ಸದನದಲ್ಲಿ ಪೇಪರ್ ಎಸೆಯೋದು, ಮೈಕ್ ಒಗೆಯೋದು, ಹೋರಾಟ, ಚೀರಾಟ ಮಾಡುವುದು ಮಾಡಬಾರದು ಆದರೆ ನಮ್ಮ ಸದನದ ಕಲಾಪ ಪ್ರಾರಂಭವಾಗಿದ್ದು ಮೊದಲು “ವಂದೆ ಮಾತರಂ” ಗೀತೆಯೊಂದಿಗೆ. ಅದರ ಹಿಂದೆಯೆ ಯಡ್ಡಿಯವರ ಮುನಿಸು, ಹೋರಾಟವಾಗಿ ತಿರುಗಿ ಮೊದಲ ಬಾರಿಗೆ ಒಬ್ಬಂಟಿಯಾಗಿ ಮಾಜಿ ಮುಖ್ಯಮಂತ್ರಿಯೊಬ್ಬ ಉಪವಾಸ ಸತ್ಯಾಗೃಹ ಸದನದ ಒಳಗೆ ಮಾಡಿದ್ದು ಇತಿಹಾಸವೆ ಸರಿ. ಇನ್ನು ಒಬ್ಬ ಸ್ಪೀಕರ್ ಬಹು ತಾಳ್ಮೆಯಿಂದ ಶಾಸಕರ ಮಾತು ಆಲಿಸಬೇಕು. ಆ ಕೆಲಸ ಬ್ರೇಕ್ ಮಾಡಿದ್ದು ಈ ಅಧಿವೇಶನದಲ್ಲಿ ಜವಾಬ್ದಾರಿಯುತವಾದ ಜನರೆಲ್ಲಾ ಅಸಭ್ಯವಾಗಿ ವರ್ತಿಸಿದರು. ಮಾನ್ಯ ಮುಖ್ಯ ಮಂತ್ರಿಯೊಬ್ಬರು ಪ್ರತಿಯೊಂದು ಚರ್ಚೆಯನ್ನು ಸರಳವಾಗಿ ಸ್ವೀಕರಿಸಿದ್ದು ಈ ಅಧಿವೇಶನದಲ್ಲಿ ತುಂಬಾ ವಿಪರ್ಯಾಸ ಮೂಡಿಸಿತು.
ಈ ಬಾರಿಯ ಸುವರ್ಣಸೌಧದ ಚಳಿಗಾಲ ಅಧಿವೇಶನ ಹೋರಾಟ ಚೀರಾಟಗಳಿಂದಲೆ ಪ್ರಾರಂಭವಾಯಿತು, ಜೊತೆಗೆ ಅನೇಕ ರಾಜಕೀಯ ಲಾಭಕ್ಕೆ ಎಡೆಮಾಡಿ ಕೊಟ್ಟಿತು. ಮೊದಲಿಗೆ ಶಾದಿಭ್ಯಾಗ್ಯ ಯೋಜನೆಯ ಹೆಸರಿನಲ್ಲಿ ಮಾನ್ಯ ಮಾಜಿ ಮುಖ್ಯಮಂತ್ರಿಯೊಬ್ಬರು ಪ್ರಾರಂಭ ಮಾಡಿದರೆ, ರೈತರ ಕೊಬ್ಬು ಬೆಳೆಗೆ ತಕ್ಕ ಬೆಲೆ ನಿಗಧಿ ಬಗ್ಗೆ ತುಂಬಾನೆ ಹೋರಾಟ ನಡೆಯಿತು.
ಸದನದ ಹೊರಗೆ ಧರಣಿ ಕುಳಿತ ರೈತರು ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಕೆಲಸ ಮಾಡಿದವು. ಅದರ ಬಗ್ಗೆ ವಿಚಾರ ವಿನಿಮಯ ಮಾಡಲು ಕೂಡಾ ಸರಕಾರಕ್ಕೆ ಅವಕಾಶ ಮಾಡಿ ಕೊಡಲಿಲ್ಲಾ ಚರ್ಚೆ ನಡೆಯುತ್ತಿದ್ದಂತೆ ಮಾನ್ಯ ಮುಖ್ಯ ಮಂತ್ರಿಗಳು ಹಲವು ಬಾರಿ ತಿಳಿಸಿ ಮನವಿ ಮಾಡಿದ್ದರು. ಸರಕಾರ ರೈತರ ಪರವಿದೆ ತಾವು ಕೇಳಿದ ಬೆಂಬಲ ಬೆಲೆ ಚರ್ಚಿಸಿ ಕೊಡುತ್ತೇವೆ ಎನ್ನುವಷ್ಠರಲ್ಲಿ ರೈತ ದುಡುಕಿ ಆತ್ಮಹತ್ಯೆಗೆ ಬಲಿಯಾದ. ಇದನ್ನು ಕೆಲವರು ರಾಜಕೀಯ ಪ್ರೇರಿತ ಎಂದರೆ ಇನ್ನು ಕೆಲವರು ಸರಕಾರದ ತಪ್ಪು ಎಂದರು ಇನ್ನು ಕೆಲವರು ರೈತರದ್ದೆ ದುಡುಕಿನ ಪ್ರಲಾಪ ಎಂದರು.
