ದೂರದಲ್ಲಿ ಜಾನಪದವೊಂದು ಹಾಡಿದರೆ ಎಲ್ಲಾ ನೋವುಗಳು ಮಾಯವಾಗಿ ಕಾಯಕದಲ್ಲಿ ನಮ್ಮ ಆಯಾಸವೆ ಮರೆಯಾಗುವಂತಹ ದಿವ್ಯ ಶಕ್ತಿ ನಮ್ಮ ಜಾನಪದಕ್ಕೆ ಇತ್ತು . ಆದರೆ ವಿಪರ್ಯಾಸ ಇಂದು ನಮ್ಮ ಜಾನಪದ ಮರೆಯಾಗಿ ಹೋಗುತ್ತಿದೆ ಅದನ್ನು ಬರೆದಿಡಿ ಇಲ್ಲದಿದ್ದರೆ ಮುಂದಿನ ಪೀಳಿಗೆಗೆ ಕೇಳಲು ಸಿಗುವುದಿಲ್ಲ ಎನ್ನುವ ಕಾಲ ಬಂದಿದೆ ಏಕೆಂದರೆ ಕುಟ್ಟು ಅಜ್ಜಿಯ ಬದಲಿಗೆ ಮಷಿನ ಕುಟ್ಟಿ ಕಡೆಯಾಗುತ್ತಿದೆ . ಬೀಸುವ ನಾರಿಯಿಲ್ಲ ಅದನ್ನು ಮಷಿನೆ ಮಾಡಿ ಮುಗಿಸುತ್ತಿದೆ . ನಮ್ಮ ರೈತರಾರು ಹಂತಿ ಕಟ್ಟಿ ಹೊಲದಲ್ಲಿ ಹಾಡುತ್ತಿಲ್ಲ ಎಲ್ಲವು ತಾಂತ್ರಿಕತೆಗೆ ಒಳಪಟ್ಟು ಸಂಪ್ರದಾಯ ಮರೆಯುವಂತಾಗಿದೆ.
ಬದಲಾದ ನಮ್ಮ ಉಡುಪು : ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೊಕೆ ಅಂದು ಹಳೆಯ ಮಾತು ಇತ್ತು ಇಂದು ತುಂಡು ಬಟ್ಟೆನೆ ಬೇಕು ನಮ್ಮ ಮರಿಯ್ಯಾದೆ ಹೆಚ್ಚು ಆಗುವದ್ದಕ್ಕೆ ಎನ್ನುವ ಕಾಲ ಒದಗಿಬಂದಿದೆ . ಇಂದು ನಮ್ಮ ಮಹಿಳೆ ಕಡಿಮೆ ಬಟ್ಟೆ ಉಟ್ಟಷ್ಟು ಸಂಭಾವನೆ ಹೆಚ್ಚು ಅವರ ಮರಿಯ್ಯಾದೆ ಹೆಚ್ಚು ಮೈತುಂಬಾ ಬಟ್ಟೆ ಹಾಕಿದರೆ ಅಯ್ಯೋ ಅಲ್ಲಿ ನೋಡಿ ಹಳೆ ಕಾಲದ ಗರತಿ ಬಂದಳು ಅಂತಾರೆ . ಇತ್ತಿಚಿಗೆ ನಮ್ಮ ಮಹಿಳೆ ಮೇಲೆ ಅತ್ಯಾಚಾರ ನಡೆಯಲು ಈ ಬಟ್ಟೆ ಒಂದು ಮುಖ್ಯ ಕಾರಣ ಎಂದರೆ ತಪ್ಪಾಗದು ಅನಿಸುತ್ತದೆ. ಇಂದು ಹೊರಬಂದಿರುವ ಆ ಮೈಮಾಟ ಕಾಣಿಸುವ ಬಟ್ಟೆ ಈ ಗಂಡು ಸಮಾಜವನ್ನು ಕೆರಳಿಸುವಂತೆ ಮಾಡಿದೆ ಎಂದು ಒಮ್ಮೆ ಅನಿಸುತ್ತದೆ. ಕೆಲವರು ಇದಕ್ಕೆ ಮೂಲ ಕಾರಣ ಗಂಡಸೆಯೆಂದರು ತಪ್ಪಿಲ್ಲಾ ಆದರೆ " ಆದಷ್ಟು ನಮ್ಮ ಮೈ ಮುಚ್ಚಿಕೊಂಡು ಬದುಕಿದರೆ ಎಲ್ಲರಿಗೂ ಉತ್ತಮ " ಎಂದು ಅನಿಸುತ್ತದೆ. ಇನ್ನು ವಿಶೇಷ ಅಂದರೆ ನಮ್ಮ ಸಂಪ್ರದಾಯವನ್ನು ಬೇರೆ ರಾಷ್ಟ್ರಗಳು ಅನುಕರಿಸುತ್ತಿವೆ ಆದರೆ ನಾವು ಮರೆಯುತ್ತಾ ಅವರ ಸಂಪ್ರಾದಾಯ ಬಳಸುತ್ತಿದ್ದೇವೆ.
