ನನ್ನ ಅದೃಷ್ಟ ನನಗೂ ಅವರ ಪಕ್ಕದ ಆಸನ ಸಿಕ್ಕಿತು, ಹಾಗೆ ಅವರೊಂದಿಗೆ ಕೆಲವು ಮಾತುಗಳನ್ನು ಆಡುತ್ತಾ ಹಾಗೆ ಮುಂದುವರೆದೆ ಮುಂದಿನ ನಿಲ್ದಾಣದಲ್ಲಿ ಹಲವು ವಿಧ್ಯಾರ್ಥಿಗಳ ಗುಂಪು ಅದೇ ಬಸ್ ಹತ್ತಿದರು. ಅವರೆಲ್ಲಾ ಒಳಗೆ ನುಗ್ಗಿದಂತೆ ಒಬ್ಬೊಬ್ಬರಾಗಿ ನನಗೆ ನಮಸ್ಕಾರ ಸರ್ ಎನ್ನುತ್ತಾ ನಡೆದರು. ನಾನು ಅದಕ್ಕೆ ನನ್ನ ಗುರುವಿನ ಪಕ್ಕದಲ್ಲೆ ಕುಳಿತು ಪ್ರತಿಕ್ರಿಯಿಸಿದೆ. ಸ್ವಲ್ಪ ಸಮಯದ ನಂತರ ನನ್ನ ಪುಜ್ಯ ಗುರುಗಳು ಹೇಳಿದ ಮಾತು ಯಾವತ್ತು ಮರೆಯುವಂತಿಲ್ಲಾ
"ನೋಡಿದಿಯಾ ಈಗ ನೀನು ಗುರು ನಿನ್ನ ಶಿಶ್ಯಂದಿರು ನಿನಗೆ ಕೊಡುವ ಗೌರವ ಯಾವ ಹುದ್ದೆಯಲ್ಲು ಕೊಡುತ್ತಿರಲಿಲ್ಲಾ, ನನಗೆ ತುಂಬಾ ಖುಷಿಯಾಯಿತು ನೀನು ಶಿಕ್ಷಕನಾಗಿ ಅನೇಕ ಮಕ್ಕಳು ಹೊಂದಿರುವೆ ಅವರೆಲ್ಲ ನಿನ್ನ ಮೇಲೆ ಇಟ್ಟ ಗೌರವ ನೋಡಿ ಈ ಶಿಕ್ಷಕ ವೃತ್ತಿ ನಿಜಕ್ಕೂ ಆತ್ಮ ಗೌರವ ಹಾಗೂ ಆತ್ಮ ಸಂತೋಷ ನೀಡುವದರ ಜೊತೆಗೆ ಆತ್ಮ ತೃಪ್ತಿ ನೀಡುತ್ತದೆ ಎಂದರು.”
ಈ ಮಾತಿನಿಂದ ಒಂದು ಸತ್ಯ ನಮಗೆ ಅರಿವಾಗುತ್ತೆ ಶಿಕ್ಷಕ ವೃತ್ತಿಯಲ್ಲಿ ಹಣವಾಗಲಿ ಐಶ್ವರ್ಯವಾಗಲಿ ಗಳಿಸಲು ಸಾದ್ಯವಿಲ್ಲಾ ಆದರೆ ಆತ್ಮ ಗೌರವ ಸಂತೋಷ ತೃಪ್ತಿ ತುಂಬಾ ಚೆನ್ನಾಗಿ ಸಿಗುತ್ತದೆ. ಅದಕ್ಕಾಗಿ ಶಿಕ್ಷಕ ಬಂದುಗಳೆ ನಿಮ್ಮ ವೃತ್ತಿಯನ್ನು ಗೌರವಿಸಿ ಅದನ್ನು ಅಲ್ಲಗಳಿಯಬೇಡಿ ಅದರ ಪಾವಿತ್ರ್ಯತಗೆ ಧಕ್ಕೆ ಬಾರದಂತೆ ಕಾಪಾಡಿಕೊಳ್ಳಿ ಶಿಕ್ಷಕ ಸಮುದಾಯದ ಕಣ್ಣು ಅವನು ಈ ಸಮುದಾಯದ ನಿರ್ಮಾಣ ಮಾಡುವ ಮಹತ್ತರ ಜವಾಬ್ದಾರಿ ಹೊತ್ತ ಶಿಕ್ಷಣದ ಸಾರಥಿ ಅವರು ಆ ಸಮುದಾಯದ ಶಿಕ್ಷಣವೆಂಬ ರಥ ದಾರಿ ತಪ್ಪಿಸಿದರೆ ಈಡಿ ಸಮಾಜವೆ ಅಧೋಗತಿಗೆ ಹೋಗುತ್ತದೆ. ಮಾನ್ಯ ಶಿಕ್ಷಕ ಬಂಧುಗಳೆ ನಾಡ ಉಳಿಸುವ ನಾವು ನಾಡ ಬೆಳಿಸುವ ನಾವು ನಮ್ಮ ನಾಡ ಮಕ್ಕಳನ್ನು ಕಾಯುವ ನಮ್ಮ ದೇಶದ ಭವಿಷ್ಯವಾಗಿರುವ ಮಕ್ಕಳನ್ನು ಕಾಯುವ ನಮ್ಮ ಶಿಕ್ಷಕ ವೃತ್ತಿಯ ಪಾವಿತ್ರತೆ ಯನ್ನು ಕಾಯುವ .