ಇನ್ನೊಂದು ವಿಪರ್ಯಾಸವೆಂದರೆ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ 1 ಲಕ್ಷ ಪರಿಹಾರ ಘೋಷಿಸಿದರೆ, ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ 10 ಲಕ್ಷ ಘೋಷಿಸಿದರು. ಇದು ನಿಜವಾದ ರಾಜಕೀಯದ ಚದುರಂಗದಾಟ ಅಲ್ಲವಾ? ಜೀವಂತವಿದ್ದಾಗ ಅವಸರ ಬೇಡಾ ಚರ್ಚೆ ಮಾಡೋಣಾ ಎನ್ನುವ ಬುದ್ದಿ ಇಬ್ಬರು ಮುಖ್ಯಮಂತ್ರಿಗಳಿಗೆ ಬರಲಿಲ್ಲಾ ಸತ್ತಮೇಲೆ ಲಕ್ಷಗಟ್ಟಲೆ ಹಣ ಸುರಿಯುವುರು. ಜನರ ಓಟ ಬ್ಯಾಂಕ್ ಲೆಕ್ಕಾಚಾರ ಹಾಕುವ ಇಂತಹ ರಾಜಕಾರಣಿಗಳನ್ನು ಏನು ಮಾಡಬೇಕು ತಿಳಿಯದು ಹೀಗೆ ಅನೇಕ ಚೌಕಟ್ಟು ಮರೆತು ನಡೆಯಿತು ನಮ್ಮ ಈ ಸುವರ್ಣಸೌಧ ಸದನದ ರಾಜಕಾರಣ. ಸದ್ಯಕ್ಕೆ ಸ್ವಲ್ಪ ರೈತರು ಉಸಿರು ಬಿಡುವ ಸ್ಥಿತಿ ನಿರ್ಮಾಣವಾಗಿದ್ದು, ಕಬ್ಬು ಬೆಂಬಲ ಬೆಲೆ ಪಡೆಯುವುದರ ಮೂಲಕ ರಾಜ್ಯದ ರೈತರ ಜೊತೆಗಿನ ಸರಕಾರದ ಕಣ್ಣು ಮುಚ್ಚಾಲೆ ಆಟ ಒಂದು ಹಂತಕ್ಕೆ ತಲುಪಿದೆ. ನಮಗೆ ಸತ್ತಮೇಲೆ ಬುದ್ದಿ ಬಂತು ಅಂದಹಾಗೆ ಈ ಸರಕಾರಕ್ಕೆ ಒಬ್ಬ ರೈತನ ಬಲಿಕೊಟ್ಟ ಮೇಲೆ ಬುದ್ದಿ ಬಂತು.
ಹಲವು ಗೊಂದಲಗಳ ನಡುವೆ ಸದ್ಯ ಆರು ವಿಧೇಯಕಗಳಿಗೆ ಅಸ್ತು ನೀಡಿದ್ದು ಅದೆಷ್ಟು ಆರೋಗ್ಯಕರ ಚರ್ಚೆ ನಡೆಯಿತು ನಮ್ಮ ಜನರೆ ಉತ್ತರ ಹೇಳಬೇಕು. ದಿನ ಬೆಳಗಾದರೆ ಸಾಕು ಬರಿ ಮಾಧ್ಯಮಗಳಲ್ಲಿ ರಾಜಕೀಯ ವಿಚಾರ ಮಾತ್ರ ಸುದ್ಧಿ ಇಂತಹ ಸಂದರ್ಭದಲ್ಲಿ ಮಂಡನೆಯಾದ ವಿಧೇಯಕಗಳು ಅದೆಷ್ಟು ಪರಿಣಾಮಕಾರಿಯಾಗಿ ಜನರಿಗೆ ತಲುಪುವವು ಎನ್ನುವುದು ಕಾದು ನೋಡಬೇಕು.
ಇದೆಲ್ಲವನ್ನು ಮೂಕ ಪ್ರೇಕ್ಷಕನಾಗಿ ವೀಕ್ಷಿಸುತ್ತಾ ಕುಳಿತಿರುವ ನಮ್ಮ ಸಾಮಾನ್ಯ ಜನ ಮಾತ್ರ ಈ ರಾಜ್ಯ ರಾಜಕಾರಣದಿಂದ ದಿನೆ ದಿನೆ ಸೋತು ಸೊರಗಿದ್ದಾರೆ. ಅವರ ಅಳಲನ್ನು ಮಾತ್ರ ಯಾರು ಬಗೆಹರಿಸುವ ಮಾತನಾಡುತ್ತಿಲ್ಲಾ, ನಿಯಮ ಉಲ್ಲಂಘನೆ ಮಾಡುವ ಮಾನ್ಯ ರಾಜಕಾರಣಿಗಳೆ? ಸ್ವಲ್ಪ ರಾಜ್ಯದ ಜನರತ್ತ ಗಮನಹರಿಸಿ ರೈತರ, ಬಡವರ, ಕಾರ್ಮಿಕರ ಕುಂದುಕೊರತೆಗಳ ಕಡೆಗೆ ದಯವಿಟ್ಟು ಗಮನಕೊಡಿ, ಈ ಹೊಲಸು ಮೋಸದ ರಾಜಕೀಯ ಬಿಡಿ.