ಎತ್ತ ಸಾಗುತ್ತಿದೆ.
ಸಾಮಾನ್ಯ ಜನರ ಸತ್ತು ಹೊಡಿಯುತ್ತಿದೆ.
ಹೇಗೆ ಮಾಗುತ್ತಿದೆ. ಅವಲೋಕಿಸಿದಿರಾ.
ಸಾಮಾನ್ಯ ಜನರ ಕೊಳ್ಳೆ ಹೊಡೆದು.
ಸ್ವಂತ ಹೊಟ್ಟೆ ತುಂಬಿಸಿಕೊಳ್ಳುತ್ತಾ ........ನಮ್ಮ ರಾಜಕೀಯ..
ಮರುಕಳಿಸಿದ ರಾಜೀನಾಮೆ ಪರ್ವ
ರಾಜ್ಯ ರಾಜಕೀಯದಲ್ಲಿ ಜನ ಬೇಸತ್ತು, ಬಿಜೆಪಿ ತನ್ನ ಕಾರ್ಯ ಕರ್ಮಕ್ಕೆ ತನ್ನ ಅಸ್ತಿತ್ವ ಕಳಿದುಕೊಂಡು, ನೂರು ಹೋಳಾಗಿ ಒಡೆದು ಹೋಯಿತು. ಹಲವು ದಿನಗಳ ನಂತರ ಒಂದು ಸ್ಥಿರ ಸರಕಾರವನ್ನು ರಚಿಸುವಲ್ಲಿ ಯಶಸ್ವಿಯಾದ ಕಾಂಗ್ರೇಸ್, ಅದೇಕೊ ಬಿಜೆಪಿಯ ರಾಜಕಾರಣ ನೆನಪಿಗೆ ಬರುವಂತೆ ಮಾಡಿತು. ನಮ್ಮ ರಾಜ್ಯದಲ್ಲಿ ಒಂದು ದೊಡ್ಡ ವಿಪರ್ಯಾಸವೆಂದರೆ ತಪ್ಪು ನಡೆದಿದೆ ಎಂದು ತಿಳಿಸಲು ಹೋರಾಟ, ಚೀರಾಟ ಮಾಡಬೇಕು. ತಪ್ಪು ಎಂದು ತಿಳಿದ ತಕ್ಷಣ ಸಾಭೀತಾಗಿ ತೋಚಿದ ಕೋಡಲೆ, ಕ್ರಮ ತೆಗೆದುಕೊಳ್ಳುವ ಒಬ್ಬ ನಿಷ್ಠಾವಂತ ರಾಜಕಾರಣಿಯನ್ನು ಹಗಲು ಬೆಳಕಿನಲ್ಲಿ ದೀಪ ಹಚ್ಚಿ ಹುಡುಕುವ ಪರಿಸ್ಥಿತಿ ಎದುರಾಗಿದೆ.
ಕಾಂಗ್ರೇಸ್ ಸರಕಾರವು ಭ್ರಷ್ಠಚಾರದಲ್ಲಿ ಬಲಿಯಾಗುವ ಎಲ್ಲಾ ಲಕ್ಷಣಗಳು ಈಗ ಸದ್ಯಕ್ಕೆ ನಾಂದಿ ಹಾಡಿದೆ. ಸಂತೋಷ ಲಾಡ್ ಈ ಕಾರ್ಯಕ್ಕೆ ಮೊದಲ ಬಲಿಯಾಗಿರುವರು. ಜೊತೆಗೆ ಮಾನ್ಯ ಸಿದ್ಧರಾಮಯ್ಯನವರು ಕೂಡಾ ಅಕ್ರಮ ಗಣಿಗಾರಿಕೆಯವರಿಗೆ ಇಷ್ಟು ದಿನ ಸಾಥ ನೀಡಿದ ಮುಖ್ಯಮಂತ್ರಿಯೆಂಬ ಹೆಗ್ಗಳಿಕೆ ಪಾತ್ರರಾದರು. ಏನೆ ಇರಲಿ ಇವೆರೆಲ್ಲಾ ಮಾಡುತ್ತಿರುವ ಕೆಲಸ ಏನು ಸಮಾಜಕ್ಕೆ ಒಳ್ಳೆಯದಲ್ಲಾ ಅಂತಾ ಗೊತ್ತಾದ ಮೇಲೆ ಬಿಡಬೇಕು ಅನ್ನುವ ನೈತಿಕತೆ ನಮ್ಮ ರಾಜಕಾರಣಿಗಳಲ್ಲಿ ಉಳಿದಿಲ್ಲಾ ಎಂಬುವುದು ಸ್ಪಷ್ಠವಾದ ಮಾತು.