ಒಬ್ಬ ಇಂಜಿನಿಯರ ಸರಿಯಿರದಿದ್ರೆ ಒಂದು ಮನೆ ಬಿದ್ದು ಹೋಗುತ್ತದೆ , ಒಬ್ಬ ವೈದ್ಯ ಸರಿಯಿರದಿದ್ದರೆ ಒಬ್ಬ ರೋಗಿ ಸಾಯುತ್ತಾನೆ , ಒಬ್ಬ ಶಿಕ್ಷಕ ಸರಿಯಿರದಿದ್ದರೆ ಈಡಿ ಒಂದು ಪಿಳಿಗೆಯ ಸಮಾಜವೆ ನಾಶವಾಗುತ್ತದೆ . ಸಮಾಜದ ಗತಿ ಅಧೋಗತಿಗೆ ಹೋಗುತ್ತದೆ . ನಮ್ಮ ಶಿಕ್ಷಕನ ಮೇಲೆ ಅವನ ನಡತೆಯ ಮೇಲೆ ನಮ್ಮ ಸಮಾಜದ ನಡತೆ ನಿಂತಿದೆ . ನಮ್ಮ ಮಕ್ಕಳ ಭವಿಷ್ಯ ನಮ್ಮ ಶಿಕ್ಷಕ ಕಟ್ಟುವ ನಮ್ಮ ಮಕ್ಕಳ ಭವಿಷ್ಯದ ಮೇಲೆ ನಿಂತಿದೆ ಇವರಡು ಹಳಿ ತಪ್ಪಿದೆ ನಮ್ಮ ದೇಶ ಕೊಳ್ಳೆ ಹೊಡಿಯುವ ಜನ ಹುಟ್ಟುತ್ತಾರೆ. ನಮ್ಮ ನಾಡನ್ನು ಕಾಡನ್ನಾಗಿ ಮಾಡಿ ಹೋಗುತ್ತಾರೆ .
ಒಂದು ದೇಶದ ಆರ್ಥಿಕ ಸ್ಥಿತಿಗತಿ ಹೇಗೆ ಆಯಾ ದೇಶದಲ್ಲಿ ಇರುವ ಮಖ್ಯ ಕಸುಬು ಹೊಂದಿರುತ್ತದೆಯೊ ಹಾಗೆ ನಮ್ಮ ದೇಶವು ಕೃಷಿಯನ್ನು ಅವಲಂಬಿಸಿದೆ ನಮ್ಮ ಈ ದೇಶಕ್ಕೆ ಒಬ್ಬ ವಿದ್ಯಾವಂತ ಕೃಷಿಕ , ಕಮ್ಮಾರ ಬೇಕಾಗಿದ್ದಾರೆ ಅವರಿಂದಲೇ ನಮ್ಮ ದೇಶ ಪ್ರಗತಿಯತ್ತ ಸಾಗುವ ಹಲವು ಲಕ್ಷಣಗಳು ಕಾಣುತ್ತಿವೆ . ಅದಕ್ಕಾಗಿ ಶಿಕ್ಷಕ ವೃತ್ತಿ ಬಹಳ ಮುಖ್ಯವಾಗುತ್ತದೆ ಅವರಿಂದಲೇ ಈ ದೇಶದ ಭವಿಷ್ಯ ಕಟ್ಟಲು ಸಾಧ್ಯವಾಗುತ್ತದೆ ಅವರನ್ನು ಕಾಯುವ ಉಳಿಸಿಕೊಳ್ಳುವ ಅವರನ್ನು ಉತ್ತಮ ಮರಿಯ್ಯಾದೆಯಿಂದ ಕಾಣಬೇಕಾದ ಜವಾಬ್ದಾರಿ ನಮ್ಮದಾಗುತ್ತದೆ .
ಮಾನ್ಯ ಶಿಕ್ಷಕರೆ ನಿಮ್ಮ ಹುದ್ದೆ ಬಹು ಪವಿತ್ರವಾದ್ದು ಇಂತಹ ಹುದ್ದೆ ಪಡೆಯಲು ನಾವೆಲ್ಲ ಹಿಂದಿನ ಜನ್ಮದ ಪೂರ್ವ ಪುಣ್ಯವೆ ಸರಿ ಅದಕ್ಕಾಗಿ ಈ ಹುದ್ದೆಗೆ ಧಕ್ಕೆ ಬಾರದಂತೆ ಕಾಪಾಡಿ ನಮ್ಮ ಕರ್ತವ್ಯ ನಾವು ಮಾಡಬೇಕಾದ ಅಗತ್ಯ ಅನಿವಾರ್ಯವಿದೆ . ಏಕೆಂದರೆ ಮಕ್ಕಳು ನಮ್ಮ ಸಮಾಜದ ಕಣ್ಣುಗಳಾದರೆ , ಶಿಕ್ಷಕರು ಈ ಸಮಾಜವನ್ನು ರಚಿಸುವ ಕಣ್ಣು ಹಾಗೂ ಶಿಕ್ಷಕ ಈ ರಾಷ್ಟ್ರ ರಕ್ಷಕನೂ ಹೌದು .