ಶ್ರಾವಣಮಾಸ , ಈದ , ಬಕರೀದ್ , ರೋಜಾ, ಕ್ರಿಸ್ ಮಸ್ , ದಸರ .. ಹೀಗೆ ಅನೇಕ ಆಚರಣೆಗಳಿಗೆ ನಮ್ಮ ಇತಿಹಾಸದಲ್ಲಿ ತನ್ನದೆ ಆದ ಸೂಕ್ತ ಅರ್ಥವಿದೆ. ಆದರೆ ಇಂದಿನ ಜನ ಮಾತ್ರ ಅವೆಲ್ಲಾ ಬರಿ ಒಂದು ಕಾಟಾಚಾರವಾಗಿ ಪ್ರಚಾರದ ಪರಿಕರಗಳಾಗಿ ಬಳಸುತ್ತಿರುವುದು ನಮ್ಮ ದೇಶದ ದುರದೈವ. ಈ ದಿನಗಳಂದು ನಾವೆಲ್ಲರು ಈ ದೇಶ ಸೇವೆ ಮಾಡುವ ನೇತಾರರು ಎನ್ನುವ ಹಾಗೆ ಬಿಂಬಿಸುವ ಬಿತ್ತಿ ಚಿತ್ರ ಹಾಕಿಸಿ ಬಿಟ್ಟಿ ಪ್ರಚಾರ ಗಿಟ್ಟಿಸಿಕೊಳ್ಳುವ ಜನ ಈಗ ಸದ್ಯ ಹೆಚ್ಚಾಗಿದ್ದು , ಎಲ್ಲವು ಗಿಮಿಕ್ ಜೀವನ ಡಾಂಬಿಕ ಪ್ರಚಾರಿಕ ಜೀವನ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆಲ್ಲಾ ಮೂಲ ಕಾರಣ ನಾವು ನಡೆಯುತ್ತಿರುವ ದಾರಿ ಅನುಸರಿಸುತ್ತಿರುವ ವಿಚಾರ, ಹೀಗೆ ಸಾಗಿದರೆ ನಮ್ಮ ಸಂಸ್ಖೃತಿ ಹಾಳಾಗುವುದರಲ್ಲಿ ಎಳ್ಳು ಕಾಳಿನಷ್ಟು ಸಂಶಯವಿಲ್ಲಾ.
ಇನ್ನು ನಮ್ಮ ಮಹಿಳೆ ಬದಲಾಗಲಿ ಎನ್ನುವ ವಿಚಾರ ಹಾಗೂ ಇತಿಹಾಸದ ನೇತಾರರ ಮಾಹಾತ್ಮ ಗಾಂಧೀಜಿಯವರಂತಹ ಅಭಿಪ್ರಾಯದಂತೆ, ಮಹಿಳೆ ಮೇಲೆ ಬರುವ ಹಲವು ಅವಕಾಶಗಳು ಸಮಾಜ ಒದಗಿಸಿಕೊಟ್ಟು ಅವಳನ್ನು ಅಡುಗೆ ಮನೆಯಿಂದ ಮುಕ್ತಿ ನೀಡಿ ಸಬಲೀಕರಣಗೊಳಿಸಿದರೆ, ಇಂದು ಮಹಿಳೆ ಯಾವ ಸ್ಥಿತಿಯಲ್ಲಿ ನಮ್ಮ ದೇಶದ ಸಂಸ್ಕೃತಿ ಉಳಿಸಿರುವಳು ಎನ್ನುವ ವಿಚಾರ ಸ್ವಲ್ಪ ನಾವು ಸಾಮಾಜಿಕ ತಾಣಗಳನ್ನು ಹೊಕ್ಕಾಗ ತಿಳಿಯುತ್ತದೆ. ಎಲ್ಲಿರುವ ಮಹಿಳೆ ಈಗ ಎಲ್ಲಿಗೆ ಎತ್ತ ಸಾಗುತ್ತಿರುವಳು ಅಂತಾ.
ನಮ್ಮ ಶಿಕ್ಷಣ ಇಂದು ವ್ಯಾಪಾರಿಕರಣಗೊಂಡು ಬಡವರ ಕೈಗೆ ನಿಲುಕದ ತುತ್ತಾಗಿದೆ. ಶ್ರೀಮಂತರು ಕೊಡುವ ದುಡ್ಡಿನ ಮೇಲೆ ಶಿಕ್ಷಣ ಸವಾರಿ ಮಾಡುತ್ತಿದೆ. ಅಲ್ಲದೆ ಭಾರತೀಯ ನೆಲೆ ಕಲೆಯ ಬಗ್ಗೆ ಯಾವುದೆ ಲಗ್ಗೆಯಿಲ್ಲದೆ ಓಡುತ್ತಿದೆ. ಶಿಕ್ಷಣ ಬದಲಿಸುವ ಹೆಸರಿನಲ್ಲಿ ನಮ್ಮ ಮಕ್ಕಳಿಗೆ ಫಾಶ್ಚಾತ್ಯ ಸಂಸ್ಖೃತಿ ಹಾಗೂ ಅಲ್ಲಿನ ಜನರ ಅನುಕರಣೆ ಕಲಿಸುತ್ತಿರುವುದು ನಮ್ಮ ದೇಶದ ಮತ್ತೊಂದು ದುರ್ಗತಿಯೆ ಸರಿ.