ಗೊಂದಲಗಳ ಸೃಷ್ಠಿ
ರಾಜ್ಯ ರಾಜಕೀಯದಲ್ಲಿ ಹಲವು ಗೊಂದಲಗಳನ್ನು ಮಾನ್ಯ ಮುಖ್ಯಮಂತ್ರಿಯವರು ಈಗಾಗಲೇ ರಾಜ್ಯದ ಜನರ ಮುಂದೆ ತಂದು ಒಡ್ಡಿದ್ದಾರೆ. ಶಾದಿಭಾಗ್ಯ ಎನ್ನುವ ಯೋಜನೆ ಮೂಲಕ ಕೆಜೆಪಿಗೆ ಆಹಾರವಾದರು. ಸುಮ್ಮನೆ ರಾಜಕೀಯ ಮೂಲೆ ಹಿಡಿದ ಮಾನ್ಯ ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪನವರಿಗೆ ಅವರ ಚೀರಾಟಕ್ಕೆ ಆಹಾರವಾಯಿತು. ಶಾದಿಭಾಗ್ಯ ಯೋಜನೆ ಉಳಿದ ಜನಾಂಗಕ್ಕೂ ವಿಸ್ತರಿಸಿ ಎನ್ನುವ ವಿಷಯ ಎದರುರಿಟ್ಟಿಕೊಂಡು ಹೋರಾಟದ ಹೆಸರಿನಲ್ಲಿ ಜಾತಿಗಳ ನಡುವೆ ಚರ್ಚೆಗೆ ಗ್ರಾಸವಾದರು ಯಡ್ಡಿ.
ಇನ್ನು ಶಿಕ್ಷಣ ಇಲಾಖೆಯಲ್ಲಿ ಇನ್ನು ಶುದ್ಧಿಯಾಗದೆ ಉಳಿದಿರುವ ಅದೆಷ್ಟೊ ಯೋಜನೆಗಳು ಇರುವಾಗಲೆ, ಮಕ್ಕಳಿಗೆ ಹಾಲು ಕೊಡುವ ಕ್ಷೀರಭಾಗ್ಯ ಯೋಜನೆಗೆ ಚಾಲನೆ ನೀಡಿದ ಮುಖ್ಯಮಂತ್ರಿ ಮೊದಮದಲು ವಾರದ ಆರು ದಿನ ಹಾಲು ಕೊಡುವ ಭರವಸೆ ನೀಡಿ ಈಗ ಮೂರು ದಿನಕ್ಕೆ ಮಂಗಳಾರತಿ ಹಾಡಿ ಮುಂದೆ ಅದೂ ಕೂಡಾ ಇಲ್ಲಾವಾಗಿಸುವ ಲೆಕ್ಕಚಾರಕ್ಕೆ ತಿರುಗಿರುವರು.
ಸ್ಥಿರ ಸರಕಾರ ರಚಿಸಿರುವ ಕಾಂಗ್ರೇಸ್ ಹಲವು ಒಡಕುಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡು ನುಲುಗುತ್ತಿದೆ. ಹೈಕಮಾಂಡ್ ಎಂಬ ಭಲ ಇರುವುದರಿಂದ ಸ್ವಲ್ಪ ಕೆಲಸ ಕಾರ್ಯಗಳು ಸುಗಮಾವಾಗಿ ನಡೆದಿವೆ ಅಷ್ಟೆ. ಇಲ್ಲವಾದಲ್ಲಿ ಇಲ್ಲಿನ ಹಲವು ಮುಖಂಡರು ತಮ್ಮ ಹಲವು ಕೆಟ್ಟ ವರ್ತನೆ ಹಾಗೂ ಭ್ರಷ್ಠಚಾರದಿಂದ ಸರಕಾರ ಮನೆ ಹಾದಿ ಹಿಡಿಸುವುದರಲ್ಲಿ ಹಿಂದೆ ಇರುತ್ತಿರಲಿಲ್ಲಾ.
