವಿಚಾರ ಮರೆಯಬೇಡಿ ನಿಮ್ಮಿಂದಲೇ ಈ ಸಮಾಜದ ಹಲವು ಸಮಸ್ಯೆಗಳು ಜನರಿಗೆ ಮುಟ್ಟಲಿವೆ ಜೊತೆಗೆ ಅನೇಕ ಯೋಜನೆಗಳ ಮಾಹಿತಿ ಮಾಧ್ಯಮಗಳಲ್ಲಿ ಬಿತ್ತರವಾಗಲಿ ಇದರಿಂದ ಜನರಲ್ಲಿ ಯೋಜನೆಗಳ ಮಾಹಿತಿ ಮೂಡಿ ಅದರ ಲಾಭ ಪಡೆಯುವಂತೆ ಅವಕಾಶವಾಗುವುದು. ನಮ್ಮ ಸರ್ಕಾರದಲ್ಲಿ ಎಷ್ಟೊ ಯೋಜನೆಗಳು ನಮ್ಮ ಸಾಮಾನ್ಯ ಜನರ ಕಿವಿಗೆ ಬೀಳುವ ಮುನ್ನವೆ ಮುಗಿದು ಹೋಗಿವೆ ದಯವಿಟ್ಟು ಮಾಧ್ಯಮ ಮಿತ್ರರೆ ನೀವು ನಿಮ್ಮ ಜವಾಬ್ದಾರಿ ಅರಿತು ಕೆಲಸ ಈ ಸಾಮಾಜಕ್ಕೆ ಒಂದು ಒಳ್ಳೆಯ ಕೆಲಸ ಮಾಡಿ. ತಾವು ದಯಮಾಡಿ ಈ ನಾರದ ಮುನಿಗಳಂತೆ ಆ ರಾಜಕಾರಣಿ ಹೀಗೆ ಮಾತಾಡಿದ ಇವನು ಹೀಗೆ ಮಾತಾಡಿದ ಇವಳು ಅವನೊಂದಿಗೆ ಸಂಬಂಧವಿದೆ ಇವನದು ಅವಳೊಂದಿಗೆ ಎನ್ನುವ ಲೆಕ್ಕಚಾರ ಬಿಡಿ ಕೆಲವರ ವೈಯಕ್ತಿಕ ವಿಚಾರಗಳಿಂದ ನಮ್ಮ ಸಾಮಾನ್ಯ ಜನರ ಬದುಕು ಹಸನಾಗುವುದಿಲ್ಲ ನಮ್ಮ ಹಳ್ಳಿ ಜನರ ಬದುಕು ಸಮಸ್ಯೆ ಸುಧಾರಿಸುವುದಿಲ್ಲ
ಇನ್ನು ಮುಂದಾದರು ಬರಿ ರಾಜಕೀಯ ರಾಜಕಾರಣ ಎಂದು ಅವರ ಮುಂದೆ ನಿಂತು ಮೈಕ್ ಹಿಡಿದು ಅವರನ್ನು ಇಲ್ಲದ ಸಲ್ಲದ ಪ್ರಶ್ನೆಗಳನ್ನು ಕೇಳಿ ಹಾದಿ ತಪ್ಪಿಸುವ ಕೆಲಸ ಮಾಡಬೇಡಿ ಅದರಿಂದ ಯಾವ ಲಾಭವು ಇಲ್ಲ ಅವರಿಗೂ ಪ್ರಚಾರವೆಂದರೆ ಅದರಲ್ಲಿ ಬಿಟ್ಟಿ ಪ್ರಚಾರ ಗಿಟ್ಟಿಸಿಕೊಳ್ಳುವ ತಟ್ಟ ರಾಜಕಾರಣಿಗಳ ನಾಡು ನಮ್ಮದು ಅವರನ್ನು ಬಿಟ್ಟು ದಯಮಾಡಿ ಮಾಧ್ಯಮ ಮಿತ್ರರೆಲ್ಲ ನಮ್ಮ ಹಳ್ಳಿ ಕಡೆಗೆ ನಿಮ್ಮ ಕ್ಯಾಮರಾ ಕಣ್ಣು ತಿರುಗಿಸಿ ಅಲ್ಲಿನ ನೈಜ ಸಮಸ್ಯೆಗಳತ್ತ ಬೆಳಕು ಚೆಲ್ಲಿ ಮಾಧ್ಯಮದ ಅರ್ಥ ಕೆಡಿಸಬೇಡಿ.