ಇಂದು ಬೈಬಲ್ , ಭಗವತ್ ಗೀತೆ , ಖುರಾನ್ , ಪುರಾಣ , ವೇದ , ಉಪನಿಷತ್ತು ಇವೆಲ್ಲಾ ಬರಿ ಪುಸ್ತಕದ ಬದನೆಕಾಯಿಯಾಗಿ ಉಳಿಯುತ್ತಿವೆ. ಅದರ ಸಾರಾಂಶ ಹೇಳುವ ತಿಳಿಯುವ ಜನರ ಸಂಖ್ಯೆ ಕಡಿಮೆಯಾಗುತ್ತಿದೆ. ದೇಶ ಸೇವೆಗಿಂತ ದೇಹ ಸೇವೆ ಮಾಡುವ ಸ್ವಾಮಿಜಿಗಳು ಹೆಚ್ಚುತ್ತಿದ್ದು ನಮ್ಮ ದೇಶ ಒಂದು ಉತ್ತಮ ನಾಗರಿಕರನ್ನು ಹೊರತರುವಲ್ಲಿ ಎಡವುತ್ತಿದೆ. ನಮ್ಮ ಮಕ್ಕಳಿಗೆ ದೇಶಿ ವಸ್ತುಗಳಾಗಲಿ , ಆಟಗಳಾಗಲಿ , ಪುಸ್ತಕಗಳಾಗಲಿ ಯಾವುದರ ಪರಿಚಯವು ಆಗುತ್ತಿಲ್ಲಾ ಬದಲಿಗೆ ನಮ್ಮ ಮಕ್ಕಳು ದಾರಿ ತಪ್ಪುವ ಎಲ್ಲಾ ವಾಹಿನಿ ಹಾಗೂ ಮಾಧ್ಯಮಗಳು ನಮ್ಮ ಎದುರಿಗೆ ಕಂಗೊಳಿಸುತ್ತಿವೆ. ನಮ್ಮ ಇತಿಹಾಸದ ಪ್ರಕಾರ ನಾವು ನಮ್ಮ ಹಿರಿಯರನ್ನು ನೋಡಿ ಅನುಕರಿಸಿ ಕಲಿಯಬೇಕು ಎನ್ನುವುದು ನಮಗೆ ತಿಳಿಯುತ್ತದೆ. ಆದರೆ ಇಂದು ಹಿರಿಯರೆ ಅಡ್ಡ ದಾರಿ ಹಿಡಿಯುವ ಕಾಲ ಕೂಡಿ ಬರುತ್ತಿದೆ. ಯುವಕರಿಗೆ ದಾರಿ ತಪ್ಪುಸುವ ಹೇಳಿಕೆಗಳನ್ನು ನಮ್ಮ ಹಿರಿಯರು ಕೊಡುತ್ತಿರುವುದರಿಂದ ಯುವಕರು ಯಾವುದು ಸರಿ ಯಾವುದು ತಪ್ಪು ಎನ್ನುವ ಲೆಕ್ಕಚಾರ ಮಾಡಲು ಸಾಧ್ಯವಾಗುತ್ತಿಲ್ಲಾ.
ಇನ್ನು ನಮ್ಮ ದೇಶದ ರಾಜಕೀಯ ಮಾತನಾಡಲು ಅಸಯ್ಯವೆನಿಸುತ್ತದೆ. ಇತಿಹಾಸದ ಪಾಠ ನೋಡಿದರೆ ಈಗ ನಡೆದ ಪಾಠಕ್ಕೆ ತಕ್ಕ ವಿರುದ್ಧವಾಗಿದೆ. ಯಾವ ರಾಜಕಾರಣೀಯು ಉತ್ತಮ ಚಾರಿತ್ರ್ಯ ಹೊಂದಿಲ್ಲಾ ಎನ್ನುವುದು ಅತ್ಯಂತ ಸತ್ಯವಾದ ಮಾತು. ಹಿರಿಯರು ನಾವು ಇವರನ್ನು ನೋಡಿ ರಾಜಕೀಯ ಕಲಿಯಬೇಕು ಎನ್ನುವ ವಿಚಾರ ಏನಾದರು ಯುವಕರು ಮಾಡಿದರೆ ಸತ್ಯವಾಗಿ ನಡೆಯುವ ಒಬ್ಬ ವ್ಯಕ್ತಿಯನ್ನು ದೀಪ ಹಚ್ಚಿ ಹುಡುಕಬೇಕಾದ ಸ್ಥಿತಿ ಉಂಟಾಗುತ್ತದೆ. ಈ ದೇಶದಲ್ಲಿ ಪುರುಷೋತ್ತಮ ರಾಮ , ಸತ್ಯ ಹರಿಶ್ಚಂದ್ರ ಆಗಿ ಹೋಗಿರುವರು ಎಂದು ಇನ್ನು ಸ್ವಲ್ಪ ದಿನವಾದರೆ ಎಲ್ಲವು ಮರೆತು ಹೋಗುತ್ತದೆ. ಏಕೆಂದರೆ ಸದ್ಯಕ್ಕೆ ನಮ್ಮ ದೇಶದಲ್ಲಿ ಅಷ್ಟು ಅಸತ್ಯ ಹಾಗೂ ಅಸಯ್ಯ ಹುಟ್ಟಿಸುವ ಕೆಲಸ ನಡೆದಿವೆ. ಯಾವುದಕ್ಕು ನಮ್ಮ ಯುವಜನತೆ ಹಾಗೂ ಮಕ್ಕಳು ಜೋಪಾನವಾಗಿ ಹೆಜ್ಜೆ ಕಿತ್ತಿಡಬೇಕಾದ ಅವಶ್ಯಕತೆಯಿದೆ.