ಎಲ್ಲರ ಚಿತ್ತ ಲೋಕಸಭೆಯತ್ತ
ನಮ್ಮ ದೇಶದಲ್ಲಿ ಸತತ ಎರಡನೇಯ ಬಾರಿ ಅಧಿಕಾರದ ಗದ್ದುಗೆ ಹಿಡಿದ ಯುಪಿಎ ಮತ್ತೊಮ್ಮೆ ಅಧಿಕಾರ ಹಿಡಿಯಲೇಬೇಕು ಎನ್ನುವ ಹಟಕ್ಕೆ ಬಿದ್ದು, ಹಲವು ಯೋಜನೆಗಳ ಮಾಹಾಪೂರವೆ ಹರಿಸುತ್ತಿದೆ. ಇಲ್ಲಿಯವರೆಗೂ ತಾವು ಮಾಡಿಕೊಂಡು ಬಂದಿರುವ ಹಗರಣಗಳು, ರಾಜೀನಾಮೆಗಳು ಮರೆಸುವ ಪ್ರಯತ್ನ ಸತತ ನಡೆಯುತ್ತಿದೆ. ಮಾನ್ಯ ಸೋನಿಯ ಮೇಡಂ ರಾಜ್ಯ ಸುತ್ತುವ ಕೆಲಸ ಈಗಾಗಲೇ ಪ್ರಾರಂಭ ಮಾಡಿದ್ದಾರೆ. ಮಗನನ್ನು ಹೇಗಾದರು ಮಾಡಿ ದೇಶದ ಪ್ರಧಾನಿ ಮಾಡಲೇಬೇಕು, ಅತ್ತೆ ಹಾಗೂ ಯಜಮಾನರ ಆಸೆ ಈಡೇರಿಸಲೇಬೇಕು ಎನ್ನುವ ಹಂಬಲದಲ್ಲಿ ಸೋನಿಯಾ ಹಲವು ದಾರಿಗಳಲ್ಲಿ ಮಗನನ್ನು ತಯಾರಿ ಮಾಡುತ್ತಿರುವಳು. ಮಗ ಕೂಡಾ ನಾನೇನು ಕಡಿಮೆಯಿಲ್ಲಾ ಎಂಬಂತೆ ಅಪ್ಪ ಹಾಗೂ ಅಜ್ಜಿಯಂತೆ ದೇಶಕ್ಕಾಗಿ ಪ್ರಾಣ ಕೊಡುವ ಕೆಲಸ ಮಾಡುವೆ ಎನ್ನುವ ಮಾತು ಇನ್ನು ಯಂಗ ಇರುವಾಗಲೇ ಹೇಳಿಯೆ ಬಿಟ್ಟಿರು. ಈದೀಗ ಮನಮೋಹನನ ಸರಕಾರ ಮೌನವಾಗಿಯೆ ದೇಶ ನುಂಗಿ ನೀರು ಕುಡಿದು ಬೆಲೆಏರಿಕೆ ಹಾಗೂ ಹಗರಣಗಳ ಮಾಹಾಪೂರವೆ ಹರಿಸಿದೆ ಇನ್ನು ಮುಂದೆ ಮತ್ತೆ ಹ್ಯಾಟ್ರಿಕ್ ಹೊಡೆದರೆ ಗತಿಯೇನು ಎಂಬ ಮಾತು ಸಾಮಾನ್ಯ ಜನರ ವಲಯದಲ್ಲಿ ಸದ್ದಿಲ್ಲದೆ ಕೇಳಿಬರುತ್ತಿದೆ.