ಬದಲಾದ ನಮ್ಮ ವಿಚಾರಧಾರೆ : ಅಂದು ನಾನು ನನ್ನವರು ಎನ್ನುವ ಭಾವನೆಯ ಜನ ಸ್ವಲ್ಪ ಹೆಚ್ಚಿದ್ದರು . ಎಲ್ಲರು ಬಾಳಲಿ ಎಲ್ಲರಿಗೂ ಅವಕಾಶ ಕೊಡಿ ಎನ್ನುವ ಜನವಿದ್ದರು . ಸ್ವಲ್ಪಾದರು ಪ್ರಮಾಣಿಕತೆಯಿತ್ತು ಎಂದು ಹೇಳಬಹುದು . ಆದರೆ ಈಗ ಎಲ್ಲಿ ನೋಡಿದರು ಮೋಸ , ವಂಚನೆ , ವೈರತ್ವ ತಾಂಡವ ಆಡುತ್ತಿದೆ ಯಾರು ಯಾವಾಗ ಮರಣ ಹೊಂದುತ್ತಾರೊ ತಿಳಿಯದು . ಮನೆಯಿಂದ ಹೊರಗೆ ಹೋದ ವ್ಯಕ್ತಿ ತಿರುಗಿ ಮನೆಗೆ ಬರುವನೆ ಎಂಬ ಭರವಸೆ ಉಳಿದಿಲ್ಲ , ಎಲ್ಲವು ಸ್ವಾರ್ಥ ಅಸಹಕಾರ ಕೆಟ್ಟ ಯೋಚನೆಯಿಂದ ತುಂಬಿ ಹೋಗಿದೆ ಹಣ ಒಸೂಲಿ ಕೊಲೆ ಸುಲಿಗೆ ದರೋಡೆ ಹೆಚ್ಚಾಗಿವೆ ಅಂದು ಕಳ್ಳರು ಎಂದರೆ ಕಪ್ಪು ಬಣ್ಣ ತುಂಬಾ ವಿಕಾರವಾಗಿ ಇರುತ್ತಾರೆ ಎನ್ನು ಕಾಲವಿತ್ತು ಆದರೆ ಈಗ ಹಾಗಲ್ಲ ಯಾರು ಕಳ್ಳರು ಯಾರು ಸುಳ್ಳರು ಎಂದು ಗುರುತಿಸುವುದು ಕಷ್ಟವಾಗಿದೆ ಮುಂದೆ ಅಕ್ಕ ತಂಗಿ ಎಂದು ಪರದೆ ಹಿಂದೆ ತಕ್ಕಗೆ ಬಿದ್ದು ಸರಸವಾಡುವ ಕಾಲ ಇದಾಗಿದೆ ಹಿಗಾಗಿಯೆ ಈಗ ಕಾಲಕಾಲಕ್ಕೆ ಮಳೆ ಬೆಳೆ ಕೈಕೊಡುತ್ತಿದ್ದು ಅಕಾಲಕ್ಕೆ ಎಲ್ಲವು ನಡೆದೆ ಹೋಗುತ್ತಿದೆ.
ಹೆಚ್ಚಾಗುತ್ತಿರುವ ಹೋರಾಟ ಚೀರಾಟ : ಅಂದು ಈಡಿ ದೇಶಕ್ಕೆ ಒಬ್ಬರೊ ಇಬ್ಬರೊ ನೇತಾರರು ಅವರು ಪ್ರಮಾಣಿಕರು ಆಗಿದ್ದು ಕೆಲವೊಮ್ಮೆ ಮಾನವ ಹಕ್ಕುಗಳಿಗೆ ಚ್ಯೂತಿ ಬಂದಾಗ ಹೋರಾಟಗಳು ನಡೆಯುತ್ತಿದ್ದವು . ಆದರೆ ಈಗ ಹಾಗಲ್ಲಾ ಮನಗೊಬ್ಬ ನೇತಾ ಅವನಿಗೆ ಏನಾದರು ಕಡಿಮೆ ಬಿದ್ದರೆ ಸಾಕು ಶುರುವಾಯಿತು ಚೀರಾಟ … ಪ್ರತಿ ಗಲ್ಲಿ ಗಲ್ಲಿಯಲ್ಲೂ ಒಂದು ಹೋರಾಟ ಸಮಿತಿ ಒಂದೆ ಎರಡೆ ಪ್ರತಿಯೊಬ್ಬ ವ್ಯಕ್ತಿಯೂ ಒಂದು ಸಮಿತಿಯೆ ಆಗಿ ಯಾವಾಗ ಬೇಕು ಅವಾಗ ಎಲ್ಲಿ ಬೇಕು ಅಲ್ಲಿ ಹೋರಾಟ ಮತ್ತು ಚೀರಾಟಗಳು ನಡೆಯುತ್ತಲೆ ಇವೆ . ಇದೆಲ್ಲವು ಬರಿ ಅವರವರ ಹೊಟ್ಟೆ ಪಾಡಿಗಾಗಿ ಕಟ್ಟಿಕೊಂಡ ಸಂಘ ಮಾತ್ರ ದೇಶ ಸೇವೆಯ ಹೆಸರಿನಲ್ಲಿ ತನ್ನ ಕೊಡ ತುಂಬಿಸಿಕೊಳ್ಳುವ ವ್ಯಕ್ತಿಗಳ ಹಿಂಡು ಹೆಚ್ಚಾಗಿದೆ . ಎಲ್ಲಿಯೂ ಮನಬಿಚ್ಚಿ ಮಾತನಾಡುವ ಜನ ಇಲ್ಲವಾಗಿದೆ ಎಲ್ಲರು ಕಾಟಚಾರಕ್ಕೆ ದೇಶ ಸೇವೆಯೆಂದು ತಮ್ಮ ಬೆಳೆ ಬೆಯಿಸಿಕೊಳ್ಳುವ ಕೆಲಸದಲ್ಲಿ ನಿರತರಾಗಿದ್ದಾರೆ.