ಮೋದಿ ಮೋಡಿ
ಇನ್ನು ದೇಶದಲ್ಲಿ ಈ ಬಾರಿ ಅಧಿಕಾರ ಹಿಡಿಯಲೇಬೇಕು ಕಾಂಗ್ರೇಸ್ ಮುಕ್ತ ದೇಶವನ್ನಾಗಿ ಮಾಡಲೇಬೇಕು ಎನ್ನುವ ಆಸೆ ಹೊತ್ತು ಟೊಂಕಕಟ್ಟಿ ನಿಂತಿರುವ ಮಾನ್ಯ ನರೇಂದ್ರ ಮೋದಿಯವರಂತೂ ಮಾಧ್ಯಮ ಹಾಗೂ ಸಾಮಾಜಿಕ ತಾಣಗಳಲ್ಲಿ ಈಗಾಗಲೇ ಈ ದೇಶದ ಪ್ರಧಾನಿಯಾಗಿ ಎಲ್ಲರ ಚಿತ್ತ ತನ್ನಡೆಗೆ ಸೆಳೆದಿದ್ದಾರೆ. ತಮ್ಮ ಈಡಿ ದಿನಗಳು ಪ್ರಚಾರದಲ್ಲೆ ತೊಡಗಿರುವ ಮೋದಿ ಪ್ರಚಾರಕ್ಕಾಗಿ ಬಳಸುವ ಪ್ರತಿಯೊಂದು ಹಾದಿಯನ್ನು ಬಳಸದೆ ಇರುತ್ತಿಲಾ.್ಲ ದೇಶದ ಯುವ ಜನತೆಯ ಎದೆಗೆ ಈಗಾಗಲೇ ಕಿಚ್ಚು ಹಚ್ಚಿರುವ ಮೋದಿ ತಮ್ಮ ಮಾತಿನ ಮೂಲಕ ದೇಶದ ಮೂಲೆಮೂಲೆಗೂ ಪ್ರಚಾರ ಮಾಡಿ ದೇಶಕ್ಕಾಗಿ ಏನಾದರು ಮಾಡಿಯೆ ತೀರುತ್ತೇನೆ ಎಂಬ ಮಾತು ಕೊಡುತ್ತಿರುವರು. ದೇಶದಲ್ಲಿ ಮೌನಯೋಗಿಯ ಸರಕಾರ ಮಾಡಿರುವ ಹಲವು ಹಗರಣಗಳನ್ನು ಬಿಚ್ಚಿಡುತ್ತಾ ರಾಹುಲ್, ಸೋನಿಯಾ ಹಾಗೂ ಮನಮೋಹನ ಸಿಂಗ ರ ವಿರುದ್ಧ ಟೀಕಾಪ್ರಹಾರ ಮಾಡುತ್ತಾ ಈ ದೇಶದ ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿಕೊಂಡಿದ್ದಾರೆ. ಇವರು ಬರಿ ಮಾತಿನಲ್ಲಿ ರಾಜಕೀಯ ಮಾಡಿ ದೇಶ ಕೊಳ್ಳೆ ಹೊಡಿಯುವ ಕೆಲಸ ಮಾಡುವರೊ ಅಥವಾ ದೇಶದ ಅಭಿವೃದ್ಧಿ ಮಾಡುವರೋ ಕಾದು ನೋಡಬೇಕು ಅಷ್ಟೆ.
ನಮ್ಮ ದೇಶ ಹಾಗೂ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯದ ಈ ಚದುರಂಗದ ಆಟದಲ್ಲಿ ಸಾಮಾನ್ಯ ಜನರ ಸ್ಥಿತಿಗತಿ ಯಾವ ರಾಜಕಾರಣಿಯು ಕೇಳದಾಗಿದೆ. ಈಗಾಗಲೇ ಬೆಲೆಏರಿಕೆಯಿಂದ ಬಳಲಿರುವ ಜನತೆಗೆ , ಚಿನ್ನದಂತೆ ಬಳಕೆ ಮಾಡುತ್ತಿರುವ ಪೆಟ್ರೋಲ್ ಗೆ ಯಾವಾಗ ಮುಕ್ತಿ ಉತ್ತಮ ಆಡಳಿತ ಕೊಡುವ ಸರಕಾರ, ದೇಶದ ಜನರ ನೈಜ ಸಮಸ್ಯೆಗಳತ್ತ ಧ್ವನಿಯಾಗಿ ಉತ್ತಮ ಬದುಕು ನಡೆಸಲು ಸಹಕಾರ ನೀಡುವ ಸರಕಾರದ ನೀರೀಕ್ಷೆಯಲ್ಲಿ ನಮ್ಮ ಜನರಿದ್ದಾರೆ. ಸ್ನೇಹಿತರೆ ಇಂತಹ ಒಂದು ಸರಕಾರ ರಚನೆಯಾಗಿ ನೈಜಾವಾಗಿ ಜನರ ಅಳಲನ್ನು ಕೇಳುವ ರಾಜಕಾರಣಿಗಳನ್ನು ಹುಟ್ಟಿಸು ಓ ಭಾರತ ಮಾತೆ ಎಂದು ಬೇಡೋಣವೆ?..