ಕಳಚಿ ಬೀಳುತ್ತಿರುವ ಸಂಬಂಧಗಳು : ಅಂದು ಅವಿಭಕ್ತ ಕುಟುಂಬದಲ್ಲಿ ಎಲ್ಲರು ಒಂದೆಡೆ ಕೂಡಿ ಬಾಳಿದರೆ ಸ್ವರ್ಗ ಸುಖ ಎಂತಿದ್ದರು ಅಂದು ಆದರೆ ಈಗ ಒಡೆದು ಬಾಳಿದರೆ ಮಾತ್ರ ಸ್ವರ್ಗಸುಖ ಎನ್ನುವ ಕಾಲ ಬಂದಿದೆ . ಅತ್ತೆ ಸೊಸೆಯ ಜಗಳವೆ ಇಲ್ಲಾ ಏಕೆಂದರೆ ಅತ್ತಿ ಸೊಸೆ ಈಗ ಮದುವೆಗಿಂತ ಮೊದಲೆ ದೂರ ಸ್ವತ: ಅತ್ತೆಯೆ ಈಗ ಸೊಸೆಯಿಂದ ದೂರ ವಿರಲು ಬಯಸುತ್ತಾಳೆ . ತಂದೆ ತಾಯಿ ಮಕ್ಕಳ ಸಂಬಂದವಂತು ಅಪ್ಪ ನನಗೆ ನೀನು ಚಿಕ್ಕಂದಿನಲ್ಲಿ ಹಾಸ್ಟೆಲ್ ಹಾಕಿದ್ದೀ LKG ಯಿಂದ PG ವರೆಗೂ ದಾದಿಯರ ಕೈಯಲ್ಲಿ ಬೆಳಿದ ನಾನು ಈಗ ನಿಮಗೆ ವೃದ್ದಾಶ್ರಮದಲ್ಲಿ ಜಾಗ ಕೊಡಿಸಿದ್ದೇನೆ ನೀವು ಅಲ್ಲೆ ಹಾಯಾಗಿರಿ ಎನ್ನುವ ಸ್ಥಿತಿಗತಿ ಬಂದಿದೆ. ಅಣ್ಣ ತಂಗಿಯರ ಸಂಬಂದ ಹಳಸಿ ಹೋಗಿದೆ , ಪ್ರೀತಿ ವಾತ್ಸಲ್ಯದ ಮಾತು ಮೂಕಾಗಿದೆ, ಎಲ್ಲವು ತೋರಿಕೆಯ ಪ್ರೀತಿ , ಹಣವಿರುವ ತನಕ ಪ್ರೀತಿ ಹಣ ಮುಗಿದ ಮೇಲೆ ಯಾವುದಕ್ಕು ಇಲ್ಲ ಪ್ರೀತಿ ವಿಶ್ವಾಸಕ್ಕೆ ಕುತ್ತಿಗೆ ಕೊಯಿವ ಕಾಲ ಬಂದಿದೆ .
ಹೀಗೆ ಹಲವು ವಿಷಯದಲ್ಲಿ ಮುಂದೆ ನಡೆದ ನಾವು ಕೆಲವು ವಿಷಯದಲ್ಲಿ ಎಡವುತ್ತಿದ್ದೇವೆ ಅನಿಸುತ್ತಿದೆ . ನಮ್ಮ ಪೀಳಿಗೆಗೆ ನಾವು ಏನು ಕೊಡುವುದು ಎಂದು ತಿಳಿಯದಾಗಿದೆ . ನಮ್ಮ ಕಿರಿಯರು ನಮ್ಮಿಂದ ಏನು ಕಲಿಯುವರು ಎನ್ನುವುದು ಅರ್ಥವಾಗದಂತಾಗಿದೆ , ಯಾರನ್ನು ಯಾವುದನ್ನು ಅನುಕರಣೆ ಮಾಡುವರು ಎನ್ನುವುದು ತಿಳಿಯದಾಗಿದೆ. ನಾವು ಮುಂದುವರೆಯಬೇಕು ನಿಜ ಆದರೆ ನಮ್ಮತನವನ್ನು ಆತ್ಮ ಸಾಕ್ಷಿಯನ್ನು ಮಾರಿಕೊಂಡು ಅಲ್ಲಾ ಎನ್ನುವುದು ಸದಾ ನೆನಪಿರಲಿ............